44.63 ಕೋಟಿ ರು ಮೌಲ್ಯದ ಆಸ್ತಿ ಘೋಷಿಸಿಕೊಂಡ ಸಿಧು
ಚಂಡೀಗಢ, ಜನವರಿ 30: ಪಂಜಾಬ್ ವಿಧಾನಸಭೆ ಚುನಾವಣೆ 2022ಗಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಆರಂಭಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ, ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ತಮ್ಮ ನಾಮಪತ್ರಸಲ್ಲಿಸಿದ್ದು, ಆಸ್ತಿ, ಸಾಲ ವಿವರಗಳ ಅಫಿಡವಿಟ್ ನೀಡಿದ್ದಾರೆ.
ಸಿಧು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಎರಡು ಅತ್ಯಾಧುನಿಕ ಎಸ್ಯುವಿಗಳು, ರೂ 44 ಲಕ್ಷ ಮೌಲ್ಯದ ವಾಚ್ಗಳು ಮತ್ತು ರೂ 35 ಕೋಟಿ ಮೌಲ್ಯದ ವಸತಿ ಆಸ್ತಿ(ಸ್ಥಿರಾಸ್ತಿ)ಗಳಿವೆ ಎಂದು ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಅದರ ಪಂಜಾಬ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಘೋಷಿಸಿದ್ದಾರೆ. ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸಿಧು ಒಟ್ಟು ಆಸ್ತಿ 44.63 ಕೋಟಿ ರೂ ಎಂದು ದಾಖಲಿಸಿದ್ದಾರೆ.
58 ವರ್ಷ ವಯಸ್ಸಿನ ಭಾರತದ ಮಾಜಿ ಕ್ರಿಕೆಟಿಗ ಅವರು ಫೆಬ್ರವರಿ 20 ರ ರಾಜ್ಯ ವಿಧಾನಸಭಾ ಚುನಾವಣೆಗೆ ಅಮೃತಸರದ ಚುನಾವಣಾಧಿಕಾರಿಯ ಮುಂದೆ ಶನಿವಾರ ನಾಮಪತ್ರ ಸಲ್ಲಿಸಿದರು. ಇದರಲ್ಲಿ ಅವರ ಪತ್ನಿ ಹಾಗೂ ಮಾಜಿ ಶಾಸಕ ನವಜೋತ್ ಕೌರ್ ಸಿಧು ಅವರ ಕ್ರಮವಾಗಿ 3.28 ಕೋಟಿ ಹಾಗೂ 41.35 ಕೋಟಿ ಚರ ಮತ್ತು ಸ್ಥಿರ ಆಸ್ತಿ ವಿವರ ಕೂಡಾ ಸೇರಿದೆ.

ಕಾಂಗ್ರೆಸ್ ನಾಯಕ 2020-21 ರ ಹಣಕಾಸು ವರ್ಷದಲ್ಲಿ ತನ್ನ ಒಟ್ಟು ಆದಾಯವನ್ನು 22.58 ಲಕ್ಷಕ್ಕೆ ಘೋಷಿಸಿದ್ದಾರೆ, ಇದು 2016-17 ರಲ್ಲಿ 94.18 ಲಕ್ಷಕ್ಕೆ ಇಳಿದಿದೆ ಎಂದು ಅಫಿಡವಿಟ್ ಪ್ರಕಾರ ತಿಳಿದು ಬಂದಿದೆ.
ಸಿದ್ದು ಘೋಷಿಸಿರುವ ಚರ ಆಸ್ತಿಗಳ ಪೈಕಿ 1.19 ಕೋಟಿ ರೂಪಾಯಿ ಮೌಲ್ಯದ ಎರಡು ಟೊಯೊಟಾ ಲ್ಯಾಂಡ್ ಕ್ರೂಸರ್, 11.43 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚೂನರ್ ಕಾರು, 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 44 ಲಕ್ಷ ರೂಪಾಯಿ ಮೌಲ್ಯದ ವಾಚ್ಗಳಿವೆ.
ಅವರ ಪತ್ನಿ ನವಜೋತ್ ಕೌರ್ ಸಿಧು ಅವರು ಅಫಿಡವಿಟ್ ಪ್ರಕಾರ 70 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ.
ಸ್ಥಿರ ಆಸ್ತಿಗಳ ಪೈಕಿ, ಸಿಧು ಅವರು ಪಟಿಯಾಲಾದಲ್ಲಿ ಆರು ಶೋರೂಂಗಳನ್ನು ಘೋಷಿಸಿದ್ದಾರೆ ಆದರೆ ಅವರಿಗೆ ಯಾವುದೇ ಕೃಷಿ ಭೂಮಿ ಇಲ್ಲ ಎಂದು ಅದು ಹೇಳಿದೆ. 1.44 ಕೋಟಿ ಮೌಲ್ಯದ ಪಟಿಯಾಲಾದಲ್ಲಿ 1,200 ಚದರ ಗಜದಲ್ಲಿ ಹರಡಿರುವ ತಮ್ಮ ವಾಸದ ಮನೆ, ಪಿತ್ರಾರ್ಜಿತ ಆಸ್ತಿ ಎಂದು ಸಿಧು ಘೋಷಿಸಿದ್ದಾರೆ. ಅವರು ಅಮೃತಸರದಲ್ಲಿ ಸುಮಾರು 34 ಕೋಟಿ ಮೌಲ್ಯದ 5,114 ಚದರ ಗಜದ ವಸತಿ ಆಸ್ತಿಯನ್ನು ತೋರಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರು ಬಿಎ ಪದವಿ ಪಡೆರುವುದಾಗಿ ಘೋಷಿಸಿದ್ದಾರೆ. ಶೈಕ್ಷಣಿಕ ಅರ್ಹತೆಯಾಗಿ 1986 ರಲ್ಲಿ ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದಿಂದ ಪದವಿ ಗಳಿಸಿದ್ದರೆ. ಅವರು ಶಾಸಕರಾಗಿ ಸಂಬಳ, ಬಾಡಿಗೆ ಆದಾಯ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಪಿಂಚಣಿಯಿಂದ ತಮ್ಮ ಆದಾಯದ ಮೂಲವನ್ನಾಗಿ ಘೋಷಿಸಿದ್ದಾರೆ (ಪಿಟಿಐ)
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications