ಗಾಳಿನಗರಿ ಶಿಕಾಗೊದಲ್ಲಿ ವೈಭವದ ಹವ್ಯಕ ಸಮ್ಮೇಳನ
HAVYAKA ASSOCIATION OF AMERICAS(HAA) ಇದು 1982ರಲ್ಲಿ, ಅಮೆರಿಕದಲ್ಲಿ ನೆಲೆಸಿರುವ ಹವ್ಯಕ ಸಮುದಾಯವನ್ನು ಸಂಘಟಿಸಲು ಆರಂಭವಾದ ಒಕ್ಕೂಟ. ಆಗಿನಿಂದ ಈಗಿನವರೆಗೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ವಿವಿಧ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿದೆ.
ಅದರಂತೆ, ಈ ವರ್ಷದ ಸಮ್ಮೇಳನವು ಜುಲೈ 1 ಮತ್ತು 2ರ ಶನಿವಾರ, ಭಾನುವಾರಗಳಂದು, ಇಲಿನಾಯ್ ರಾಜ್ಯದ ಗ್ರೇಸ್ಲೇಕ್' ನಗರದಲ್ಲಿರುವ, ಚಿನ್ಮಯ ಮಿಷನ್ ಸಂಸ್ಥೆಯ ಆಡಳಿತಕೊಳ್ಳಪಟ್ಟ ಯಮುನೋತ್ರಿ' ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಮುದ್ದು ಗಣೇಶನ ಮೂರ್ತಿಯನ್ನು ಜಾಗಟೆ, ತಾಳಮೇಳಗಳೊಂದಿಗಿನ ಮೆರವಣಿಗೆಯಲ್ಲಿ ಕರೆತರುವ ಮೂಲಕ ಸಮಾವೇಶ ಆರಂಭಗೊಂಡಿತು.
ಹವ್ಯಕ ಒಕ್ಕೂಟದ ಅಧ್ಯಕ್ಷರಾದ ಅನಿಲ್ ಮತ್ತು ಸುಜಾತ ಅಡ್ಕೋಳಿ, ಹವ್ಯಕ ಸಮಿತಿಯ ಮುಖ್ಯಸ್ಥರಾದ ಶಂಕರ್ ಹೆಗ್ಡೆ, ರಾಜಾಶಂಕರ್ ಕಣಗಲಘಟ್ಟ, ಈಶ್ವರ ವಾರಣಾಸಿ, ಮುರಳಿಧರ್ ಕಜೆ, ಬಾಲ ಪಳಮಡೈ, ಮೂರ್ತಿ, ಸಚಿನ್ ಮತ್ತಿತರರು ಜ್ಯೋತಿ ಬೆಳಗುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕಾಗಿ ಭಾರತದಿಂದ ಆಗಮಿಸಿದ್ದ ಕಲಾವಿದರಾದ ನಾಗಚಂದ್ರಿಕ ಭಟ್, ಎಂ.ಡಿ. ಪಲ್ಲವಿ, ಅರುಣ್ ಕುಮಾರ್ ಅವರು ಸುಗಮ ಸಂಗೀತ, ಚಿತ್ರಗೀತೆಗಳನ್ನು ಹಾಡಿ ಜನಮನ ತಣಿಸಿದರು.

ಕೆನಡಾದ ಟೊರಾಂಟೊದಿಂದ ಆಗಮಿಸಿದ್ದ ಯಕ್ಷಮಿತ್ರ' ತಂಡವು ಸುಭದ್ರ ಕಲ್ಯಾಣ' ಯಕ್ಷಗಾನವನ್ನು ಪ್ರದರ್ಶಿಸಿತು. ಇದಲ್ಲದೆ ಹವ್ಯಕ ಸದಸ್ಯರಿಂದ ಗಾಯನ, ನೃತ್ಯ, ಮಕ್ಕಳ ನಾಟಕ ಮುಂತಾದ ಹತ್ತುಹಲವು ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನಿರ್ಮಲಾ ಮೋಹನ್ ಅವರಿಂದ ಮಂಡಲ ಕಲೆ'ಯ ಪ್ರದರ್ಶನ, ಡಾ.ಸುಮಾ ರಾಜಾಶಂಕರ್ ಅವರು ಮಕ್ಕಳಿಗಾಗಿ ನಡೆಸಿಕೊಟ್ಟ ವಿಜ್ಞಾನ ಶಿಬಿರ, ಲೀಲಾ ಹೆಗಡೆಯವರು ಸಿದ್ಧಪಡಿಸಿದ್ದ ಗೊಂಬೆಗಳು, ಈಗ ಕಣ್ಮರೆಯಾಗಿರುವ ಗೃಹೋಪಯೋಗಿ ವಸ್ತು ಪ್ರದರ್ಶನ... ಇವೆಲ್ಲವೂ ಈ ಸಮ್ಮೇಳನದ ವೈಶಿಷ್ಟ್ಯವಾಗಿದ್ದವು.

ಹವ್ಯಕ ಸಮುದಾಯದ ಕಲೆ, ಸಂಸ್ಕೃತಿ, ಊಟೋಪಚಾರದ ಸೊಗಡನ್ನು ಎರಡು ದಿನಗಳ ಕಾಲ ಪಸರಿಸಿದ ಸಮ್ಮೇಳನ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಯಿತು. ಮುಂದಿನ ಸಮ್ಮೇಳನ ಕೆನಡಾದ ಟೊರಾಂಟೊದಲ್ಲಿ ನಡೆಯುತ್ತಿರುವುದರಿಂದ, ಎಲ್ಲರನ್ನೂ ಅಲ್ಲಿಗೆ ಆಹ್ವಾನಿಸಲಾಯಿತು.
ಈ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಪ್ರಾಯೋಜಕರು, ಕಾರ್ಯಕರ್ತರಿಗೆ, ಧನ್ಯವಾದ ಸಮರ್ಪಿಸುವ ಮೂಲಕ ಸಮ್ಮೇಳನ ಶುಭಾಂತ್ಯ ಕಂಡಿತು.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications