109196ravi belagereದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!/column/ravibelagere/2008/1229-ur-ananthamurthy-voices-against-mining.htmlನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು 33750http://kannada.oneindia.com/img/2008/12/29-ura5.jpg109196ravi belagereಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg109196ravi belagereಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ/column/ravibelagere/2009/0119-here-is-ravi-belagere-email-id.htmlನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ 34151http://kannada.oneindia.com/img/2009/01/19-ravibelegere4.jpg109196ravi belagereಇಸ್ಕಂಡ ಸಂಪಂಗಿ ಎಂಬ ಕೋಡಂಗಿ/column/ravibelagere/2009/0203-sampangi-the-rotten-kgf-mla.htmlಶಾಸಕ ಸಂಪಂಗಿ ಅಕ್ಕ ಪಕ್ಕದವರ ಮುಖಕ್ಕೆ ಮಸಿ ಬಳಿದು ತಾನು ಅಮೇಧ್ಯದ ಡ್ರಮ್ಮಿನಲ್ಲೇ ಮುಳುಗಿ ಜೈಲು ತಲುಪಿಕೊಂಡಿದ್ದಾನೆ. ಇಷ್ಟು ದಿನ 'ಆಪರೇಷನ್ ಕಮಲ' ಅನ್ನುತ್ತಿದ್ದವರು 'ಆಪರೇಷನ್ ಮಲ' ಅನ್ನತೊಡಗಿದ್ದಾರೆ. ದಲಿತನೆಂಬ ಯಾವ ರಿಯಾಯಿತಿಯನ್ನೂ ಕೊಡದೆ ಶಾಸಕ ಸಂಪಂಗಿಯನ್ನು ಕ್ಯಾಕರಿಸಿ ಆಚೆಗಟ್ಟಬೇಕು. ಲೋಕಾಯುಕ್ತ ಸಂತೋಷ್ ಹೆಗ್ಗಡೆ ಮತ್ತು ಅವರ ಸಿಬ್ಬಂದಿಯವರು ದೊಡ್ಡ ಬೇಟೆ ಆಡಿದ್ದಾರೆ. ಗುಮಾಸ್ತರಿಗಷ್ಟೇ ಸೀಮಿತವಾಗಿದ್ದ ನೇಣು 34449http://kannada.oneindia.com/img/2009/02/03-sampangi-y2e.jpg109196ravi belagereಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ ಮನಸುಗಳು/column/ravibelagere/2009/0209-who-is-pramod-mutalik-to-stop-valentines-day.htmlಕಾಲ ಬದಲಾಗಿದೆ. ಹುಡುಗ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರೆ ಅವರನ್ನು ದಾರಿಗೆ ತರಲು ಬೇಕಾದಷ್ಟು ಮಾರ್ಗಗಳಿವೆ, ಆದರೆ ಪುಂಡಾಟಿಕೆಯಿಂದಲ್ಲ. ಇದನ್ನು ಮುತಾಲಿಕ್ ಮತ್ತು ಅವರ ಶ್ರೀರಾಮಸೇನೆ ಅರಿತುಕೊಳ್ಳುವುದು ಉತ್ತಮ.* ರವಿ ಬೆಳಗೆರೆ"ಹುಡುಗ ಹುಡುಗಿ ಒಟ್ಟಿಗಿರುವುದನ್ನು 34554http://kannada.oneindia.com/img/2009/02/09-velentines1.jpg109197soorya shikariದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!/column/ravibelagere/2008/1229-ur-ananthamurthy-voices-against-mining.htmlನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು 33750http://kannada.oneindia.com/img/2008/12/29-ura5.jpg109197soorya shikariಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ/column/ravibelagere/2009/0119-here-is-ravi-belagere-email-id.htmlನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ 34151http://kannada.oneindia.com/img/2009/01/19-ravibelegere4.jpg109197soorya shikariದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್/column/ravibelagere/2009/0223-gopal-hosur-mangaluru-igp.htmlಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ 34816http://kannada.oneindia.com/img/2009/02/23-gopal-hosur1.jpg109197soorya shikariಐವತ್ತರ ಇಳಿಜಾರಲ್ಲಿ ಹೆಜ್ಜೆ ಹುಶಾರು ಸರ್!/column/ravibelagere/2009/0309-be-careful-when-you-cross-fifty.htmlಹತ್ತುವುದು ಸುಲಭ. ಪರ್ವತವೊಂದಷ್ಟೇ ಅಲ್ಲ: ಬದುಕಿನ ಏಣಿ ಹತ್ತುವುದೂ ಸುಲಭ. ಮೇಲಿರುವವರು ಯಾರೋ ಕೈಯ್ಯಾಸರೆ ಕೊಟ್ಟು ಎಳೆದುಕೊಂಡು ಬಿಡುತ್ತಾರೆ. ಕೆಳಗಿನವರು ಯಾವುದೋ ಪ್ರೀತಿಗೆ ಬಿದ್ದು ಮೇಲಕ್ಕೆ ಎತ್ತುತ್ತಾರೆ. ಹತ್ತಿದ ಸುಸ್ತು ಗೊತ್ತಾಗುವುದರೊಳಗಾಗಿ ಮೇಲಕ್ಕೆ ತಲುಪಿ ಬಿಡುತ್ತೇವೆ. ಹತ್ತಿದ್ದು ನಾನೇನಾ ಅಂತ ಆಶ್ಚರ್ಯವಾಗುವಂಥ ಯಮ ಎತ್ತರಗಳಿಗೆ ಹತ್ತಿಬಿಟ್ಟಿರುತ್ತೇವೆ. ನಾನಂತೂ ಸಮುದ್ರದ ಮಟ್ಟಕ್ಕಿಂತ ತುಂಬ ಕೆಳಗಿರುವ ಮೋರಿಯ ಆಳದಿಂದ ಮೇಲೆ 35102http://kannada.oneindia.com/img/2009/03/09-couple-aged1.jpg109197soorya shikariಅಷ್ಟು ಪ್ರೀತಿ ಪಡೆದ ನಾನು ಅಂದೇ ಸತ್ತುಹೋಗಬೇಕಿತ್ತು!/column/ravibelagere/2009/0826-my-dear-you-wont-find-better-lover-than-me.htmlಅಷ್ಟು ಪ್ರೀತಿಯಿಂದ ನೀನು ಯಾವತ್ತೂ ಉಣಬಡಿಸಿರಲಿಲ್ಲವೇನೋ? ಬೆರಳ ತುದಿಯಲ್ಲಿ ಮೊಸರಕೆನೆ ನೆಕ್ಕಿಸಿದವಳು ಯಾವಾಗ ಜೇನು ಬೆರೆಸಿದ್ದೆಯೋ? ನೀನು ಒಂದೊಂದಾಗಿ ಕಿಟಕಿಯ ಪರದೆಗಳನ್ನು ಹಾಕುತ್ತ ಬಂದೆ. ಅದು ಮೇಘ ಮಂಥನದ ಆಹ್ವಾನ. ನನ್ನೊಳಗಿನ ನಾಭಿಯಾಳದಲ್ಲಿ ಪ್ರಾಣ ಬಂದಿತ್ತು. ನಿನ್ನ ಮೈಯ ಘಮದಲ್ಲಿ ಈಸು ಬಿದ್ದ ಘಳಿಗೆ, ನನ್ನನ್ನು ನಾನು ಇಡಿಯಾಗಿ ಮರೆತಿದ್ದೆ.* ನಿನ್ನವನುಒಂದ್ನಿಮಿಷ! ಹೊರಡುವ ನಿನ್ನ ಸಡಗರಕ್ಕೆ ನಾನು 38844http://kannada.oneindia.com/img/2009/08/26-beautiful-eyes1.jpg109190ರವಿ ಬೆಳಗೆರೆದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!/column/ravibelagere/2008/1229-ur-ananthamurthy-voices-against-mining.htmlನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು 33750http://kannada.oneindia.com/img/2008/12/29-ura5.jpg109190ರವಿ ಬೆಳಗೆರೆಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg109190ರವಿ ಬೆಳಗೆರೆಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ/column/ravibelagere/2009/0119-here-is-ravi-belagere-email-id.htmlನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ 34151http://kannada.oneindia.com/img/2009/01/19-ravibelegere4.jpg109190ರವಿ ಬೆಳಗೆರೆಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ ಮನಸುಗಳು/column/ravibelagere/2009/0209-who-is-pramod-mutalik-to-stop-valentines-day.htmlಕಾಲ ಬದಲಾಗಿದೆ. ಹುಡುಗ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರೆ ಅವರನ್ನು ದಾರಿಗೆ ತರಲು ಬೇಕಾದಷ್ಟು ಮಾರ್ಗಗಳಿವೆ, ಆದರೆ ಪುಂಡಾಟಿಕೆಯಿಂದಲ್ಲ. ಇದನ್ನು ಮುತಾಲಿಕ್ ಮತ್ತು ಅವರ ಶ್ರೀರಾಮಸೇನೆ ಅರಿತುಕೊಳ್ಳುವುದು ಉತ್ತಮ.* ರವಿ ಬೆಳಗೆರೆ"ಹುಡುಗ ಹುಡುಗಿ ಒಟ್ಟಿಗಿರುವುದನ್ನು 34554http://kannada.oneindia.com/img/2009/02/09-velentines1.jpg109190ರವಿ ಬೆಳಗೆರೆದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್/column/ravibelagere/2009/0223-gopal-hosur-mangaluru-igp.htmlಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ 34816http://kannada.oneindia.com/img/2009/02/23-gopal-hosur1.jpgnews"> ಐವತ್ತರ ಇಳಿಜಾರಲ್ಲಿ ಹೆಜ್ಜೆ ಹುಶಾರು ಸರ್! | Old age problems | Ravi Belagere | Bottom item | Health care - ಐವತ್ತರಿಂದ ಶುರುವಾಗುವ ಇಳಿಜಾರಿನಲ್ಲಿ ಹೆಜ್ಜೆ ಹುಶಾರು ಸರ್! - Kannada Oneindia

ಐವತ್ತರ ಇಳಿಜಾರಲ್ಲಿ ಹೆಜ್ಜೆ ಹುಶಾರು ಸರ್!

Be careful when you cross 50
ಹತ್ತುವುದು ಸುಲಭ. ಪರ್ವತವೊಂದಷ್ಟೇ ಅಲ್ಲ: ಬದುಕಿನ ಏಣಿ ಹತ್ತುವುದೂ ಸುಲಭ. ಮೇಲಿರುವವರು ಯಾರೋ ಕೈಯ್ಯಾಸರೆ ಕೊಟ್ಟು ಎಳೆದುಕೊಂಡು ಬಿಡುತ್ತಾರೆ. ಕೆಳಗಿನವರು ಯಾವುದೋ ಪ್ರೀತಿಗೆ ಬಿದ್ದು ಮೇಲಕ್ಕೆ ಎತ್ತುತ್ತಾರೆ. ಹತ್ತಿದ ಸುಸ್ತು ಗೊತ್ತಾಗುವುದರೊಳಗಾಗಿ ಮೇಲಕ್ಕೆ ತಲುಪಿ ಬಿಡುತ್ತೇವೆ. ಹತ್ತಿದ್ದು ನಾನೇನಾ ಅಂತ ಆಶ್ಚರ್ಯವಾಗುವಂಥ ಯಮ ಎತ್ತರಗಳಿಗೆ ಹತ್ತಿಬಿಟ್ಟಿರುತ್ತೇವೆ. ನಾನಂತೂ ಸಮುದ್ರದ ಮಟ್ಟಕ್ಕಿಂತ ತುಂಬ ಕೆಳಗಿರುವ ಮೋರಿಯ ಆಳದಿಂದ ಮೇಲೆ ಬಂದವನು. ಏಣಿಯ ತುತ್ತುದಿ ತಲುಪಿಬಿಟ್ಟಿದ್ದೇನೆಂದು ಬೀಗಲಾರೆ. ಆದರೆ ನನಗೆ ನನ್ನದೇ ಆದ ಎತ್ತರವಿದೆ. ನನ್ನದೇ ಆದ ನಿಲುಕು ನನಗಿದೆ.

ಹಾಗಂತ ಸುಲಭಕ್ಕೆ ಹತ್ತಿ ನಿಂತು ಬಿಡಬಹುದಾದ ಎತ್ತರವೇನಲ್ಲ ಇದು. ಹತ್ತುವ ಯತ್ನದಲ್ಲಿ ಎಷ್ಟು ಸಲ ಜಾರಿದೆವೋ? ಎಷ್ಟು ಸಲ ಬಿದ್ದೆವೋ? ಎಂಥ ಪರಿ ಮೊಳಕಾಲು, ತೊಡೆ, ಮುಂಗೈ, ಅಂಗೈ, ಮುಸುಡಿ ಎಲ್ಲ ತರಚಿ ಹೋಯಿತಲ್ಲ? ಕೆಲವೊಮ್ಮೆಯಂತೂ ಪಾತಾಳಕ್ಕೇ ಬಿದ್ದುಬಿಟ್ಟೆವೇನೋ ಎಂಬಂತೆ! ಮತ್ತೊಮ್ಮೆ ಎದ್ದು ಹತ್ತಲು ಸಾಧ್ಯವೇ ಇಲ್ಲದ ಹಾಗೆ defeat ಆಗಿ ಹೋದಂತೆ.

ಆದರೂ ಅಂದುಕೊಂಡ ಹೈಟು, ತುದಿ ತಲುಪಿದಾಗ ಅದ್ಯಾವುದೂ ಗೊತ್ತಾಗಲಿಲ್ಲ ಬಿಡಿ. ಎಲ್ಲ ಮರೆತು ಹೋಗುವಂತೆ ಮಾಡಿಬಿಡುತ್ತದೆ ಗೆಲುವು. ತರಚುಗಾಯ, ಒಡೆದ ಮುಸುಡಿ, ಮುರಿದ ಮೂಳೆ ಎಲ್ಲ ತಮಗೆ ತಾವೇ ಸರಿಹೋಗಿಬಿಡುತ್ತವೆ. ಇನ್ನೂ ಎಷ್ಟು ಮಹಾ ವಯಸ್ಸು. ನಲವತ್ತು ಕೂಡ ಒಂದು ವಯಸ್ಸಾ? Come on.

ಇದು ಸಂತಸ ಬೇಡುವ ಸಮಯ. ಗೆಲುವನ್ನು ಸೆಲೆಬ್ರೇಟ್ ಮಾಡುವ ದಿನಗಳು. ಹಿಂದೆಂದಿಗಿಂತ ಹೆಚ್ಚು ಸಂತೋಷದಿಂದ ಬರ್ತ್ ಡೇ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಸೊಗಸಾದ ಅಡುಗೆ, ಸುಮ್ಮನೆ ಒಂದು ಉಪ್ಪು-ತುಪ್ಪ-ಅನ್ನ ತಿಂದರೂ ಅಮೃತ! ಆದರೆ ಸುಖ ಯಾವಾಗಲೂ ಕೈ ಚಾಚುತ್ತಲೇ ಇರುತ್ತದೆ. ಉಪ್ಪು ತುಪ್ಪ ಎರಡೇ ಸಾಕಾಗುವುದಿಲ್ಲ. ಪಂಚ ಭಕ್ಷ್ಯ ಮಾಡಿಸಿಕೊಂಡು ತಿನ್ನುತ್ತೇವೆ. ಸಾಯಂಕಾಲವಾದರೆ ವಿಸ್ಕಿ, ಗೋಡಂಬಿ, ಚೀಜ್, ಹುಡುಗಿಯ ಕೆನ್ನೆಯಷ್ಟು ಮೃದುವಾದ ಮಾಂಸ. ಅದೇನಾಗುತ್ತದೋ ಏನೋ? ನಲವತ್ತರ ತನಕ 'ಹೀಗೂ ಇರಬಹುದು' ಅಂದುಕೊಳ್ಳುತ್ತಿದ್ದವರು ನಲವತ್ತಾದ ಮೇಲೆ 'ಹೇಗೆ ಬೇಕಾದರೂ ಇರಬಹುದು' ಅಂತ ನಿರ್ಧರಿಸಿದವರಂತೆ ಬದುಕತೊಡಗುತ್ತೇವೆ. ಯಾವನಾದರೂ ಬಂದು 'ಯೋಗ ಕ್ಲಾಸಿಗೆ ಸೇರೋಣವಾ?' ಅಂತ ಕೇಳಿದರೆ, 'ಮುಫತ್ತಾಗಿ ಐವತ್ತು ರುಪಾಯಿ ಕೊಡ್ತೀನಿ, ಪ್ರಾಣ ತಿನ್ನಬೇಡ ಹೋಗಿಬಿಡು' ಅಂತ ಗದರಿಸಿ ಕಳಿಸುತ್ತೇವೆ. ಬೆಚ್ಚಗೆ ನಾಲ್ಕು ಪೆಗ್ ಕುಡಿದು ಹೊಟ್ಟೆ ತುಂಬ ಮಾಂಸ, ತುಪ್ಪ, ಚೀಜು ತಿಂದು, ಬಿಗ್ಗಿಯಾಗಿ ಎರಡು ಸಿಗರೇಟೆಳೆದು, for a change ಹಿತಮಂಚದಲ್ಲಿ ಜೀಕಿ ಮಲಗುವುದು ಬಿಟ್ಟು ಯೋಗವಂತೆ ಯೋಗ-ಅಂದಿರುತ್ತದೆ ಮನಸ್ಸು. ಹೀಗೆ ಯಶಸ್ಸನ್ನು ಅಕ್ಷರಶಃ ದೈಹಿಕವಾಗಿ ಅನುಭವಿಸುತ್ತಲೇ ಹತ್ತು ವರ್ಷ ಕಳೆದು ಬಿಟ್ಟಿರುತ್ತೇವೆ. One fine ಮುಂಜಾನೆ ಮಗಳು ಬಂದು ಎಬ್ಬಿಸಿ ಕೊರಳಿಗೆ ಬಿದ್ದು 'ಪಪ್ಪಾ, ಹ್ಯಾಪಿ ಬರ್ತ್ ಡೇ' ಅಂದಾಗಲೇ ನಮಗೆ ಐವತ್ತು ತುಂಬಿತೆಂಬುದು ನೆನಪಿಗೆ ಬರೋದು. ಇನ್ನು ಇಳಿಕೆ ಶುರು!

ನಿಜವಾದ ಸಮಸ್ಯೆಯೂ ಅಲ್ಲಿಂದಲೇ ಶುರು. ಹತ್ತುವುದು ಎಷ್ಟು ಸುಲಭವೆ, ಇಳಿಯುವುದು ಅದಕ್ಕಿಂತ ಕಷ್ಟ. ಹತ್ತುವಾಗ, ಉಳಿದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕೈಯಲ್ಲಿ ಯೌವನವೆಂಬ ನೂಲೇಣಿ ಇರುತ್ತದೆ. ಉತ್ಸಾಹದ ಉಕ್ಕಿನ ಕೊಕ್ಕೆ ಇರುತ್ತದೆ. ಹಟವಿರುತ್ತದೆ. ಕೈಯ ತುದಿಯಲ್ಲಿ ಜಿಗಿ, ಕಾಲ ಮೀನಖಂಡದಲ್ಲಿ ಕಸುವು ಇರುತ್ತದೆ. ಆದರೆ, ಇಳಿಕೆ ಆರಂಭವಾದಾಗ ಅದ್ಯಾವೂ ಇರುವುದಿಲ್ಲ. ನಿಂತು ನೋಡಿಕೊಂಡರೆ ಡೊಳ್ಳು ಹೊಟ್ಟೆ, ಕೈಕೈಲು ಸಣ್ಣ, ನೆರೆತ ಕೂದಲು, ಅಲುಗುವ ಹಲ್ಲು, ಕೊಂಡದ್ದಲ್ಲದೆ ತಾನಾಗಿಯೇ ಎನಾಗಿಯೇ ಎರಡೂ ಕಣ್ಣುಗಳಿಗೆ ಬಂದ ಸೈಟು!

ಎದುರಿಗೆ ನೋಡಿದರೆ ಎರಡನೇ ಐವತ್ತು ವರ್ಷಗಳೆಂಬ ಮಹಾ ಪ್ರಪಾತ. ಇದಿನ್ನು ಇಳಿಕೆಯ ಹಾದಿ ಅಂತ ಮೊದಲೇ ಗೊತ್ತು ಮಾಡಿಕೊಂಡಿರಾ? ನೀವು ಬುದ್ಧಿವಂತರು. ಅದು ಗೊತ್ತು ಮಾಡಿಕೊಳ್ಳದವರು ಆರಂಭದಲ್ಲೇ ಮುಗ್ಗರಿಸಿಬಿಡುತ್ತಾರೆ. ಕೆಲವರು ಬದುಕಿನ ಫಸಲು ಕೈಗೆ ಬರುವ ಹೊತ್ತಿಗೆ, ಅಂದರೆ ಐವತ್ತಕ್ಕೇ ತೀರಿ ಹೋಗುತ್ತಾರೆ. ಕೆಲವರಿಗೆ ಹೃದಯಾಘಾತವಾಗಿರುತ್ತದೆ. ಪಾರ್ಶ್ವವಾಯು ಅರ್ಧ ದೇಹವನ್ನು ತಿಂದಿರುತ್ತದೆ. ಅವರು ಐವತ್ತನೇ ಬರ್ತ್ ಡೇ ನೀಡಿದ ವಾರ್ನಿಂಗನ್ನು ಕೇಳಿಸಿಕೊಳ್ಳದವರು. ಅದನ್ನು ಸ್ವಲ್ಪ ಕಿವಿಗೊಟ್ಟು ಕೇಳಿಸಿಕೊಳ್ಳಿರಿ. ಐವತ್ತಾಯಿತು ಅಂತ ಮಾತ್ರಕ್ಕೆ ನಿಮಗೇನೂ ಮುಪ್ಪು ಬಂದಿಲ್ಲ. ಆದರೆ ನೀವು ಇಪ್ಪತ್ತೈದರ ಯುವಕರೂ ಅಲ್ಲ. ಸಾಲದ್ದಕ್ಕೆ, ಹತ್ತು ಹದಿನೈದು ವರ್ಷ ಉಪ್ಪು-ತುಪ್ಪ-ಅನ್ನ, ಹಾಲು-ಹೋಳಇಗೆ, ವಿಸ್ಕಿ-ಗೋಡಂಬಿ ತಿನ್ನಿಸಿ ದೇಹವನ್ನು ಅನಗತ್ಯವಾಗಿ ಮುದ್ದು ಮಾಡಿಬಿಟ್ಟಿದ್ದೀರಿ. ಅಪ್ಪಿತಪ್ಪಿ ಎಲ್ಲೋ ಒಂದು ಸಲ ನಿಮ್ಮ ಮನಸ್ಸಿನೊಂದಿಗೆ ನೀವು ಮಾತನಾಡಿಕೊಂಡಿದ್ದಿರಬಹುದೇನೋ? ಆದರೆ ದೇಹದೊಂದಿಗೆ ಮಾತನಾಡಿಕೊಂಡು ಯಾವ ಕಾಲವಾಯಿತು ಸರ್? ನಾವು ಮೈಮರೆತು ನಿದ್ದೆ ಮಾಡಿದಾಗಲೂ ನಮ್ಮ ದೇಹದಲ್ಲಿ ಕೆಲವು ಲಕ್ಷ ಕೋಟಿ ಕಣಗಳು, ಸೆಲ್ ಗಳು, ಟಿಷ್ಯೂಗಳು, ನರಗಳು, ಧಮನಿಗಳು, ನೆತ್ತರು, ಮೂಳೆ, ಮಾಂಸ, ಮಜ್ಜೆ ಕೆಲಸ ಮಾಡುತ್ತಿರುತ್ತವೆ. ನಾವು ಒಂದೇ ಒಂದು ಸಲಕ್ಕೂ ಅವುಗಳಿಗೆ thanx ಹೇಳಿರುವುದಿಲ್ಲ.

ಬೆಳಿಗ್ಗೆ ಏಳೇಳುತ್ತಲೇ ಹಾಂ ಅಂತ ಬದುಕಿನ ಮೇಲೆ ಮುರಕೊಂಡು ಬಿದ್ದು ಬಿಡಬೇಡಿ. Easy easy, ಎದ್ದು ಕುಳಿತು ಅಥವಾ ಅಂಗಾತ ಮಲಗಿಕೊಂಡೇ ಬೆಳಗಿನ ಮೌನದಲ್ಲಿ ನಿಮ್ಮ ಅಂಗಾಲ ಬೆರಳುಗಳಿಂದ ಹಿಡಿದು ಒಂದೊಂದೇ ಅಂಗವನ್ನು ನೆತ್ತಿಯ ಬ್ರಹ್ಮರಂಧ್ರದ ತನಕ ಮಾತನಾಡಿಸುತ್ತಾ, relax ಮಾಡಿಕೊಳ್ಳುತ್ತಾ ಬನ್ನಿ. ನಿಮ್ಮ ಹೃದಯಕ್ಕೆ, ಮಿದುಳಿಗೆ, ಶ್ವಾಸಕೋಶಗಳಿಗೆ, ಕರುಳಿಗೆ, ಕಿಡ್ನಿಗಳಿಗೆ ನಿಮ್ಮದೇ ಮೌನ ಭಾಷೆಯಲ್ಲಿ thanx ಹೇಳಿಕೊಳ್ಳಿ. ಇದಕ್ಕೆಲ್ಲ ಕಂಪಲ್ಸರಿಯಾಗಿ ದೇವರನ್ನು ನಂಬಬೇಕು ಅಂತಿಲ್ಲ. ನಿಮ್ಮ ಮಾತು ನಿಮ್ಮದೇ ದೇಹದ ಜೀವಕೋಶಗಳಿಗೆ ಕೇಳಿಸುತ್ತದೆ ಅಂತ ನಂಬಿದರೆ ಸಾಕು. ಬೆಳಿಗ್ಗೆ ಬೇಗ ಎದ್ದು ಒಂದು ವಾಕ್ ಹೊರಡಿ. ಎದ್ದ ಎರಡು ತಾಸಿನ ತನಕ ಸಿಗರೇಟು ಮುಟ್ಟಬೇಡಿ. ಆಮೇಲೆ, ಆ ಉಪ್ಪು-ತುಪ್ಪ, ಹಾಲು-ಹೋಳಿಗೆ, ವಿಸ್ಕಿ-ಗೋಡಂಬಿ ನಿಲ್ಲಿಸಿ ಬ್ರದರ್. ದೇಹಕ್ಕೆ ಮುದ್ದು ಮಾಡಿದ್ದು ಜಾಸ್ತಿಯಾಯಿತು. ನಿಮಗ್ಯಾರಾದರೂ ಹವ್ಯಕರು ಗೊತ್ತಿದ್ದರೆ ವಿಚಾರಿಸಿ. ಅವರು ಸೊಪ್ಪುಸೋದೆ, ಕುಡಿಗಳನ್ನೆಲ್ಲ ಹಾಕಿ ತಂಬುಳಿ ಎಂಬ ಅದ್ಭುತ ಪದಾರ್ಥ ಮಾಡುವುದನ್ನು ಹೇಳಿಕೊಡುತ್ತಾರೆ. ಮೆಂತ್ಯೆ ಸೊಪ್ಪಿನಿಂದ ಹಿಡಿದು ದಾಳಿಂಬೆ ಚಿಗುರಿನತನಕ ಯಾವುದರ ತಂಬುಳಿ ತಿಂದರೂ ಒಳ್ಳೆಯದೇ.

ಇಳಿಜಾರಿನ ಹಾದಿಯಲ್ಲಿ ಬೀಳುವ ಅಪಾಯ ಹೆಚ್ಚು. ಏನೇ ಬಿದ್ದರೂ ಛಕ್ಕನೆ ಎದ್ದು ನಿಲ್ಲುವಂತಿರಬೇಕು, ಅಲ್ಲವೆ?

(ಸ್ನೇಹಸೇತು : ಹಾಯ್ ಬೆಂಗಳೂರು)

ನಿಮ್ಮ ಆರೋಗ್ಯಕ್ಕಾಗಿ
ಬೇಸಿಗೆ ಸ್ಪೆಷಲ್ ಮಾವಿನಕಾಯಿ ತಂಬಳಿ
ನಾನಾ ಪತ್ರೆಗಳ ತಂಬ್ಳಿ ಅಥವಾ ತಂಬುಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+