ಎರಡು ಪದ್ಯ : ಮಕ್ಕಳಿಗೂ, ಮಕ್ಕಳಂಥವರಿಗೂ
- ಚಂದ್ರಗೌಡ ಕುಲಕರ್ಣಿ, ಕಡದಳ್ಳಿ, ತಾಳೀಕೋಟೆ
[email protected]
ಅಕ್ಷರವು ಮೂರುಂಟು
ಕುಳಿತಾವ ಅಡಗಿ!
ಅರ್ಥವನು ಹೇಳ್ಯಾವ
ಹಿರಿದಾದ ಗಡಿಗಿ !
ಶಿವನೆಂದು ನೂಡಿತಾವ
ಒಂದ್-ಎರಡು ಸೇರಿ !
ದಿನಕರನ ಕರಿತಾವ
ಕೊನೆಯೆರಡು ಸೇರಿ !
ಒಂದನೆಯ ಅಕ್ಷರಕೆ
ಕೊನೆದೊಂದು ಕೂಡಿ !
ಯಜ್ಞಕ್ಕೆ ಕೊಡುವಂಥ
ತುಪ್ಪವದು ನೋಡಿ !
ತಿಮ್ರುವು ಮಡ್ದ್ಯಾಗ
ಅಗಲಿಕೆಯ ಅರ್ಥ !
ಪದ ಹುಡುಕಿ ಕೊಡಬೇಕು
ಜಾಣರೆ ತುರ್ತ !
***
ಹಾಲಹಸುಳೆ
ಎಳೆಯ ಕಂಗಳ ಹೊಳೆವ ನೋಟಕೆ
ಚಂದ್ರಕಳೆ ಸಮ ಬಾರದು !
ಹಾಲ ಹಸುಳೆಯ ಜೋಲು ಜೊಲ್ಲಿಗೆ
ಜೇನು ಹನಿ ಸಮವೆನಿಸದು !
ಮಧುರ ಕಂಠದ ಇಂಪು ಗಾನವ
ಕೇಳಿ ಕೋಗಿಲೆ ಹಾಡದು !
ಉಲಿವ ಗೆಜ್ಜೆಯ ಬೆಡಗಿನಾಟಾವ
ನೋಡಿ ನವಿಲು ಕುಣಿಯದು !
ತುಂಟ ಭಾವದ ಅರಳು ನಗುವಿಗೆ
ಹೂಚೆಲುವು ಸಮದೋರದು !
ತೊದಲು ನುಡಿಯನು ಕೇಳಿ ಗಿಳಿಯು
ಮೌನ ತಾಳಿ ಬಿಡುವುದು !
ಚಂದ್ರ ಕೋಗಿಲೆ ಜೇನು ಹೂ ಗಿಳಿ
ನವಿಲು ಒಟ್ಟಿಗೆ ಸೇರಿಯೆ !
ಪುಟ್ಟಕಂದನ ಮೇಲೆ ಸ್ಪರ್ಧೆಯ
ಹೂಡಿ ತಾವೆ ಸೋತಿವೆ !
More From
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications