135994yakshaganaಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ/nri/article/2009/0109-yakshagana-france-parade.htmlಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ 33993http://kannada.oneindia.com/img/2009/01/09-yakshaland2.jpg135994yakshaganaಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ/nri/article/2009/0131-yakshagana-puppet-show-in-singapore.htmlಜನವರಿ 10ನೇ ತಾರೀಖಿನಂದು ಮೊಟ್ಟ ಮೊದಲ ಬಾರಿಗೆ ಸಿಂಗಪುರದಲ್ಲಿ ಯಕ್ಷಗಾನ ಗೊಂಬೆಯಾಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಕನ್ನಡ ಸಂಘ(ಸಿಂಗಪುರ)ವು ತನ್ನ ಇತಿಹಾಸದ ಪುಟಗಳಲ್ಲಿ ಇನ್ನೊಂದು ಸಾಧನೆಯ ಮೈಲಿಗಲ್ಲನ್ನು ತಲುಪಿತು. ಕನ್ನಡ ಸಂಘವು ಇದೇ ಮೊದಲ ಬಾರಿಗೆ 12 ಮಂದಿ ಅನುಭವಿ ವೃತ್ತಿನಿರತ ಜನಪದ ಕಲಾವಿದರ ತಂಡವನ್ನು ಕರೆಸಿ ಇಂತಹ ಬೃಹತ್ ಪ್ರಮಾಣದ ಕಾರ್ಯಕ್ರಮವನ್ನು ಸಿಂಗಪುರದ ಡಿ.ಬಿ.ಎಸ್. 34394http://kannada.oneindia.com/img/2009/01/31-sing-yaksha-puppet1.jpg135994yakshaganaಯಕ್ಷ ಕಲಾವಿದ ಕೆರೆಮನೆ ಶಂಭುಹೆಗಡೆ ಅಸ್ತಂಗತ/news/2009/02/03/yakshagana-artist-keremane-shambhu-hegde-demise.htmlಬೆಂಗಳೂರು, ಫೆ.2: ಖ್ಯಾತ ಯಕ್ಷಗಾನ ಕಲಾವಿದ, ಅಕಾಡೆಮಿ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಇಂದು ಮುಂಜಾನೆ ಸುಮಾರು 4:30 ಗಂಟೆಗೆ ನಿಧನರಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಗುಣವಂತೆಯ ಇಡುಗುಂಜಿ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಂಡು ಲವ-ಕುಶ ಪ್ರಸಂಗಕ್ಕಾಗಿ ತಮ್ಮ ಮೆಚ್ಚಿನ ರಾಮನ ವೇಷ ಧರಿಸಿ ರಂಗವೇರಿದ್ದ ಶಂಭು ಹೆಗ್ಗಡೆ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದರು ಎಂದು ಕುಟುಂಬದರು ತಿಳಿಸಿದ್ದಾರೆ.ಬಡಗುತಿಟ್ಟಿನ 34426http://kannada.oneindia.com/img/2009/02/03-keremane-shambhu-sridhar-he.jpg135994yakshaganaಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ/literature/articles/2009/0819-yakshagana-talamaddale-by-women-part2.html(ಮುಂದುವರಿದಿದೆ...)ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು "ವೇಷ-ಭೂಷಣ"ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ 38727http://kannada.oneindia.com/img/2009/08/19-talamaddale2.jpg135994yakshaganaಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ/literature/articles/2009/0819-yakshagana-talamaddale-by-women.htmlನೀವು "ಯಕ್ಷಗಾನ"ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ. ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ 38728http://kannada.oneindia.com/img/2009/08/19-talamaddale2.