ಎಟಿಎಂನಲ್ಲಿ ಹಣ ಕಳೆದುಕೊಂಡ ಟೆಕ್ಕಿ ವೆಂಕಟನ ಸಂಕಟ

ಬೆಂಗಳೂರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಟೆಕ್ಕಿ ವೆಂಕಟ ಮಂಥ ಅವರು ಎಸ್ಬಿಐ ಡೆಬಿಟ್ ಕಾರ್ಡ್ ಬಳಸಿ ಕೆಥೆಡ್ರಲ್ ರಸ್ತೆಯಲ್ಲಿರುವ ಎಚ್ಡಿಎಫ್ಸಿ ಬ್ಯಾಂಕ್ ಎಟಿಎಂಗೆ ಹೋಗಿದ್ದಾರೆ. ಕಾರ್ಡ್ ಬಳಸಿ 20 ಸಾವಿರ ರು. ಹಿಂತೆಗೆದುಕೊಳ್ಳಲು ಯತ್ನಿಸಿದಾಗ ಹಿಂದಕ್ಕೆ ಬಂದಿದ್ದು ಕಾರ್ಡು ಮಾತ್ರ, ದುಡ್ಡು ಮಂಗಮಾಯ. ಆದರೆ, ಖಾತೆಯಿಂದ 20 ಸಾವಿರ ರು. ಛೂಮಂತ್ರವಾಗಿತ್ತು.
ಅದೇ ಎಟಿಎಂನಲ್ಲಿ ಬೇರೆ ಕಾರ್ಡ್ ಬಳಸಿ ಹಣ ವಾಪಸ್ ತೆಗೆದರೆ ಅದು ಅವರಿಗೆ ಸಿಕ್ಕಿದೆ. ಅಲ್ಲಿಂದ ಶುರುವಾಗಿದೆ ಕಳೆದುಕೊಂಡ ಹಣವನ್ನು ಪಡೆಯುವ ಅಭಿಯಾನ. ಎಚ್ಡಿಎಫ್ಸಿ ಬ್ಯಾಂಕಿಗೆ ಹಣ ಸಿಗದಿರುವುದರ ಬಗ್ಗೆ ಪತ್ರ ಬರೆದಿದ್ದಾರೆ. ಹಾಗೆಯೆ, ಬೆಂಗಳೂರಿನ ಎಸ್ಬಿಐಗೂ ಪತ್ರ ರವಾನಿಸಿದ್ದಾರೆ. ಆದರೆ, ಯಾವ ಬ್ಯಾಂಕಿನಿಂದಲೂ ಅವರಿಗೆ ಸಹಾಯ ದೊರೆತಿಲ್ಲ.
ವೆಂಕಟ ಮಂಥ ಅವರ ಹೆಂಡತಿ ಸೌಜನ್ಯ ಎರಡೂ ಬ್ಯಾಂಕುಗಳಿಗೆ ಬರೆದಿರುವ ಪತ್ರ ಸಿಕ್ಕ ಉತ್ತರವೇನೆಂದರೆ, ಬ್ಯಾಂಕ್ ಓಂಬುಡ್ಸ್ಮನ್ನನ್ನು ಸಂಪರ್ಕಿಸಬೇಕೆಂದು. ಹಣ ಖಾತೆಯಿಂದ ಕಡಿತಗೊಂಡಿದನ್ನು ಎರಡೂ ಬ್ಯಾಂಕುಗಳು ಒಪ್ಪಿಕೊಂಡಿದ್ದರೂ ಹಣ ಹಿಂತಿರುಗಿಸಲು ಹಿಂದೇಟು ಹಾಕುತ್ತಿವೆ ಎಂದು ವೆಂಕಟ ಅವರ ಪತ್ನಿ ಸೌಜನ್ಯ ಅಲವತ್ತುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರಿನಲ್ಲಿ ಎಸ್ಬಿಐ ಚೀಫ್ ಮ್ಯಾನೇಜರ್ ಆರ್.ಎನ್. ಕುಲಕರ್ಣಿ ಅವರು, ಓಂಬುಡ್ಸ್ಮನ್ರಿಂದ ದೂರಿನ ಪ್ರತಿ ಬಂದಿದ್ದು, ತನಿಖೆ ನಡೆಸಿದ ನಂತರ ವರದಿಯನ್ನು ಓಂಬುಡ್ಸ್ಮನ್ ಅವರಿಗೆ ನೀಡಲಾಗುವುದು. ಅವರು ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಇದು ವೆಂಕಟ ಅವರ ಸಂಕಟದ ಕಥೆ ಮಾತ್ರವಲ್ಲ. ಪ್ರತಿದಿನ ಹಣ ಹಿಂತೆಗೆದುಕೊಳ್ಳಲು ಎಟಿಎಂಗಳಿಗೆ ಎಡತಾಕುವ ಲಕ್ಷಾಂತರ ಗ್ರಾಹಕರ ಕಥೆ. ಎಟಿಎಂನಲ್ಲಿ ಹಣ ಕಳೆದುಕೊಂಡವರೆಷ್ಟೋ, ಎಂಟಿಎಂ ಕಾರ್ಡನ್ನೂ ಕಳೆದುಕೊಂಡವರೆಷ್ಟೋ? ಎಂಟಿಎಂ ಇದ್ದಿದ್ದರಿಂದ ಬ್ಯಾಂಕಿನೊಂದಿಗೆ ವ್ಯವಹಾರ ನಡೆಸುವುದು ಸುಲಭವೇನೋ ಆಗಿದೆ. ಆದರೆ, ಅದರ ಜೊತೆ ನಾನಾ ಸಂಕಷ್ಟಗಳನ್ನೂ ಎದುರಿಸಬೇಕಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications