44.63 ಕೋಟಿ ರು ಮೌಲ್ಯದ ಆಸ್ತಿ ಘೋಷಿಸಿಕೊಂಡ ಸಿಧು
ಚಂಡೀಗಢ, ಜನವರಿ 30: ಪಂಜಾಬ್ ವಿಧಾನಸಭೆ ಚುನಾವಣೆ 2022ಗಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಆರಂಭಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ, ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ತಮ್ಮ ನಾಮಪತ್ರಸಲ್ಲಿಸಿದ್ದು, ಆಸ್ತಿ, ಸಾಲ ವಿವರಗಳ ಅಫಿಡವಿಟ್ ನೀಡಿದ್ದಾರೆ.
ಸಿಧು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಎರಡು ಅತ್ಯಾಧುನಿಕ ಎಸ್ಯುವಿಗಳು, ರೂ 44 ಲಕ್ಷ ಮೌಲ್ಯದ ವಾಚ್ಗಳು ಮತ್ತು ರೂ 35 ಕೋಟಿ ಮೌಲ್ಯದ ವಸತಿ ಆಸ್ತಿ(ಸ್ಥಿರಾಸ್ತಿ)ಗಳಿವೆ ಎಂದು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಅದರ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಘೋಷಿಸಿದ್ದಾರೆ. ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸಿಧು ಒಟ್ಟು ಆಸ್ತಿ 44.63 ಕೋಟಿ ರೂ ಎಂದು ದಾಖಲಿಸಿದ್ದಾರೆ.
58 ವರ್ಷ ವಯಸ್ಸಿನ ಭಾರತದ ಮಾಜಿ ಕ್ರಿಕೆಟಿಗ ಅವರು ಫೆಬ್ರವರಿ 20 ರ ರಾಜ್ಯ ವಿಧಾನಸಭಾ ಚುನಾವಣೆಗೆ ಅಮೃತಸರದ ಚುನಾವಣಾಧಿಕಾರಿಯ ಮುಂದೆ ಶನಿವಾರ ನಾಮಪತ್ರ ಸಲ್ಲಿಸಿದರು. ಇದರಲ್ಲಿ ಅವರ ಪತ್ನಿ ಹಾಗೂ ಮಾಜಿ ಶಾಸಕ ನವಜೋತ್ ಕೌರ್ ಸಿಧು ಅವರ ಕ್ರಮವಾಗಿ 3.28 ಕೋಟಿ ಹಾಗೂ 41.35 ಕೋಟಿ ಚರ ಮತ್ತು ಸ್ಥಿರ ಆಸ್ತಿ ವಿವರ ಕೂಡಾ ಸೇರಿದೆ.

ಕಾಂಗ್ರೆಸ್ ನಾಯಕ 2020-21 ರ ಹಣಕಾಸು ವರ್ಷದಲ್ಲಿ ತನ್ನ ಒಟ್ಟು ಆದಾಯವನ್ನು 22.58 ಲಕ್ಷಕ್ಕೆ ಘೋಷಿಸಿದ್ದಾರೆ, ಇದು 2016-17 ರಲ್ಲಿ 94.18 ಲಕ್ಷಕ್ಕೆ ಇಳಿದಿದೆ ಎಂದು ಅಫಿಡವಿಟ್ ಪ್ರಕಾರ ತಿಳಿದು ಬಂದಿದೆ.
ಸಿದ್ದು ಘೋಷಿಸಿರುವ ಚರ ಆಸ್ತಿಗಳ ಪೈಕಿ 1.19 ಕೋಟಿ ರೂಪಾಯಿ ಮೌಲ್ಯದ ಎರಡು ಟೊಯೊಟಾ ಲ್ಯಾಂಡ್ ಕ್ರೂಸರ್, 11.43 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚೂನರ್ ಕಾರು, 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 44 ಲಕ್ಷ ರೂಪಾಯಿ ಮೌಲ್ಯದ ವಾಚ್ಗಳಿವೆ.
ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಅಫಿಡವಿಟ್ ಪ್ರಕಾರ 70 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ.
ಸ್ಥಿರ ಆಸ್ತಿಗಳ ಪೈಕಿ, ಸಿಧು ಅವರು ಪಟಿಯಾಲಾದಲ್ಲಿ ಆರು ಶೋರೂಂಗಳನ್ನು ಘೋಷಿಸಿದ್ದಾರೆ ಆದರೆ ಅವರಿಗೆ ಯಾವುದೇ ಕೃಷಿ ಭೂಮಿ ಇಲ್ಲ ಎಂದು ಅದು ಹೇಳಿದೆ. 1.44 ಕೋಟಿ ಮೌಲ್ಯದ ಪಟಿಯಾಲಾದಲ್ಲಿ 1,200 ಚದರ ಗಜದಲ್ಲಿ ಹರಡಿರುವ ತಮ್ಮ ವಾಸದ ಮನೆ, ಪಿತ್ರಾರ್ಜಿತ ಆಸ್ತಿ ಎಂದು ಸಿಧು ಘೋಷಿಸಿದ್ದಾರೆ. ಅವರು ಅಮೃತಸರದಲ್ಲಿ ಸುಮಾರು 34 ಕೋಟಿ ಮೌಲ್ಯದ 5,114 ಚದರ ಗಜದ ವಸತಿ ಆಸ್ತಿಯನ್ನು ತೋರಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರು ಬಿಎ ಪದವಿ ಪಡೆರುವುದಾಗಿ ಘೋಷಿಸಿದ್ದಾರೆ. ಶೈಕ್ಷಣಿಕ ಅರ್ಹತೆಯಾಗಿ 1986 ರಲ್ಲಿ ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ್ದರೆ. ಅವರು ಶಾಸಕರಾಗಿ ಸಂಬಳ, ಬಾಡಿಗೆ ಆದಾಯ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಪಿಂಚಣಿಯಿಂದ ತಮ್ಮ ಆದಾಯದ ಮೂಲವನ್ನಾಗಿ ಘೋಷಿಸಿದ್ದಾರೆ (ಪಿಟಿಐ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications