ಮನೆಗೊಂದು ಸೊಳ್ಳೆಪರದೆ, ವಾಟಾಳ್ ಭರವಸೆ !
ಭಾನುವಾರ ಬೆಂಗಳೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್, ಚುನಾವಣೆಗಾಗಿ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಪ್ರಣಾಳಿಕೆಯಲ್ಲಿ ನವ ಕರ್ನಾಟಕ ನಿರ್ಮಾಣಕ್ಕೆ ಆದ್ಯತ ನೀಡಲಾಗಿದೆ. ಚಾಮರಾಜನಗರ ಸೇರಿದಂತೆ ವಿವಿಧ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ರಾಜ್ಯದಲ್ಲಿ ಗೃಹ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು. ಬಡವರ ಮತ್ತು ಶ್ರಮಿಕರಿಗೆ ಉತ್ತಮ ಸೌಲಭ್ಯ ಒದಗಿಸಿಕೊಡುವುದು ಕನ್ನಡ ಚಳವಳಿ ವಾಟಾಳ್ ಪಕ್ಷದ ಪ್ರಮುಖ ಧ್ಯೇಯವಾಗಿದೆ ಎಂದರು
25 ಅಭ್ಯರ್ಥಿಗಳು : ವಿಧಾನಸಭೆ ಚುನಾವಣೆಗೆ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅವರು ತಿಳಿಸಿದರು. ಚಾಮರಾಜನಗರ ಕ್ಷೇತ್ರದಿಂದ ತಾವು ಸ್ಪರ್ಧಿಸುವಾಗಿ ವಾಟಾಳ್ ನಾಗರಾಜ್ ಹೇಳಿದರು.
ಪ್ರಣಾಳಿಕೆಯ ಮುಖ್ಯಾಂಶಗಳು
*
ಪ್ರತಿ
ಜಿಲ್ಲೆಗಳಲ್ಲೂ
ಕನ್ನಡ
ಸಾಹಿತಿಗಳ
ಪ್ರತಿಮೆ
ಸ್ಥಾಪನೆ
*
ಉತ್ತರ
ಕರ್ನಾಟಕದ
ಸಮಗ್ರ
ಅಭಿವೃದ್ಧಿಗೆ
ಹೆಚ್ಚಿನ
ಆದ್ಯತೆ
*
ರೈತರ
ಪಂಪ್
ಸೆಟ್
ಗಳಿಗೆ
ಉಚಿತ
ವಿದ್ಯುತ್
*
ಹೊಸ
ಜಿಲ್ಲೆಗಳ
ಅಭಿವೃದ್ಧಿಗಾಗಿ
ಪ್ರತ್ಯೇಕ
ಅನುದಾನ
*
ಬಡ
ಹೆಣ್ಣುಮಕ್ಕಳ
ವಿವಾಹಕ್ಕೆ
50
ಸಾವಿರ
ಸಹಾಯಧನ
*
ಪ್ರತಿ
ಮನೆಗೂ
ಸೊಳ್ಳೆಪರದೆ
ವಿತರಣೆ
*
ಕನ್ನಡ
ಸಂಸ್ಕೃತಿ-ಸಾಹಿತ್ಯ
ಉಳಿಸಲು
ಪ್ರತ್ಯೇಕ
ಯೋಜನೆ
*
ಗ್ರಾಮ
ಪಂಚಾಯಿತಿಯಿಂದ
ವಿಧಾನಸೌಧದವರೆಗೆ
ಕನ್ನಡದಲ್ಲೇ
ಆಡಳಿತ
*
ಕನ್ನಡ
ಮಾಧ್ಯಮದಲ್ಲಿ
ವ್ಯಾಸಂಗ
ಮಾಡಿದವರಿಗೆ
ಸರ್ಕಾರಿ
ಉದ್ಯೋಗದಲ್ಲಿ
ಆದ್ಯತೆ
*
ಪ್ರತಿ
ಜಿಲ್ಲೆಗಳಲ್ಲೂ
ಕನ್ನಡ
ಭವನ
ನಿರ್ಮಾಣ
*
ಐಟಿ
ಕಂಪನಿಗಳಲ್ಲಿ
ಕನ್ನಡಿಗರಿಗೆ
ಉದ್ಯೋಗ
ನೀಡಲು
ಹೋರಾಟ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