ಪುರಿ ಜಗನ್ನಾಥ ರಥಯಾತ್ರೆ ವಿಶೇಷತೆಯ ಜೊತೆ ವೇಳಾಪಟ್ಟಿ ಮಾಹಿತಿ
ಪುರಿ, ಜುಲೈ 09: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ನಡುವೆ 2021ನೇ ಸಾಲಿನ ಜಗತ್ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ನಡೆಸುವುದಕ್ಕೆ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಒಡಿಶಾದ ಪುರಿಯಲ್ಲಿ ಇರುವ ಜಗನ್ನಾಥ ದೇವಸ್ಥಾನದ ಮಂಡಳಿ ನಡೆಸುವ ರಥಯಾತ್ರೆಗೆ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಜುಲೈ 12ರ ಸೋಮವಾರ ಆರಂಭಗೊಳ್ಳಲಿರುವ ಪುರಿ ಜಗನ್ನಾಥ ರಥಯಾತ್ರೆ ವೇಳೆ ಪ್ರಮುಖವಾಗಿ ಮೂರು ದೇವರುಗಳನ್ನು ಪೂಜಿಸಲಾಗುತ್ತದೆ. ಜಗನ್ನಾಥ ಸ್ವಾಮಿಯ ಸಹೋದರ ಭಗವಾನ್ ಬಾಲಚಂದ್ರ, ಸಹೋದರಿ ಸುಭದ್ರ ಹಾಗೂ ಜಗನ್ನಾಥ ಸ್ವಾಮಿಯನ್ನು ಆರಾಧಿಸಲಾಗುತ್ತದೆ.
ಹಿಂದೂ ಸಂಪ್ರದಾಯದ ಪ್ರಕಾರ, ಆಷಾಢ ಮಾಸ ದ್ವಿತೀಯ ತಿಥಿಯ ಶುಕ್ಲ ಪಕ್ಷದಂದು ರಥಯಾತ್ರೆಯನ್ನು ಆರಂಭಿಸಲಾಗುತ್ತದೆ. ಕ್ಯಾಲೆಂಡರ್ ಪ್ರಕಾರ ಉಲ್ಲೇಖಿಸುವುದಾದರೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಈ ರಥಯಾತ್ರೆಯನ್ನು ನಡೆಸಲಾಗುತ್ತದೆ. ಈ ಬಾರಿ ಜಗನ್ನಾಥ ರಥಯಾತ್ರೆ ಕುರಿತು ವೇಳಾ ಪಟ್ಟಿಯ ಜೊತೆ ಆಚರಣೆ ಹಾಗೂ ಅದರ ವಿಶೇಷತೆಯನ್ನು ತಿಳಿಯೋಣ.

ದಿನಾಂಕ: ಜುಲೈ 12ರ ಸೋಮವಾರ, ಗುಂಡಿಚಾ ಯಾತ್ರೆ
ಒರಿಯಾದಲ್ಲಿ ಗುಂಡಿ ಎಂದರೆ ಸಿಡುಬು, ಗುಂಡಿಚಾ ಅವರನ್ನು ಕೃಷ್ಣ-ಜಗನ್ನಾಥನ ಚಿಕ್ಕಮ್ಮ ಎಂದು ಪರಿಗಣಿಸಲಾಗುತ್ತದೆ. ಅವರು ವರ್ಷದಲ್ಲಿ ಒಂದು ಬಾರಿ ತಮ್ಮ ಒಡಹುಟ್ಟಿದವರ ಸನ್ನಿಧಿಗೆ ಭೇಟಿ ನೀಡುತ್ತಾರೆ ಎಂಬ ಸಂಪ್ರದಾಯವಿದೆ.
* ಬೆಳಗ್ಗೆ 8.30ಕ್ಕೆ ಗರ್ಭಗುಡಿಯಲ್ಲಿನ ಮೂರ್ತಿಗಳನ್ನು ನಿಧಾನವಾಗಿ ರಥಗಳತ್ತ ತೆಗೆದುಕೊಂಡು ಹೋಗಲಾಗುತ್ತದೆ.
* ಮಧ್ಯಾಹ್ನ 2 ಗಂಟೆಗೆ ಮೂರ್ತಿಗಳನ್ನು ರಥದಲ್ಲಿ ಇರಿಸಿ ಪೂಜಿಸಲಾಗುತ್ತದೆ.
* ಮಧ್ಯಾಹ್ನ 3 ಗಂಟೆಗೆ ರಥಯಾತ್ರೆ ಎಳೆಯುವುದಕ್ಕೆ ಆರಂಭಿಸಲಾಗುತ್ತದೆ.

ದಿನಾಂಕ: ಜುಲೈ 20ರ ಮಂಗಳವಾರ, ಬಹುದ ಯಾತ್ರೆ
ವಾರ್ಷಿಕ ರಥಯಾತ್ರೆಯ ನಂತರ ಪುರಿ ಜಗನ್ನಾಥ ದೇವಸ್ಥಾನಕ್ಕೆ ಮರಳುವುದನ್ನೇ ಬಹುದ ಯಾತ್ರೆ, ಬುಧಿ ಯಾತ್ರಾಯನ್ನು ಭಕ್ತರ ಅನುಪಸ್ಥಿತಿಯಲ್ಲಿ ಪುರಿಯಲ್ಲಿ ಆಚರಣೆ ಮಾಡಲಾಗುತ್ತದೆ.
* ಮಧ್ಯಾಹ್ನ 12 ರಿಂದ 2.30ರವರೆಗೂ ಮೂರ್ತಿಗಳನ್ನು ಪೂಜಿಸಿ ರಥದತ್ತ ತೆಗೆದುಕೊಂಡು ಬರಲಾಗುತ್ತದೆ
* ಮಧ್ಯಾಹ್ನ 4 ಗಂಟೆಗೆ ರಥ ಎಳೆಯುವ ಕಾರ್ಯವನ್ನು ಆರಂಭಿಸಲಾಗುತ್ತದೆ

ದಿನಾಂಕ: ಜುಲೈ 21ರ, ಸುನಾ ಬೇಷ ಆಚರಣೆ
ಸುನಾ ಮತ್ತು ಬೆಷ ಎಂಬ ಎರಡು ಪದಗಳಿಂದ ಹುಟ್ಟಿಕೊಂಡಿದೆ ಈ ಹೆಸರು ಹುಟ್ಟಿಕೊಂಡಿದೆ. 'ಸುನಾ' ಎಂದರೆ "ಚಿನ್ನ" ಮತ್ತು "ಬೆಷಾ" ಎಂದರೆ "ವೇಷಭೂಷಣ". ಸಿಂಹದ್ವಾರ ಎಂದೂ ಕರೆಯಲ್ಪಡುವ ರಥಗಳ ಮೇಲೆ ರಥಯಾತ್ರೆಯ ಸಮಯದಲ್ಲಿ ಬಹೂದ ಏಕಾದಶಿಯಂದು ಸುನೇಶಾ ವೇಳೆಯಲ್ಲಿ ಆಚರಿಸಲಾಗುತ್ತದೆ.
* ಸಂಜೆ 4 ರಿಂದ 5.30ರವರೆಗೂ ಈ ರಥಯಾತ್ರೆಯನ್ನು ನಡೆಸಲಾಗುತ್ತದೆ.

ದಿನಾಂಕ: ಜುಲೈ 22ರ ಆಧಾರ್ ಪಣ
ಅಧಾರ್ ಎಂದರೆ ತುಟಿ ಮತ್ತು ಪನಾ ಎಂದರೆ ಜ್ಯೂಸ್ ಎಂದು ಅನುವಾದಿಸಲಾಗುತ್ತದೆ. ಇದನ್ನು ಅಸಾಧಾ ಸುಕ್ಲಾ ಪಖ್ಯಾ ದ್ವಾದಶಿಯಲ್ಲಿ ನಡೆಸಲಾಗುತ್ತದೆ. ಇದು 12ನೇ ಶತಮಾನದ ಆಚರಣೆಯಾಗಿದೆ. ದೇಗುಲದ ಸಿಂಹದ್ವಾರದ ಬಳಿ ನಿಲ್ಲಿಸಲಾಗಿರುವ ಪ್ರತಿ ರಥಗಳ ಮೇಲೆ ಮಣ್ಣಿನ ಮಡಕೆಗಳನ್ನು ಇರಿಸಲಾಗುತ್ತದೆ. ಇದರಲ್ಲಿನ ಹಣ್ಣಿನ ರಸವು ದೇವರಿಗೆ ತಲುಪುತ್ತದೆ ಎಂದು ನಂಬಲಾಗುತ್ತದೆ.
* ಗುರುವಾರ ರಾತ್ರಿ 8 ಗಂಟೆ ವೇಳೆಗೆ ಆಚರಣೆ ಪೂರ್ಣಗೊಳ್ಳುತ್ತದೆ.
Recommended Video

ದಿನಾಂಕ ಜುಲೈ 23ರ ರಥಯಾತ್ರೆಯ ಅಂತಿಮ ದಿನ
ನೀಲಾದ್ರಿ ಬಿಜೆ ರಥಯಾತ್ರೆಯ ಮುಕ್ತಾಯದ ದಿನ. ಈ ದಿನ ದೇವತೆಗಳು ರತ್ನ ಬೇಡಿಗೆ ಮರಳುತ್ತಾರೆ. ಅಂದು ದೇವಾಲಯಕ್ಕೆ ಪ್ರವೇಶಿಸಲು ಲಕ್ಷ್ಮಿ ದೇವಿಗೆ ಭಗವಾನ್ ಜಗನ್ನಾಥ್ ರಸ್ಗುಲ್ಲನನ್ನು ಅರ್ಪಿಸುತ್ತಾನೆ ಎಂಬ ನಂಬಿಕೆಯಿದೆ.
ಶುಕ್ರವಾರ ಸಂಜೆ 4 ರಿಂದ ರಾತ್ರಿ 10 ಗಂಟೆವರೆಗೂ ಈ ಆಚರಣೆ ನಡೆಯುತ್ತದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications