ನಿಮ್ಮ ನೆನಪು ನಿಮ್ಮ ಮಾತು ಕಾಡುವುದು ಪರಿ ಪರಿ

ಎಲ್ಲ ಕರೆಗೆ ಓಗೊಡುವ ನೀವು ಮಕ್ಕಳಿಗೆ ದೇವರು
ಕೆಲಸ ಕಾರ್ಯ ಮುಗಿಸಿ ಮನೆಗೆ ಬರುವದನ್ನು ಕಾಯ್ವರು
ಬಂದ ಒಡನೆ ನೀವು ಕೊಡುವ ಪ್ರೀತಿಯನು ಉಣುವರು
ನಮ್ಮ ಸುಖಕೆ ನಮ್ಮ ಏಳ್ಗೆಗೆ ನೀವು ನಿತ್ಯ ದುಡಿದಿರಿ
ಮಂಡ್ಯ ಮೈಸೂರ್ ರೈಲಿನಲ್ಲಿ ನಿತ್ಯ ಪ್ರಯಾಣಿಸಿದಿರಿ
ಎರಡು ಕೈಲಿ ಭಾರ ಹೊತ್ತು ದಿನವು ನಡೆದು ಬಂದಿರಿ
ಅಕ್ಕಿ ಬೇಳೆ ರಾಗಿಯೊಡನೆ ಬ್ರೆಡ್ಡು ಬಿಸ್ಕತ್ತೂ ತಂದಿರಿ
ಪದವಿಯಲ್ಲಿ ಪ್ರಥಮ ಸ್ಥಾನ ನನಗೆ ಎಂದು ತಿಳಿಯಿತು
ಅಪ್ಪ ಅಮ್ಮ ಸ್ನೇಹಿತರಿಗೆ ತಿಳಿಸುವ ತವಕ ಹೆಚ್ಚಾಯಿತು
ನಿತ್ಯ ಬರುವ ಹಾದಿಯಲ್ಲಿ ನಿಮಗೆ ವಾಹನವೊಂದು ಬಡಿಯಿತು
ಕೈಲಿ ಸಿಹಿಯ ಡಬ್ಬ ಹಿಡಿದ ನನಗೆ ಮುಖ ಪೆಚ್ಚಾಯಿತು
ನಿಮ್ಮ ಸೇವೆ ಮಾಡಿದೆನಗೆ ಜೀವನ ಸಾರ್ಥಕವಾಯಿತು
ಬಂಗಾರದ ಪದಕ ಸ್ವೀಕರಿಸುವುದ ನೀವು ನೋಡುವಂತಾಯಿತು
ನಿಮ್ಮ ಶ್ರದ್ಧೆ ನಿಮ್ಮ ದುಡಿತ ನಮಗೆ ಬಾಳು ನೀಡಿತು
ನಿಮ್ಮ ಮಾರ್ಗದರ್ಶನ ನಮ್ಮನ್ನು ಒಳ್ಳೆಯ ಪ್ರಜೆಯಾಗಿಸಿತು
ಹಲವು ನೂರು ಸಂಬಳದಿ ನಮ್ಮ ಸಾಕಿ ಸಲುಹಿದಿರಿ
ತಿಂಡಿ ತೀರ್ಥ ಅನ್ನ ಬಟ್ಟೆ ಎಲ್ಲವನ್ನು ಕೊಡಿಸಿದಿರಿ
ಪ್ರೀತಿ ಪ್ರೇಮ ಸಹನೆ ಜೊತೆ ಬಾಳುವುದನು ಕಲಿಸಿದಿರಿ
ನೀವದನು ನೋಡಲು ಮಾತ್ರ ಇರದೆ ದೂರ ನಡೆದಿರಿ
ನೀವಿಲ್ಲದ ನನ್ನ ಬಾಳಲಿ ನಿಮ್ಮ ನೆನಪು ಹಸಿರು
ಮೊದಲ ಕೊನೆಯ ನಾಮದ ನಡುವೆ ನಿಮ್ಮದೇ ಹೆಸರು
ನಮ್ಮ ಮಕ್ಕಳ ಏಳ್ಗೆಗೆ ಮಾಡಿಕೊಂಡಿರೆವೆನು ಸ್ವಲ್ಪ ಕೈ ಕೆಸರು
ನಿಮ್ಮ ಹರಕೆ ಮಕ್ಕಳ ಶ್ರಮಕೆ ಆಗುವುದೆ ಬಾಯ್ ಮೊಸರು?
ನಿಮ್ಮ ನೆನಪು ಬಂದ ದಿನವು ಕನಸಿನಲ್ಲಿ ಬರುವಿರಿ
"ಹೇಗಿರುವೆ ಮರಿ" ಎಂದು ತಲೆಯ ನೇವರಿಸುವಿರಿ
ನಿಮ್ಮ ನೆನಪು ನಿಮ್ಮ ಮಾತು ಕಾಡುವುದು ಪರಿ ಪರಿ
"ಅಪ್ಪನ ದಿನ"ವಿಂದು ನನ್ನ ಸ್ವರ್ಗದಿಂದಲೆ ಹರಸಿರಿ
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications