ಹಂದಿಜ್ವರ ಹತೋಟಿಗೆ ಯುಪಿಎ ಏನ್ಮಾಡ್ತಿದೆ?

ಇಂದು ನಡೆದ ಸಭೆಯಲ್ಲಿ ಹಂದಿಜ್ವರ ಹರಡದಂತೆ ತಡೆಗಟ್ಟಲು ಬೇಕಾದ ಅಗತ್ಯ ಮುನ್ಸೂಚನೆ ಹಾಗೂ ಔಷಧ ಲಭ್ಯತೆಯ ಬಗ್ಗೆ ಚರ್ಚಿಸಲಾಯಿತು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ನರೇಶ್ ದಯಾಳ್ ಹೇಳಿದರು.ಇದುವರೆವಿಗೂ 6 ಜನ ಎಚ್ 1ಎನ್ 1 ಸೋಂಕಿನಿಂದ ಬಳಲುತ್ತಿದ್ದ 6 ಜನ ಸಾವನ್ನಪ್ಪಿದ್ದಾರೆ. ರೋಗದ ಲಕ್ಷಣ ಹಾಗೂ ಸಾರ್ವಜನಿಕ ನೀಡಬೇಕಾದ ಮಾಹಿತಿ ಕುರಿತು ಚರ್ಚಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆ ನಡೆಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications