ಸಿಧು ಮುಸೇವಾಲಾ ಯಾರು? ಪಂಜಾಬಿ ಗಾಯಕನನ್ನು ಒಳಗೊಂಡ ವಿವಾದಗಳನ್ನು ತಿಳಿಯಿರಿ
ಚಂಡೀಗಢ, ಮೇ 30: ಜನಪ್ರಿಯ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸ್ ವಾಲಾ ಅವರನ್ನು ಮಾನ್ಸಾ ಜಿಲ್ಲೆಯ ಅವರ ಗ್ರಾಮದಲ್ಲಿ ನಿನ್ನೆ ಸಂಜೆ (ಮೇ 29) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮೂಸೆವಾಲ (29) ತನ್ನ ಇಬ್ಬರು ಸ್ನೇಹಿತರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಗ್ರಾಮದ ಜವಾಹರ್ ಕೆ ಎಂಬಲ್ಲಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.
ಸಿದ್ದು ಮುಸೇವಾಲಾ ಹತ್ಯೆ ಪ್ರಕರಣ: ಸಿಸಿಟಿವಿಯಲ್ಲಿ ಹಂತಕರ ದೃಶ್ಯ ಸೆರೆ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅಲಿಯಾಸ್ ಶುಭದೀಪ್ ಸಿಂಗ್ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದವರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡಿದ ಅವರು ಪಂಜಾಬಿ ಹಾಡುಗಾರಿಕೆಯಲ್ಲಿ ಕೇಳುಗರ ಹೃದಯವನ್ನು ಗೆದ್ದಿದ್ದರು. ಹಲವು ವಿವಾದಗಳಲ್ಲಿ ಸಿಲುಕ್ಕಿದ್ದ ಸಿಧು ಮೂಸೆವಾಲಾ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿದ್ದವು. ಆದರೆ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿರಲಿಲ್ಲ. ಹೀಗಾಗಿನೇ ಕಳೆದ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಅವರಿಗೆ ಚುನಾವಣಾ ಟಿಕೆಟ್ ನೀಡಿ ಗೆಲ್ಲುವ ಪಣತೊಟ್ಟಿತ್ತು. ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಅಪರಿಚಿತ ಹಂತಕರ ಗುಂಡಿಗೆ ಬಲಿಯಾದ ಸಿಧು ಮುಸೇವಾಲಾ ಯಾರು ಎಂದು ತಿಳಿಯಿರಿ.
ಪಂಜಾಬ್ ಗಾಯಕ ಶುಭದೀಪ್ ಸಿಂಗ್
17 ಜೂನ್ 1993 ರಂದು ಜನಿಸಿದ ಮೂಸೆವಾಲಾ ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿರುವ ಮೂಸೆವಾಲಾ ಗ್ರಾಮಕ್ಕೆ ಸೇರಿದವರು. ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಪ್ರಸ್ತುತ ಜವಾಹರ್ಕೆ ಗ್ರಾಮದ ಮುಖ್ಯಸ್ಥರಾಗಿದ್ದಾರೆ. ಅವರ ನಿಜವಾದ ಹೆಸರು ಶುಭದೀಪ್ ಸಿಂಗ್. ಅವರು ಭಾರತೀಯ ಗಾಯಕ, rapper, ಗೀತರಚನೆಕಾರ ಮತ್ತು ಪಂಜಾಬಿ ಸಂಗೀತ ಮತ್ತು ಪಂಜಾಬಿ ಸಿನಿಮಾದೊಂದಿಗೆ ಸಂಬಂಧ ಹೊಂದಿರುವ ನಟ. ಮೂಸ್ವಾಲಾ ಅವರ ರಾಪ್ ಹಾಡುಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಅವರ ವಿವಾದಾತ್ಮಕ ಹಾಡುಗಳ ಶೈಲಿಯಿಂದಾಗಿ ಅವರು ಚರ್ಚೆಯಲ್ಲಿದ್ದರು. ಆಗಾಗ್ಗೆ ಬಂದೂಕು ಸಂಸ್ಕೃತಿಗಳನ್ನು ಉತ್ತೇಜಿಸುತ್ತಿದ್ದರು ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸುವ ಆರೋಪಗಳಿದ್ದವು.
ಸಿಧು ಮೂಸೆವಾಲಾ ಮೇಲೆ ಗುಂಡಿನ ದಾಳಿ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ಪಂಜಾಬ್ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಅವರು ಕಳೆದ ಚುನಾವಣೆಯಲ್ಲಿ ಮಾನ್ಸಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಆದರೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಡಾ ವಿಜಯ್ ಸಿಂಗ್ಲಾ ವಿರುದ್ಧ ಸೋತರು. ಸಿಂಗ್ಲಾ ಅವರು ಭಗವಂತ್ ಸಿಂಗ್ ಮಾನ್ ಸರ್ಕಾರದಲ್ಲಿ ಸಚಿವರಾದರು. ಆದರೆ ಇತ್ತೀಚೆಗೆ ಭ್ರಷ್ಟಾಚಾರದ ಆರೋಪದ ಮೇಲೆ ವಜಾಗೊಳಿಸಲಾಗಿದೆ. ಭಾನುವಾರ ಮುಸೇವಾಲಾ ಅವರನ್ನು ಮಾನ್ಸಾ ಜಿಲ್ಲೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜನಪ್ರಿಯ ಪಂಜಾಬಿ ಗಾಯಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಅತ್ಯಂತ ಗಂಭೀರವಾದ ವಿಷಯವೆಂದರೆ ಪಂಜಾಬ್ನ ಆಮ್ ಆದ್ಮಿ ಪಕ್ಷವು ಒಂದು ದಿನದ ಹಿಂದೆ ಅವರ ಭದ್ರತೆಯನ್ನು ಕಸಿದುಕೊಂಡಿತ್ತು ಮತ್ತು ನಂತರದ ನಡೆದ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ಮುಸೇವಾಲಾ ವಿರುದ್ಧ ಪ್ರಕರಣ
ಪಂಜಾಬ್ನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ 2016 ರಲ್ಲಿ ಮುಸೆವಾಲಾ ಅಧ್ಯಯನ ವೀಸಾದಲ್ಲಿ ಕೆನಡಾಕ್ಕೆ ತೆರಳಿದರು. ಒಂದು ವರ್ಷದ ನಂತರ ಅವರು ತಮ್ಮ ಮೊದಲ ಟ್ರ್ಯಾಕ್, 'ಸೋ ಹೈ' ಅನ್ನು ಬಿಡುಗಡೆ ಮಾಡಿದರು. ಅದರ ನಂತರ ಎರಡು ಸತತ ಆಲ್ಬಂಗಳು ಬಂದವು.
ಮುಸೇವಾಲಾ
ಅವರ
ಹಾಡುಗಳಲ್ಲಿ
ಬಂದೂಕು
ಸಂಸ್ಕೃತಿ
ಮತ್ತು
ಹಿಂಸಾಚಾರವನ್ನು
ಉತ್ತೇಜಿಸಿದ್ದಕ್ಕಾಗಿ
ಅವರ
ಮೇಲೆ
ಹಲವಾರು
ಪ್ರಕರಣಗಳನ್ನು
ದಾಖಲಿಸಲಾಯಿತು.
2020
ರಲ್ಲಿ,
ಆಗಿನ
ಕ್ಯಾಪ್ಟನ್
ಅಮರಿಂದರ್
ಸಿಂಗ್
ಅವರ
ಸರ್ಕಾರವು
ಹಾಡಿನಲ್ಲಿ
ಬಂದೂಕು
ಸಂಸ್ಕೃತಿಯನ್ನು
ಉತ್ತೇಜಿಸಿದ
ಆರೋಪದ
ಮೇಲೆ
ಶಸ್ತ್ರಾಸ್ತ್ರ
ಕಾಯ್ದೆಯಡಿ
ಅವರ
ವಿರುದ್ಧ
ಪ್ರಕರಣ
ದಾಖಲಿಸಿತು.
ಇದರಿಂದಾಗಿ
ಪ್ರಸಿದ್ಧ
ಪಂಜಾಬಿ
Rapper
ಹೆಸರು
ಯಾವಾಗಲೂ
ವಿವಾದಗಳಿಂದಾಗಿ
ಮುಖ್ಯಾಂಶಗಳಲ್ಲಿತ್ತು.
ಪೊಲೀಸ್ ಅಧಿಕಾರಿಗಳ ಅಮಾನತು
4 ಮೇ 2020 ರಂದು, ಮುಸೇವಾಲಾ ಅವರ ಎರಡು ವಿಡಿಯೊಗಳು ವೈರಲ್ ಆಗಿದ್ದು, ಅದರಲ್ಲಿ ಅವರು ಒಂದು ವಿಡಿಯೊದಲ್ಲಿ ಐವರು ಪೊಲೀಸ್ ಅಧಿಕಾರಿಗಳೊಂದಿಗೆ AK-47 ಅನ್ನು ಬಳಸಲು ತರಬೇತಿ ನೀಡುತ್ತಿದ್ದರು ಮತ್ತು ಇನ್ನೊಂದು ವಿಡಿಯೊದಲ್ಲಿ ವೈಯಕ್ತಿಕ ಪಿಸ್ತೂಲ್ ಅನ್ನು ಬಳಸುತ್ತಿದ್ದರು. ಘಟನೆಯ ನಂತರ ಮುಸೇವಾಲಾಗೆ ಸಹಾಯ ಮಾಡಿದ ಆರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಮೇ
19
ರಂದು,
ಮುಸೇವಾಲಾ
ಅವರ
ವಿರುದ್ಧ
ಶಸ್ತ್ರಾಸ್ತ್ರ
ಕಾಯ್ದೆಯ
ಎರಡು
ವಿಭಾಗಗಳ
ಅಡಿಯಲ್ಲಿ
ಪ್ರಕರಣ
ದಾಖಲಿಸಲಾಯಿತು.
ಜುಲೈ
2020
ರಲ್ಲಿ,
ಅವರು
ಸಿಂಗಲ್
"ಸಂಜು"
ಅನ್ನು
ಬಿಡುಗಡೆ
ಮಾಡಿದರು,
ಅದರಲ್ಲಿ
ಅವರು
ತಮ್ಮ
ಆರೋಪಗಳನ್ನು
ಸಂಜಯ್
ದತ್
ಅವರೊಂದಿಗೆ
ಹೋಲಿಸಿದರು.
ಭಾರತೀಯ
ಶೂಟರ್
ಅವನೀತ್
ಸಿಧು
ಮುಸೇವಾಲಾ
ಬಂದೂಕು
ಸಂಸ್ಕೃತಿಯನ್ನು
ಉತ್ತೇಜಿಸುತ್ತಿದ್ದಾರೆ
ಎಂದು
ಟೀಕಿಸಿದರು.
ಮರುದಿನವೇ
ಹಾಡಿಗಾಗಿ
ಅವರ
ಮೇಲೆ
ಕೇಸು
ದಾಖಲಾಗಿತ್ತು.
ಆಮ್ ಆದ್ಮಿ ಮತದಾರರನ್ನು ಕೆಣಕಿದ್ದ ಮುಸೇವಾಲಾ
ಡಿಸೆಂಬರ್ 2020 ರಲ್ಲಿ, ಮುಸೇವಾಲಾ "ಪಂಜಾಬ್: ಮೈ ಮದರ್ಲ್ಯಾಂಡ್" ಎಂಬ ಏಕಗೀತೆಯನ್ನು ಬಿಡುಗಡೆ ಮಾಡಿದರು. ಇದರಲ್ಲಿ ಅವರು ಖಲಿಸ್ತಾನಿ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆಯನ್ನು ವೈಭವೀಕರಿಸಿದರು. 1980 ರ ದಶಕದ ಉತ್ತರಾರ್ಧದಲ್ಲಿ ಖಲಿಸ್ತಾನಿ ಬೆಂಬಲಿಗ ಭರ್ಪುರ್ ಸಿಂಗ್ ಬಲ್ಬೀರ್ ಮಾಡಿದ ಭಾಷಣದ ದೃಶ್ಯಗಳನ್ನು ಈ ಹಾಡು ಒಳಗೊಂಡಿದೆ.
11
ಏಪ್ರಿಲ್
2022
ರಂದು
ಸಿಧು
"ಬಲಿಪಶು"
ಎಂಬ
ಶೀರ್ಷಿಕೆಯ
ಹೊಸ
ಹಾಡನ್ನು
ಬಿಡುಗಡೆ
ಮಾಡಿದರು.
ಅದರಲ್ಲಿ
ಅವರು
ಇತ್ತೀಚಿನ
ರಾಜ್ಯ
ವಿಧಾನಸಭಾ
ಚುನಾವಣೆಯಲ್ಲಿ
ತಮ್ಮ
ವೈಫಲ್ಯದ
ಬಗ್ಗೆ
ವಿಷಾದಿಸಿದರು.
ಆಮ್
ಆದ್ಮಿ
ಪಕ್ಷ
ಪಂಜಾಬ್ನ
ಮತದಾರರನ್ನು
"ಗದ್ದರ್"
(ದೇಶದ್ರೋಹಿಗಳು)
ಎಂದು
ಹಾಡಿನಲ್ಲಿ
ಹಾಡಿದ್ದಾರೆ
ಎಂದು
ಆರೋಪಿಸಲಾಯಿತು.
ಸಿಧು ಮುಸೇವಾಲಾ ಅವರನ್ನು 'ಯೂತ್ ಐಕಾನ್' ಎಂದು ಕರೆದಿದ್ದ ಸಿದ್ದು
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸಿಧು ಮುಸೇವಾಲಾ ಅವರ ವೈರಲ್ ವಿಡಿಯೊವೊಂದರಿಂದ ವಿವಾದಕ್ಕೆ ಸಿಲುಕಿದ್ದರು. ವಿಡಿಯೊದಲ್ಲಿ ಉದ್ದೇಶಪೂರ್ವಕವಾಗಿ ಅವರು ಎಕೆ -47 ರೈಫಲ್ನಿಂದ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಈ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಲಕ್ಷಾಂತರ ಅಭಿಮಾಣಿಗಳನ್ನು ಗಳಿಸಿತ್ತು.
ಮುಸೇವಾಲಾ
ಅವರನ್ನು
ಡಿಸೆಂಬರ್
3,
2021
ರಂದು
ಆಗಿನ
ಪಂಜಾಬ್
ಮುಖ್ಯಮಂತ್ರಿ
ಚರಂಜಿತ್
ಸಿಂಗ್
ಚನ್ನಿ
ಮತ್ತು
ಆಗಿನ
ರಾಜ್ಯ
ಕಾಂಗ್ರೆಸ್
ಅಧ್ಯಕ್ಷ
ನವಜೋತ್
ಸಿಂಗ್
ಸಿಧು
ಅವರ
ಸಮ್ಮುಖದಲ್ಲಿ
ಕಾಂಗ್ರೆಸ್ಗೆ
ಸೇರ್ಪಡೆಗೊಳಿಸಲಾಯಿತು.
ಅವರು
ಕಾಂಗ್ರೆಸ್
ಸೇರಿದಾಗ,
ಸಿಧು
ಅವರನ್ನು
ಯುವ
ಐಕಾನ್
ಮತ್ತು
ಅಂತಾರಾಷ್ಟ್ರೀಯ
ವ್ಯಕ್ತಿ
ಎಂದು
ಬಣ್ಣಿಸಿದ್ದರು.
ಇನ್ಸ್ಟಾಗ್ರಾಮ್ನಲ್ಲಿ
ಅವರ
ಅನುಯಾಯಿಗಳ
ಸಂಖ್ಯೆ
7
ಮಿಲಿಯನ್ಗಿಂತಲೂ
ಹೆಚ್ಚಿದ್ದು,
ನಾಲ್ಕು
ದಿನಗಳ
ಹಿಂದೆ
ಅವರು
ಕೊನೆಯದಾಗಿ
ಪೋಸ್ಟ್
ಮಾಡಿದ್ದಾರೆ.
ಭದ್ರತೆಯನ್ನು ಹಿಂಪಡೆದಿರುವ ಬಗ್ಗೆ ಪ್ರಶ್ನೆ
ಸಿಧು ಮುಸೇವಾಲಾ ಅವರಿಗೆ ಮಾನಸ ವಿಧಾನಸಭೆಯಿಂದ ಕಾಂಗ್ರೆಸ್ ಟಿಕೆಟ್ ನೀಡಿತು. ಆದರೆ ಅವರ ಜನಪ್ರಿಯತೆಯು ಆಮ್ ಆದ್ಮಿ ಪಕ್ಷದ ಅಲೆಯಲ್ಲಿ ಕೆಲಸ ಮಾಡಲಿಲ್ಲ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಪಕ್ಷದ ಅಭ್ಯರ್ಥಿ ಡಾ ವಿಜಯ್ ಸಿಂಗ್ಲಾ ಮುಸೇವಾಲಾ ಅವರನ್ನು 63,323 ಮತಗಳ ಅಂತರದಿಂದ ಸೋಲಿಸಿದರು. ಎನ್ಎಸ್ಯುಐ ರಾಷ್ಟ್ರೀಯ ಕಾರ್ಯದರ್ಶಿ ರೋಷನ್ ಲಾಲ್ ಬಿಟ್ಟು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುಸೇವಾಲಾ ಹತ್ಯೆಗೆ ಇವರಿಬ್ಬರೇ ಕಾರಣ ಎಂದು ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ. ತಮ್ಮ ಭದ್ರತೆಯನ್ನು ಹಿಂಪಡೆದಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.
Recommended Video