ಗಾಳಿನಗರಿ ಶಿಕಾಗೊದಲ್ಲಿ ವೈಭವದ ಹವ್ಯಕ ಸಮ್ಮೇಳನ
HAVYAKA ASSOCIATION OF AMERICAS(HAA) ಇದು 1982ರಲ್ಲಿ, ಅಮೆರಿಕದಲ್ಲಿ ನೆಲೆಸಿರುವ ಹವ್ಯಕ ಸಮುದಾಯವನ್ನು ಸಂಘಟಿಸಲು ಆರಂಭವಾದ ಒಕ್ಕೂಟ. ಆಗಿನಿಂದ ಈಗಿನವರೆಗೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಅಮೆರಿಕದ ವಿವಿಧ ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಿಕೊಂಡು ಬಂದಿದೆ.
ಅದರಂತೆ, ಈ ವರ್ಷದ ಸಮ್ಮೇಳನವು ಜುಲೈ 1 ಮತ್ತು 2ರ ಶನಿವಾರ, ಭಾನುವಾರಗಳಂದು, ಇಲಿನಾಯ್ ರಾಜ್ಯದ ಗ್ರೇಸ್ಲೇಕ್' ನಗರದಲ್ಲಿರುವ, ಚಿನ್ಮಯ ಮಿಷನ್ ಸಂಸ್ಥೆಯ ಆಡಳಿತಕೊಳ್ಳಪಟ್ಟ ಯಮುನೋತ್ರಿ' ಆವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಮುದ್ದು ಗಣೇಶನ ಮೂರ್ತಿಯನ್ನು ಜಾಗಟೆ, ತಾಳಮೇಳಗಳೊಂದಿಗಿನ ಮೆರವಣಿಗೆಯಲ್ಲಿ ಕರೆತರುವ ಮೂಲಕ ಸಮಾವೇಶ ಆರಂಭಗೊಂಡಿತು.
ಹವ್ಯಕ ಒಕ್ಕೂಟದ ಅಧ್ಯಕ್ಷರಾದ ಅನಿಲ್ ಮತ್ತು ಸುಜಾತ ಅಡ್ಕೋಳಿ, ಹವ್ಯಕ ಸಮಿತಿಯ ಮುಖ್ಯಸ್ಥರಾದ ಶಂಕರ್ ಹೆಗ್ಡೆ, ರಾಜಾಶಂಕರ್ ಕಣಗಲಘಟ್ಟ, ಈಶ್ವರ ವಾರಣಾಸಿ, ಮುರಳಿಧರ್ ಕಜೆ, ಬಾಲ ಪಳಮಡೈ, ಮೂರ್ತಿ, ಸಚಿನ್ ಮತ್ತಿತರರು ಜ್ಯೋತಿ ಬೆಳಗುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮಕ್ಕಾಗಿ ಭಾರತದಿಂದ ಆಗಮಿಸಿದ್ದ ಕಲಾವಿದರಾದ ನಾಗಚಂದ್ರಿಕ ಭಟ್, ಎಂ.ಡಿ. ಪಲ್ಲವಿ, ಅರುಣ್ ಕುಮಾರ್ ಅವರು ಸುಗಮ ಸಂಗೀತ, ಚಿತ್ರಗೀತೆಗಳನ್ನು ಹಾಡಿ ಜನಮನ ತಣಿಸಿದರು.

ಕೆನಡಾದ ಟೊರಾಂಟೊದಿಂದ ಆಗಮಿಸಿದ್ದ ಯಕ್ಷಮಿತ್ರ' ತಂಡವು ಸುಭದ್ರ ಕಲ್ಯಾಣ' ಯಕ್ಷಗಾನವನ್ನು ಪ್ರದರ್ಶಿಸಿತು. ಇದಲ್ಲದೆ ಹವ್ಯಕ ಸದಸ್ಯರಿಂದ ಗಾಯನ, ನೃತ್ಯ, ಮಕ್ಕಳ ನಾಟಕ ಮುಂತಾದ ಹತ್ತುಹಲವು ಉತ್ತಮ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ನಿರ್ಮಲಾ ಮೋಹನ್ ಅವರಿಂದ ಮಂಡಲ ಕಲೆ'ಯ ಪ್ರದರ್ಶನ, ಡಾ.ಸುಮಾ ರಾಜಾಶಂಕರ್ ಅವರು ಮಕ್ಕಳಿಗಾಗಿ ನಡೆಸಿಕೊಟ್ಟ ವಿಜ್ಞಾನ ಶಿಬಿರ, ಲೀಲಾ ಹೆಗಡೆಯವರು ಸಿದ್ಧಪಡಿಸಿದ್ದ ಗೊಂಬೆಗಳು, ಈಗ ಕಣ್ಮರೆಯಾಗಿರುವ ಗೃಹೋಪಯೋಗಿ ವಸ್ತು ಪ್ರದರ್ಶನ... ಇವೆಲ್ಲವೂ ಈ ಸಮ್ಮೇಳನದ ವೈಶಿಷ್ಟ್ಯವಾಗಿದ್ದವು.

ಹವ್ಯಕ ಸಮುದಾಯದ ಕಲೆ, ಸಂಸ್ಕೃತಿ, ಊಟೋಪಚಾರದ ಸೊಗಡನ್ನು ಎರಡು ದಿನಗಳ ಕಾಲ ಪಸರಿಸಿದ ಸಮ್ಮೇಳನ ತನ್ನ ಉದ್ದೇಶ ಸಾಧನೆಯಲ್ಲಿ ಯಶಸ್ವಿಯಾಯಿತು. ಮುಂದಿನ ಸಮ್ಮೇಳನ ಕೆನಡಾದ ಟೊರಾಂಟೊದಲ್ಲಿ ನಡೆಯುತ್ತಿರುವುದರಿಂದ, ಎಲ್ಲರನ್ನೂ ಅಲ್ಲಿಗೆ ಆಹ್ವಾನಿಸಲಾಯಿತು.
ಈ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಪ್ರಾಯೋಜಕರು, ಕಾರ್ಯಕರ್ತರಿಗೆ, ಧನ್ಯವಾದ ಸಮರ್ಪಿಸುವ ಮೂಲಕ ಸಮ್ಮೇಳನ ಶುಭಾಂತ್ಯ ಕಂಡಿತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications