Get Updates
Get notified of breaking news, exclusive insights, and must-see stories!

ಲಿಂಗಾಯತರ ಪ್ರೀತಿ ಯಡಿಯೂರಪ್ಪ ಕಡೆಗೆ? ಸಮೀಕ್ಷೆಯಲ್ಲಿ ಇದೆಯಾ ನೂನ್ಯತೆ?

ಕರ್ನಾಟಕ ವಿಧಾನಸಭಾ ಚುನಾವಣೆ 2018ಗಾಗಿ ಇಂಡಿಯಾ ಟುಡೇ -ಕಾರ್ವಿ ಸಂಸ್ಥೆ ನಡೆಸಿದ ಬೃಹತ್ ಸಮೀಕ್ಷೆ-ಜನಾಭಿಪ್ರಾಯ ಸಂಗ್ರಹದ ವರದಿ ಇದೀಗ ಪ್ರಕಟವಾಗಿದೆ. ಅದರ ಪ್ರಕಾರ ಲಿಂಗಾಯತರ ಪ್ರೀತಿ ಯಡಿಯೂರಪ್ಪ ಅವರ ಕಡೆಗೆ ಹೆಚ್ಚು ಇದೆ.

ಮುಖ್ಯಮಂತ್ರಿ ಯಾರಾಗಬೇಕು ಎಂದು ಲಿಂಗಾಯತರಿಗೆ ಕೇಳಲಾದ ಪ್ರಶ್ನೆಗೆ, 39% ಜನ ಲಿಂಗಾಯತರು ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ, 23% ಲಿಂಗಾಯತರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದಿದ್ದಾರೆ. 17% ಲಿಂಗಾಯತರು ಕುಮಾರಸ್ವಾಮಿ ಪರ ಇದ್ದಾರೆ.

ಅಷ್ಟೆ ಅಲ್ಲದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಈ ಬಾರಿಯ ಚುನಾವಣೆಯ ಮುಖ್ಯ ವಿಷಯವಾಗಲಿದೆಯೇ ಎಂಬ ಪ್ರಶ್ನೆಗೆ 52% ಮಂದಿ ಹೌದು ಎಂದಿದ್ದಾರೆ. ಆದರೆ ಈ ಸಮೀಕ್ಷೆಯಲ್ಲಿ ಸಣ್ಣ ಕೊರತೆ ಇದೆ.

Lingayatha people wants Yeddyurappa to be CM

ಈ ಲಿಂಗಾಯತ ಸಮೀಕ್ಷೆಯಲ್ಲಿ ಎದ್ದಿರುವ ಪ್ರಶ್ನೆ ಎಂದರೆ ಸಮೀಕ್ಷೆ ನಡೆಸುವಾಗ ವೀರಶೈವ ಅಥವಾ ಲಿಂಗಾಯತ ಎಂದು ವಿಭಾಗ ಮಾಡದೇ ಸಮೀಕ್ಷೆ ಮಾಡಿರುವುದು. ಸಮೀಕ್ಷೆ ಕೇವಲ ವೀರಶೈವ ಹಾಗೂ ಲಿಂಗಾಯತ ಎರಡನ್ನೂ ಒಂದೇ ಎಂದು ಪರಿಗಣಿಸಿ ಸಮೀಕ್ಷೆ ಮಾಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಹಾಗಾದಲ್ಲಿ ಈ ಸಮೀಕ್ಷೆ ಸತ್ಯಕ್ಕೆ ಹತ್ತಿರ ಬಾರದೇ ಹೋಗುವ ಅಪಾಯ ಇದೆ.

ವೀರಶೈವ ಮತ್ತು ಲಿಂಗಾಯತ ಎರಡೂ ಪ್ರತ್ಯೇಕ ಗೊಂಡಿದ್ದು, ಪ್ರತ್ಯೇಕಗೊಳ್ಳುವುದು ಲಿಂಗಾಯತರ ಬೇಡಿಕೆ ಆಗಿತ್ತು, ಪ್ರತ್ಯೇಕತೆಗೆ ವೀರಶೈವರ ವಿರೋಧ ಇತ್ತು. ಆದರೆ ಈ ಸಮೀಕ್ಷೆ ವೀರಶೈವ ಹಾಗೂ ಲಿಂಗಾಯತ ಎರಡನ್ನೂ ಒಟ್ಟು ಮಾಡಿ ಸಮೀಕ್ಷೆ ನಡೆಸಿರುವುದು ಸರಿಯಾದ ಫಲಿತಾಂಶ ತಂದಿದೆ ಎಂದೇನು ಎನಿಸುವುದಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+