ಆರ್‌ಸಿಬಿ ಐಪಿಎಲ್ 2026 ಟ್ರೋಫಿ ಗೆದ್ದ ಬೆನ್ನಲ್ಲೇ ಪತ್ನಿ ಅನುಷ್ಕಾ ಜೊತೆ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ

Virat Kohli: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್‌ 2026 ಫೈನಲ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ಸೃಷ್ಟಿಸಿತು. ಈ ಯಶಸ್ಸಿನ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಅವರೊಂದಿಗೆ ಪ್ರೇಮಾನಂದ್ ಗೋವಿಂದ ಶರಣ್ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜೇಯ 75 ರನ್ ಸಿಡಿಸಿ ತಂಡದ ಗೆಲುವಿನ ರೂವಾರಿಯಾಗಿದ್ದ ವಿರಾಟ್ ಕೊಹ್ಲಿ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ. ಆರ್‌ಸಿಬಿ ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆ ನಡುವೆಯೂ ಕಿಂಗ್ ಕೊಹ್ಲಿ ಆಧ್ಯಾತ್ಮದ ಕಡೆಗೆ ಮುಖ ಮಾಡಿದ್ದಾರೆ. ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಮಥುರಾದ ಪ್ರಸಿದ್ಧ ಪ್ರೇಮಾನಂದ್ ಗೋವಿಂದ ಶರಣ್ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.

Virat Kohli Anushka Sharma Visits Premanand Maharaj Ashram After RCB s IPL 2026 Triumph Viral

ಆಶ್ರಮಕ್ಕೆ ಭೇಟಿ ನೀಡಿದ ಅನುಷ್ಕಾ, ಕೊಹ್ಲಿ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಯು ಸದಾ ತಮ್ಮ ಆಧ್ಯಾತ್ಮಿಕ ಒಲವಿಗೆ ಹೆಸರಾಗಿದ್ದಾರೆ. ಐಪಿಎಲ್‌ನ ಸುದೀರ್ಘ ಹಾಗೂ ಅತ್ಯಂತ ಒತ್ತಡದ ಸೀಸನ್ ಮುಗಿದ ತಕ್ಷಣವೇ ಈ ದಂಪತಿ ಮಥುರಾಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿನ ರಾಧಾ ಕೇಲಿ ಕುಂಜ್ ಆಶ್ರಮದಲ್ಲಿ ನೆಲೆಸಿರುವ ಪರಮ ಪೂಜ್ಯ ಪ್ರೇಮಾನಂದ್ ಮಹಾರಾಜ್ ಅವರ ಸತ್ಸಂಗದಲ್ಲಿ ಭಾಗವಹಿಸಿ ಅವರ ಆಶೀರ್ವಾದ ಪಡೆದಿದ್ದಾರೆ.

