9/11 ದಾಳಿಯ ನೆನಪಿಗಾಗಿ ಅಮೆರಿಕದ ಯುದ್ಧ ನೌಕೆ
2001ರ ಸೆಪ್ಟೆಂಬರ್ 11ರಂದು ಇಡೀ ಜಗತ್ತೇ ಗರಬಡಿದವರಂತೆ ಜಗತ್ತಿನ ಹಿರಿಯಣ್ಣನಂತಿರುವ ಅಮೆರಿಕದತ್ತ ಕಣ್ಣು ಕೀಳದೆ ನೋಡುತ್ತಿತ್ತು. ತಾಲಿಬಾನ್ ಭಯೋತ್ಪಾದಕರಿಂದ ಆಕ್ರಮಣಕ್ಕೊಳಗಾಗಿದ್ದ 1362 ಅಡಿಗಳೆತ್ತರದ 110 ಮಹಡಿಗಳಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಸಮವಾಗಿದ್ದವು. ಈಗ ಅಲ್ಲಿ ಕಟ್ಟಡದ ಅವಶೇಷವೂ ಉಳಿದಿಲ್ಲ. ಕಳೆದ ಏಳು ವರ್ಷಗಳಲ್ಲಿ ಸೆಪ್ಟೆಂಬರ್ 11ರಂದು ಆದಂತಹ ಅವಘಡವೂ ಸಂಭವಿಸಿಲ್ಲ. ವಿಶ್ವದ ಜನತೆಯೂ ಅದನ್ನು ಮರೆತಿರಬಹುದು. ಆದರೆ ಅಮೆರಿಕ ಮರೆತಿಲ್ಲ! ಅಮೆರಿಕಕ್ಕೆ ಮರೆಯಲು ಸಾಧ್ಯವೂ ಇಲ್ಲ.
"ಭಯೋತ್ಪಾದಕರು ನಮ್ಮನ್ನು ಮಣಿಸಿರಬಹುದು. ಆದರೆ, ಕಾಲ ಹೀಗೇ ಇರುವುದಿಲ್ಲ. ನಾವು ತಿರುಗೇಟು ನೀಡಿಯೇ ನೀಡುತ್ತೇವೆ" ಎಂಬ ಛಲದೊಂದಿಗೆ ಗ್ರೌಂಡ್ ಜೀರೋದಿಂದ ಸಂಗ್ರಹಿಸಿದ 24 ಟನ್ ಕಬ್ಬಿಣವನ್ನು ಸಂಗ್ರಹಿಸಿ ಅದರಿಂದಲೇ ಜಾಗತಿಕ ಭಯೋತ್ಪಾದನೆಯನ್ನು ಮಟ್ಟಹಾಕುವ ಉದ್ದೇಶದಿಂದ ಯುದ್ಧ ಹಡಗನ್ನು ಅಮೆರಿಕ ತಯಾರಿಸಿದೆ. ಯುದ್ಧ ನೌಕೆಯನ್ನು '9/11 ಸ್ಟೀಲ್ ವಾರ್ ಶಿಪ್' ಅಂತಲೇ ಅಮೆರಿಕ ನಾಮಕರಣ ಮಾಡಿದೆ.
ಆ 24 ಟನ್ ಕಬ್ಬಿಣವನ್ನು ಲಾಸ್ ಏಂಜಲೀಸ್ ನ ಅಮಿಟೆ ಎಂಬಲ್ಲಿ ಕರಗಿಸಿ ಯುದ್ಧ ಹಡಗಿನ ತಯಾರಿಕೆಯಲ್ಲಿ ಬಳಸಲಾಗಿದೆ. ಭಯೋತ್ಪಾದಕರ ದಾಳಿಯಲ್ಲಿ ಮಡಿದವರ ನೆನಪಿನ ಕುರುಹಾಗಿ ಯುದ್ಧ ನೌಕೆ ರಚಿಸಲಾಗಿದೆ. "ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಕಟ್ಟಡಗಳಿಂದ ಸಂಗ್ರಹಿಸಿದ ಕಬ್ಬಿಣ ಕುಲುಮೆಗೆ ಬಂದಾಗ ನನ್ನ ರೋಮಗಳೆಲ್ಲ ನಿಮಿರಿ ನಿಂತವೆಂದು" ಅಲ್ಲಿಯ ಮ್ಯಾನೇಜರ್ ಒಬ್ಬರು ಉದ್ಗರಿಸಿದ್ದಾರೆ. ಈ ಬೃಹತ್ ಹಡಗಿನಲ್ಲಿ 360 ನಾವಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಂದ ಹಾಗೆ, ಈ ಯುದ್ಧ ನೌಕೆಯ ಧ್ಯೇಯ ವಾಕ್ಯವೇನೆಂದರೆ, "ಎಂದೂ ಮರೆಯಬೇಡ"!
ಪೂರಕ ಓದಿಗೆ
ಒಂಬತ್ತು ಹನ್ನೊಂದರ ಒಂದು ಸ್ಮರಣೆ
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications