382476nri kannadigasಬೇ ಏರಿಯಾದಲ್ಲಿ ಮಾ.15ರಂದು ಕರ್ಣಾಟಕ ದಿನ/nri/engagements/2009/0314-karnataka-day-india-community-center-bay-area.htmlಮಿಲ್ಪೀಟಸ್‌ನಲ್ಲಿ ಇರುವ ಇಂಡಿಯಾ ಕಮ್ಮ್ಯೂನಿಟಿ ಸೆಂಟರಿನಲ್ಲಿ (ಐ.ಸಿ.ಸಿ) ಮಾರ್ಚ್ ತಿಂಗಳು "ಕರ್ಣಾಟಕದ ಮಾಸ"ವಾಗಿಯೂ, ಮಾರ್ಚ್ 15 "ಕರ್ಣಾಟಕದ ದಿನ"ವಾಗಿಯೂ ಆಚರಿಸಲ್ಪಡುತ್ತಿದೆ.ಕನ್ನಡ ನಾಡಿನ ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಪರಂಪರೆಯ ಇಣುಕುನೋಟದ ಜೊತೆ ವಿಶೇಷ ತಿನಿಸುಗಳ ರಸದೂಟವನ್ನು ಒಳಗೊಂಡಿರುವ ಮೋಜಿನ ಹಬ್ಬವನ್ನು ಮಾರ್ಚ್ ಹದಿನೈದರಂದು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟವು ಅಲ್ಲಿ ಆಯೋಜಿಸಿದೆ. ಅಂದು ವಿವಿಧ ಮನರಂಜನಾ ಕಾರ್ಯಕ್ರಮಗಳ ಜೊತೆ, 35225http://kannada.oneindia.com/img/2009/03/14-kknc-logo3.jpg382476nri kannadigasಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ/nri/engagements/2009/0321-kannada-kali-day-celebration.htmlದಕ್ಷಿಣ ಕ್ಯಾಲಿಫೋರ್ನಿಯಾದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. 'ಕನ್ನಡ ಕಲಿ' ದಿನಾಚರಣೆ ಮಾರ್ಚ್ 22ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ.ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ 35402http://kannada.oneindia.com/img/2009/03/21-kannada-kali1.jpg382476nri kannadigasಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ/response/2009/0626-nri-cell-investment-karnataka-kuntikanamata.htmlಅನಿವಾಸಿ ಕನ್ನಡಿಗರ ಕುರಿತಾಗಿ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ, ಅದಕ್ಕೆ ಬಂದಂತಹ ಪ್ರತಿಕ್ರಿಯೆ ನೋಡಿ ನಾನು ಎಲ್ಲ ಅನಿವಾಸಿ ಕನ್ನಡಿಗನ ನೋವು ನಲಿವಿನ ಕಥೆಯನ್ನು ಬರೆಯಬೇಕೆಂದು ಆಲೋಚಿಸಿದೆ. ಆ ಪ್ರಯುಕ್ತ ಎಲ್ಲ ಅನಿವಾಸಿ ಕನ್ನಡಿಗರು ಇದನ್ನು ಸಮರ್ಥಿಸಿಕೊಳ್ಳುತ್ತಾನೆಂದು ನಂಬಿಕೆ. ಎಲ್ಲ ಕನ್ನಡಿಗರು ನಮ್ಮ ಬಂಧು ಮಿತ್ರರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು.ಪ್ರಪಂಚದ ಮೂಲೆ ಮೂಲೆಯಲ್ಲಿ ವಿಜ್ಞಾನಿಯಾಗಿ, ವೈದ್ಯನಾಗಿ, 37601http://kannada.oneindia.com/img/2009/06/26-kumar-kuntikanamata1.jpg382476nri kannadigasನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg382480ಎನ್ಆರ್ಐ ಕನ್ನಡಿಗರುಬೇ ಏರಿಯಾದಲ್ಲಿ ಮಾ.15ರಂದು ಕರ್ಣಾಟಕ ದಿನ/nri/engagements/2009/0314-karnataka-day-india-community-center-bay-area.htmlಮಿಲ್ಪೀಟಸ್‌ನಲ್ಲಿ ಇರುವ ಇಂಡಿಯಾ ಕಮ್ಮ್ಯೂನಿಟಿ ಸೆಂಟರಿನಲ್ಲಿ (ಐ.ಸಿ.ಸಿ) ಮಾರ್ಚ್ ತಿಂಗಳು "ಕರ್ಣಾಟಕದ ಮಾಸ"ವಾಗಿಯೂ, ಮಾರ್ಚ್ 15 "ಕರ್ಣಾಟಕದ ದಿನ"ವಾಗಿಯೂ ಆಚರಿಸಲ್ಪಡುತ್ತಿದೆ.ಕನ್ನಡ ನಾಡಿನ ವೈವಿಧ್ಯಮಯ ಸಂಸ್ಕೃತಿ, ಶ್ರೀಮಂತ ಪರಂಪರೆಯ ಇಣುಕುನೋಟದ ಜೊತೆ ವಿಶೇಷ ತಿನಿಸುಗಳ ರಸದೂಟವನ್ನು ಒಳಗೊಂಡಿರುವ ಮೋಜಿನ ಹಬ್ಬವನ್ನು ಮಾರ್ಚ್ ಹದಿನೈದರಂದು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟವು ಅಲ್ಲಿ ಆಯೋಜಿಸಿದೆ. ಅಂದು ವಿವಿಧ ಮನರಂಜನಾ ಕಾರ್ಯಕ್ರಮಗಳ ಜೊತೆ, 35225http://kannada.oneindia.com/img/2009/03/14-kknc-logo3.jpg382480ಎನ್ಆರ್ಐ ಕನ್ನಡಿಗರು‘ಕಾವೇರಿ’ಗೆ ಬಂದ ಋತುರಾಜ ವಸಂತ!/nri/article/2009/0410-kaveri-washington-dc-ugadi.htmlಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!* ಶ್ರೀವತ್ಸ ಜೋಶಿ; ವರ್ಜೀನಿಯಾ ವಸಂತ ಸುಮ್ಮನೆ ಬರೋದಿಲ್ಲ, ಬಂದಮೇಲೆ ಸುಮ್ಮನೆ ಇರುವುದು ಅವನ ಜಾಯಮಾನವಲ್ಲ. 35875http://kannada.oneindia.com/img/2009/04/10-kaveri-ugadi1.jpg382480ಎನ್ಆರ್ಐ ಕನ್ನಡಿಗರುಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ/response/2009/0626-nri-cell-investment-karnataka-kuntikanamata.htmlಅನಿವಾಸಿ ಕನ್ನಡಿಗರ ಕುರಿತಾಗಿ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ, ಅದಕ್ಕೆ ಬಂದಂತಹ ಪ್ರತಿಕ್ರಿಯೆ ನೋಡಿ ನಾನು ಎಲ್ಲ ಅನಿವಾಸಿ ಕನ್ನಡಿಗನ ನೋವು ನಲಿವಿನ ಕಥೆಯನ್ನು ಬರೆಯಬೇಕೆಂದು ಆಲೋಚಿಸಿದೆ. ಆ ಪ್ರಯುಕ್ತ ಎಲ್ಲ ಅನಿವಾಸಿ ಕನ್ನಡಿಗರು ಇದನ್ನು ಸಮರ್ಥಿಸಿಕೊಳ್ಳುತ್ತಾನೆಂದು ನಂಬಿಕೆ. ಎಲ್ಲ ಕನ್ನಡಿಗರು ನಮ್ಮ ಬಂಧು ಮಿತ್ರರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು.ಪ್ರಪಂಚದ ಮೂಲೆ ಮೂಲೆಯಲ್ಲಿ ವಿಜ್ಞಾನಿಯಾಗಿ, ವೈದ್ಯನಾಗಿ, 37601http://kannada.oneindia.com/img/2009/06/26-kumar-kuntikanamata1.jpg382480ಎನ್ಆರ್ಐ ಕನ್ನಡಿಗರುನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg382480ಎನ್ಆರ್ಐ ಕನ್ನಡಿಗರುಮೂಕ ವೇದನೆ/nri/short-story/2009/0830-mooka-vedane-by-dg-sampath.htmlಅ೦ದು ತು೦ಗೆ ಬಹಳ ಹೊತ್ತು ಕೂಗಿಕೊಳ್ಳರಾ೦ಭಿಸಿದಳು. ಆಗಿನ್ನೂ ರಾತ್ರಿ ಸುಮಾರು ಎರಡು ಗ೦ಟೆಯ ಸಮಯವಿರಬಹುದು. ಮನೆಯೊಡತಿ ಗಿರಿಜವ್ವ ಅದೇನೆ೦ದು ನೋಡಲು ಸಣ್ಣದಾಗಿದ್ದ ಲಾ೦ದ್ರದ ಬೆಳಕನ್ನು ದೊಡ್ಡದುಮಾಡಿ ತನ್ನ ಮಲಗುವ ಕೋಣೆಯಿ೦ದ ಹೊರಬ೦ದು, ಕೆಲಸದ ಆಳು ರ೦ಗನನ್ನು ಕೂಗಿ ಕರೆದೆಬ್ಬಿಸಿ, ಕೊಟ್ಟಿಗೆಯಕಡೆ ನಡೆದಳು. ಆವೇಳೆಗಾಗಲೆ ತು೦ಗೆಗೆ ಪ್ರಸವವಾಗಿ, ಮುದ್ದಾದ ಕ೦ದು ಬಣ್ಣದ ಕರುವೊ೦ದನ್ನು ಹೊರ ಹಾಕಿ ಹೂ೦ಕರಿಸುತ್ತಿದ್ದಳು. ಕರುವನ್ನು 38910http://kannada.oneindia.com/img/2009/08/30-cow-slaughter1.jpgnews"> ಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ | NRI cell | Investment in Karnataka | Ganesh Karnik | Kuntikanamata - ಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ - Kannada Oneindia

ಅನಿವಾಸಿ ಕನ್ನಡಿಗ ಪರದೇಸಿಯಾಗಿದ್ದೇ ಕನ್ನಡಕ್ಕಾಗಿ

Kumar Kuntikanamata, UK
ಅನಿವಾಸಿ ಕನ್ನಡಿಗರ ಕುರಿತಾಗಿ ದಟ್ಸ್ ಕನ್ನಡದಲ್ಲಿ ಪ್ರಕಟವಾದ ಲೇಖನ, ಅದಕ್ಕೆ ಬಂದಂತಹ ಪ್ರತಿಕ್ರಿಯೆ ನೋಡಿ ನಾನು ಎಲ್ಲ ಅನಿವಾಸಿ ಕನ್ನಡಿಗನ ನೋವು ನಲಿವಿನ ಕಥೆಯನ್ನು ಬರೆಯಬೇಕೆಂದು ಆಲೋಚಿಸಿದೆ. ಆ ಪ್ರಯುಕ್ತ ಎಲ್ಲ ಅನಿವಾಸಿ ಕನ್ನಡಿಗರು ಇದನ್ನು ಸಮರ್ಥಿಸಿಕೊಳ್ಳುತ್ತಾನೆಂದು ನಂಬಿಕೆ. ಎಲ್ಲ ಕನ್ನಡಿಗರು ನಮ್ಮ ಬಂಧು ಮಿತ್ರರು, ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು.

ಪ್ರಪಂಚದ ಮೂಲೆ ಮೂಲೆಯಲ್ಲಿ ವಿಜ್ಞಾನಿಯಾಗಿ, ವೈದ್ಯನಾಗಿ, ತಂತ್ರಜ್ಞನಾಗಿ, ಡ್ರೈವರ್ ನಾಗಿ, ದಾದಿಯಾಗಿ, ವ್ಯಾಪಾರಿಯಾಗಿ, ಮಾಸ್ತರನಾಗಿ ಮತ್ತು ಇನ್ನು ಹಲವಾರು ಕ್ಷೇತ್ರಗಳಲ್ಲಿ ಅನಿವಾಸಿ ಕನ್ನಡಿಗ ದುಡಿಯುತ್ತಿದ್ದಾನೆ, ಸಾಧನೆ ಮಾಡುತ್ತಿದ್ದಾನೆ. ಅಂಕಿ ಅಂಶಗಳ ಪ್ರಕಾರ ನೋಡಿದರೆ ಸುಮಾರು ಒಂದು ಲಕ್ಷ ಅನಿವಾಸಿ ಕನ್ನಡಿಗರಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳಲ್ಲಿ ಒಂದು ಲಕ್ಷ ಕನ್ನಡಿಗರು, ರೂಪಾಯಿ ಒಂದು ಲಕ್ಷದಂತೆ ತಮ್ಮ ಕುಟುಂಬಕ್ಕಾಗಿ ಕಳುಹಿಸಿದ ಹಣವನ್ನೇ ಲೆಕ್ಕ ಹಾಕಿ ಅದುವೆ ಹಲವಾರು ಸಹಸ್ರ ಕೋಟಿ. ಇನ್ನು ವ್ಯಾಪಾರಕ್ಕಾಗಿ, ಜಮೀನಿಗಾಗಿ, ಬ್ಯಾಂಕ್ ಠೇವಣಿಯಾಗಿ ಬಂಡವಾಳ ಹೂಡಿದ್ದಾನೆ, ಹೂಡುತ್ತಲಿದ್ದಾನೆ.

ಪ್ರಪಂಚದಾದ್ಯಂತ ಕರ್ನಾಟಕವನ್ನು ಪರಿಚಯಿಸಿದ್ದಾನೆ. ಯಕ್ಷಗಾನದ ವೇಷ ಹಾಕಿ ಕುಣಿದಿದ್ದಾನೆ, ಕನ್ನಡದ ರಂಗ ಕಲಾವಿದರನ್ನು ಕರೆಸಿ ನಾಟಕವನ್ನು ಮಾಡಿಸಿದ್ದಾನೆ, ಕರ್ನಾಟಕದ ಕವಿಗಳನ್ನು ಕರೆಸಿ ಸನ್ಮಾನಿಸಿದ್ದಾನೆ, ಸಂಗೀತ ಕಲಾವಿದರನ್ನು ಕರೆಸಿ ಕಾರ್ಯಕ್ರಮವನ್ನು ಮಾಡಿಸಿದ್ದಾನೆ, ಆಯುರ್ವೇದ ಯೋಗವನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾನೆ, ಕನ್ನಡ ಸಿನೆಮಾವನ್ನು ಸಾಗರೋತ್ತರಕ್ಕೆ ತಂದು ಬಿಡುಗಡೆ ಮಾಡಿದ್ದಾನೆ, ಹಲವಾರು ಕನ್ನಡಪರ ಸಂಘ ಸಂಸ್ಥೆಗಳನ್ನು ಕಟ್ಟಿದ್ದಾನೆ, ಕರ್ನಾಟಕದ ಹಲವಾರು ಗ್ರಾಮಗಳಲ್ಲಿ ದೇವಸ್ಥಾನಗಳಿಗೆ, ಶಾಲೆಗಳಿಗೆ ದಾನ ಮಾಡಿದ್ದಾನೆ, ಪೀಠೋಪಕರಣಗಳನ್ನು ಖರೀದಿಸಿ ಶಾಲೆಗಳಿಗೆ ವಿತರಿಸಿದ್ದಾನೆ, ವಿದ್ಯಾರ್ಥಿಗಳಿಗೆ ದತ್ತಿಯಾಗಿ ಹಣವನ್ನು ಕೊಟ್ಟಿದ್ದಾನೆ, ಕರ್ನಾಟಕದ ರೈತನಿಗೆ ಸಹಾಯಕನಾಗಿ ನಿಂತಿದ್ದಾನೆ. ರೈತ ಕುಟುಂಬದವರಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದ್ದಾನೆ.

ನೀವು ಬೇಕಾದರೆ ಕನ್ನಡದ ವರನಟ ರಾಜ್ ಕುಮಾರ್ ಕುಟುಂಬವನ್ನೇ ಕೇಳಿ, ಕನ್ನಡದ ಹೆಮ್ಮೆಯ ವಿಷ್ಣು ಅವರನ್ನೇ ವಿಚಾರಿಸಿ, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಗಿರೀಶ್ ಕಾರ್ನಾಡ್, ಯುಆರ್ ಅನಂತಮೂರ್ತಿಯವರನ್ನು ಕೇಳಿ, ಖ್ಯಾತ ಸಾಹಿತಿಗಳಾದ ದೊಡ್ಡರಂಗೇ ಗೌಡ, ಅರಾ ಮಿತ್ರ , ಚಂದ್ರ ಶೇಖರ ಕಂಬಾರ, ಮತ್ತೂರು ಕೃಷ್ಣ ಮೂರ್ತಿ, ಕರ್ನಾಟಕ ಸಂಗೀತ ಕ್ಷೇತ್ರದ ದಿಗ್ಗಜರಾದ ವಿದ್ಯಾ ಭೂಷಣ, ಸಂಗೀತ ಕಟ್ಟಿ, ವೇಣು ವಾದಕರಾದ ಬಿಕೆ ಅನಂತರಾಮ್, ಪ್ರವೀಣ್ ಗೋಡ್ಕಿಂಡಿ, ಸಂಗೀತ ನಿರ್ದೇಶಕ ರಘು ದೀಕ್ಷಿತ, ಅಶ್ವಥ್, ಗುರುಕಿರಣ್, ಮದನ್ ಪಟೇಲ್, ಸಿನಿಮಾ ನಿರ್ದೇಶಕರಾದ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ಧರ್ಮದರ್ಶಿಗಳಾದ ಶ್ರೀ ವೀರೇಂದ್ರ ಹೆಗ್ಡೆ, ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಶ್ರೀ ರವಿಶಂಕರ್ ಗುರೂಜಿ, ಶ್ರೀ ಶ್ರೀ ಕೇಶವಾನಂದ ಭಾರತಿ, ಶ್ರೀ ಶ್ರೀ ನಾರಾಯಣ ಸ್ವಾಮೀಜಿ, ಶ್ರೀ ಶ್ರೀ ಪುತ್ತಿಗೆ ಸ್ವಾಮೀಜಿ, ಪತ್ರಕರ್ತರಾದ ವಿಶ್ವೇಶ್ವರ ಭಟ್ ಮೊದಲಾದ ಗಣ್ಯರನ್ನು ಕೇಳಿ ಅನಿವಾಸಿ ಕನ್ನಡಿಗ ಏನು ಮಾಡಿದ್ದಾನೆ, ಏನು ಮಾಡುತ್ತಿದ್ದಾನೆ ಎಂದು. ಇಷ್ಟೇ ಅಲ್ಲದೆ ಸಾವಿರಾರು ಕಲಾವಿದರು, ಸಾಹಿತಿಗಳು, ಕನ್ನಡಿಗರನ್ನು ಕೇಳಿ.

ನಿಜ ಹೇಳಬೇಕೆಂದರೆ ಅನಿವಾಸಿ ಕನ್ನಡಿಗ ತಾಯ್ನಾಡನ್ನು ಬಿಡುವಾಗ ಏನು ಇಲ್ಲದೆ ಸತ್ತ ದೇಹದಂತೆ. ಹೊರದೇಶದಲ್ಲಿ ಹೋಗಿ ಉದ್ಯೋಗ ಹುಡುಕಿ, ಸಂಪಾದನೆ ಮಾಡಿ ಪುನಃ ಬಾಲ್ಯದಿಂದ ಜೀವನ ಶುರು ಮಾಡಿದಂತೆ. ಯಾರಿಗೂ ಸುಖದ ಸುಪ್ಪತಿಗೆ ಇರುವುದಿಲ್ಲ. ಮಳೆ ಚಳಿಗೆ ಸಿಕ್ಕಿ ಅಪಮಾನಕ್ಕೆ ತುತ್ತಾಗಿ ಬೆಂದು ನೊಂದು ತನ್ನ ಕುಟುಂಬದ ಎಲ್ಲರನ್ನು ಬಿಟ್ಟು ಬಂದು ಯಾತನೆಯಲ್ಲಿರುತ್ತಾನೆ. ಒಂದಂತು ಸತ್ಯ ಅನಿವಾಸಿ ಕನ್ನಡಿಗ ಎಲ್ಲೇ ಹೋದರೂ ಸ್ವಾಭಿಮಾನಿಯಾಗಿ ತನ್ನೆಲ್ಲ ನೋವುಗಳನ್ನು ಕುಟುಂಬಕ್ಕೂ ಹೇಳದೇ ತಾನೇ ಅನುಭವಿಸಿ ಸಂಪಾದಿಸಿದ ಹಣವನ್ನು ಎಷ್ಟೇ ಸಮಸ್ಯೆ ಇದ್ದರೂ, ಸಾಲಸೋಲ ಮಾಡಿಯಾದರೂ ಕುಟುಂಬಕ್ಕೆ ಕಳುಹಿಸುತ್ತಾನೆ. ಯಾರೋ ಹೇಳಿದಂತೆ ಹೊರದೇಶದಲ್ಲಿ ಯಾವುದೇ ಚಿನ್ನದ, ವಜ್ರದ ಮರವಿಲ್ಲ.

ಇಂದು ಅನಿವಾಸಿ ಕನ್ನಡಿಗ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ. ಕೆಲಸ ಕಳೆದುಕೊಂಡು ಪರಿತಪಿಸುತ್ತಿದ್ದಾನೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಣಗುತ್ತಿದ್ದಾನೆ. ವಿಪರ್ಯಾಸ ನೋಡಿ, ದೇಶಕ್ಕೆ ವಾಪಸ್ ಬಂದರೆ ಅನಿವಾಸಿ ಕನ್ನಡಿಗ ಬಹುದೊಡ್ಡ ಶ್ರಿಮಂತನೆಂದು ಆತನನ್ನು ಸುಲಿಯಲು ಪ್ರಯತ್ನಿಸುತ್ತಾರೆ.

ನನ್ನ ಒಬ್ಬ ವೈದ್ಯ ಮಿತ್ರರು ಒಮ್ಮೆ ನನ್ನಲ್ಲಿ ಹೇಳಿದ ವಿಚಾರ ನೋಡಿ. "ನಾನು ಇಷ್ಟು ದೊಡ್ಡ ವೈದ್ಯನಾದರೂ ನನ್ನ ತಾಯಿಯ ಸೇವೆಗಾಗಿ ಊರಿಗೆ ಹೋಗಲಿಕ್ಕಾಗಲಿಲ್ಲ. ಆಕೆ ಕೊನೆಯುಸಿರು ಎಳೆಯುವಾಗ ನಾನು ಇಲ್ಲೇ ಇರಬೇಕಾಗಿ ಬಂತು. ಕಾರಣ ವೀಸಾ ಸ್ಟಾಂಪ್ ಗೆ ಬ್ರಿಟಿಷ್ ಹೋಂ ಆಫೀಸ್ಗೆ ಪಾಸ್ಪೋರ್ಟ್ ಕಳುಹಿಸಿದ್ದು, ವೀಕೆಂಡಿನಲ್ಲಿಯಾದ ಕಾರಣ ಅದನ್ನು ಹೇಗಾದರೂ ಮಾಡಿ ಪಡೆಯಲಾಗಲಿಲ್ಲ ಎಂದು ಕಣ್ಣಿನ ಅಂಚಿನಲ್ಲಿದ್ದ ನೀರನ್ನು ಒರೆಸಿಕೊಂಡಿರು." ಬಡತನದಲ್ಲಿದ್ದಾಗ ತಾಯಿ ಕೂಲಿ ಮಾಡಿ ಓದಿಸಿದ್ದು, ಸಣ್ಣವನಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದು ಎಲ್ಲ ನೆನಪಿಸಿಕೊಂಡರು.

ಇದು ಪ್ರತಿಯೊಬ್ಬ ಅನಿವಾಸಿ ಕನ್ನಡಿಗನಿಗೂ ಇರುವಂತಹ ನೋವು. ಕೆಲವೊಮ್ಮೆ ಹಲವಾರು ಜನ ಹೇಳುವುದಿದೆ. ಕೊನೆಗಳಿಗೆಯಲ್ಲಿ ಅಪ್ಪ ಅಮ್ಮನನ್ನು ನೋಡದ ಅನಿವಾಸಿಗ ಎಂದು. ಆದರೆ ಅಲ್ಲಿ ನಡೆದಿರುವ ವಿಚಾರವೇ ಬೇರೆ. ಕೆಲಸವಿಲ್ಲದೆ, ಊರಿನಲ್ಲಿರುವ ಕುಟುಂಬಕ್ಕೆ ಹಣ ಕಳುಹಿಸಲಾಗದೆ, ಸಾಲದಲ್ಲಿ ಸಿಲುಕಿ, ಅನಾರೋಗ್ಯಕ್ಕೆ ತುತ್ತಾಗಿ.. ಹೀಗೆಲ್ಲ ನೂರೆಂಟು ಬವಣೆಗಳು. ಪ್ರತಿಯೊಬ್ಬ ಅನಿವಾಸಿ ಕನ್ನಡಿಗ ಮೊದಲು ತಾನು ಕನ್ನಡಿಗ ಎಂದು ತಿಳಿದಿರುತ್ತಾನೆ. ಕನ್ನಡಮ್ಮನ ಏಳಿಗೆಗಾಗಿ ತನ್ನ ತಾನು ಮನ ಧನವನ್ನು ವಿನಿಯೋಗಿಸಲು ಇಚ್ಛಿಸುತ್ತಾನೆ. ಇಂದು ಪ್ರಪಂಚದಲ್ಲಿ ನಮ್ಮ ದೇಶದ ಅರ್ಥಿಕ ಪ್ರಗತಿಗಾಗಿ ಅನಿವಾಸಿ ಕನ್ನಡಿಗನನ್ನು ಬಳಸಿಕೊಳ್ಳುವುದು ಪ್ರಸ್ತುತ. ಗುಜರಾತ್, ಕೇರಳ, ಪಂಜಾಬ್ ಮುಂದುವರಿದಿರುವುದು ಅನಿವಾಸಿಗಳಿಂದ. ನಾವು ಕೂಡ ಇದೆ ಮಾದರಿಯನ್ನು ಏಕೆ ಬಳಸಬಾರದು?

ನಮ್ಮ ಸಂಸ್ಕೃತಿಯನ್ನು ಬೆಳೆಸೋಣ. ನಮ್ಮ ಭಾಷೆಗೆ ವಿಶ್ವ ಮಾನ್ಯತೆ ಕೊಡಿಸೋಣ. ನಮ್ಮ ರೈತರು ಬೆಳೆದ ಬೆಳೆಗೆ ನಾವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುವ ಹಾಗೆ ಮಾರೋಣ. ನಮ್ಮ ರಾಜ್ಯದ ವ್ಯಾಪಾರ, ವಹಿವಾಟನ್ನು ಅನಿವಾಸಿ ಕನ್ನಡಿಗನೊಂದಿಗೆ ವೃದ್ಧಿಸೋಣ. ಅನಿವಾಸಿ ಕನ್ನಡಿಗನನ್ನು ನೀವು ಬೈದರೂ ಆತ ನಿಮಗಾಗಿ ಕೆಲಸ ಮಾಡುತ್ತಾನೆ. ಆತ ಪರದೇಸಿಯಾದದ್ದು ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ, ಕನ್ನಡದ ಮಣ್ಣಿಗಾಗಿ, ಕನ್ನಡದ ಏಳ್ಗೆಗಾಗಿ, ಕನ್ನಡ ಬಾಂಧವರಿಗಾಗಿ, ಕರ್ನಾಟಕದ ಅರ್ಥಿಕತೆಗಾಗಿ. ಕನ್ನಡದ ರೈತನಿಗಾಗಿ. ಆತನನ್ನು ನೋಯಿಸದೆ ಆತನನ್ನು ನಿಮ್ಮವನೆಂದು ತಿಳಿದಲ್ಲಿ ಖಂಡಿತ ಇಬ್ಬರಿಗೂ ಶ್ರೇಯಸ್ಸು.

ಇಂತಹ ಒಂದು ವಾತಾವರಣದಲ್ಲಿ ಕರ್ನಾಟಕ ಸರ್ಕಾರ ಕೊನೆಗೂ ಅನಿವಾಸಿ ಕನ್ನಡಿಗರಿಗಾಗಿ ಒಂದು ವೇದಿಕೆ ನಿರ್ಮಾಣ ಮಾಡಿದ್ದು ಸ್ವಾಗತಾರ್ಹ. ಇದರಲ್ಲಿ ಸರ್ಕಾರಕ್ಕೂ, ಅನಿವಾಸಿ ಕನ್ನಡಿಗನಿಗೂ, ಮತ್ತು ಕನ್ನಡನಾಡಿನ ಅಭಿವೃದ್ದಿ ಖಂಡಿತ. ಆ ಕುರಿತಾಗಿ ಕೆಲಸ ಮಾಡುತ್ತಿರುವ ಗಣೇಶ್ ಕಾರ್ಣಿಕ್ ರವರಿಗೆ ಎಲ್ಲ ಅನಿವಾಸಿ ಕನ್ನಡಿಗನು ಮತ್ತು ಎಲ್ಲ ಕರ್ನಾಟಕದ ಬಾಂಧವರು ಸಹಕರಿಸಿದರೆ ಒಳ್ಳೆಯ ಅಭಿವೃದ್ದಿ ನಿರೀಕ್ಷಿಸಬಹುದು. ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಗಣೇಶ್ ಕಾರ್ಣಿಕ್ ರವರಿಗೂ ಮತ್ತು ಎಲ್ಲ ಸದಸ್ಯರಿಗೂ ಅನಿವಾಸಿ ಕನ್ನಡಿಗರ ಪರವಾಗಿ ಅಭಿನಂದನೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+