382476nri kannadigasಬೇ ಏರಿಯಾದಲ್ಲಿ ಮಾ.15ರಂದು ಕರ್ಣಾಟಕ ದಿನ/nri/engagements/2009/0314-karnataka-day-india-community-center-bay-area.htmlಮಿಲ್ಪೀಟಸ್‌ನಲ್ಲಿ ಇರುವ ಇಂಡಿಯಾ ಕಮ್ಮ್ಯೂನಿಟಿ ಸೆಂಟರಿನಲ್ಲಿ (ಐ.ಸಿ.ಸಿ) ಮಾರ್ಚ್ ತಿಂಗಳು "ಕರ್ಣಾಟಕದ ಮಾಸ"ವಾಗಿಯೂ, ಮಾರ್ಚ್ 15 "ಕರ್ಣಾಟಕದ ದಿನ"ವಾಗಿಯೂ ಆಚರಿಸಲ್ಪಡುತ್ತಿದೆ.ಕನ್ನಡ ನಾಡಿನ ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಪರಂಪರೆಯ ಇಣುಕುನೋಟದ ಜೊತೆ ವಿಶೇಷ ತಿನಿಸುಗಳ ರಸದೂಟವನ್ನು ಒಳಗೊಂಡಿರುವ ಮೋಜಿನ ಹಬ್ಬವನ್ನು ಮಾರ್ಚ್ ಹದಿನೈದರಂದು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟವು ಅಲ್ಲಿ ಆಯೋಜಿಸಿದೆ. ಅಂದು ವಿವಿಧ ಮನರಂಜನಾ ಕಾರ್ಯಕ್ರಮಗಳ ಜೊತೆ, 35225http://kannada.oneindia.com/img/2009/03/14-kknc-logo3.jpg382476nri kannadigasಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ/nri/engagements/2009/0321-kannada-kali-day-celebration.htmlದಕ್ಷಿಣ ಕ್ಯಾಲಿಫೋರ್ನಿಯಾದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. 'ಕನ್ನಡ ಕಲಿ' ದಿನಾಚರಣೆ ಮಾರ್ಚ್ 22ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ.ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ 35402http://kannada.oneindia.com/img/2009/03/21-kannada-kali1.jpg382476nri kannadigasಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ/response/2009/0626-nri-cell-investment-karnataka-kuntikanamata.htmlಅನಿವಾಸಿ ಕನ್ನಡಿಗರ ಕುರಿತಾಗಿ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ, ಅದಕ್ಕೆ ಬಂದಂತಹ ಪ್ರತಿಕ್ರಿಯೆ ನೋಡಿ ನಾನು ಎಲ್ಲ ಅನಿವಾಸಿ ಕನ್ನಡಿಗನ ನೋವು ನಲಿವಿನ ಕಥೆಯನ್ನು ಬರೆಯಬೇಕೆಂದು ಆಲೋಚಿಸಿದೆ. ಆ ಪ್ರಯುಕ್ತ ಎಲ್ಲ ಅನಿವಾಸಿ ಕನ್ನಡಿಗರು ಇದನ್ನು ಸಮರ್ಥಿಸಿಕೊಳ್ಳುತ್ತಾನೆಂದು ನಂಬಿಕೆ. ಎಲ್ಲ ಕನ್ನಡಿಗರು ನಮ್ಮ ಬಂಧು ಮಿತ್ರರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು.ಪ್ರಪಂಚದ ಮೂಲೆ ಮೂಲೆಯಲ್ಲಿ ವಿಜ್ಞಾನಿಯಾಗಿ, ವೈದ್ಯನಾಗಿ, 37601http://kannada.oneindia.com/img/2009/06/26-kumar-kuntikanamata1.jpg382476nri kannadigasನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg478630letter to the editorಮತದಾನ ನಿರಾಶೆ! ಮತದಾರರ ಹತಾಶೆ!/response/2009/0424-letter-to-the-editor-lok-sabha-election-2009.htmlನನ್ನ ಭಯ ನಿಜವಾಗಿದೆ. ಕರ್ನಾಟಕದಲ್ಲಿ ಮೊದಲ ಸುತ್ತಿನ ಮತದಾನದ ಪ್ರಮಾಣ ಅತ್ಯಂತ ಕಳಪೆಯಾಗಿದೆ. ರಾಜ್ಯದಲ್ಲಿ ಮೊದಲ ಸುತ್ತಿನಲ್ಲಿ ಶೇಕಡಾ 51ರಷ್ಟು ಮಾತ್ರ ಮತದಾನವಾಗಿದೆ. ವಿದ್ಯಾವಂತರು ಬಹುಸಂಖ್ಯೆಯಲ್ಲಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 50ರಷ್ಟು ಮಾತ್ರ ಮತದಾನವಾದರೆ ಬೆಂಗಳೂರು ಸೆಂಟ್ರಲ್ ಮತ್ತು ಉತ್ತರ ಕ್ಷೇತ್ರಗಳಲ್ಲಿ ಶೇಕಡಾ 45ರಷ್ಟು ಕಳಪೆ ಪ್ರಮಾಣದ ಮತದಾನವಾಗಿದೆ!