Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ
ಕಲರ್ಸ್ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ 'ಶ್ರೀಗಂಧದ ಗುಡಿ' ಪ್ರೇಕ್ಷಕರಿಗೆ ಈಗ ಅನಿರೀಕ್ಷಿತ ಶಾಕ್ ಎದುರಾಗಿದೆ. ಧಾರಾವಾಹಿಯ ಪ್ರಮುಖ ಪಾತ್ರದಲ್ಲಿದ್ದ ಕಿರುತೆರೆ ನಟಿ ಸಂಜನಾ ಬುರ್ಲಿ ದಿಢೀರ್ ಸೀರಿಯಲ್ನಿಂದ ಹೊರನಡೆದಿದ್ದಾರೆ. ಈ ಬಗ್ಗೆ ವಾಹಿನಿಯ ಪ್ರೋಮೋದಲ್ಲೇ ಸಂಜನಾ ಬುರ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಹೊಸ ಪಾತ್ರಧಾರಿ ಯಾರು ಎಂದು ಪರಿಚಯವೂ ಮಾಡಿಕೊಟ್ಟಿದ್ದಾರೆ. ಧಾರಾವಾಹಿಯ ಕೇಂದ್ರ ಬಿಂದುವಾಗಿದ್ದ 'ಚಂದನಾ' ಪಾತ್ರಧಾರಿ, ನಟಿ ಸಂಜನಾ ಬುರ್ಲಿ ಅವರು ಸೀರಿಯಲ್ನಿಂದ ದಿಢೀರ್ ಹೊರನಡೆದಿದ್ದಾರೆ.
ಸೀರಿಯಲ್ ಬಿಡಲು ಕಾರಣವೇನು?
ಸಂಜನಾ ಬುರ್ಲಿ ಅವರು ಪ್ರೋಮೋದಲ್ಲಿ ನೇರವಾಗಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ, "ನಾನು ಇವತ್ತು ಚಂದನಾ ಆಗಿ ಬಂದಿಲ್ಲ, ನಿಮ್ಮೆಲ್ಲರ ಸಂಜನಾ ಬುರ್ಲಿ ಆಗಿ ಬಂದಿದ್ದೀನಿ. ಒಂದು ಹುಡುಗಿಯ ಬದುಕಿನಲ್ಲಿ ಮದುವೆ ಎನ್ನುವುದು ಅತ್ಯಂತ ಮುಖ್ಯವಾದ ಘಟ್ಟ. ಈಗ ನಾನು ಕೂಡ ಅದೇ ನಿರ್ಣಾಯಕ ಹಂತದಲ್ಲಿದ್ದೇನೆ. ನಾನು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು. ಈ ಕಾರಣದಿಂದ ಇನ್ಮುಂದೆ ನಿಮ್ಮ ಮುಂದೆ ಚಂದನಾ ಆಗಿ ಬರಲು ಸಾಧ್ಯವಾಗುತ್ತಿಲ್ಲ" ಎಂದು ಭಾವನಾತ್ಮಕವಾಗಿ ವಿವರಿಸಿದ್ದಾರೆ.

ತಮ್ಮ ಪಾತ್ರಕ್ಕೆ ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಅಕ್ಕರೆಯನ್ನು ತುಂಬಾ ಮಿಸ್ ಮಾಡಿಕೊಳ್ಳುವುದಾಗಿ ಹೇಳಿದ ಸಂಜನಾ, ಇದೊಂದು ಅನಿವಾರ್ಯ ಬದಲಾವಣೆ ಎಂದು ತಿಳಿಸಿದ್ದಾರೆ. ಅಲ್ಲದೆ, ತಮ್ಮ ಜಾಗಕ್ಕೆ ಹೊಸ ಚಂದನಾ ಆಗಿ ಬರಲಿರುವ ನಟಿ ಸ್ನೇಹಾ ಮಂಜುನಾಥ್ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಿಕೊಟ್ಟಿದ್ದಾರೆ. "ನನಗೆ ನೀಡಿದಷ್ಟೇ ಪ್ರೀತಿಯನ್ನು ಈ ಹೊಸ ಚಂದನಾಗೂ ನೀಡಿ" ಎಂದು ವಿನಂತಿಸುವ ಮೂಲಕ ಸಂಜನಾ ಬುರ್ಲಿ ಅವರು ಶ್ರೀಗಂಧದ ಗುಡಿ ತಂಡಕ್ಕೆ ಅಧಿಕೃತವಾಗಿ ವಿದಾಯ ಹೇಳಿದ್ದಾರೆ.
ಸ್ನೇಹಾ ಮಂಜುನಾಥ್ ಯಾರು?
ನಟಿ ಸಂಜನಾ ಅವರ ಜಾಗಕ್ಕೆ ಈಗ ಸ್ನೇಹಾ ಮಂಜುನಾಥ್ ಅವರ ಎಂಟ್ರಿಯಾಗಿದೆ. ಸಂಜನಾ ಅವರು ಅನಿವಾರ್ಯ ಕಾರಣಗಳಿಂದ ಧಾರಾವಾಹಿಯಿಂದ ಹೊರನಡೆದಿದ್ದು, ಆ ಜವಾಬ್ದಾರಿಯನ್ನು ಈಗ ಸ್ನೇಹಾ ವಹಿಸಿಕೊಂಡಿದ್ದಾರೆ. ಈ ಹೊಸ ಬದಲಾವಣೆಯು ಧಾರಾವಾಹಿಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಕಥೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.

ನಟಿ ಸ್ನೇಹಾ ಮಂಜುನಾಥ್ ಅವರಿಗೆ ಕಿರುತೆರೆಯಲ್ಲಿ ಈಗಾಗಲೇ ದೊಡ್ಡ ಮಟ್ಟದ ಹೆಸರಿದೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶುಭಸ್ಯ ಶೀಘ್ರಂ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಅವರು ಮನೆಮಾತಾಗಿದ್ದರು. ಇದಕ್ಕೂ ಮುನ್ನ ಅವರು 'ಶಾಂತಂ ಪಾಪಂ' ನಂತಹ ಕ್ರೈಂ ಸರಣಿಗಳಲ್ಲಿ ಮತ್ತು ಜನಪ್ರಿಯ 'ರಾಮಾಚಾರಿ' ಧಾರಾವಾಹಿಯಲ್ಲೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಸ್ನೇಹಾ ಮಂಜುನಾಥ್ ಅವರ ಈ ಹೊಸ ಪಯಣವು ಈಗ ಜೀ ಕುಟುಂಬದಿಂದ ಕಲರ್ಸ್ ಕನ್ನಡ ವಾಹಿನಿಯತ್ತ ಸಾಗಿದೆ. ಇಷ್ಟು ದಿನ ಜೀ ಕನ್ನಡ ವಾಹಿನಿಯ ವಿವಿಧ ಪ್ರಾಜೆಕ್ಟ್ಗಳಲ್ಲಿ ತೊಡಗಿಸಿಕೊಂಡಿದ್ದ ಸ್ನೇಹಾ, ಈಗ ಅಧಿಕೃತವಾಗಿ ಕಲರ್ಸ್ ಕನ್ನಡ ಬಳಗವನ್ನು ಸೇರಿಕೊಂಡಿದ್ದಾರೆ. ಧಾರಾವಾಹಿಯ ತಂಡವು ಇವರ ಆಗಮನವನ್ನು ಸ್ವಾಗತಿಸಿದ್ದು, ಸ್ನೇಹಾ ಅವರ ಹೊಸ ಪಾತ್ರದ ಸಂಚಿಕೆಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications