ಕಾಲನ ಹೊಳೆಯಲ್ಲಿ ತೇಲಿಬಂದ ಜಾಲ

as if it were a after dinner sleep
dreaming of both
-T. S. Elliot
ಮುಷ್ಟಿಗಾಗಲೀ ಸಮಷ್ಟಿಗಾಗಲೀ ಗ್ರಹಿಕೆಗೆ ಸಿಗದ ಕಾಲ ಮತ್ತೊಂದು ಸುದೀರ್ಘ ಸುತ್ತನ್ನು ಮುಗಿಸಿದೆ. ನಿಸರ್ಗವೇ ಕೊಟ್ಟ ಚಿಗುರು, ಅರಳಸಿದ ಹೂವು , ಕೆರಳಿಸಿದ ಭಾವಗಳು ಮತ್ತೆ ಪ್ರಕೃತಿಯ ಮರೆಯ ಸೇರಿವೆ. ಚಳಿಗಾಲ ಉದುರಿಸಿದ ಬಣ್ಣಬಣ್ಣದ ಎಲೆಗಳು ಚಿಟ್ಟೆಗಳಂತೆ ಮತ್ತೆ ಮರವ ಸೇರಿ ಹೊಸ ಹೊಳಪಲ್ಲಿ ಮಿನುಗುತ್ತಿವೆ.
ಅದು ಯುಗಾದಿ.
ಯುಗಾದಿ ಜತೆಗೆ ವಸಂತನಿದ್ದಾನೆ. ವಸಂತನಿಗೆ ಕೋಗಿಲೆ ಹಿನ್ನೆಲೆ ಗಾಯಕ. ಅವನ ಸ್ವಾಗತಕ್ಕೆ ಪ್ರಕೃತಿಯಷ್ಟೇ ಸಿಂಗಾರಗೊಂಡರೆ ಸಾಕೆ? ನಾವೂ ಸನ್ನದ್ಧರಾಗಬೇಡವೇ?
ಆದರೆ ಹೇಗೆ? ವರ್ಷಕ್ಕೊಮ್ಮೆ ಬರುವ ಯುಗಾದಿ ಯುಗಯುಗಗಳಿಂದ ಬಂದು ಹೋಗುತ್ತಲೇ ಇವೆ. ನಾವು ಬಾಗಿಲಿಗೊಂದು ತೋರಣ ಕಟ್ಟಿ, ಬೇವುಬೆಲ್ಲಗಳ ಜತೆ ಸಂತೋಷ ಹಂಚಿಕೊಂಡು ಒಬ್ಬಟ್ಟಿನ ಜತೆ ಸಂಭ್ರಮಿಸುತ್ತೇವೆ ನಿಜ. ಆದರೆ ಅಷ್ಟೇ ಸಾಕೇ?
ಕಾಲ ಒಂದು ಸಣ್ಣ ತಿರುಗಾಟ ಪೂರೈಸಿ ಮತ್ತೆ ಮನೆ ಬಾಗಿಲಿಗೆ ಬರುವಷ್ಟರಲ್ಲಿ ಏನೆಲ್ಲ ನಡೆದು ಹೋಗಿರುತ್ತದೆ . ಕಾಲದ ಹೊಳೆ ನಿರಂತರ ಅನ್ನುತ್ತಾರೆ. ದಡದಲ್ಲಿ ನಾವಿದ್ದೇವೆ, ಬೆಸ್ತರ ಹಾಗೆ. ಅಮೂಲ್ಯ ಕ್ಷಣಗಳನ್ನು ಹಿಡಿಯುವುದಕ್ಕೆ ಬಲೆ ಬೀಸುತ್ತಾ !
ಆದರೆ, ಬೆಳ್ಳಿಮೀನುಗಳು ಬಲೆಗೆ ಬೀಳುವುದೇ ಇಲ್ಲ. ಅವು ಕಾಲದ ಹೊಳೆಯಲ್ಲಿದ್ದಾಗಲೆ ಸೊಗಸು. ಬಲೆ ಬೀಸಿ ಹಿಡಿದೊಡನೆ ಉಸಿರುಗಟ್ಟಿ ಸಾಯುತ್ತವೆ, ಕೊಳೆಯುತ್ತವೆ. ಅವುಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಮತ್ತೊಂದು ಮೀನಿನ ಹುಡುಕಾಟಕ್ಕೆ ಮನಸು ಹಾಯುತ್ತದೆ.ಇದೇ ಕಾಲನ ಕರುಣೆ. ನಮ್ಮನ್ನು ನಿರಂತರ ಹುಡುಕಾಟದಲ್ಲಿ , ನಿತ್ಯ ಕುತೂಹಲದಲ್ಲಿ, ಬಟ್ಟ ಬೆರಗಲ್ಲಿ, ಕಥಾ ಕೌತುಕದಲ್ಲಿ ನಿಲ್ಲಿಸುವ ಕಾಲ ತನ್ನ ತೆಕ್ಕೆಯಲ್ಲಿರುವ ಒಂದೊಂದೇ ಗುಟ್ಟುಗಳನ್ನು ಕಾಲಕಾಲಕ್ಕೆ ಕೊಡುತ್ತಾ ಹೋಗುತ್ತದೆ. ಚಾಳೀಸ ಕೊಟ್ಟವನೇ ಕನ್ನಡಕವನ್ನೂ ಕೊಡುತ್ತಾನೆ.
ಈಗ ಕೊಟ್ಟಿರುವ ಹಾಗೆ. ಕಾಲ ದೇಶವನ್ನು ಮೀರುವುದಕ್ಕೊಂದು ಊರುಗೋಲು ಇಂಟರ್ನೆಟ್. ಆಕಾಶವಾಣಿ, ದೂರದರ್ಶನ ಎಂದರೆ ಬೆಕ್ಕಸ ಬೆರಗಾಗುತ್ತಿದ್ದ ಎಲ್ಲರಿಗೆ, ಹೊಸ ಬೆರಗಿನ ಹಾಗೆ- ಇಂಟರ್ನೆಟ್ - ಅಂತರ್ಜಾಲ ಒದಗಿಬಂದಿದೆ.
ಯುಗಾದಿ ಎಂದರೆ ಇದೇ... ಬಚ್ಚಿಟ್ಟ ಒಂದೊಂದನ್ನೂ ಕಾಲ ಕೈಗಿಡುತ್ತಾ ನಡೆಯುವುದು, ವಿದೂರಗಳ ಸೇರಿಸುವ ಸೇತುವೆಯಾಗುವುದು, ಕಲ್ಪನೆಗಳನ್ನು ಕೈಗೂಸಾಗಿಸಿ ಕನಸುಗಳನ್ನು ಕಣ್ಣಮುಂದಿನ ಟ್ಯಾಂಜಿಬಲ್ ಸಂಗತಿಯನ್ನಾಗಿಸಿ ಬೆರಗುಗೊಳಿಸುವುದು.
ಇದು ಬರಿ ಬೆರಗಷ್ಟೇ ಅಲ್ಲ, ಬೆಳಕು... ಯುಗಾದಿಯ ಹೊಸ ಬೆಳಗು. ಹೊಸ ಧ್ವನಿಯ ಅಖಂಡ ಮೊಳಗು. ಒಳಗೂ ಹೊರಗೂ ಹಬ್ಬಲಿರುವ ಈ ಸರ್ವಾಂತರ್ಯಾಮಿಯ ನವ ತಂತ್ರಜ್ಞಾನ ಇಂದಿನಿಂದ ನಿಮ್ಮ ಕಂದ. ನಿಮ್ಮ ಮನೆಯಾಳಗಾಡೊ ಮುಕುಂದ.
ಬನ್ನಿ... ನಿಮ್ಮ ಬೆರಳು ತುದಿಯ ಸ್ಪರ್ಶಕ್ಕೆ ಬೆಸಗೊಳುವ, ಮರೆಯುವ ಈ ಕನ್ನಡದ ಕಂದನನ್ನು ಬರಮಾಡಿಕೊಳ್ಳಿ. ಯುಗಾದಿಯಂದು ಯುಗಪುರುಷ ಬರುತ್ತಾನಂತೆ. ಹಾಗಂತ ಪ್ರತೀತಿ.
ಒಮ್ಮೊಮ್ಮೆ ಪ್ರತೀತಿಗಳು ನಿಜವಾಗುವುದುಂಟು.
ಹೀಗಿರುವ ಹಾಗೆ- ಕನ್ನಡದ ಕಂಪು, ಸೊಂಪು, ಇಂಪುಗಳ ಹೊತ್ತ, ಕನ್ನಡ ಪ್ರಜ್ಞೆ ಯೇ ನಮ್ಮ ವೆಬ್ಸೈಟ್. ಇದು ನಿಯತಕಾಲಿಕವಲ್ಲ, ನಿತ್ಯ ಕಾಲಿಕ . ಇಲ್ಲಿ ನಿನ್ನೆಯ ವರ್ತಮಾನವಿರುವುದಿಲ್ಲ, ಎಲ್ಲವೂ ಈ ಕ್ಷಣದ ಸತ್ಯ.
Living moment to moment ಅನ್ನುತ್ತಾರಲ್ಲ ಅದೇ ಇದು.
Timeless...ಅನಂತ.
Thank you for choosing ThatsKannada
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications