ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರ ಓಲೆ : ಅವರಿಗೆ ಜನರೇ ಬುದ್ಧಿ ಕಲಿಸ್ತಾರೆ

By Prasad
|
Google Oneindia Kannada News

Letters to the editor
ಯೂಟ್ಯೂಬ್‌ನಲ್ಲಿ ಅಪ್ಲೋಡ್ ಆಗಿರೋದು ಗೊತ್ತಾದ್ರೆ, ಶಿವರಾಜಕುಮಾರ್, ಪುನೀತ್, ರಾಘವೇಂದ್ರ, ಮತ್ತೆ ಅವರ ಸೈನ್ಯ ಸುವರ್ಣ ಚಾನೆಲ್ ಮೇಲೆ ಅಟ್ಯಾಕ್ ಮಾಡಿ ಧ್ವಂಸ ಮಾಡುವ ಸಾಧ್ಯತೆ ಇದೆ. ಆಗ ಜನರೇ ಅವರಿಗೆ ಬುದ್ಧಿ ಕಲಿಸುತ್ತಾರೆ. (ಇದು ನನ್ನ ವೈಯಕ್ತಿಕ ಅಭಿಪ್ರಾಯ. ಬೇರೆಯವರ ಅಭಿಪ್ರಾಯವೂ ಇದೆ ಆಗಿರಬಹುದು.) [ಡಬ್ಬಿಂಗ್ ವಿವಾದ]
* ಸಚಿನ್

***
ಐತಿಹಾಸಿಕ ನಿರ್ಧಾರ, ಅನೇಕ ಸಿ.ಡಿ(ಕ್ರಸ್ ಡ್ರೆಸರ್ಸ್)ಗಳಿಗೆ ಸಂತೋಷವಾಗಿದೆ. ಸಮಾಜದಲ್ಲಿ ನೌಕರಿಯಲ್ಲಿ ಮೂರನೇ ಲಿಂಗವನ್ನು ಗುರುತಿಸಲು ಅನುವು ಮಾಡಿಕೊಟ್ಟರೆ ತುಂಬ ಅನುಕೂಲ. ಬದುಕು ನಮ್ಮ ಹಕ್ಕು ಅದನ್ನು ಯಾರು ಕಿತ್ತು ಕೊಳ್ಳಬಾರದು. ಅಪರೇಷನ್ ಸಾಧ್ಯವಾಗದವರಿಗೆ ಸದಾ ಸೀರೆ ಧರಿಸಿ ಮೂರನೇ ಲಿಂಗದೊಡನೆ ಸೇರಿ ಬಕುವ ಹಕ್ಕನ್ನೂ ಕೊಡಬೇಕು. ನಾವು ಸಮಾಜದಲ್ಲಿ ಎಲ್ಲರಂತೆ ಗೌರವವಾಗಿ ಬಾಳುವಂತಾಗಬೇಕು. ನಮ್ಮ ಬದುಕನ್ನು ಕಿತ್ತುಕೊಳ್ಳುವ ಕೆಟ್ಟ ಪುರುಷ ಮತ್ತು ಮಹಿಳೆಯರಿಗೆ ಶಿಕ್ಷೆಯಾಗಬೇಕು. [ಲಿಂಗ ಪರಿವರ್ತನೆ]
* ಸರೋಜಶ್ರೀ ಸಿಡಿ

***
ನಂಗೆ ಹಿಂದಿ ಅರ್ಥ ಆಗೋಲ್ಲ. ನಾನು ಕಷ್ಟ ಪಟ್ಟು ಕನ್ನಡ dub ಆಗಿರೋ ವಿಡಿಯೋವನ್ನು youtubeನಲ್ಲಿ ಹುಡುಕಿ ನೋಡಬೇಕಾಯ್ತು. ಅದೇ ಕನ್ನಡದಲ್ಲಿ dub ಆಗಿ TV ಬಂದಿದ್ರೆ TVನಲ್ಲೇ ನೋಡ್ತಾ ಇದ್ದೆ. ನೀವು ಯಾರು ನನ್ನ entertainmentನ ಕಿತ್ಕೊಳ್ಳೋಕೆ? ಹೇಳಬೇಕು ಅಂದ್ರೆ ಕೋಟಿ ಕನ್ನಡಿಗರಿಗೆ ಒಳ್ಳೆ ಮೆಸೇಜ್ ಇರೋ ಪ್ರೊಗ್ರಾಮ್ ಇದು. ನಿಮ್ಮಂತಹ ಹೊಲಸು ಜನರಿಂದ ಕನ್ನಡಿಗರಿಗೆ ಮೋಸ ಆಗ್ತಾ ಇದೆ. [ಅಮೀರ್‌ಗೆ ಪ್ರತಿಭಾ ಪತ್ರ]
* ಯೋಗೇಶ್

***
ಡಬ್ಬಿಂಗ್ ಮಾದೊದ್ರಲ್ಲೇನು ತೊಂದರೆ, ಅಮೀರ್ ಖಾನ್ ಮಾಡ್ತಿರೋ ಧಾರಾವಾಹಿ ನಿಜಕ್ಕೂ ಒಂದು ಸಾಮಾಜಿಕ ಪಿಡುಗನ್ನು ಬಗೆಹರಿಸಲು ಮಾಡುತ್ತಿರುವ ಪ್ರಯತ್ನ. ಬಹುಶಃ ಇದನ್ನು ನಮ್ಮ ಎಂ.ಎಸ್. ಸತ್ಯು ಇಲ್ಲವೇ ಗಿರೀಶ್ ಕಾಸರವಳ್ಳಿ ಮೊದಲೇ ಮಾಡಬಹುದಿತ್ತು. ಹೋಗಲಿ, ಒಳ್ಳೆ ಪ್ರಯತ್ನಕ್ಕೆ ಬೆಂಬಲ ಕೊಡುವುದು ನಮ್ಮ ಮುಕ್ತ ಮನಸ್ಸಿನ ಕನ್ನಡಿಗರ ಆದ್ಯ ಕರ್ತವ್ಯ. ಡಬ್ಬಿಂಗ್ ಬಗ್ಗೆ ನಿಮ್ಮ ಪ್ರತಿಕ್ರಿಯೆ, ಸಿನಿಮಾಗಳಿಗೆ ಮಾತ್ರ ಮಾಡಿ. ಅಮೀರ್ ವಿಚಾರಗಳು ಪ್ರತಿಮನೆಗೂ ಮುಟ್ಟಲಿ ಎನ್ನುವುದು ಅವನ ಅಭಿಮತ. ಕರ್ನಾಟಕ ಇಂತಹ ಪಿಡುಗುಗಳನ್ನು ಒಪ್ಪುವುದಿಲ್ಲ. ಏನಂತಿರ? [ಡಬ್ಬಿಂಗ್ : ಪ್ರತಿಭಾ ನಂದಕುಮಾರ್ ಏನಂತಾರೆ]
* ವೆಂಕಟೇಶ್

***
As per the RBI guidelines, the money should be credited back to customer's account within 12 business days from the date of complaint. In case of delay, there is a penalty of Rs. 100 per day. However, one of my friends, lost Rs. 60,000 in a SBI/SBM ATM in two transactions 3 years back. He complained on the same date, but till date they have not returned this money. We registered our complaint at every possible level, but there is no result. SBI does not care any of RBI rules and its very ruthless. [ಎಟಿಎಂ ಗೋಲ್‌ಮಾಲ್]
* ಆದಿತ್ಯ

English summary
Letters to the editor : Readers' responses to dubbing controversy, man losing 20K in an ATM in Chennai, court permitting man to change is personality etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X