ಮಾಂಸದ ಬರ್ಗರ್ ಮೇಲೆ ಲಕ್ಷ್ಮಿ ಚಿತ್ರ ಪ್ರಕಟ

ಅಮೆರಿಕಾದ ಮುದ್ರಣ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವ ಈ ಅತ್ಯಂತ ಕೆಟ್ಟ ಜಾಹೀರಾತನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಅಮೆರಿಕಾದ ದಿ ಹಿಂದು ಅಮೆರಿಕನ್ ಫೌಂಡೇಶನ್ (HAF) ಆಗ್ರಹಿಸಿದೆ. ಇದೇ ಜಾಹೀರಾತು ಸ್ಪೇನ್ ಪತ್ರಿಕೆಗಳಲ್ಲೂ ಪ್ರಕಟವಾಗುವ ಸಾಧ್ಯತೆ ಇತ್ತು. ಸ್ಪೇನ್ ಭಾಷೆಯಲ್ಲಿ ಜಾಹೀರಾತು 'ಪವಿತ್ರವಾದ ತಿನಿಸು' ಎಂದು ಓದಿಸಿಕೊಳ್ಳುತ್ತದೆ.
ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂವೇದನೆಗಳಿಗೆ ಗೌರವ ನೀಡದ ಈ ಜಾಹೀರಾತನ್ನು ಹಿಂದಕ್ಕೆ ಪಡೆಯುವುದಲ್ಲದೆ ಹಿಂದೂಗಳ ಕ್ಷಮಾಪಣೆ ಕೇಳಬೇಕು ಎಂದು ಸಂಘಟನೆಗಳು ಬರ್ಗರ್ ಕಂಪನಿಗೆ ಖಾರವಾದ ಪತ್ರ ಬರೆದಿವೆ. ಪವಿತ್ರವಾದ ಚಿತ್ರಗಳನ್ನು, ಸಂಕೇತಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದು ಅಪರಾಧ. ಅಲ್ಲದೆ, ಮಾಂಸದ ಪದಾರ್ಥದೊಂದಿಗೆ ಹಿಂದೂ ದೇವತೆಯನ್ನು ಜೋಡಿಸಿ ಪ್ರಕಟಿಸಿರುವುದು ಅಕ್ಷಮ್ಯ ಎಂದು ಫೌಂಡೇಶನ್ನಿನ ಕಾನೂನು ಸಲಹೆಗಾರ ಸುಹಾಗ್ ಶುಕ್ಲ ಹೇಳಿದ್ದಾರೆ.
ವಿವಾದಾತ್ಮಕ ಬರ್ಗರ್ ಮೇಲಿನ ಲಕ್ಷ್ಮಿ ಚಿತ್ರವನ್ನು ದಟ್ಸ್ ಕನ್ನಡ ಅಚ್ಚು ಮಾಡುತ್ತಿಲ್ಲ - ಸಂಪಾದಕ.
ಬರ್ಗರ್ ಕ್ಷಮೆಯಾಚನೆ : ವಾಷಿಂಗ್ಟನ್ ನಿಂದ ಬಂದಿರುವ ಇತ್ತೀಚಿನ ವರದಿಯ ಪ್ರಕಾರ ಬರ್ಗರ್ ಕಿಂಗ್ ಕಂಪನಿ ಬರ್ಗರ್ ಮೇಲೆ ಲಕ್ಷ್ಮಿ ಚಿತ್ರ ಪ್ರಕಟಿಸಿದ್ದಕ್ಕಾಗಿ ಹಿಂದೂಗಳ ಕ್ಷಮೆ ಕೋರಿದೆ. 'ಯಾರನ್ನೂ ಹೀಯಾಳಿಸುವ ಉದ್ದೇಶ ನಮಗಿರಲಿಲ್ಲ. ಆದ್ದರಿಂದ ಈ ಜಾಹೀರಾತು ಪ್ರಕಟಿಸಿದ್ದಕ್ಕೆ ವಿಷಾದ ವ್ಯಪಡಿಸುತ್ತಿದ್ದೇವೆ' ಎಂದು ಬರ್ಗರ್ ಕಿಂಗ್ ಕಂಪನಿಯ ವಕ್ತಾರ ಡೆನೀಸ್ ಟಿ ವಿಲ್ಸನ್ ಹೇಳಿದ್ದಾರೆ.
(ಒನ್ ಇಂಡಿಯಾ ವಾರ್ತೆ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications