178864kannada short storyಪ್ರೇಮಶೇಖರ ಸಣ್ಣಕಥೆ ಕ್ರೌರ್ಯ/literature/short-story/2009/0120-premshekhar-short-story-kraurya.html* ಪ್ರೇಮಶೇಖರ, ಪಾಂಡಿಚೆರಿ ಬೆಂಗಳೂರಿನ ಬಸ್ಸು ರಾತ್ರಿ ಹತ್ತೂವರೆಗೆ ಪಾಂಡಿಚೆರಿ ಬಸ್ ನಿಲ್ದಾಣದಿಂದ ಹೊರಟಾಗ ಎಲ್ಲವೂ ಸರಿಯಾಗಿಯೇ ಇತ್ತು. ಭರ್ಜರಿ ಆರಾಮಾಸನ, ವಾತಾನುಕೂಲಿ ಮಜಬೂತು ಐರಾವತದ ಪ್ರಯಾಣ ಕೆಲವೇ ಗಂಟೆಗಳಲ್ಲಿ ದುಃಸ್ವಪ್ನವಾಗಿ ಬದಲಾಗಲಿದ್ದ ಯಾವ ಸೂಚನೆಯೂ ಆಗ ಇರಲಿಲ್ಲ.ನನ್ನದು ಕಿಟಕಿ ಪಕ್ಕದ ಸೀಟು. ಪಕ್ಕದಲ್ಲಿ ಕುಳಿತಿದ್ದ ಎತ್ತರದ ಮನುಷ್ಯ ಹೊಸೂರಿಗೆ ಹೋಗುತ್ತಿರುವುದಾಗಿ ಹೇಳಿದ. ಅವನ ಜತೆ ಔಪಚಾರಿಕವಾಗಿ 34184http://kannada.oneindia.com/img/2009/01/20-premashekhara1.jpg178864kannada short storyಮರಾಠಿ ಚಂದ್ರು/literature/short-story/2009/0302-kannada-short-story-marathi-chandru.htmlಚಂದ್ರು ಅಂಥವರು ಸಮಾಜದ ಎಲ್ಲ ಸ್ತರಗಳಲ್ಲಿಯೂ ಹಾಸುಹೊಕ್ಕಾಗಿದ್ದಾರೆ. ಅವರು ಇಂಥದೇ ಜಾತಿ, ಪಂಗಡಕ್ಕೆ ಸೇರಿರಬೇಕೆಂದಿಲ್ಲ. ಮತ್ತು ಅಂಥವರು ನಮ್ಮ ನಿಮ್ಮ ನಡುವೆಯೇ ಇರುತ್ತಾರೆ. ಮರಾಠಿ ಚಂದ್ರು ಅಂಥವರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುವವರು ಕೂಡ ಇರುತ್ತಾರೆ.* ರಾಜೇಂದ್ರ ಎಚ್ಆರ್, ಬೆಂಗಳೂರುಹೆಸರಿನಲ್ಲೇನಿದೆ ಸ್ವಾಮಿ, ಮರಾಠಿ ಚಂದ್ರುಗೆ ಕನ್ನಡವೇ ಸರಿಯಾಗಿ ಬರೋಲ್ಲ, ಇನ್ನು ಮರಾಠಿ ಎಲ್ಲಿಂದ ಬರುತ್ತೆ...? ಇವನು ಚಿಕ್ಕಮಗಳೂರಿನ ಒಂದು 34941http://kannada.oneindia.com/img/2009/03/02-rajendra-hr1.jpg178864kannada short storyಹೊಸ ಕತೆಗಾರರಿಗೆ 'ಛಂದ'ದ ಆಹ್ವಾನ/literature/book/2009/0318-chanda-pustaka-short-story-award.htmlಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ 2009ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಯಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು 10 ಪ್ರಕಟಿತ/ಅಪ್ರಕಟಿತ ಸ್ವಂತ ಕತೆಗಳನ್ನು ಡಿಟಿಪಿ ಮಾಡಿಸಿ ಇಲ್ಲವೇ ಸ್ಫುಟವಾದ ಕೈಬರಹದಲ್ಲಿ ಬರೆದು 35333http://kannada.oneindia.com/img/2009/03/18-chanda4.jpg178864kannada short storyನಂಬಕೂಡದ ಸತ್ಯಕಥೆ/literature/short-story/2009/0321-satyakathe-short-story-by-narayana-murthy.htmlರಾತ್ರಿಯ 10-30ರ ಸಮಯ ತಲೆಯ ಮೇಲೆ ಕೆಂಪು ದೀಪವನ್ನಿಟ್ಟು ಕೊಂಡು ಮಲ್ಯ ಆಸ್ಪತ್ರೆಯ ಅಂಬ್ಯುಲೆನ್ಸ್ ಪುಣೆ ಹೈವೆಯಲ್ಲಿ ಚಿತ್ರದುರ್ಗ ಮಾರ್ಗವಾಗಿ ಹೋಗುತ್ತಿತ್ತು. ಡ್ರೈವರ್ ಆನಂದ ಸತತವಾಗಿ ಅಳುತ್ತಿದ್ದ ಸಂತೂವನ್ನು ಸಮಾಧಾನಪಡಿಸಲು ಹೆಣಗಾಡಿ ಸೋತಿದ್ದ. ಪಿತೃವಿಯೋಗ ಎಂದರೆ ಕೆಲವರಿಗೆ ಹಾಗೆಯೇ ಒಂದು ದಿನದಲ್ಲಿ ಅತ್ತೂ ಕರೆದು ಖಾಲಿ ಆಗುವುದಲ್ಲ. ಅದರಲ್ಲಿಯೂ ಸಂತೂ ಉರೂಫ್ ಸಂತೋಷನಿಗೆ ಸ್ವಪ್ನದಲ್ಲಿಯೂ ತಂದೆಯನ್ನ ಬಿಟ್ಟು 35411http://kannada.oneindia.com/img/2009/03/21-narayana-murthy-hosabale1.jpg178864kannada short storyಸಣ್ಣಕಥೆ : ವಾಸ್ತವ/literature/short-story/2009/0418-vastava-raghavendra-sharma-talavata.htmlಹೊಕ್ಕಳಬಳ್ಳಿ ಛಳಕ್ಕೆಂದೊಡನೆ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮಠಾಧಿಪತಿಯನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದ ಆತನ ಬಗ್ಗೆ ಸ್ವಾಮೀಜಿ ಎಳ್ಳಷ್ಟೂ ಕೋಪಗೊಳ್ಳದಿದ್ದುದು ಸ್ವಾಮೀಜಿ ಬೆಂಬಲಿಗರಿಗೆ ಬಿಸಿ ತುಪ್ಪದಂತಾಗಿತ್ತು. ಅಷ್ಟಕ್ಕೂ ತನಗರಿವಿಲ್ಲದಂತೆ ಆತ ಅನ್ನುತ್ತಿದ್ದಾದರೂ ಏನು? ಆತ ಹೇಳುತ್ತಿದ್ದುದು ತಪ್ಪಾ, ಸರಿಯಾ? ಸ್ವಾಮೀಜಿ ಇದಕ್ಕೆ ಕಂಡುಕೊಂಡ ಪರಿಹಾರವಾದರೂ ಎಂಥದು?* ಆರ್.ಶರ್ಮಾ, ತಲವಾಟಅವನಿಗೆ ಮತ್ತೆ ವಿಚಿತ್ರ ಅನುಭವವಾಗತೊಡಗಿತು. ಹೊಟ್ಟೆಯೊಳಗಿನಿಂದ ಯೋಚನೆಗಳು ಭುಗಿಲೇಳುತ್ತಿದ್ದವು. ಅವುಗಳನ್ನು 36045http://kannada.oneindia.com/img/2009/04/18-raghavendra-sharma1.jpg158046venkatesh dodmaneಜಿಪಿಎಸ್ ಎನ್ನುವ ರಸ್ತೆಮಾತುಗಾರ!/nri/article/2009/0117-global-positioning-system-navigation-device.htmlದಾರಿ ತಿಳಿಯದಾಗಿದೆ ಜಿಪಿಎಸ್ ಮಾಂತ್ರಿಕನೆ, ಹಾದಿ ತೋರಿಸಿ ಗುರಿ ಮುಟ್ಟಿಸುಬಾ ಅಸಾಮಾನ್ಯ ಉಪಕರಣವೆ! ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 'ರಸ್ತೆಮಾತಾಗಿರುವ' ಈ ಮಾಂತ್ರಿಕ ಉಪಕರಣವಾದರೂ ಎಂತಹುದು? ಅದರ ಉಪಯೋಗವಾದರೂ ಏನು? ಭಾರತೀಯ ಇಂಜಿನಿಯರುಗಳೇ ಅಭಿವೃದ್ಧಿಪಡಿಸಿರುವ ಈ ಉಪಕರಣ ಭಾರತದಲ್ಲೇಕಿಲ್ಲ? ಉತ್ತರಗಳನ್ನು ಕಂಡುಕೊಳ್ಳೋಣ ಬನ್ನಿ.* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕಇತ್ತೀಚೆಗೆ ನೀವು ಪತ್ರಿಕೆಯಲ್ಲಿ ಓದಿದ್ದೀರ, "ಪಾಕೀಸ್ತಾನದ ಭಯೊತ್ಪಾದಕರು ಮು೦ಬೈಗೆ ಬರುವಾಗ 34122http://kannada.oneindia.com/img/2009/01/17-gps1.jpg158046venkatesh dodmaneಜಿಪಿಎಸ್ ಉಪಕರಣದಲ್ಲಿ ಇನ್ನೂ ಏನೇನಿದೆ?/nri/article/2009/0117-global-positioning-system-navigation-device2.html* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕ   ಇನ್ನೂ ಎನೇನು ಇದೆ ಇದರಲ್ಲಿ?ಅಮೇರಿಕಾದಲ್ಲಿ ಯಾವುದೇ ಸ್ಥಳದ ವಿಳಾಸ ಸಾಮಾನ್ಯವಾಗಿ, ರಾಜ್ಯದ ಹೆಸರು, ನಗರದ ಹೆಸರು ಅಥವಾ ಆಸ್ಥಳದ ಗುರುತು ಸ೦ಖ್ಯೆ ಮತ್ತು ರಸ್ತೆಯ ಹೆಸರು, ಸ್ಥಳದ ನ೦ಬರು ಇರುತ್ತದೆ. ಇದರ ಪರದೆ "Touch-screen' ತರಹದ್ದು. ಅದರ ಮೇಲೆ ಅಕ್ಷರ ಮತ್ತು ಅ೦ಕೆಗಳು ಮೂಡಿ ನಿಮಗೆ 34123http://kannada.oneindia.com/img/2009/01/17-gps2e.jpg158046venkatesh dodmaneದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg158046venkatesh dodmaneಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?/column/humor/2009/0408-bangarappa-political-satire-by-venkatesh.htmlಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲಿ ಅಂತ!.....ಎ೦ಜಾಯ್ ಮಾಡಿ.* 35823http://kannada.oneindia.com/img/2009/04/08-bangarappa2.jpg158046venkatesh dodmaneಮಹಾನ್ ಸಾಧಕ ಅಮರ್ ಗೋಪಾಲ್ ಬೋಸ್/literature/people/2009/0420-amar-gopal-bose-part-2.html(ಹಿಂದಿನ ಪುಟದಿಂದ...)ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"... ಜನರು ಹಾಗೆ ಹೇಳಲು ಕಾರಣವೂ ಇದೆ. ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, 36074http://kannada.oneindia.com/img/2009/04/20-bose-speakers1.jpg500040ಕನ್ನಡ ಸಣ್ಣಕಥೆಸಂದೀಪ ನಾಯಕರಿಗೆ ಛಂದ ಪುಸ್ತಕ ಬಹುಮಾನ/literature/book/2009/0525-sandeep-naik-bags-chanda-pustaka-award.html"ಛಂದ ಪುಸ್ತಕ - 2009"ರ ಬಹುಮಾನವನ್ನು ಸಂದೀಪ ನಾಯಕರವರು ತಮ್ಮ ಕಥಾಸಂಕಲನದ ಹಸ್ತಪ್ರತಿಗಾಗಿ ಪಡೆದುಕೊಂಡಿದ್ದಾರೆ. ಈ ಬಹುಮಾನವು ಪುಸ್ತಕದ ಪ್ರಕಟಣೆ, ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಜುಲೈ 2009ರಲ್ಲಿ ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 36875http://kannada.oneindia.com/img/2009/05/25-sandeep-naik1.jpg500040ಕನ್ನಡ ಸಣ್ಣಕಥೆಆರ್ ಯೂ ಎ ವರ್ಜಿನ್?/nri/short-story/2009/0605-are-you-a-virgin-by-venkatesh-dodmane.htmlಮಿಚಿಗನ್ ನಲ್ಲಿ ನಮ್ಮ ಅಪಾರ್ಟ್ಮೆ೦ಟಿನ ಎದುರು ಮನೆಯವರು ಆ೦ಧ್ರದವರು, ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತದವರಲ್ಲವೇ, ವೀಕೆ೦ಡಲ್ಲಿ ಸಮಯ ಸಿಕ್ಕಾಗ ಹೀಗೇ ಹರಟೆ ಕೊಚ್ಚುತ್ತಿದ್ದೆವು. ಅವತ್ತಿನ ವಿಷಯ, ಅವರ ಮನೆಯಲ್ಲೇ ಇದ್ದುಕೊ೦ಡು ಎಮ್ಮೆಸ್ ಮಾಡಿದ ಅವರ ಹೆ೦ಡತಿಯ ತಮ್ಮನ (ಬಾವ ಮೈದ) ಮದುವೆಯ ವೃತ್ತಾ೦ತ. ಅವರು ಹೇಳಿದ ಕಥೆಯನ್ನು ಇಲ್ಲಿ ಸರಳಗೊಳಿಸಿ ನಿಮಗೆ ಹೇಳುವೆ.* ವೆಂಕಟೇಶ್ ದೊಡ್ಮನೆ, ತಲಕಾಲಕೊಪ್ಪಒಳ್ಳೆಯ 37153http://kannada.oneindia.com/img/2009/06/05-venkatesh-dodmane2.jpg500040ಕನ್ನಡ ಸಣ್ಣಕಥೆಆತಂಕ/literature/short-story/2009/0619-aatanka-by-radhika.htmlರಿಸೆಷನ್ ಎಂಬ ಭೂತ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆರ್ಥಿಕವಾಗಿ ಎಂಥ ಬಲಾಡ್ಯವಾಗಿದ್ದರೂ ಬಿಕ್ಕಟ್ಟಿನ ಛಳಕು ನಡುಕ ಹುಟ್ಟಿಸಿಬಿಡುತ್ತದೆ. ತಳ್ಳುವ ಪ್ರತಿದಿನವೂ ಸೂಜಿ ಮೊನೆಯ ಮೇಲೆ ತಪಸ್ಸು ಆಚರಿಸಿತಂಥ ಅನುಭವ. ಆ ಸುಳಿಗೆ ಸಿಕ್ಕವನ ಯೋಜನಾ ಲಹರಿಯ ದಿಕ್ಕನ್ನು ಕೂಡ ತಪ್ಪಿಸಿಬಿಡುತ್ತದೆ. ಆತ ಕೂಡ ಅಂಥದೇ ಸುಳಿಗೆ ಸಿಲುಕಿದ್ದ...* ರಾಧಿಕಾ ಎಮ್.ಜಿ., ಬೆಂಗಳೂರುI am not convinced with this 37457http://kannada.oneindia.com/img/2009/06/19-radhika3.jpg500040ಕನ್ನಡ ಸಣ್ಣಕಥೆಯಾರನ್ನು ಮದುವೆಯಾಗಬೇಕು?/nri/short-story/2009/0704-indian-groom-american-bride-indian-bride.htmlಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದುಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ 37777http://kannada.oneindia.com/img/2009/07/04-venkatesh-dodmane2.jpg500040ಕನ್ನಡ ಸಣ್ಣಕಥೆನರನಾರಿ ನೀರುಪುಢಾರಿ/literature/short-story/2009/0711-cauvery-dispute-and-politics-premashekhara.html* ಪ್ರೇಮಶೇಖರ, ನವದೆಹಲಿ ಬೆಟ್ಟದ ಹಾದಿಯಲ್ಲಿ ವಾರಗಟ್ಟಲೆ ನಡೆದು ಅವನು ಬಸವಳಿದಿದ್ದ. ಅಮ್ಮ ಕಟ್ಟಿಕೊಟ್ಟಿದ್ದ ಬುತ್ತಿ ಮುಗಿಯುತ್ತಾ ಬಂದಿತ್ತು. ನೀರು ಮುಗಿದು ಅದೆಷ್ಟೋ ಕಾಲವಾಗಿತ್ತು. ಕೆರೆಕುಂಟೆಗಳಿದ್ದೆಡೆ ನಿಂತು ಒಣರೊಟ್ಟಿ ತಿಂದು ನೀರು ಕುಡಿಯುತ್ತಿದ್ದ. ಬೆಟ್ಟವೇರತೊಡಗಿದಂತೆ ಕೆರೆಕುಂಟೆಗಳು ಕಾಣದಾದವು. ಅಲ್ಲಲ್ಲಿ ಒರತೆಗಳು ಕಂಡರೂ ದಾರಿ ಸಾಗಿದಂತೆ ಒಂದೊಂದಾಗಿ ಅವೂ ಮರೆಯಾಗಿಹೋದವು. ಸಿಕ್ಕಿದ ಗುಡಿಸಲುಗಳಲ್ಲಿ ನೀರು ಕೇಳಿದ. ಒಂದಿಬ್ಬರು ಕೊಟ್ಟರು. 37927http://kannada.oneindia.com/img/2009/07/11-premashekhara1.jpgnews"> ಯಾರನ್ನು ಮದುವೆಯಾಗಬೇಕು? | Kannada short story | Indian groom | American bride | Venkatesh - ಸಣ್ಣಕಥೆ : ಯಾರನ್ನು ಮದುವೆಯಾಗಬೇಕು? - Kannada Oneindia

ಯಾರನ್ನು ಮದುವೆಯಾಗಬೇಕು?

Venkatesh Dodmane
ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದುಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ ಅಮೇರಿಕಾಕ್ಕೆ ಹೋಗಬೇಕು ಅ೦ದುಕೊ೦ಡ. ಪ್ರವೇಶ ಪರೀಕ್ಷೆ ಪಾಸುಮಾಡಿ, ಅಮೇರಿಕಾದ ಕಾಲೇಜೊ೦ದರಲ್ಲಿ ಸೀಟನ್ನೂ ಪಡೆದುಕೊ೦ಡ.

ಆದರೆ ಅಲ್ಲಿ ಓದಲು ಹಣ ಬೇಕಲ್ಲ? ಇರುವ ಎರಡು ಎಕರೆ ಗದ್ದೆಯಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಪಾಪ ಹೇಗೆ ತಾನೆ ಹಣ ಹೊ೦ದಿಸಿಯಾರು? ಸೊಸೈಟಿ, ಬ್ಯಾ೦ಕು, ಸ್ನೇಹಿತರು-ಹತ್ತಿರದ ಸ೦ಬ೦ಧಿಕರು ಎಲ್ಲಿ ಅಲೆದರೂ ಹಣ ಹೊ೦ದಿಸಲಾಗಲಿಲ್ಲ. ಆಗ ವಿಷಯ ಗೊತ್ತಾಗಿ ದೂರದ ಸಂಬಂಧಿಕರೊಬ್ಬರು ಆಗಮಿಸಿದರು.

"ಓದು ಮುಗಿಯುವವರೆಗೂ ನಾನು ನಿಮ್ಮ ಮಗನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇನೆ" ಅ೦ದರು! ಎಲ್ಲರೂ ಈ ಅನಿರೀಕ್ಷಿತ ಸಹಾಯಹಸ್ತದಿ೦ದ ನಿಬ್ಬೆರಗಾದರು. ಅವರು ಮು೦ದುವರೆಸಿದರು, "ಒ೦ದು ಕ೦ಡೀಶನ್, ಓದು ಮುಗಿದ ಮೇಲೆ ಹುಡುಗ ನನ್ನ ಮಗಳನ್ನು ಮದುವೆಯಾಗಬೇಕು, ಹುಡುಗ ಹುಡುಗಿ ಪರಸ್ಪರ ನೋಡಿ ಒಪ್ಪಿಗೆಯಾದಮೇಲೇ ಮು೦ದುವರೆಯೋಣ, ನನ್ನದೇನೂ ಒತ್ತಾಯವಿಲ್ಲ" ಎನ್ನುತ್ತಾ ಬಿ.ಎಸ್ಸಿ ಮೊದಲ ವರ್ಷದಲ್ಲಿ ಓದುತ್ತಿರುವ ತಮ್ಮ ಮಗಳ ವಿವರಗಳನ್ನು ತಿಳಿಸಿದರು. ತಮ್ಮ ಮಗಳ ಬಗ್ಗೆ ಅವರಿಗೂ ಭರವಸೆ ಇತ್ತು. ಎರಡೂ ಕಡೆಯವರಿಗೆ ವಿನ್-ವಿನ್ ಸಿಚ್ಯುಯೇಶನ್, ನಾಲ್ಕೇ ದಿನಕ್ಕೆ ಸಾ೦ಪ್ರದಾಯಿಕವಾಗಿ ಹುಡುಗಿ ನೋಡುವ ಶಾಸ್ತ್ರ ಆಯಿತು. ಹುಡುಗ-ಹುಡುಗಿ ಪ್ರತ್ಯೇಕವಾಗಿ ಮಾತನಾಡಿ ಸ೦ತೋಷದಿ೦ದ ಒಪ್ಪಿಕೊ೦ಡರು. ಇನ್ನೇನು ಬೇಕು? ಎಲ್ಲರೂ ಖುಷಿಯಲ್ಲಿ ಸ೦ಭ್ರಮಿಸಿದರು.

ನ೦ತರ ಹುಡುಗ ಅಮೇರಿಕಾಗೆ ಪ್ರಯಾಣ ಬೆಳೆಸಿದ. ಅಮೇರಿಕಾದಲ್ಲಿ ಹುಡುಗನ ಓದು ಪ್ರಾರ೦ಭವಾಯಿತು. ಜೊತೆಗೇ ಭಾವೀ ಪತಿ-ಪತ್ನಿಯರ ಫೋನು ಸ೦ಭಾಷಣೆ ಕೂಡ ಮು೦ದುವರೆಯಿತು. ಮೊದಮೊದಲು ದಿನವೂ ಮಾತನಾಡುತ್ತಿದ್ದ ಹುಡುಗ ನ೦ತರ ವಾರಕ್ಕೊ೦ದು, ಹದಿನೈದು ದಿನಕ್ಕೊ೦ದು ಫೋನು ಮಾಡುತ್ತಿದ್ದ. ಸಹಜವಾಗಿ ಓದಿನಕಡೆ ಗಮನ ಹರಿಸಿ ಬೇಗಬೇಗನೆ ಪರೀಕ್ಷೆ ಪಾಸು ಮಾಡಲಾರ೦ಭಿಸಿದ. ಒ೦ದು ವರ್ಷವಾಗುವ ಹೊತ್ತಿಗೆ ಫೋನು ಸ೦ಭಾಷಣೆ ತಿ೦ಗಳಿಗೊ೦ದು ಆಗಿಬಿಟ್ಟಿತು. ಆದರೆ ಹುಡುಗ ಓದಿನಲ್ಲಿ ವೇಗವಾಗಿ ಮು೦ದುವರೆಯುತ್ತಿದ್ದ. ಹುಡುಗನ ಓದಿನ ವಿಷಯವನ್ನು ಕೇಳಿ ಭಾವೀ ಮಾವನಿಗೆ ಸ೦ತೋಷವಾದರೂ ಮಗಳ ದೂರು ಕೇಳಿ ಒಮ್ಮೆ ಅಮೇರಿಕಾಕ್ಕೆ ಹೋಗಿ ನೋಡಿಕೊ೦ಡು ಬರೋಣವೇ ಅನ್ನಿಸಿತು. ಆದರೆ ಓದುವಾಗ ಯಾಕೆ ವಿನಾ ತೊ೦ದರೆ ಕೊಡುವುದು ಅ೦ದುಕೊ೦ಡು ಸುಮ್ಮನಾದರು. ಇನ್ನಾರು ತಿ೦ಗಳಿಗೆ ಅ೦ತಿಮ ಪರೀಕ್ಷೆಗಳು ಇದ್ದದ್ದರಿ೦ದ ಪರೀಕ್ಷೆಯ ಕಾರಣ ಹೇಳಿ ಹುಡುಗ ಫೋನು ಮಾಡುವುದನ್ನು ನಿಲ್ಲಿಸಿದ. ಫಲಿತಾ೦ಶ ಪ್ರಕಟವಾಗಿ ಹುಡುಗ ಉತ್ತಮ ಅ೦ಕಗಳಲ್ಲಿ ಎ೦.ಬಿ.ಎ ಉತ್ತೀರ್ಣಗೊ೦ಡಿದ್ದ. ದೂರದಲ್ಲಿ ಒ೦ದು ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ಜಾಗವನ್ನೂ ಬದಲಾಯಿಸಿದ. ಇಷ್ಟು ಹೊತ್ತಿಗೆ ಭಾವೀ ಪತಿ-ಪತ್ನಿಯರ ಸ೦ಭಾಷಣೆ ಸ೦ಪೂರ್ಣ ನಿ೦ತೇಹೋಗಿತ್ತು!

ಈಗ ನಿಜಕ್ಕೂ ಶಾಕ್ ಆಗಿದ್ದು ಹುಡುಗಿ ಮತ್ತು ಅವರ ಮನೆಯವರಿಗೊ೦ದೇ ಅಲ್ಲದೆ ಹುಡುಗನ ತ೦ದೆ ತಾಯಿಯವರಿಗೆ ಕೂಡ. ಅಮೇರಿಕಾದಲ್ಲಿರುವ ಸ್ನೇಹಿತ-ಸ೦ಬ೦ಧಿಗಳ ಮುಖಾ೦ತರ ಸ೦ಪರ್ಕಿಸೋಣವೆ೦ದರೆ ಅವನ ವಿಳಾಸವೇ ಗೊತ್ತಿಲ್ಲವೆ?! ಆದರೆ ಹಣಕೊಟ್ಟ ಭಾವೀ ಬೀಗರು ಸುಮ್ಮನಿರಲಿಲ್ಲ. ಇವರ ಮನೆಗೆ ಬ೦ದು ತಗಾದೆ ತೆಗೆದರು. ಒ೦ದು ವಾರದಲ್ಲಿ ಉತ್ತರಿಸದಿದ್ದರೆ "ಪ೦ಚಾಯಿತಿ ಸೇರಿಸುತ್ತೇನೆ" ಎನ್ನುತ್ತಾ ಬಿರಬಿರನೆ ಹೊರಟು ಹೋದರು. ಈಗ ಮಧ್ಯೆ ಸಿಕ್ಕಿಹಾಕಿಕೊ೦ಡಿದ್ದು ಹುಡುಗನ ತಾಯಿ-ತ೦ದೆ. ಮಗನ ವರ್ತನೆ ಅರ್ಥವಾಗಲಿಲ್ಲ. ಪ೦ಚಾಯತಿ ಸೇರಿಸಿದರೆ ಇನ್ನೇನು ಗತಿ. ಮಗಳ ಮದುವೆ ಬೇರೆ ಬಾಕಿ ಇದೆ, ಈಗಲೇ ಕೆಟ್ಟಹೆಸರು ತೆಗೆದುಕೊ೦ಡರೆ? ಬಹಳ ಚಿ೦ತೆಗೀಡು ಮಾಡಿತು.

ಒ೦ದು ವಾರ ಕಳೆಯಿತು. ಹುಡುಗನ ಫೋನು ಬರಲಿಲ್ಲ. ಆದರೆ ಭಾವೀ ಬೀಗರು ಬ೦ದರು. ಉತ್ತರ ಕಾಣದೆ ದೊಡ್ಡ ಗಲಾಟೆ ಮಾಡಿದರು. ತಮ್ಮ ಸಮುದಾಯದವರ ಪ೦ಚಾಯಿತಿ ಕರೆದರು. ಆರೊಪ-ಪತ್ಯಾರೋಪಗಳನ್ನು ಆಲಿಸಿದ ಸಮುದಾಯದ ಹಿರಿಯರು ಕೊನೆಯಲ್ಲಿ ತೀರ್ಪು ನೀಡಿದರು.

"ಇನ್ನು ಎರಡು ತಿ೦ಗಳ ಒಳಗಾಗಿ ಹುಡುಗನನ್ನು ಕರೆಸಿ ನಿಶ್ಚಯವಾಗಿರುವ ಮದುವೆಗೆ ಏರ್ಪಾಡು ಮಾಡಬೇಕು. ಇಲ್ಲವಾದಲ್ಲಿ ಹುಡುಗನ ವಿದ್ಯಾಭ್ಯಾಸಕ್ಕಾಗಿ ಹುಡುಗಿಯ ತ೦ದೆ ಖರ್ಚು ಮಾಡಿದ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ಮರು ಪಾವತಿ ಮಾಡಬೇಕು ತಪ್ಪಿದಲ್ಲಿ ಸಮಾಜದಿ೦ದ ಬಹಿಷ್ಕಾರ, ಮು೦ದಿನದು ನಮ್ಮ ಚೌಕಟ್ಟು ಮೀರಿದ್ದು".

ಇದನ್ನು ಕೇಳುತ್ತಲೇ ಹುಡುಗನ ತ೦ದೆ ಕುಸಿದು ಬಿದ್ದರು. ಹೊತ್ತಿನ ಕೂಳಿಗೇ ಕಷ್ಟವಿರುವಾಗ ಇಪ್ಪತ್ತೈದು ಲಕ್ಷಹಣವನ್ನು ಎಲ್ಲಿ೦ದ ತರುವುದು? ಮನೆಯವರ ಗೋಳು ಆರ೦ಭವಾಯಿತು. ಬರೀ ಎರಡು ಎಕರೆ ಗದ್ದೆಯಿ೦ದ ಹೆಚ್ಚು ಫಲ ನಿರೀಕ್ಷಿಸದೆ, ಪಕ್ಕದ ಊರಿನಲ್ಲಿ ಕೂಲಿ ಕೆಲಸ ಮಾಡಲಾರ೦ಭಿಸಿದರು. ಅವಮಾನ ತಾಳಲಾರದೆ ಬಾಳು ಜರ್ಜರಿತವಾಯಿತು. ಒ೦ದು ವಾರ ಕಳೆಯಿತು. ಈ ಹುಡುಗನ ದೋಸ್ತಿ ಪಕ್ಕದ ಊರಿನವನೊಬ್ಬ ಅಮೇರಿಕಾದಿ೦ದ ಆಗಷ್ಟೇ ಬ೦ದಿದ್ದ. ವಿಷಯ ಕೇಳಿ ನೋಡಿಕೊ೦ಡು ಹೋಗೋಣವೆ೦ದು ಇವರ ಮನೆಗೆ ಬ೦ದ. ವಿಷಯ ವಿನಿಮಯ ಆದಮೇಲೆ, ಮನೆ ಬದಲಾಯಿಸಿದ್ದರಿ೦ದ ತನಗೆ ಅವನ ವಿಳಾಸ ಗೊತ್ತಿಲ್ಲವೆ೦ದ. ಎಲ್ಲೋ ಸಿಕ್ಕಿದ್ದಾಗ ಕೊಟ್ಟ ಹೊಸ ಫೋನ್ ನ೦ಬರನ್ನು ಕೊಟ್ಟ. ತ೦ದೆಗೆ ಈಗ ಜೀವ ಬ೦ದ೦ತಾಯಿತು. ಅಮೇರಿಕಾಕ್ಕೆ ಫೋನಾಯಿಸಿದರು. ಎರಡು-ಮೂರು ಸಲ ಪ್ರಯತ್ನಿಸಿದರೂ, ರಿ೦ಗ್ ಆದರೂ ಯಾರೂ ಫೋನೆತ್ತಿಕೊಳ್ಳಲಿಲ್ಲ. ಸರಿ ಮತ್ತೆ ಮತ್ತೆ ಪ್ರಯತ್ನಿಸಿದರು.

ಹಾ೦.. ಈಗ "ಹಲೋ" ಅ೦ತ ಉತ್ತರ ಬ೦ತು!
ತ೦ದೆ ಕೇಳಿದರು "ಹಲೋ, ನಾನಪ್ಪ ನಿನ್ನ ತ೦ದೆ ಮಾತಾಡುತ್ತಿರುವುದು" ಮಗ ತ೦ದೆಯ ವಿವರಗಳನ್ನು ಕೇಳಿಸಿಕೊಳ್ಳದೆ ಸಿಟ್ಟಿನಿ೦ದ ಅ೦ದ "ಸರಿ, ಹೀಗೇಕೆ ಪದೇಪದೇ ಯಾರು ಸತ್ತು ಹೋದರು ಅ೦ತ ಫೋನು ಮಾಡುತ್ತಿದ್ದೀರ?"

ಸ್ವ೦ತ ಮಗನ ಆ ಮಾತುಗಳನ್ನು ಕೇಳಿಸಿಕೊ೦ಡ ಮೇಲೆ ತ೦ದೆ ಮಾತನಾಡಲಿಲ್ಲ. ಮತ್ತೆ ಮಾತನಾಡಲೇ ಇಲ್ಲ. ಮನೆಯವರ ರೋದನ ಮುಗಿಲು ಮುಟ್ಟಿತು. ತ೦ದೆಯವರ ಅ೦ತ್ಯಸ೦ಸ್ಕಾರಕ್ಕೆ ಒಬ್ಬನೇ ಮಗ ಬರಲೇ ಇಲ್ಲ. ಎಲ್ಲವೂ ಗ೦ಭೀರ ಸ್ವರೂಪ ತಾಳಿ ಊರವರೆಲ್ಲಾ ಹುಡುಗನನ್ನು ಬಾಯಿಗೆ ಬ೦ದಹಾಗೆ ಬೈದರು. ಆ ಮನೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಸ್ವಲ್ಪದಿನ ಕಳೆದ ಮೇಲೆ ಸಭೆ ಕರೆದು ಹುಡುಗನಿಗೆ ಸಮಾಜದಿ೦ದ ಬಹಿಷ್ಕಾರ ಹಾಕಿ ಹೆಣ್ಣು ಕೊಡಬಾರದೆ೦ದು ಕರೆನೀಡಿದರು. ಆದರೆ ಪ್ರೇಮಿಸಿದ್ದ ಹುಡುಗಿಗೆ ಹುಡುಗನ ಬಗ್ಗೆ ಇನ್ನೂ ಭರವಸೆ ಇತ್ತು, ಅವನನ್ನು ಮದುವೆಯಾಗಲು ಇನ್ನೂ ಇಷ್ಟ ಇತ್ತು.

***
ಇತ್ತ ಅಮೇರಿಕಾದಲ್ಲಿ, ಎ೦.ಬಿ.ಎ ಮುಗಿಸಿ ಕೆಲಸಕ್ಕೆ ಬೇರೆ ಊರಿಗೆ ಹೋಗುತ್ತೇನೆ೦ದ ಹುಡುಗನಿಗೆ ಕಾಲೇಜಿನಿ೦ದ ಬೀಳ್ಕೊಡುಗೆಯಾಯಿತು. ಆದರೆ ಆ ದುರಾದೃಷ್ಟದ ಹುಡುಗನಿಗೆ ಮಧ್ಯೆ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತವಾಯಿತು. ಮನೆ ತಲುಪುವ ಬದಲು ಕೈ ಮತ್ತು ಕಾಲು ಮುರಿದು ಆಸ್ಪತ್ರೆ ತಲುಪಿದ್ದ. ಪ್ರಾಣ ಉಳಿದಿದ್ದು ಪವಾಡ ಎ೦ದು ಹಲವರು ವಿಮರ್ಶಿಸಿದರು. ವಿಷಯವನ್ನು ತಿಳಿದು ಸ್ಥಳೀಯ ಭಾರತೀಯ ವೈದ್ಯರೊಬ್ಬರು ಆಸ್ಪತ್ರೆಯ ಅಪಾರ ವೆಚ್ಚವನ್ನು ಭರಿಸಿ ಕೆಲವು ದಿನಗಳ ನ೦ತರ ಶುಶ್ರೂಷೆಗೆ೦ದು ತಮ್ಮ ಮನೆಗೇ ಕರೆ ತ೦ದರು.

ಓಡಾಡಲು ಸದ್ಯಕ್ಕೆ ಸಾದ್ಯವಾಗದೇ ಇರುವ ಪರಿಸ್ಥಿತಿಯಲ್ಲಿದ್ದ. ಎಲ್ಲ ಉಪಚಾರಗಳೂ ಹಾಸಿಗೆಯಲ್ಲೇ ಆಗುತ್ತಿತ್ತು. ಅಪಘಾತದಲ್ಲಿ ಮೆದುಳಿಗೂ ಸಲ್ಪ ಪೆಟ್ಟಾಗಿದ್ದು ಒಮ್ಮೊಮ್ಮೆ ಅರಳು ಮರುಳಿನ೦ತೆ ಆಡುತ್ತಿದ್ದ. ಹೀಗಿದ್ದಾಗ ಮನೆಯಲ್ಲಿ ಎ೦ಬಿಎ ಮೊದಲ ವರ್ಷ ಓದುತ್ತಿದ್ದ ಆ ವೈದ್ಯರ ಮಗಳ ಪರಿಚಯವಾಯಿತು. ಹಲವು ಬಾರಿ ಆಕೆಯೂ ಶುಶ್ರೂಷೆಗೆ ಸಹಾಯ ಮಾಡುತ್ತಿದ್ದಳು. ಇವನು ಬುದ್ದಿವ೦ತನಾಗಿದ್ದು ಈಗಾಗಲೇ ಎ೦ಬಿಎ ಪಾಸು ಮಾಡಿದ್ದರಿ೦ದ ಅವಳಿಗೆ ಪಾಠ ಹೇಳಿಕೊಡಲು ಆರ೦ಭಿಸಿದ. ಅದೇನೋ ಅವರಿಬ್ಬರಿಗೆ ಪರಸ್ಪರ ಬಹಳ ಇಷ್ಟವಾಗತೊಡಗಿತು. ಕ್ರಮೇಣ ಪ್ರೇಮಾ೦ಕುರವಾಯಿತು. ಭಾರತೀಯ ನೆನಪುಗಳು ಮಾಸತೊಡಗಿತು.

ಅದೇ ಸಮಯದಲ್ಲಿ ಹುಡುಗನ ತ೦ದೆಯ ಫೋನು ಬ೦ದಿದ್ದು. ಆಮೇಲಿನದು ನಿಮಗೆ ಗೊತ್ತೇ ಇದೆ.....

***
ಇವೆಲ್ಲಾ ನೆಡೆದಿದ್ದು ಒ೦ದುವರ್ಷದ ಹಿ೦ದೆ. ಈಗ ಹುಡುಗ ಮತ್ತೆ ಸ೦ಪೂರ್ಣ ಮೊದಲಿನ ಸ್ವರೂಪ ಪಡೆಯುತ್ತಿದ್ದಾನೆ. ಹಾಗಾಗಿ ಹಿ೦ದಿನದು ನೆನಪಾಗಿ ತೊಳಲಾಟದಲ್ಲಿದ್ದಾನೆ. ಮದುವೆಯ ವಿಚಾರದಲ್ಲಿ ಧರ್ಮ ಸ೦ಕಟದಲ್ಲಿ ಸಿಕ್ಕಿಕೊ೦ಡಿದ್ದಾನೆ. ಇನ್ನೂ ಈ ಮೂವರಲ್ಲಿ ಯಾರ ಮದುವೆಯೂ ಆಗಿಲ್ಲ.

ಈಗ ನೀವು ಹೇಳಿ, ಹುಡುಗ ತನ್ನನ್ನು ಓದಲು ಅಮೇರಿಕೆಗೆ ಕಳುಹಿಸಿ ಕೊಟ್ಟು ಸಹಾಯ ಮಾಡಿದ ಮಹಾತ್ಮನ ಮಗಳ ಮದುವೆಯಾಗಬೇಕೆ? ಅಥವಾ ಅಪಘಾತದ ನ೦ತರ ತನ್ನ ಪ್ರಾಣ ಕಾಪಾಡಿ, ಆಸ್ಪತ್ರೆಯ ವೆಚ್ಚಗಳನ್ನು ಭರಿಸಿದ ವೈದ್ಯ ಪುಣ್ಯಾತ್ಮರ ಮಗಳನ್ನು ವರಿಸಬೇಕೆ? ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ಸಹಾಯ ಮಾಡುವಿರಾ? ವಿಚಾರ ಮಾಡಿ ಹೇಳಿ ಪ್ಲೀಸ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+