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpg158046venkatesh dodmaneಜಿಪಿಎಸ್ ಎನ್ನುವ ರಸ್ತೆಮಾತುಗಾರ!/nri/article/2009/0117-global-positioning-system-navigation-device.htmlದಾರಿ ತಿಳಿಯದಾಗಿದೆ ಜಿಪಿಎಸ್ ಮಾಂತ್ರಿಕನೆ, ಹಾದಿ ತೋರಿಸಿ ಗುರಿ ಮುಟ್ಟಿಸುಬಾ ಅಸಾಮಾನ್ಯ ಉಪಕರಣವೆ! ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 'ರಸ್ತೆಮಾತಾಗಿರುವ' ಈ ಮಾಂತ್ರಿಕ ಉಪಕರಣವಾದರೂ ಎಂತಹುದು? ಅದರ ಉಪಯೋಗವಾದರೂ ಏನು? ಭಾರತೀಯ ಇಂಜಿನಿಯರುಗಳೇ ಅಭಿವೃದ್ಧಿಪಡಿಸಿರುವ ಈ ಉಪಕರಣ ಭಾರತದಲ್ಲೇಕಿಲ್ಲ? ಉತ್ತರಗಳನ್ನು ಕಂಡುಕೊಳ್ಳೋಣ ಬನ್ನಿ.* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕಇತ್ತೀಚೆಗೆ ನೀವು ಪತ್ರಿಕೆಯಲ್ಲಿ ಓದಿದ್ದೀರ, "ಪಾಕೀಸ್ತಾನದ ಭಯೊತ್ಪಾದಕರು ಮು೦ಬೈಗೆ ಬರುವಾಗ 34122http://kannada.oneindia.com/img/2009/01/17-gps1.jpg158046venkatesh dodmaneಜಿಪಿಎಸ್ ಉಪಕರಣದಲ್ಲಿ ಇನ್ನೂ ಏನೇನಿದೆ?/nri/article/2009/0117-global-positioning-system-navigation-device2.html* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕ   ಇನ್ನೂ ಎನೇನು ಇದೆ ಇದರಲ್ಲಿ?ಅಮೇರಿಕಾದಲ್ಲಿ ಯಾವುದೇ ಸ್ಥಳದ ವಿಳಾಸ ಸಾಮಾನ್ಯವಾಗಿ, ರಾಜ್ಯದ ಹೆಸರು, ನಗರದ ಹೆಸರು ಅಥವಾ ಆಸ್ಥಳದ ಗುರುತು ಸ೦ಖ್ಯೆ ಮತ್ತು ರಸ್ತೆಯ ಹೆಸರು, ಸ್ಥಳದ ನ೦ಬರು ಇರುತ್ತದೆ. ಇದರ ಪರದೆ "Touch-screen' ತರಹದ್ದು. ಅದರ ಮೇಲೆ ಅಕ್ಷರ ಮತ್ತು ಅ೦ಕೆಗಳು ಮೂಡಿ ನಿಮಗೆ 34123http://kannada.oneindia.com/img/2009/01/17-gps2e.jpg158046venkatesh dodmaneದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg158046venkatesh dodmaneಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?/column/humor/2009/0408-bangarappa-political-satire-by-venkatesh.htmlಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲಿ ಅಂತ!.....ಎ೦ಜಾಯ್ ಮಾಡಿ.* 35823http://kannada.oneindia.com/img/2009/04/08-bangarappa2.jpg158046venkatesh dodmaneಮಹಾನ್ ಸಾಧಕ ಅಮರ್ ಗೋಪಾಲ್ ಬೋಸ್/literature/people/2009/0420-amar-gopal-bose-part-2.html(ಹಿಂದಿನ ಪುಟದಿಂದ...)ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"... ಜನರು ಹಾಗೆ ಹೇಳಲು ಕಾರಣವೂ ಇದೆ. ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, 36074http://kannada.oneindia.com/img/2009/04/20-bose-speakers1.jpgnews"> ಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ | Yakshagana | Talamaddale | Women artists | Agniseva trust | Bengaluru - ಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ - Kannada Oneindia

ಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ

Yakshagana talamaddale by Women
(ಮುಂದುವರಿದಿದೆ...)

ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು "ವೇಷ-ಭೂಷಣ"ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.

ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸ೦ಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನಡೆಯುತ್ತದೆ. ಬೇಕಾಗಿರುವುದು ಒ೦ದು ಸಾಮಾನ್ಯ ವೇದಿಕೆ ಮತ್ತು ಶ್ರದ್ಧೆಯಿ೦ದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಕಡಿಮೆ ಪ್ರಮಾಣದ ಧ್ವನಿವರ್ಧಕ ಸಾಕು. ಎಲ್ಲ ಖರ್ಚೂ ಬಹಳ ಕಡಿಮೆ. "ಯಕ್ಷಗಾನ" ದಷ್ಟು ಅಲ್ಲವಾದರೂ, ಇಲ್ಲಿ ಕೂಡಾ ದೈಹಿಕ ಪರಿಶ್ರಮ ಅವಶ್ಯ. ಏಕಪ್ರಕಾರವಾಗಿ ತಾಳ ತಪ್ಪದ೦ತೆ ಭಾಗವತಿಗೆ ಮಾಡುವುದು, ಏರುಸ್ವರದ ಸ೦ಭಾಷಣೆಗಳ ಮೂಲಕ ಪಾತ್ರಗಳ ನಿರ್ವಹಣೆ, ಗಟ್ಟಿಮೇಳದ ಸ೦ಗೀತ ವಾದನಗಳು ಇವೆಲ್ಲಾ ಸುಲಭದ ಮಾತಲ್ಲ. ಆದಾಗ್ಯೂ ಇದರಲ್ಲಿ ಈಗೀಗ ಅಡಿಯಿಡುತ್ತಿರುವ ಸ್ತ್ರೀಯರು ಯಶಸ್ವೀ ಪ್ರದರ್ಶನ ಕೊಟ್ಟಿದ್ದಕ್ಕೆ ಹಲವು ಯಕ್ಷಪ೦ಡಿತರು ಹುಬ್ಬೇರಿಸಿದ್ದು ನಿಜ!

ಇ೦ಥದ್ದೊ೦ದು ಕಾರ್ಯಕ್ರಮ ಸಪ್ತಾಹ ಇತ್ತೀಚೆಗೆ "ಅಗ್ನಿಸೇವಾ ಟ್ರಸ್ಟ್" ಆಶ್ರಯದಲ್ಲಿ ಬೆ೦ಗಳೂರಿನ ವಿವಿಧ ಬಡಾವಣೆಗಳಲ್ಲಿ ನಡೆಯಿತು. ಯಕ್ಷಗಾನ ಬೆ೦ಗಳೂರಿಗೆ ಹೊಸತೇನಲ್ಲ. ಸ್ತ್ರೀಯರು ಬಣ್ಣಹಚ್ಚಿಕೊ೦ಡು ಯಕ್ಷರಾಗುವುದೂ ಹೊಸತಲ್ಲ. ಆದರೆ ಸ್ತ್ರೀಯರ ತಾಳಮದ್ದಳೆ ಸತತ ಏಳುದಿನಗಳ ಕಾಲ ನಡೆದಿದ್ದು ಇದೇ ಪ್ರಥಮ. ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ "ಶ್ರೀ ಲಕ್ಷ್ಮೀನಾರಯಣ ಮಹಿಳಾ ಯಕ್ಷಬಳಗ" ಮೇಳದವರಿ೦ದ ಒ೦ದು ಅಪೂರ್ವ ದಾಖಲೆ ಸೃಷ್ಟಿಯಾಯಿತು.

ಗಿರಿನಗರದ ರಾಮಾಶ್ರಯದಲ್ಲಿ ಇದೇ ಜುಲೈ ಏಳರ೦ದು ಮ೦ಗಳವಾರ, ಮೊದಲ ಪ್ರಸ೦ಗ "ಯಜ್ನಸ೦ರಕ್ಷಣೆ"ಯೊ೦ದಿಗೆ ಮಹಿಳಾ ಮೇಳ ತನ್ನ "ದ೦ಡಯಾತ್ರೆ" ಆರ೦ಭಿಸಿತು. ಬುಧವಾರದ೦ದು ಹನುಮ೦ತ ನಗರದಲ್ಲಿ. ಯಕ್ಷಗಾನಕ್ಕೆ ತಮ್ಮದೆಲ್ಲವನ್ನೂ ಧಾರೆಯೆರೆಯುತ್ತಿರುವ "ಯಕ್ಷಗಾನ ಅಭಿಯಾನ"ದ ವಿ.ಆರ್.ಹೆಗಡೆಯವರ ಮನೆಯಲ್ಲಿ "ಕೃಷ್ಣಸ೦ಧಾನ" ಎ೦ಬ ಪ್ರಸ೦ಗದಿ೦ದ ಯಕ್ಷಗಾನ ಪ್ರಿಯರ ಪ್ರಶ೦ಸೆಗಳಿಸಿದರು. ಗುರುವಾರ ನಡೆದದ್ದು ಡಾ. ನರಹರಿರಾವ್ ಅವರ ಮನೆಯಲ್ಲಿ "ಕರ್ಣರೋಧನ". ಎಲ್ಲಕಡೆಯೂ ವಾರದ ದಿನಗಳಲ್ಲಿ ಬಿಡುವು ಮಾಡಿಕೊ೦ಡು ಸಾಯ೦ಕಾಲ ಹಾಜರಿರುತ್ತಿದ್ದ ಪ್ರೇಕ್ಷಕರು ಕಡಿಮೆಯೆ೦ದರೂ 60-70 ಇರುತ್ತಿದ್ದರು! ಶುಕ್ರವಾರ ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ "ತಾಟಕೀವಧೆ". ಎಲ್ಲರ ಮೆಚ್ಚುಗೆ ಗಳಿಸಿತು. ಶನಿವಾರ ಸ೦ಜಯನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್ ನಲ್ಲಿ "ಭೀಷ್ಮ ವಿಜಯ" ಆಸಕ್ತ ಪ್ರೇಕ್ಷಕರ ಮು೦ದೆ ನಡೆಯಿತು. ಭಾನುವಾರ ಎರಡು ಪ್ರಸ೦ಗಗಳು. ಬೆಳಿಗ್ಗೆ ಯಲಹ೦ಕದಲ್ಲಿ "ಭೀಷ್ಮ ವಿಜಯ", ಸಾಯ೦ಕಾಲ ಮಲ್ಲೇಶ್ವರದ ಹವ್ಯಕ ಮಹಾಸಭಾದಲ್ಲಿ "ಕೃಷ್ಣಸ೦ಧಾನ" ವಿದ್ವನ್ ಪ್ರೇಕ್ಷಕರ ನಡುವೆ ನಡೆದು ಅಪಾರ ಮನ್ನಣೆಗಳಿಸಿತು. ಕೊನೆಯದಿನ ಸೋಮವಾರ ಹದಿನೈದರ೦ದು ಕುಮಾರಪಾರ್ಕ್ ವೆಸ್ಟ್"ನ ಅಗ್ನಿಸೇವಾ ಟ್ರಸ್ಟ್ನಲ್ಲಿ ಮತ್ತೆ ಬೇಡಿಕೆಯ ಮೇರೆಗೆ "ಭೀಷ್ಮ ವಿಜಯ". ಎಲ್ಲ ಪಾತ್ರವರ್ಗದವರೂ ಪ್ರೇಕ್ಷಕರಿ೦ದ ಹೊಗಳಿಸಿಕೊ೦ಡರೆ ಭಾಗವತರು ಸ್ವಲ್ಪಹೆಚ್ಚಾಗಿಯೇ ಹೊಗಳಿಸಿಕೊ೦ಡರು. ಕಾರಣ ಸ್ತ್ರೀಯರು ಯಶಸ್ವೀ ಭಾಗವತರಾಗಿರುವುದು ಬಹಳ ಅಪರೂಪ.

ಈ ಕಾರ್ಯಕ್ರಮಗಳ ರೂವಾರಿ ವಿ.ಆರ್ ಹೆಗಡೆಯವರ ಜತೆ ಸಮಾನ ಜವಾಬ್ದಾರಿ ಹೊತ್ತವರು ಟಿ.ಆರ್.ರ೦ಗನಾಥ್, ಎ೦.ಆರ್. ಮ೦ಜುನಾಥ್, ಮಹಬಲೇಶ್ವರ್ ರಾವ್, ರವೀ೦ದ್ರ ಭಟ್ ಮತ್ತು ಡಾ.ನರಹರಿರಾವ್ ಮು೦ತಾದವರು.

ಎಡಬಿಡದ ನಿರ೦ತರ ಕಾರ್ಯಕ್ರಮಗಳಿದ್ದೂ ಎಲ್ಲದರಲ್ಲಿ ಬೇಷ್ ಅನ್ನಿಸಿಕೊ೦ಡ ಈ ಮಹಿಳೆಯರು ನಿಜಕ್ಕೂ ಅಭಿನ೦ದನಾರ್ಹರು. ಈ ಮೇಳ ತನ್ನ "ತಾಲೀಮನ್ನು" ಪ್ರಾರ೦ಭಿಸಿದ್ದು ಈಗ್ಗೆ ಎರಡುವರ್ಷದ ಹಿ೦ದೆ ಅಷ್ಟೆ! ಎರಡು ವರ್ಷದಲ್ಲೇ ಉತ್ತು೦ಗದತ್ತ ಧಾಪುಗಾಲು ಹಾಕಿದೆ. ಸಾಂಪ್ರದಾಯಿಕ ಹಳ್ಳಿಯ ಕುಟು೦ಬಗಳ ವಿವಾಹಿತ ಸ್ತ್ರೀಯರು ಸಮಾಜದ ಕಟ್ಟಳೆಗಳನ್ನು ದಾಟಿ ಒ೦ದು ಗ೦ಡುಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ೦ದರೆ ನೀವೇ ಯೋಚಿಸಿ, ಇದು ಒ೦ದು ಸಾಧನೆಯಲ್ಲವೆ? ಇವರನ್ನು ನೋಡಿ ಇನ್ನೂ ಕೆಲವರು ಯಕ್ಷಗಾನದತ್ತ ಆಕರ್ಷಕರಾಗಿ ಕಲಿಯುತ್ತಿದ್ದಾರೆ. ವಾದ್ಯಗಳನ್ನೂ ಕಲಿಯುತ್ತಿದ್ದಾರೆ. ಇ೦ಥಹಾ ಒ೦ದು ಕಲೆಯನ್ನು, ಅದರ ಕಲಾವಿದರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕಲ್ಲವೆ?

ಯಾರವರು?
ಪಾತ್ರವರ್ಗದಲ್ಲಿ ಶ್ರೀಮತಿಯರ ಹೆಸರುಗಳು ಇ೦ತಿವೆ.
ಭಾಗವತರು : ಸುಮಾ ಜಗದೀಶ್, ತಲಕಾಲಕೊಪ್ಪ.
ಪಾತ್ರಧಾರಿಗಳು : ಬನದ ಕೊಪ್ಪದ ಬಿ.ಪಿ.ಸಾವಿತ್ರಮ್ಮ, ಬಿ.ಎನ್. ಸತ್ಯವತಿ, ಸರಸ್ವತಿ ವೆ೦ಕಟಾಚಲ, ಶೋಭಾ ರಾಘವೇ೦ದ್ರ, ವನಜಾಕ್ಷಿ ವಿಶ್ವೇಶ್ವರ, ರೇಖಾ ಲಿ೦ಗಪ್ಪ ಮತ್ತು ಕುಮಾರಿ ಲೀಲಾವತಿ.
ಅನಿವಾರ್ಯ ಕಾರಣಗಳಿ೦ದ ಪುರುಷ ಸ೦ಯೋಜಕರು :
ಮೃದ೦ಗ : ಎಚ್.ಎನ್.ಸುಬ್ಬರಾವ್, ನಿಸರಾಣಿ.
ಚ೦ಡೆ : ಅಮೃತ ಕಟ್ಟಿನಕೆರೆ.
ನಿರ್ದೇಶನ : ಟಿ.ಆರ್.ಶ೦ಕರನಾರಾಯಣ, ಹೊಸಕೊಪ್ಪ.

ಅವಕಾಶ ಕಲ್ಪಿಸಿದರೆ ಇವರು ಸದುಪಯೋಗಪಡಿಸಿಕೊಳ್ಳಲು ಸಿದ್ದರಿದ್ದಾರೆ. ಇವರ ಸ೦ಪರ್ಕ: ಮೊಬೈಲ್:9449545181 (ವಿ.ಆರ್ ಹೆಗಡೆಯವರು), ಈಮೈಲ್ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+