ಗಮನ ಸೆಳೆದ 'ವಿರುಷ್ಕಾ' ಜೋಡಿ ಸರಳತೆ

ವಿಶ್ವದ ಅತ್ಯಂತ ಪ್ರಭಾವಿ ಮತ್ತು ಶ್ರೀಮಂತ ಕ್ರೀಡಾ ತಾರೆಗಳಲ್ಲಿ ಒಬ್ಬರಾಗಿದ್ದರೂ ಆಶ್ರಮದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಸರಳತೆ ಎಲ್ಲರ ಗಮನ ಸೆಳೆಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ಆಶ್ರಮಕ್ಕೆ ಭೇಟಿ ನೀಡಿದ ಈ ಜೋಡಿಯು ನೆಲದ ಮೇಲೆ ಸಾಮಾನ್ಯರಂತೆ ಕುಳಿತು ಮಹಾರಾಜರ ಪ್ರವಚನವನ್ನು ಅತ್ಯಂತ ಶ್ರದ್ಧೆಯಿಂದ ಆಲಿಸಿದರು. ಸತ್ಸಂಗದ ಸಮಯದಲ್ಲಿ ಪ್ರೇಮಾನಂದ್ ಮಹಾರಾಜರು ವಿರಾಟ್ ಮತ್ತು ಅನುಷ್ಕಾ ಅವರಿಗೆ ಪ್ರಸಾದ ಹಾಗೂ ಪವಿತ್ರ ಶಾಲು ಹೊದಿಸಿ ಆಶೀರ್ವದಿಸಿದರು. ಈ ಸಂದರ್ಭದ ವಿಡಿಯೋಗಳು ಮತ್ತು ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಭಕ್ತಿ ಮತ್ತು ಸರಳತೆಗೆ ಮನಸೋತಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಕಂಡುಬಂದ ಭಾರಿ ಬದಲಾವಣೆ ಮತ್ತು ಮಾನಸಿಕ ಸ್ಥಿರತೆಗೆ ಆಧ್ಯಾತ್ಮವೇ ಮುಖ್ಯ ಕಾರಣ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಮತ್ತು ಅನುಷ್ಕಾ ಶರ್ಮಾ ದೇಶದ ವಿವಿಧ ಧಾರ್ಮಿಕ ಕ್ಷೇತ್ರಗಳು ಹಾಗೂ ಸಾಧು-ಸಂತರ ಆಶ್ರಮಗಳಿಗೆ ನಿರಂತರವಾಗಿ ಭೇಟಿ ನೀಡುತ್ತಾ ಬಂದಿದ್ದಾರೆ. ಈ ಹಿಂದೆಯೂ ಅವರು ಉತ್ತರಾಖಂಡದ ನೀಮ್ ಕರೋಲಿ ಬಾಬಾ ಆಶ್ರಮ ಹಾಗೂ ವೃಂದಾವನಕ್ಕೆ ಭೇಟಿ ನೀಡಿದ್ದರು. 'ಮೈದಾನದಲ್ಲಿ ಎಷ್ಟೇ ಸಫಲತೆ ಸಿಕ್ಕರೂ, ಮನಸ್ಸಿಗೆ ಶಾಂತಿ ಮತ್ತು ಮನಸನ್ನ ಸಮತೋಲನದಲ್ಲಿರಲು ಆಧ್ಯಾತ್ಮಿಕ ಶಕ್ತಿ ತುಂಬಾ ನೆರವಾಗುತ್ತದೆ,' ಎಂದು ಕೊಹ್ಲಿ ತಮ್ಮ ಸಂದರ್ಶನಗಳಲ್ಲಿ ಈ ಹಿಂದೆ ಉಲ್ಲೇಖಿಸಿದ್ದರು.

ಐಪಿಎಲ್ 2026ರಲ್ಲಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒತ್ತಡದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಲ್ಲದೆ, ಫೈನಲ್‌ನಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕ್ರೀಡಾಂಗಣದಲ್ಲಿ ಸದಾ ಆಕ್ರಮಣಕಾರಿ ಆಟಕ್ಕೆ ಹೆಸರಾದ ಕೊಹ್ಲಿ ಮೈದಾನದ ಹೊರಗೆ ಅಷ್ಟೇ ಶಾಂತಚಿತ್ತರಾಗಿ ಮತ್ತು ದೈವಭಕ್ತರಾಗಿ ಕಾಣಿಸಿಕೊಳ್ಳುವುದು ಅವರ ವ್ಯಕ್ತಿತ್ವದ ವಿಶಿಷ್ಟ ಗುಣವಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ಐಪಿಎಲ್ ಟ್ರೋಫಿ ಗೆಲುವಿನ ಅಬ್ಬರದ ಪಾರ್ಟಿಗಳಿಂದ ದೂರವುಳಿದು, ವೃಂದಾವನದ ಪ್ರೇಮಾನಂದ್ ಮಹಾರಾಜರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಈ ನಡೆ ಮತ್ತೊಮ್ಮೆ ಯುವ ಪೀಳಿಗೆಗೆ ಮಾದರಿಯಾಗಿದೆ. ಈ ದಂಪತಿಯ ಆಧ್ಯಾತ್ಮಿಕ ಜೀವನಶೈಲಿ ಅವರ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಯಶಸ್ಸಿಗೆ ಶ್ರೀರಕ್ಷೆಯಾಗಿದೆ ಎಂಬುದು ಅಭಿಮಾನಿಗಳ ನಂಬಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+