ಹೀಗೇಕೆ ಎಂದು ಆಲೋಚಿಸಿದಾಗ ನನಗೆ ಅನ್ನಿಸುವ ಕಾರಣಗಳು 36193http://kannada.oneindia.com/img/2009/04/24-anandram-shastri2.jpg478630letter to the editorನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg478630letter to the editorಸರಬ್ಜಿತ್ ಗೆ ಕ್ಷಮಾದಾನ ಕೇಳಬೇಕೆ ಬೇಡವೆ?/response/2009/0629-letter-to-the-editor-bharat-sastry.html'ಪಾಕ್ ಎಂಬ ಕಾದ ಕಬ್ಬಿಣ ಬಡಿಯಲು ಇದು ಸಕಾಲ' ಕುರಿತ ಆನಂದರಾಮ ಶಾಸ್ತ್ರಿ ಲೇಖನ ಓದಿದೆ. ನನ್ನ ಕೆಲವು ಅನಿಸಿಕೆಗಳನ್ನು ವಾಚಕರ ಜತೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಶಾಸ್ತ್ರೀ ಅವರ ಲೇಖನದ ಆಶಯವನ್ನು ನಾನು ಅಲ್ಲಗಳೆಯಲು ಪ್ರಯತ್ನಿಸುತ್ತಿಲ್ಲ. ಆದರೆ ಲೇಖನ ಯಾವುದೇ ನಿಖರ ಸಂದೇಶ ನೀಡುತ್ತಿಲ್ಲವಲ್ಲ ಎಂಬ ವಿಷಾದವಿದೆ.* ಭರತ್ ಶಾಸ್ತ್ರಿಸರಬ್ಜಿತ್ ಮತ್ತು ಅಫ್ಜಲ್ ಗುರು ಇಬ್ಬರ ಪ್ರಕರಣಗಳ 37641http://kannada.oneindia.com/img/2009/06/29-bharat-sastry1.jpg478630letter to the editorಮುಂಬಯಿ ಸಮುದ್ರ ಸೇತು ರಾಜೀವ್ ನೇಮ್ ಪ್ಲೇಟು!/response/2009/0701-mumbai-sea-bridge-too-named-after-rajiv.htmlಅಂತೂ ಇಂತೂ ಸುಮಾರು 10 ವರ್ಷದಿಂದ ಕುಂಟುತ್ತ ಸಾಗಿದ್ದ ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸೇತುವೆ ಜೂನ್ 30ಕ್ಕೆ ದೇಶಕ್ಕೆ ಸಮರ್ಪಣೆಗೊಂಡಿದ್ದು ತುಂಬ ಸಂತೋಷ. ನೂರಾರು ಅಡೆತಡೆ, ಸ್ಟೇ ಇತ್ಯಾದಿಗಳನ್ನು ಬದಿಗೊತ್ತಿ ಒಂದು ಸುಂದರ ಸುಸಜ್ಜಿತ ಸೇತುವೆ ನಿರ್ಮಾಣವಾಗಿದೆ. 'ಮುಂಬೈ-ಕರ್' ಗಳಿಗೆ 40 ನಿಮಿಷದ ದಾರಿಯನ್ನು 7-8 ನಿಮಿಷದಲ್ಲಿ ಪೂರೈಸುವ ಭಾಗ್ಯ ಒದಗಿ ಬಂದಿದೆ.ಆದರೆ ಯಥಾಪ್ರಕಾರ ಸೋನಿಯಾ ಗಾಂಧಿಯವರು 37707http://kannada.oneindia.com/img/2009/07/01-ajit-hegde1.jpg478630letter to the editorಕಳೆದು ಹೋದ ಮೂಲ ವಿಜ್ಞಾನ ಅಧ್ಯಯನದ ಅವಕಾಶ/response/2009/0707-mysuru-university-combined-pg-course.htmlಐದು ವರ್ಷಗಳ ಹಿಂದೆ ಮೂಲ ವಿಜ್ಞಾನದ ವಿಷಯಗಳಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೋತ್ಸಾಹ ಹಾಗೂ ಶಿಷ್ಯವೇತನದೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾದ ಭೌತವಿಜ್ಞಾನದ ಕಂಬೈಂಡ್ ಪಿ.ಜಿ. ಕೋರ್ಸ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಇದೀಗ ಹೊರಬರುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿರುವ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ, ಮ್ಯಾಕ್ಸ್‌ಪ್ಲಾಂಕ್ ಸಂಶೋಧನಾಲಯದಲ್ಲಿ, ಸಂಶೋಧನಾವಕಾಶ ಹಾಗೂ ಉನ್ನತ ಸಂಶೋಧನಾಲಯಗಳಲ್ಲಿ ಉದ್ಯೋಗಾವಕಾಶವನ್ನು ಆ ಮೊದಲ ಬ್ಯಾಚಿನ 37841http://kannada.oneindia.com/img/2009/07/07-mysore-university1.jpg209674americannadigaಕಾದೇ ಇರುವಳು ರಾಧೆ-ವಿಮರ್ಶೆ/column/nataraj/2009/0129-kadiruvalu-radhe-naga-aithal-book-review.htmlಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ 34350http://kannada.oneindia.com/img/2009/01/29-naga-aithal3.jpg209674americannadigaನಾಗಐತಾಳರ ಎರಡು ಪುಸ್ತಕ-ಮಿಮರ್ಶೆ/column/nataraj/2009/0129-naga-aithals-works-book-review-by-msn.htmlಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ' ಮತ್ತು ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಶಿವರಾಮ ಕಾರಂತರ ಊರಿನವರಾದ ನಾಗ ಐತಾಳರು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಹಿರಿಯರು. ಜೀವರಸಾಯನಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿ 34351http://kannada.oneindia.com/img/2009/01/29-nagaaithal4.jpg209674americannadigaನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg209674americannadigaಎದೆತುಂಬಿ ಹಾಡುವ ಅಮೆರಿಕನ್ನಡಿಗರ ರಿಯಾಲಿಟಿ ಶೋ/nri/article/2009/0731-american-music-talent-hunt-reality-show.htmlಬೆಂಗಳೂರು, ಜುಲೈ. 31 : ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಮುದಾಯವನ್ನು ಅಕ್ಷರಶಃ ಒಂದುಗೂಡಿಸುವ ಅನೇಕಾರು ಪ್ರಯತ್ನಗಳು ನಡೆದಿವೆ, ನಡೆಯುತ್ತಲೇಯಿವೆ. ಭಾಷೆ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಬಗೆಯ ಸಮ್ಮೇಳನಗಳ ಮೂಲಕ ಅನಿವಾಸಿ ಅಮೆರಿಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆ ಹಾಕುವ ಕಾರ್ಯಕ್ರಮಗಳು ನಾನಾ ಸ್ತರಗಳಲ್ಲಿ ಜರುಗುತ್ತಿರುತ್ತವೆ. ಈ ಪ್ರಯತ್ನದ ಹಾದಿಯಲ್ಲಿ ಇನ್ನೊಂದು ಮಜಲು, ರಿಯಾಲಿಟಿ ಶೋ.ಉತ್ತರ ಅಮೆರಿಕಾದಲ್ಲಿ 38334http://kannada.oneindia.com/img/2009/07/31-singing-bird1.jpg209674americannadigaಅಮೇರಿಕಾದ ಸ್ವಾರಸ್ಯಗಳು! (ಭಾಗ-1)/nri/article/2009/0922-american-lifestyle-and-swarasyagalu-part1.htmlಭಾರತದಿಂದ ಅಮೆರಿಕಾಕ್ಕೆ ಮೊದಲ ಬಾರಿ ಹೋದವರಿಗೆ ಅಲ್ಲಿನ ಜೀವನಶೈಲಿಗೆ ಒಗ್ಗಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಅಲ್ಲಿನವರ (ಅಮೆರಿಕದಲ್ಲಿಯೇ ನೆಲೆನಿಂತ ಭಾರತೀಯರೂ ಸೇರಿ) ಜೀವನಕ್ರಮ, ರೀತಿರಿವಾಜು ಎಲ್ಲ ವಿಭಿನ್ನ. ಹೊಂದಿಕೊಳ್ಳುವವರೆಗೆ ಒಬ್ಬೊಬ್ಬರಿಗೂ ಒಂದೊಂದು ರೀತಿ ವಿಶಿಷ್ಟ ಅನುಭವ ಆಗುತ್ತಲೇ ಇರುತ್ತದೆ. ಅಮೆರಿಕಾ ಮಾತ್ರವಲ್ಲ ಬೇರೆ ದೇಶಗಳಿಗೆ ಹೋದರೂ ವಿಭಿನ್ನ ಅನುಭವಗಳಿಗೆ, ಸ್ವಾರಸ್ಯಕರ ಘಟನೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಅಮೆರಿಕಾದಲ್ಲಿ ಘಟಿಸಿದ ಸ್ವಾರಸ್ಯಕರ 39313http://kannada.oneindia.com/img/2009/09/22-venkatesh-dodmane2.jpgnews"> ನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ? | Letter to the editor | Vallisha Shastry | Americannadiga - ನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ? - Kannada Oneindia

ನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?

Vallisha Shastry
ಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.

ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ ಇದ್ವು ಹೇಳಿ. ಹೊಟ್ಟೆಗೆ ಹಿಟ್ಟಿಲ್ಲದೆ, ಹ್ಯಾಂಗಾರು ಮಾಡಿ ಅಪ್ಪ ಅಮ್ಮ ಮಾಡಿರೋ ಸಾಲ ತೀರ್ಸೋಣಾ ಅಂತ ಬಂದ್ರೆ, ನಮ್ಗೇನ್ ಗೊತ್ತಿತ್ತು ಇದು ತಿರ್ಗ್ ವಾಪಸ್ ಬರಾಕೆ ಎಷ್ಟು ಕಷ್ಟ ಅಯ್ತೆ ಅಂತ. ಯಾರ್ಗೆ ಹೆಳ್ಕೊಳ್ಲಿ, ಯಾರ್ಗೆ ಬಿಡ್ಲಿ ಹೇಳಿ.

ಒಂದು ನಡೆದ ಸಂಗತಿ ಹೇಳ್ತೀನಿ ಕೇಳಿ, ನಮ್ಮೊಬ್ಬರು ಸ್ನೇಹಿತರು ಒಬ್ಬ ಅಲ್ಲಿನ ಡಾಕ್ಟರ್. ಸಾಲ ಸೋಲ ಮಾಡಿ ಅಮೆರಿಕೆಗೆ ಓದೋಕೇ ಅಂತ ಬಂದ್ರು. ಪಸ್ಟ್ ಕ್ಲಾಸ್‌ನಲ್ಲಿ ಪಾಸಾದರು. ಓದೋಕ್ಕೆ ಸಾಲ ಮಾಡಿದ್ದರಲ್ಲ ಅದನ್ನ ತೀರ್ಸೋಕ್ಕೋಸ್ಕರ ಇಲ್ಲೇ ಕೆಲ್ಸಕ್ಕೆ ಸೇರ್ಕೊಂಡ್ರು. ಅಮೆರಿಕದ ಟೆಕ್ಸಾಸ್‌ನಲ್ಲಿ ಒಳ್ಳೆ ಎಸರು ಮಾಡ್ಕೊಂಡ್ರು. ಅಮೆರಿಕದೋರೆಲ್ಲಾ ಅವ್ರತ್ತರ ಹೋಗ್ತಾ ಇದ್ರು. ಅವ್ರಗೆ ಕನ್ನಡ ಅಂದ್ರೆ ಪ್ರಾಣ. ಎಷ್ಟೋ ಅಮೆರಿಕದ ಹುಡುಗೀರು ಮದುವೆ ಆಗ್ಬೇಕು ಅಂದ್ರು. ಆದ್ರೆ ನಾನು ಕನ್ನಡ ಹುಡುಗೀನೇ ಮದುವೆ ಆಗೋದು ಅಂತ ಅಪ್ಪಟ ಕನ್ನಡ ಹುಡ್ಗೀನ ಮದ್ವೆ ಆದ್ರು. ಸಾಲ ಎಲ್ಲಾ ತೀರೋ ಹೊತ್ತಿಗೆ 4-5 ವರ್ಸ್ವೇ ಆಯ್ತು. ಸಾಲಾ ಎಲ್ಲಾ ತೀರ್ದ ಮೇಲೇ ಮಕ್ಕಳು ಇನ್ನು ಚಿಕ್ಕವರಾಗಿರೋವಾಗ್ಲೇ ಬೆಂಗಳೂರ್ಗೆ ಹೋಗಿ ಒಂದು ಅಲ್ಲಿನ ಕ್ಲಿನಿಕ್ ಆಕದ್ರು. ಅಮೆರಿಕೆಯಿಂದ ಡಾಕ್ಟರ್ ಬಂದವ್ರೆ ಅಂತ ಜನ ಬಂದೇ ಬತ್ತಾರೆ ಅಂತ ತಿಳ್ಕೊಂಡ್ರೆ ಏನಾಯ್ತು ಗೊತ್ತಾ? ಅಮೆರಿಕದಲ್ಲಿ ಕೆಲ್ಸ ಸಿಗ್ನಿಲ್ಲಾ ಅಂತ ಇಲ್ಲಿ ಬಂದವ್ನಂತೆ. ಇಷ್ಟು ಓದವ್ನೆ, ಅಮೆರಿಕ ಯಾಕ ಬಿಟ್ಟ ಬಂದ? ಒಳ್ಳೆ ಡಾಕ್ಟರ್ ಆಗಿದ್ರೆ ಅಮೆರಿಕೆಯಲ್ಲೇ ಇರ್ತಿದ್ದ. ಯಾಕೋ ಅನುಮಾನ ಹಿಂಗೆಲ್ಲಾ ಮಾತಾಡಿ ಅವರ್ಗೆ ಜನಾನೇ ಬರ್ನಿಲ್ಲ. ಒಂದು ವರ್ಸ ನೋಡಿ ವಾಪಸ್ ಬಂದ್ರು. ಇಲ್ಲಿ ಮತ್ತೆ ತಮ್ಮ ಎಸ್ರು ಮಾಡವ್ರೆ. ನಮಗೇನು ಕನ್ನಡ ಅಂದ್ರೆ ಪ್ರೀತಿ ಇಲ್ವಾ? ಮನ್ಯಾಗೆ ನಮ್ಮ ಸಂಸ್ಕೃತಿ ಇಟ್ಕೊಂಡಿಲ್ಲಾ ಅಂದ್ಕೊಡೀರಾ? ಮನೇಗೆ ಬನ್ನಿ ಮಕ್ಕಳು ಪೂಜೆ ಮಾಡೋದು ನೋಡಿ. ನಮ್ಮ ಮಕ್ಕಳು ಅದ್ಹೆಂಗೆ ಪಟ ಪಟ ಅಂತ ಕನ್ನಡದಾಗೆ ಮಾತಾಡ್ತಾರೆ, ಬೆಂಗ್ಳೂರ್ ಮಕ್ಕಳೇ ಕನ್ನಡ ಮಾತಾಡೋದು ಕಡಿಮೆ. ನಮ್ಮ ಮಕ್ಕಳು ಬೆಂಗಳೂರ್ಗೆ ಹೋದಾಗ ಅಲ್ಲಿನ ಮಕ್ಕಳು ಇಂಗ್ಲೀಸ್ನಾಗೇ ಮಾತಾಡ್ತಾರೆ. ನಮ್ಮ ಮಕ್ಕಳು ನೋಡೋ ಅಷ್ಟು ಕನ್ನಡ ಚಿತ್ರಗಳನ್ನ ಬೆಂಗಳೂರಲ್ಲೇ ಮಕ್ಕಳು ನೋಡ್ತಾರೋ ಇಲ್ಲವೋ ನನಗೆ ಅನುಮಾನ.

ಇನ್ನು ನಾವು ನಡೆಸೋ ಜೀವನ. ಈಗ ಬೆಂಗಳೂರ್ಗೆ ಬಂದಿರೋರಲ್ಲಿ ಬಹಳಷ್ಟು ಜನ ಅಳ್ಳಿ ಇಂದ್ಲೇ ಬಂದಿರೋದು. ನಿಮಗೆ ಅಳ್ಳಿಯೋರು ಏನ್ ಏಳ್ತಾ ಅವ್ರೆ? ನೀವು ನಮ್ಮಂತ ಅನಿವಾಸಿಗಳಿಗೆ ಏಳೋ ಆಂಗೆ ನಿಮ್ಮ ಅಳ್ಳಿಯೋರು ನಿಮಗೆ ಏಳ್ತಾ ಅವ್ರೆ. ನೀವು ಇಂಗೆ ಓದಾಕ್ಕೆ ಅಂತ ಇಲ್ಲಾ ಕೆಲ್ಸಕ್ಕೆ ಅಂತ ಪಟ್ನಕ್ಕೆ ಬಂದೋರು, ಈಗ ಅಳ್ಳಿಗೆ ವಾಪಸ್ ಯಾಕ್ ಓಗಾಕ್ಕಿಲ್ಲ. ನೀವು ಅಳ್ಳಿಗೆ ಏನ್ ಮಾಡ್ತಿದೀರಾ? ಅಂಗೆ ನಮಗೂ ಅಷ್ಟೆ. ಅಳ್ಳಿ ಇಂದ ಬೆಂಗಳೂರ್ಗೆ ಓದಾಕ್ಕೆ ಅಂತ ಬಂದ್ವು. ಇನ್ನೂ ಎಚ್ಚು ಓದಾನಾ ಅಂತ ವಿದೇಸಕ್ಕೆ ಬಂದ್ವು. ಅಮೇಲೆ ಸ್ವಲ್ಪ ಜನ ಕೆಲಸಕ್ಕೆ ಅಂತ ಬೆಂಗಳೂರ್ಗೆ ಬಂದ್ರು, ಅವ್ರ ಕೆಲ್ಸ ಮೆಚ್ಕೊಂಡು ವಿದೇಸದೋರು ಬಂದು ಕರ್ಕೊಂಡು ಬಂದ್ರು. ಅಂದ್ರೆ ಇನ್ನೊಬ್ಬನಿಗೆ ಕೆಲ್ಸ ಸಿಕ್ಕದಂಗಾಲಿಲ್ವೇ? ಅಂದ್ರೆ ಎಂತಾ ಒಳ್ಳೆ ಕೆಲ್ಸ ಮಾಡ್ದಾ? ತಾನು ಮನೆ ಊರು ಎಲ್ಲಾ ಬಿಟ್ಟು ಇನ್ನೊಬ್ಬ ಕನ್ನಡಿಗನಿಗೆ ಕೆಲ್ಸ ಸಿಗೋ ಅಂಗೆ ಮಾಡದ್ನೋ ಇಲ್ವೋ?

ಪುಣ್ಯಾತ್ಮ. ಈಗ ಬೆಂಗಳೂರ್ನಾಗೆ ಕೆಲ್ಸ ಸಿಗ್ತಾ ಇರ್ಬೋದು, ಆದ್ರೆ ಅತ್ತು ವರ್ಸದ ಕೆಳ್ಗೆ, ಒಬ್ಬ ವಿದೇಸಕ್ಕೆ ಓದ್ರೆ, ಇನ್ನೊಬ್ಬನಿಗೆ ಕೆಲ್ಸ ಸಿಗ್ತಾ ಇತ್ತಲ್ಲಾ ಅನ್ನೋದೆ ಒಂದು ದೊಡ್ಡ ಸೇವೆ. ಇನ್ನು ವಿದೇಸಕ್ಕೆ ಓಗೋದು ಎರಡು ಉದ್ದೇಸ. ಒಂದು ದುಡ್ಡು ಮಾಡಿ ಅಪ್ಪ ಅಮ್ಮ ನಮ್ಮನ್ನ ಓದ್ಸೋಕೆ ಮಾಡಿದ ಸಾಲ ಎಲ್ಲಾ ತೀರ್ಸಿ ಅಲ್ಪ ಸ್ವಲ್ಪ ದುಡ್ಡು ಮಾಡ್ಕೊಂಡು ಒಂದು ಸೂರು ಕಟ್ಕಳ್ಳೋಣ ಅಂತ. ಸಾಲ ಗೀಲ ತೀರ್ಸೋ ಹೂತ್ಗೆ ಐದಾರ್ ವರ್ಸ್ ಅಯ್ತದೆ. ಮತ್ತೆ ಮದ್ವೆ ಮಾಡ್ಕೊಂಡ್ ಅದಕ್ ಬೇರೆ ಸಾಲ. ಅದನ್ನ ತೀರ್ಸೋಕೆ ಇನ್ನೊಂದ್ ಎರ್ಡ್ ವರ್ಸ ಆಯ್ತದೆ. ಅಷ್ಟ್ ಒತ್ಗೆ ಮಕ್ಕಳಾಯ್ತವೆ. ಸರಿ ಸಂಸಾರ ತಾಪತ್ರಯಗಳು ಶುರು. ಮಕ್ಕಳು ಚಿಕ್ಕೋರಾಗಿದ್ದಾಗಲೇ ಕರ್ನಾಟಕಕ್ಕೆ ಬಂದು ನೆಲಸಬೇಕೂ ಅಂತ ಒಂಟೋರು ತುಂಬಾ ಜನಾ ಅವ್ರೆ. ಅದರಲ್ಲಿ ಅಲ್ಲಿನ ಡಾಕ್ಟರ ತರ ಪೆಟ್ಟ ತಿಂದೋರು ಅವ್ರೆ, ಓಗಿ ಒಳ್ಳೆ ಸಂಸಾರ ನಡಸ್ಕೊಂಡು ಓಯ್ತಾ ಇರೋರು ಅವ್ರೆ. ಅವರವರ ಅದೃಷ್ಟ.

ಕರ್ನಾಟಕ ಅಂದ್ರೆ ತೌರೂರು ಇದ್ದಂಗೆ. ಅಲ್ಲಿಗೆ ಬರಾಕೇ ಯಾರ್ಗಿಷ್ಟವಿಲ್ಲ ಏಳಿ. ನಮ್ಮ ಕಷ್ಟಾನೂ ಅರ್ಥ ಮಾಡ್ಕೊಳ್ಳಿ. ಅಮೆರಿಕೆಗೆ ಬಂದಿರೋ ಕನ್ನಡಿಗರು ತಮ್ಮ ಮಕ್ಕಳ ವಿದ್ಯಾಭ್ಯಾಸ ಎಲ್ಲಾ ಮುಗದಿದ್ರೆ ಕರ್ನಾಟಕಕ್ಕೆ ವಾಪಸ್ ಬರೋಕೆ ತುದಿ ಗಾಲಲ್ಲಿ ನಿಂತಿರ್ತಾರೆ. ಒಂದು ಸ್ವಲ್ಪ ಯೋಚ್ಸಿ. ಸುಮಾರು ಇಪ್ಪತ್ತು ವರ್ಸದ ಕೆಳ್ಗೆ ಊರು ಬಿಟ್ಟು, ವರ್ಸಕ್ಕೊಂದು ಸಾರಿ ಊರ್ಗೆ ಬಂದು, ಒಂದು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ನೇಯಿತರನ್ನ ಭೇಟಿ ಮಾಡಿ, ಎಷ್ಟೇ ಟಚ್ನಾಗಿ ಇರ್ಬೇಕು ಅಂತಿದ್ರೂ ಇಪ್ಪತ್ತು ವರ್ಸಕ್ಕೆ ಕೆಲವರು ಸ್ವರ್ಗ ಕಂಡಿರ್ತಾರೆ, ಕೆಲವರು ನರಳ್ತಾ ಇರ್ತಾರೆ. ಇನ್ನು ಬಂದು ಈ ವಯಸ್ನಾಗೆ ಹೊಸ ಸ್ನೇಯಿತರನ್ನ ಮತ್ತೆ ಮಾಡ್ಕೋಬೇಕು. ಯಾರ್ ಸಿಗ್ತಾರೆ ಏಳಿ. ಇನ್ನು ಸಾಲ ಗೀಲ ಎಲ್ಲ ತೀರ್ಸಿ ಅಲ್ಪ ಸ್ವಲ್ಪ ಅಣ ಮಾಡ್ಕೊಂಡು ಇನ್ನೇನು ಒರಡ್ಬೇಕು ಅಂದ್ರೆ, ಮಕ್ಕಳು ಹೈಸ್ಕೂಲ್‌ಗೆ ಓಯ್ತಾ ಇರ್ತಾರೆ. ಅವಾಗ ಮಕ್ಕಳನ್ನ ವಾಪಸ್ ಕರ್ಕೊಂಡ್ ಬಂದ್ರೆ ಎಂಗಾಯ್ತದೆ? ಇಲ್ಲಿ ಓದೋ ವಿಷಯಗಳೇ ಬೇರೆ, ಇಲ್ಲಿ ಓದೋ ವಿಷಯಗಳೇ ಬೇರೆ. ಕರ್ಕ್ಪೊಂಡು ಬರೋಕ್ ಆಯ್ತದಾ? ಅಂಗೇನಾರ ಕರ್ಕೊಂಡ್ ಬಂದ್ರೆ, ಎಂಥ ಘೋರ ಅನ್ಯಾಯ ಆಯ್ತದಲ್ವಾ? ಮಕ್ಕಳ ಜೀನನಾನೇ ಆಳ್ ಮಾಡ್ದಂಗಾಯ್ತದಲ್ವಾ? ಅದಕ್ಕೆ ಅಪ್ಪ ಅಮ್ಮ ಎಷ್ಟೇ ಕಷ್ಟ ಆದ್ರೂ ಮಕ್ಕಳ ವಿದ್ಯಾಭ್ಯಾಸ ಮುಗ್ಯೋವರ್ಗೆ ಇಲ್ಲೆ ಇರ್ತಾರೆ, ಮುಗ್ದ್ ಮೇಲೇ ಬರೋಣ ಅಂದ್ರೆ ವಯಸ್ಸಾಗಿರ್ತದೆ, ಬರೋದು ಕಷ್ಟ.

ಇನ್ನು ನಮ್ಮ ಈ ತ್ರಿಶಂಕು ವಾಸಿಗಳ್ಗೆ ಕನ್ನಡದೋರು ಯಾರಾದರೂ ಊರಿಂದ ಬತ್ತಾರೆ ಅಂದ್ರೆ, ಮಗಳ ಮನೇಗೆ ಅವಳ ಅಪ್ಪ ಅಮ್ಮ ಬಂದಾಗ ಅಯ್ತದಲ್ಲಾ ಅದೇ ಖುಷಿ ಆಯ್ತದೆ. ನಮಗೆ ಉಮ್ಮಸ್ಸೋ ಉಮ್ಮಸ್ಸು. ಒಸ ಒಸ ತರ ಅಡಿಗೆ ಮಾಡ್ತೀವಿ. ಚೆನ್ನಾಗಿ ಉಪಚಾರ ಮಾಡಿ ಕಳಸ್ತೀವಿ. ಅವ್ರು ವಾಪಸ್ ಊರ್ಗೆ ಒಂಟಾಗ ಅಳ ಬತ್ತದೆ. ಏನ್ ಮಾಡೋದು. ನಮ್ಮ ಕರ್ಮ. ಕೆಲಸಕ್ಕೋಸ್ಕರ ಬಂದ್ವಿ, ವಾಪಸ್ ಓಗೋಣ ಅಂದ್ರೆ ಕೆಸರ ಗದ್ದೇಲಿ ಕಾಲಿಟ್ಟಂಗಾಗದೆ. ಒಂದ್ ಕಾಲೆತ್ತದ್ರೆ, ಇನ್ನೊಂದು ಕಾಲು ಸಿಕ್ಕಾಕತದೆ. ನಮ್ಮ ಸಂಸ್ಕೃತಿ ಅಂದ್ರೆ ನಮಗೆ ಪ್ರಾಣ. ನಮ್ಮ ಮಕ್ಕಳಗೆ ಹ್ಯಂಗಾರ ಮಾಡಿ ಕಲಿಸ್ಬೇಕು ಅಂತ ಆತೊರಿತಿರ್ತೀವಿ. ಅದಕ್ಕೇ ಕನ್ನಡ ಕಲಿ ಸಾಲೆ ಮಾಡ್ಕೊಂಡೀದೀವಿ. ನಮ್ಮ ಸಂಸ್ಕೃತಿ ಬೆಳಸೋಕೆ ಬಾಲ ವಿಹಾರದ ತರ ಸಣ್ಣ ಸಣ್ಣ ಸಾಲೆ ಮಾಡ್ಕೊಂಡಿದೀವಿ. ಅಲ್ಲಿ ನಮ್ಮ ಹಬ್ಬ ಅರಿದಿನ ಎಲ್ಲಾ ಏಳ್ಕೊಡ್ತೀವಿ. ದೇವರು ದಿಂಡರು ಅಂತ ಎಲ್ಲಾ ಕಲಿಸ್ತೀವಿ. ಕನ್ನಡ ಸಂಘಗಳನ್ನ ಮಾಡ್ಕೊಂಡು ಎಲ್ಲಾ ಹಬ್ಬಾನೂ ಆಚರಸ್ತೀವಿ. ಬೆಂಗಳೂರ್ನೋರೆ ಅಷ್ಟು ಮಾಡಾಕ್ಕಿಲ್ಲ. ಕನ್ನಡ ನಾಟಕಗಳನ್ನ ಆಡ್ತೇವೆ. ನಮ್ಮಲ್ಲಿ ಕನ್ನಡ ಕಥೆ, ಕಾವ್ಯ, ನಾಟಕ ಬರೆಯೋ ಬರಹಗಾರರು ತುಂಬಾ ಇದಾರೆ. ಆಗಾಗ್ಗೆ ಪುಸ್ತಕಗಳನ್ನ ಪ್ರಕಟಿಸ್ತೇವೆ. ಕನ್ನಡದ ಬಗ್ಗೆ ಸಮ್ಮೇಳನ ಮಾಡ್ತೇವೆ. ನಮ್ಮ ನರ ನರಗಳಲ್ಲಿ ಕನ್ನಡ ಮಾತೆ ನುಸಳಾಡ್ತಾಳೆ. ನಮಗೊಂದು ಖುಷಿ ಏನಂದರೆ, ಇದೆಲ್ಲಾ ಮಾಡೋವಾಗ ನಮಗೆ ಯಾವುದೇ ರಾಜಕೀಯ ಪುಡಾರಿಗಳು ಬಂದು ತಲೆ ಹಾಕೋಲ್ಲಾ. ಪೋಲೀಸ್ನೋರು ಬಂದು ಲಂಚ ಕೇಳೋಲ್ಲ. ಮುನ್ಸಿಪಾಲಿಟಿ ಆಪೀಸ್ನೋರು ಬಂದು ಕಿರಕುಳ ಕೊಡೋಲ್ಲ. ಯಾವುದೇ ರೌಡಿಗಳು ಬಂದು ಹಫ್ತಾ ಕೇಳೋಲ್ಲ. ನಮ್ಮಷ್ಟಿಗೆ ನಾವು ನೆಮ್ಮದಿಯಾಗಿ ಕನ್ನಡಮ್ಮನ ಸೇವೆ ಮಾಡ್ಕೋಡು ಓಗ್ಬೋದು.

ನಮ್ಮ ಅನಿವಾಸಿ ಕನ್ನಡಿಗರು ಎಲೆ ಮರೆಯಾಗಿ ಮಾಡುವ ಕನ್ನಡ ಸೇವೆ ನೋಡ್ಬಿಟ್ಟರೆ ಬೆರ್ಗಾಗ್ಬಿಡ್ತೀರ. ಎಷ್ಟೂ ಜನ ತಮ್ಮ ತಮ್ಮ ಅಳ್ಳೀನ ದತ್ತು ತಗೊಂಡವ್ರೆ. ಅಲ್ಲಿ ಸ್ಕೂಲ್ ನಡಸ್ತ ಅವ್ರೆ. ನಮ್ಮಲ್ಲಿ ಅರಿಜೋನಾದಾಗೆ ಒಬ್ರು ಮೂಳೆ ಡಾಕ್ಟರ್ ಅವ್ರೆ, ಅವ್ರು ಪ್ರತಿ ವರ್ಷ ಒಂದು ತಿಂಗಳು ಕರ್ನಾಟಕಕ್ಕೆ ಹೋಗಿ ಜೊತೇಲಿ ಅಮೆರಿಕ ಆಸ್ಪತ್ರೆ ನರ್ಸ್‌ಗಳನ್ನ ಕರ್ಕೊಂಡು ಮೂಳೆ ಮುರ್ಕೊಂಡು ಒದ್ದಾಡ್ತೀರೋ ಬಡ ರೋಗಿಗಳಿಗೆ ತಮ್ಮ ಖರ್ಚಲ್ಲಿ ಚಿಕಿತ್ಸೆ ಮಾಡಿ ಬರ್ತಾರೆ. ಲಾಸ್ ಏಂಜಲಿಸ್‌ನಲ್ಲಿ ಒಬ್ಬ ಹೃದಯದ ಡಾಕ್ಟರ್ ಅವ್ರೆ. ಅವ್ರು ಪ್ರತಿ ವರ್ಷ ಓದಾಗೆಲ್ಲಾ ಬಡವರಿಗೆ ಬಿಟ್ಟಿ ಹೃದಯ ಚಿಕಿತ್ಸೆ ಮಾಡಿ ಬರ್ತಾರೆ. ಇನ್ನೊಬ್ಬ ಅಲ್ಲಿನ ಡಾಕ್ಟ್ರು ಊರ್ಗೆ ಓದಾಗೆಲ್ಲಾ, ಊರಿನ ಜನಕ್ಕೆಲ್ಲಾ ಬಿಟ್ಟೀ ಅಲ್ಲಿನ ಚಿಕಿತ್ಸೆ ಮಾಡಿ ಬರ್ತಾರೆ. ಇಂಗೆ ಎಷ್ಟೋ ಜನ ಅವ್ರೆ. ಅದ್ನೆಲ್ಲಾ ಎಲ್ಲರ ಅತ್ರ ಏಳ್ಕೋಳ್ಳಾಕಿಲ್ಲ. ದಾನ ಕೊಟ್ಟರೆ ಬಲಗೈಯಲ್ಲಿ ಕೊಟ್ರೆ, ಎಡ ಗೈಗೆ ಗೊತ್ತಾಗ್ಬಾರ್ದಂತೆ. ಅಂಗೆ ನಮ್ಮ ಅನಿವಾಸಿ ಕನ್ನಡಿಗರು.

ಹೊರ ದೇಶದ ಕನ್ನಡಿಗರಿಂದ ನಿಮ್ಮ ಸರ್ಕಾರ್ಕೆ ಎಷ್ಟು ಉಪಯೋಗ ಆಯ್ತಾ ಇದೆ ಅಂತ ಗೊತ್ತಾ ನಿಮಗೆ. ನಾವು ಊರಿಗೆ ಕಳಸೋ ಒಂದೊಂದು ಡಾಲರ್‌ನಿಂದಲೇ ಸರ್ಕಾರ ನಿಮಗೆಲ್ಲಾ ಕಾರು ಓಡ್ಸೋಕೆ ಪೆಟ್ರೋಲ್ ಆಮದು ಮಾಡ್ಕೋಳ್ಳೋಕೆ ಸಾಧ್ಯ. ಈಗ ಸರ್ಕಾರದ ಅತ್ರ ವಿದೇಸಿ ಅಣ ಅಯ್ತೆ. ಒಂದ್ ಕಾಲ್ದಾಗೆ, ನಮಗೆಲ್ಲಾ ಸರ್ಕಾರ ಬೇಡ್ಕೋತಿತ್ತು, ದಯವಿಟ್ಟು ನಿಮ್ಮ ಡಾಲರ್‌ನ ನಮ್ಮ ಬ್ಯಾಂಕ್‌ನಾಗಿ ಇಡಿ. ಅದರಿಂದ ಸರ್ಕಾರಕ್ ಉಪಯೋಗ ಆಗ್ತದೆ ಅಂತ. ಆಗ ನಮ್ಮ ಅನಿವಾಸಿಗಳು ಇಟ್ಟು ದುಡ್ಡಿಂದಲೇ ನಿಮಗೆಲ್ಲಾ ಕಾರು ಸ್ಕೂಟ್ರು ಓಡ್ಸೋಕೆ ಪೆಟ್ರೋಲ್ ತರೋ ಹಂಗಾಯ್ತು.

ಇಷ್ಟೆಲ್ಲ ಕಷ್ಟ ಪಟ್ಟು, ಕನ್ನಡ ಸೇವೆ ಮಾಡ್ತಿರೋ ಅನಿವಾಸಿ ಕನ್ನಡಿಗರಿಗೆ ಒಂದ್ ಚೂರ್ ಎಲ್ಲೋ ಸರ್ಕಾರ್ದೋರು ಇಷ್ಟು ವರ್ಸ ಆದಮೇಲೆ ಕಣ್ ಬಿಡ್ತಾ ಅವ್ರೆ, ಅದಕ್ಕೂ ಕಲ್ಲ ಹಾಕಾಕ್ಕೊಂಟೀದಿರಲ್ಲಾ? ಏನ್ ಏಳ್ಬೇಕು ನಿಮ್ಗೆ. ನಮಗೆ ನಿಮ್ಮ ಸೈಟ್ ಏನು ಬಿಟ್ಟಿ ಬೇಡ. ಕಮ್ಮಿಗೂ ಕೊಡಬೇಡಿ. ಸ್ವಲ್ಪ ಜಾಸ್ತೀನೇ ಇಸ್ಕೊಳ್ಳಿ ಪರ್ವಾಗಿಲ್ಲ. ಸೈಟ್ ಕೊಡಿ. ನಾವು ಇಲ್ಲಿ ಕೂತ್ಕೊಂಡು ಸೈಟ್‌ಗೇ ಅಂತ ಎಷ್ಟು ಜನ ಬರೇ ಫೋಟೋದಲ್ಲಿ ನೋಡಿ ದುಡ್ಡು ಕೊಟ್ಟು ಕಳ್ಕೊಂಡವ್ರೆ. ಅಂಗಿರೋವಾಗ ಸರ್ಕಾರ ಮುಂದೆ ಬಂದು ಏನೋ ಸಹಾಯ ಮಾಡ್ತೀವಿ ಅಂದ್ರೆ ದಯವಿಟ್ಟು ಕಲ್ಲ ಆಕ್ಬೇಡಿ. ನಾವು ಎಲ್ಲರೂ ಸುಖದ ಸುಪ್ಪತ್ತಿಗೇಲಿ ಮೆರೀತಿಲ್ಲ. ನಾವು ಕಾರ್ಯನಿಮಿತ್ತ ಮಾತೃಭೂಮಿಯನ್ನೇ ಬಿಟ್ಟುಬಂದು ಮತ್ತೆ ಮಾತೃಭೂಮಿ ತಾಯಿಯ ಮಡಿಲಲ್ಲಿರಲು ಬಯಸುವ ಕನ್ನಡದ ಮಕ್ಕಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+