ರಾಜ್ಯಪಾಲ ಭಾರಧ್ವಾಜ್ ಸುದ್ದಿಗೋಷ್ಠಿ ಹೈಲೈಟ್ಸ್
ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದ್ದು,ಸ್ಪೀಕರ್ ಬೋಪಯ್ಯ ಶಾಸಕರನ್ನು ಏಕಾಏಕಿ ಅನರ್ಹಗೊಳಿಸದ ಕ್ರಮ ಸರಿಯಿಲ್ಲ. ರೆಡ್ಡಿ ಸೋದರರು 50 ಜನ ಶಾಸಕರನ್ನು ಹೈಜಾಕ್ ಮಾಡಿದ್ದಾಗ ಅವರನ್ನು ಏಕೆ ಅನರ್ಹಗೊಳಿಸಲಿಲ್ಲ ಎಂದು ಪ್ರಶಿಸಿದರು. ನಾನು ಪ್ರಜಾಪ್ರಭುತ್ವವಾದಿ ಎಂದು ತೋರಿಸಲು ಸಿಎಂಗೆ ಮತ್ತೊಂದು ಅವಕಾಶ ನೀಡಿದ್ದೇನೆ. ಸುಪ್ರೀಂಕೋರ್ಟ್ ಆದೇಶದಂತೆ ಅ.14ರ ಬೆಳಗ್ಗೆ 11 ಗಂಟೆಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಸೂಚಿಸಿದ್ದೇನೆ.
ವಿಧಾನಸಭೆ ಅ.11 ರಂದು ನಡೆದ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಖಾಕಿಧಾರಗಳ ಉಪಸ್ಥಿತಿಗೆ ನನ್ನ ಆಕ್ಷೇಪವಿದೆ. ಸ್ಪೀಕರ್ ಗೆ ಸಂದೇಶ ಕಳಿಸುವ ಅಧಿಕಾರ ನನಗಿದೆ. ನಾನು ಪಕ್ಷಪಾತ ಮಾಡಿಲ್ಲ. ಆದರೆ, ಸ್ಪೀಕರ್ ನಡೆದುಕೊಂಡ ಕ್ರಮ ಸರಿಯಿಲ್ಲ. ಸದನದಲ್ಲಿ ನಡೆದ ಕೋಲಾಹಲಕ್ಕೆ ಸಿಎಂ ನೇರಹೊಣೆ ಎಂದರು.
ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್ ಹಗರಣ, ಸರ್ಕಾರದ ಭ್ರಷ್ಟಾಚಾರದಿಂದ ರೋಸಿ ಹೋಗಿದ್ದೇನೆ. ಯಾವುದೇ ಸಮಯದಲ್ಲಿ ನನ್ನ ಸಲಹೆಯನ್ನು ಸ್ವೀಕರಿಸದೇ ಸಿಎಂ ಪದೇ ಪದೇ ಟೀಕಿಸಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ರಾಜ್ಯಪಾಲರ ಕರ್ತವ್ಯ ನಿರ್ವಹಿಸಿದ್ದೇವೆ. ಉತ್ತಮ ನಾಗರೀಕ ಸಮಾಜವುಳ್ಳ ಕರ್ನಾಟಕ ಹಾಳಾಗುವುದು ನನಗಿಷ್ಟವಿಲ್ಲ ಎಂದು 74ರ ವಯೋವೃದ್ಧ ಭಾರಧ್ವಾಜ್ ಹೇಳಿದರು.
ನಾನು ಮತ್ತು ನನ್ನ ಹೆಂಡತಿ, ಅಷ್ಟೆ. ನಮಗೆ ಕರ್ನಾಟಕದಲ್ಲಿ ಮೂರನೇ ವ್ಯಕ್ತಿ ಇಲ್ಲ. ನಾನು ಸಂವಿಧಾನಕ್ಕೆ ಬದ್ಧನಷ್ಟೇ ವಿನಾ ಮತ್ತಾರ ಹಂಗೂ ನನಗೆ ಇಲ್ಲ. ನಾನು ಕರ್ನಾಟಕದಲ್ಲಿ ಹುಟ್ಟಿಲ್ಲ. ಈ ರಾಜ್ಯದಲ್ಲಿ ರಾಜ್ಯಪಾಲನಾಗುವ ಅವಕಾಶ ಬಂದಿದೆ. ಕರ್ನಾಟಕದ ಜನ ಸಭ್ಯರು ಮತ್ತು ಉತ್ತಮ ನಾಗರಿಕರು. ರಾಜ್ಯದಲ್ಲಿ ಹಿರಿಯ ಹುದ್ದೆಯಲ್ಲಿರುವ ನಾನು ಸಾರ್ವಜನಿಕ ಸಂವೇದನೆಗಳನ್ನು, ಬದುಕಿನ ಮೌಲ್ಯಗಲನ್ನು ಹಾಳಾಗಾಲು ಬಿಡುವುದಿಲ್ಲ ಎಂದೂ ಹಂಸರಾಜ್ ಸ್ಪಷ್ಟಪಡಿಸಿದರು.
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS