ಅಕ್ರಮ ಸಂಬಂಧಕ್ಕೆ ಮಗು ಬಲಿ: ಪುಟ್ಟ ಮಗುವಿನ ಮೇಲೆ 51 ಗಾಯಗಳು, ಮುರಿದ ಮೂಳೆ , ಸುಟ್ಟಗಾಯ: ಹೃದಯ ವಿದ್ರಾವಕ ಘಟನೆ
ಕೇರಳದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪುಟ್ಟ ಮಗುವಿನ ಮೇಲೆ ಆಕೆಯ ತಾಯಿ ಹಾಗೂ ಆಕೆಯೊಂದಿಗೆ ಆಪ್ತವಾಗಿದ್ದ ವ್ಯಕ್ತಿ ಅತ್ಯಂತ ಹೀನಾಯವಾಗಿ ಹಿಂಸೆ ಕೊಟ್ಟಿದ್ದಾರೆ. ಇದೀಗ ಮಗು ಮೃತಪಟ್ಟಿದೆ. ಆದರೆ ಮಗುವಿಗೆ ಕೊಡಲಾಗಿದ್ದ ಚಿತ್ರಹಿಂಸೆಯನ್ನು ನೋಡಿದರೆ ಎಂತಹ ಕಲ್ಲು ಹೃದಯವಾದರೂ ಕರಗುತ್ತದೆ. ಪುಟ್ಟ ಮಗುವಿನ ಮೇಲೆ 51 ಗಾಯಗಳು, ಮೂಳೆ ಮುರಿತ, ಸುಟ್ಟಗಾಯಗಳು ಹಾಗೂ ನಿರಂತರ ದೈಹಿಕ ಹಲ್ಲೆಯಿಂದ ಮಗು ಮೃತಪಟ್ಟಿದೆ. ಇದೀಗ ತಾಯಿ ಮತ್ತು ಸಂಗಾತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕಳೆದ ಶುಕ್ರವಾರ, ಒಂದೂವರೆ ವರ್ಷದ ಅರ್ಷಿದ್ ಎನ್ನುವ ಪುಟಾಣಿ ಹುಡುಗನನ್ನು ತಿರುವನಂತಪುರದ ಅವಿಟ್ಟಂ ತಿರುನಾಳ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿ ಅಶ್ಕರ್ ನಿರಂತರ ಹಿಂಸೆ ಕೊಡುತ್ತಿದ್ದ ಎಂದು ಮಗು ಹೇಳಿಕೊಂಡಿದೆ.
ಮಗು ಅರ್ಷಿದ್ ಊಟ ಮಾಡುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಕೆಲವೇ ಕ್ಷಣಗಳಲ್ಲಿ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದ್ದು, ತಾಯಿಯ ಸಂಗಾತಿಯೇ ತನ್ನ ತಾಯಿಯ ಸಹಕಾರದೊಂದಿಗೆ ಮಗುವಿನ ಮೇಲೆ ಕ್ರೂರ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಶ್ಕರ್ (31) ಮತ್ತು ಮಗುವಿನ ತಾಯಿ ಅಖಿಲಾ (24) ಎಂಬವರನ್ನು ಮಗುವಿನ ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಅರ್ಷಿದ್ನ ದೇಹವು ತಿಂಗಳುಗಳ ಕಾಲ ಚಿತ್ರಹಿಂಸೆಯ ಭಯಾನಕ ಕಥೆಯನ್ನು ಹೇಳುವಂತಿದೆ.

ಮರಣೋತ್ತರ ಪರೀಕ್ಷೆ ವರದಿಯು ಹೊಸ ಗಾಯಗಳು ಮತ್ತು ಹಳೆಯ ಗಾಯಗಳು ಸೇರಿದಂತೆ 51 ಗಾಯಗಳಾಗಿವೆ ಎಂದು ಹೇಳಿದೆ. ತನಿಖೆಯಲ್ಲಿ ಪುಟ್ಟ ಮಗುವನ್ನು ದೀರ್ಘಕಾಲದವರೆಗೆ ಪದೇ ಪದೇ ನಿಂದಿಸಲಾಗಿದೆ. ಮಗುವಿನ ತೋಳುಗಳು ಮುರಿದಿದ್ದವು ಮತ್ತು ಅವನ ಜನನಾಂಗಗಳಲ್ಲಿ ಸಿಗರೇಟಿನಿಂದ ಸುಟ್ಟ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಖಿಲಾಳೊಂದಿಗೆ ತನ್ನ ಜೀವನ ನಡೆಸುವುದಕ್ಕೆ ಮಗು ಅಡ್ಡಿಯಾಗಿ ಅಷ್ಕರ್ ನಿರ್ಧರಿಸಿದ್ದ. ಆದ್ದರಿಂದ ಅವನು ಮಗುವನ್ನು ಕೊಲ್ಲಲು ಮುಂದಾಗಿದ್ದಾನೆ. ಅವನಿಗೆ ಹಲವು ದಿನಗಳಿಂದ ಚಿತ್ರಹಿಂಸೆ ನೀಡಲಾಗುತ್ತಿತ್ತು. ಹುಡುಗನ ತಾಯಿಯ ಸಹಕಾರದಿಂದಲೇ ಈ ಅಪರಾಧ ನಡೆದಿದೆ ಎಂದು ಕೇರಳದ ನೆಡುಮಂಗಾಡ್ನ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿಜು ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಡ್ಯಾನ್ಸ್ ಆಗಿರುವ ಅಖಿಲಾ ಶುಕ್ರವಾರ ಕಾರ್ಯಕ್ರಮವೊಂದಕ್ಕೆ ತಮಿಳುನಾಡಿಗೆ ಹೋಗುವ ಉದ್ದೇಶದಿಂದ ಮಗನನ್ನು ತನ್ನೊಂದಿಗೆ ಬಿಟ್ಟು ಹೋಗಿದ್ದಳು ಎಂದು ಅಶ್ಕರ್ ವಿಚಾರಣೆಯ ಸಮಯದಲ್ಲಿ ಹೇಳಿದ್ದಾನೆ. ಅಶ್ಕರ್ ಮಗುವಿಗೆ ಹಾಲುಣಿಸಲು ಪ್ರಯತ್ನಿಸುತ್ತಿರುವಾಗ ಮಗು ಅಳಲು ಪ್ರಾರಂಭಿಸಿತು. ಇದರಿಂದ ಕೋಪಗೊಂಡ ಅಶ್ಕರ್, ಮಗುವಿನ ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ಮಗುವಿನ ತಲೆಯಲ್ಲಿ ಆಂತರಿಕ ರಕ್ತಸ್ರಾವವಾಗಿದೆ ಎಂದು ಹೇಳಲಾಗಿದೆ. ಶವಪರೀಕ್ಷೆಯಲ್ಲಿ ಪಕ್ಕೆಲುಬುಗಳು ಮತ್ತು ತೋಳುಗಳು ಮುರಿದಿರುವುದು ಕಂಡುಬಂದಿದೆ. ಆಕಸ್ಮಿಕವಾಗಿ ಬಿದ್ದ ಕಾರಣ ಕೈಗಳು ಮುರಿದಿವೆ ಎಂದು ಅಶ್ಕರ್ ಹೇಳಿಕೊಂಡಿದ್ದಾನೆ.
ತನಿಖೆಯಲ್ಲಿ ತಿರುವನಂತಪುರದ ಕರಿಕ್ಕುಳಿಯಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ದಂಪತಿಗಳು ಸಾಕ್ಷ್ಯಗಳನ್ನು ತಿರುಚಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವಿನ ರಕ್ತಸಿಕ್ತ ಬಟ್ಟೆಗಳನ್ನು ಹಿತ್ತಲಿನಲ್ಲಿ ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಖಿಲಾಳ ಪತಿ ಮಗು ಜನಿಸುವುದಕ್ಕಿಂತಲೂ ಮೊದಲೇ ಆತ್ಮಹತ್ಯೆ ಮಾಡಿಕೊಂಡ ಮೇಲೆ ಅಶ್ಕರ್ ಮತ್ತು ಅಖಿಲಾ ಸುಮಾರು ಐದು ತಿಂಗಳ ಹಿಂದೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ. ತಾಯಿಯ ಸಹಕಾರದಿಂದಲೇ ಮಗುವಿಗೆ ಚಿತ್ರ ಹಿಂಸೆ ನೀಡಲಾಗಿದೆ ಎಂದು ಹೇಳಲಾಗಿದೆ.
ಮತ್ತೊಂದೆಡೆ, ಅಶ್ಕರ್ 2021 ರಲ್ಲಿ ಅಮೀನಾ ಎಂಬ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದ. ಅಮೀನಾ ಅವರಿಗೂ ಚಿತ್ರಹಿಂಸೆ ನೀಡಿದ್ದಾನೆ ಮತ್ತು ಅವರು ಹಾಸಿಗೆ ಹಿಡಿದಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ನಂತರ ಅವರು ಅವಳನ್ನು ಬಿಟ್ಟು ಅಖಿಲಾ ಜೊತೆ ವಾಸಿಸಲು ಪ್ರಾರಂಭಿಸಿದ್ದಾನೆ ಎಂದು ಹೇಳಲಾಗಿದೆ.












Click it and Unblock the Notifications