ಕಾಲನ ಹೊಳೆಯಲ್ಲಿ ತೇಲಿಬಂದ ಜಾಲ

as if it were a after dinner sleep
dreaming of both
-T. S. Elliot
ಮುಷ್ಟಿಗಾಗಲೀ ಸಮಷ್ಟಿಗಾಗಲೀ ಗ್ರಹಿಕೆಗೆ ಸಿಗದ ಕಾಲ ಮತ್ತೊಂದು ಸುದೀರ್ಘ ಸುತ್ತನ್ನು ಮುಗಿಸಿದೆ. ನಿಸರ್ಗವೇ ಕೊಟ್ಟ ಚಿಗುರು, ಅರಳಸಿದ ಹೂವು , ಕೆರಳಿಸಿದ ಭಾವಗಳು ಮತ್ತೆ ಪ್ರಕೃತಿಯ ಮರೆಯ ಸೇರಿವೆ. ಚಳಿಗಾಲ ಉದುರಿಸಿದ ಬಣ್ಣಬಣ್ಣದ ಎಲೆಗಳು ಚಿಟ್ಟೆಗಳಂತೆ ಮತ್ತೆ ಮರವ ಸೇರಿ ಹೊಸ ಹೊಳಪಲ್ಲಿ ಮಿನುಗುತ್ತಿವೆ.
ಅದು ಯುಗಾದಿ.
ಯುಗಾದಿ ಜತೆಗೆ ವಸಂತನಿದ್ದಾನೆ. ವಸಂತನಿಗೆ ಕೋಗಿಲೆ ಹಿನ್ನೆಲೆ ಗಾಯಕ. ಅವನ ಸ್ವಾಗತಕ್ಕೆ ಪ್ರಕೃತಿಯಷ್ಟೇ ಸಿಂಗಾರಗೊಂಡರೆ ಸಾಕೆ? ನಾವೂ ಸನ್ನದ್ಧರಾಗಬೇಡವೇ?
ಆದರೆ ಹೇಗೆ? ವರ್ಷಕ್ಕೊಮ್ಮೆ ಬರುವ ಯುಗಾದಿ ಯುಗಯುಗಗಳಿಂದ ಬಂದು ಹೋಗುತ್ತಲೇ ಇವೆ. ನಾವು ಬಾಗಿಲಿಗೊಂದು ತೋರಣ ಕಟ್ಟಿ, ಬೇವುಬೆಲ್ಲಗಳ ಜತೆ ಸಂತೋಷ ಹಂಚಿಕೊಂಡು ಒಬ್ಬಟ್ಟಿನ ಜತೆ ಸಂಭ್ರಮಿಸುತ್ತೇವೆ ನಿಜ. ಆದರೆ ಅಷ್ಟೇ ಸಾಕೇ?
ಕಾಲ ಒಂದು ಸಣ್ಣ ತಿರುಗಾಟ ಪೂರೈಸಿ ಮತ್ತೆ ಮನೆ ಬಾಗಿಲಿಗೆ ಬರುವಷ್ಟರಲ್ಲಿ ಏನೆಲ್ಲ ನಡೆದು ಹೋಗಿರುತ್ತದೆ . ಕಾಲದ ಹೊಳೆ ನಿರಂತರ ಅನ್ನುತ್ತಾರೆ. ದಡದಲ್ಲಿ ನಾವಿದ್ದೇವೆ, ಬೆಸ್ತರ ಹಾಗೆ. ಅಮೂಲ್ಯ ಕ್ಷಣಗಳನ್ನು ಹಿಡಿಯುವುದಕ್ಕೆ ಬಲೆ ಬೀಸುತ್ತಾ !
ಆದರೆ, ಬೆಳ್ಳಿಮೀನುಗಳು ಬಲೆಗೆ ಬೀಳುವುದೇ ಇಲ್ಲ. ಅವು ಕಾಲದ ಹೊಳೆಯಲ್ಲಿದ್ದಾಗಲೆ ಸೊಗಸು. ಬಲೆ ಬೀಸಿ ಹಿಡಿದೊಡನೆ ಉಸಿರುಗಟ್ಟಿ ಸಾಯುತ್ತವೆ, ಕೊಳೆಯುತ್ತವೆ. ಅವುಗಳ ಬಗ್ಗೆ ಆಸಕ್ತಿ ಕಳೆದುಕೊಂಡು ಮತ್ತೊಂದು ಮೀನಿನ ಹುಡುಕಾಟಕ್ಕೆ ಮನಸು ಹಾಯುತ್ತದೆ.ಇದೇ ಕಾಲನ ಕರುಣೆ. ನಮ್ಮನ್ನು ನಿರಂತರ ಹುಡುಕಾಟದಲ್ಲಿ , ನಿತ್ಯ ಕುತೂಹಲದಲ್ಲಿ, ಬಟ್ಟ ಬೆರಗಲ್ಲಿ, ಕಥಾ ಕೌತುಕದಲ್ಲಿ ನಿಲ್ಲಿಸುವ ಕಾಲ ತನ್ನ ತೆಕ್ಕೆಯಲ್ಲಿರುವ ಒಂದೊಂದೇ ಗುಟ್ಟುಗಳನ್ನು ಕಾಲಕಾಲಕ್ಕೆ ಕೊಡುತ್ತಾ ಹೋಗುತ್ತದೆ. ಚಾಳೀಸ ಕೊಟ್ಟವನೇ ಕನ್ನಡಕವನ್ನೂ ಕೊಡುತ್ತಾನೆ.
ಈಗ ಕೊಟ್ಟಿರುವ ಹಾಗೆ. ಕಾಲ ದೇಶವನ್ನು ಮೀರುವುದಕ್ಕೊಂದು ಊರುಗೋಲು ಇಂಟರ್ನೆಟ್. ಆಕಾಶವಾಣಿ, ದೂರದರ್ಶನ ಎಂದರೆ ಬೆಕ್ಕಸ ಬೆರಗಾಗುತ್ತಿದ್ದ ಎಲ್ಲರಿಗೆ, ಹೊಸ ಬೆರಗಿನ ಹಾಗೆ- ಇಂಟರ್ನೆಟ್ - ಅಂತರ್ಜಾಲ ಒದಗಿಬಂದಿದೆ.
ಯುಗಾದಿ ಎಂದರೆ ಇದೇ... ಬಚ್ಚಿಟ್ಟ ಒಂದೊಂದನ್ನೂ ಕಾಲ ಕೈಗಿಡುತ್ತಾ ನಡೆಯುವುದು, ವಿದೂರಗಳ ಸೇರಿಸುವ ಸೇತುವೆಯಾಗುವುದು, ಕಲ್ಪನೆಗಳನ್ನು ಕೈಗೂಸಾಗಿಸಿ ಕನಸುಗಳನ್ನು ಕಣ್ಣಮುಂದಿನ ಟ್ಯಾಂಜಿಬಲ್ ಸಂಗತಿಯನ್ನಾಗಿಸಿ ಬೆರಗುಗೊಳಿಸುವುದು.
ಇದು ಬರಿ ಬೆರಗಷ್ಟೇ ಅಲ್ಲ, ಬೆಳಕು... ಯುಗಾದಿಯ ಹೊಸ ಬೆಳಗು. ಹೊಸ ಧ್ವನಿಯ ಅಖಂಡ ಮೊಳಗು. ಒಳಗೂ ಹೊರಗೂ ಹಬ್ಬಲಿರುವ ಈ ಸರ್ವಾಂತರ್ಯಾಮಿಯ ನವ ತಂತ್ರಜ್ಞಾನ ಇಂದಿನಿಂದ ನಿಮ್ಮ ಕಂದ. ನಿಮ್ಮ ಮನೆಯಾಳಗಾಡೊ ಮುಕುಂದ.
ಬನ್ನಿ... ನಿಮ್ಮ ಬೆರಳು ತುದಿಯ ಸ್ಪರ್ಶಕ್ಕೆ ಬೆಸಗೊಳುವ, ಮರೆಯುವ ಈ ಕನ್ನಡದ ಕಂದನನ್ನು ಬರಮಾಡಿಕೊಳ್ಳಿ. ಯುಗಾದಿಯಂದು ಯುಗಪುರುಷ ಬರುತ್ತಾನಂತೆ. ಹಾಗಂತ ಪ್ರತೀತಿ.
ಒಮ್ಮೊಮ್ಮೆ ಪ್ರತೀತಿಗಳು ನಿಜವಾಗುವುದುಂಟು.
ಹೀಗಿರುವ ಹಾಗೆ- ಕನ್ನಡದ ಕಂಪು, ಸೊಂಪು, ಇಂಪುಗಳ ಹೊತ್ತ, ಕನ್ನಡ ಪ್ರಜ್ಞೆ ಯೇ ನಮ್ಮ ವೆಬ್ಸೈಟ್. ಇದು ನಿಯತಕಾಲಿಕವಲ್ಲ, ನಿತ್ಯ ಕಾಲಿಕ . ಇಲ್ಲಿ ನಿನ್ನೆಯ ವರ್ತಮಾನವಿರುವುದಿಲ್ಲ, ಎಲ್ಲವೂ ಈ ಕ್ಷಣದ ಸತ್ಯ.
Living moment to moment ಅನ್ನುತ್ತಾರಲ್ಲ ಅದೇ ಇದು.
Timeless...ಅನಂತ.
Thank you for choosing ThatsKannada
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications