ಉತ್ತರಕಾಂಡ ವಿಮರ್ಶೆಗೆ ವಿಮರ್ಶಕ ಸಿಎನ್ ರಾಮಚಂದ್ರನ್ ಪ್ರತಿಕ್ರಿಯೆ
ಎಸ್.ಎಲ್.ಭೈರಪ್ಪ ಅವರ ಹೊಸ ಕಾದಂಬರಿ 'ಉತ್ತರ ಕಾಂಡ'ದ ಬಗ್ಗೆ ಲೇಖಕ ವಿಜಯರಾಘವನ್ ಅವರು ವಿಮರ್ಶೆ ಬರೆದಿದ್ದರು. ಅದು ಒನ್ ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿತ್ತು, ಆ ವಿಮರ್ಶೆಯನ್ನು ವಿಮರ್ಶಕರಾದ ಸಿ.ಎನ್.ರಾಮಚಂದ್ರನ್ ಅವರಿಗೆ ವಿಜಯರಾಘಾವನ್ ಕಳಿಸಿದ್ದರು. ವಿಮರ್ಶೆ ಓದಿದ ನಂತರ ರಾಮಚಂದ್ರನ್ ಪ್ರತಿಕ್ರಿಯಿಸಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸಲಾಗಿದೆ
ಪ್ರಿಯ ವಿಜಯರಾಘವನ್ ಅವರಿಗೆ:
ನಮಸ್ಕಾರ. ಭೈರಪ್ಪನವರ "ಉತ್ತರಕಾಂಡ"ವನ್ನು ಕುರಿತ ನಿಮ್ಮ ವಿಮರ್ಶೆಯನ್ನು ಓದಲು ನನಗೆ ಕಳಿಸಿರುವುದಕ್ಕಾಗಿ ಧನ್ಯವಾದಗಳು. ಲೇಖನವನ್ನು ಪೂರ್ತಾ ಓದಿ ಈಗ ಉತ್ತರಿಸುತ್ತಿದ್ದೇನೆ.

ಲೇಖನ ತುಂಬಾ ಗಂಭೀರವಾಗಿದೆ, ಅರ್ಥಪೂರ್ಣವಾಗಿದೆ. ನೀವು ಲೇಖನದ ಕೊನೆಯಲ್ಲಿ ಕೊಟ್ಟಿರುವ ಭೈರಪ್ಪನವರು ಮಾಡಿಕೊಂಡಿರುವ ಬದಲಾವಣೆಗಳ ಪಟ್ಟಿಯನ್ನು ಗಮನಿಸಿದರೆ ನೀವು ಪಠ್ಯಕ್ಕೆ ಎಷ್ಟು ಮಹತ್ವವನ್ನು ಕೊಟ್ಟು, ಅದಕ್ಕೆ ನಿಷ್ಠರಾಗಿ, ಅದರ ಆಧಾರದ ಮೇಲೆ ಕೆಲವು ತೀರ್ಮಾನಗಳನ್ನು ಕೊಟ್ಟಿರುವುದು ನಿಮ್ಮ ಲೇಖನಕ್ಕೆ ವಿಶ್ವಸನೀಯತೆಯನ್ನು ಕೊಟ್ಟಿದೆ.[ಎಸ್ ಎಲ್ ಭೈರಪ್ಪ ಹೊಸ ಕಾದಂಬರಿ ಉತ್ತರ ಕಾಂಡ ವಿಮರ್ಶೆ]
ನಾನು ಇನ್ನೂ "ಉತ್ತರಕಾಂಡ"ವನ್ನು ಓದಿಲ್ಲವಾದುದರಿಂದ ನಿಮ್ಮ ಲೇಖನವನ್ನು ಆಧರಿಸಿ ಇಷ್ಟು ಮಾತ್ರ ಹೇಳಬಲ್ಲೆ: 'ಪೌರಾಣಿಕ ಕಥನಗಳನ್ನು ಅವುಗಳ ಪೌರಾಣಿಕ ಆವರಣದಿಂದ ಹೊರತೆಗೆದರೆ ಅವುಗಳಲ್ಲಿ ಏನೂ ಉಳಿಯುವುದಿಲ್ಲ; ಅವು ಇತರ ಸಾವಿರಾರು ವಾಸ್ತವ ಕಥನಗಳಂತೆಯೇ ಆಗಿ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ' - ಎಂಬ ನಿಮ್ಮ ವಾದವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಅಭಿನಂದನೆಗಳು.
ಪಂಡಿತ್ ಸೂರ್ಯಪ್ರಕಾಶ್ ಅವರು ಆ ಕಾದಂಬರಿಯ ವಿಮರ್ಶೆಯನ್ನು "ಪ್ರಜಾವಾಣಿ"ಯಲ್ಲಿ ಮಾಡಿರುವುದನ್ನು ನೀವು ಗಮನಿಸಿರಬಹುದು; ಅವರ ನಿಲುವೂ ನಿಮ್ಮ ನಿಲುವಿಗೆ ಸಮಾನವಾಗಿದೆ. ಆದರೆ, ನಿಮ್ಮ ವಿಮರ್ಶೆ ಪಠ್ಯಾಧಾರಿತವಾಗಿದ್ದರೆ, ಅವರದು ಹೆಚ್ಚಾಗಿ ತಾತ್ವಿಕ ನೆಲೆಯಲ್ಲಿ ಚರ್ಚೆಯನ್ನು ನಡೆಸುತ್ತದೆ.
ನೀವು ಮತ್ತು ನಿಮ್ಮ ಕುಟುಂಬವು ಆರೋಗ್ಯವೆಂದು ನಂಬಿದ್ದೇನೆ.
ನಿಮ್ಮ,
ರಾಮಚಂದ್ರನ್
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications