"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ
T20 World Cup 2026: ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಜಯ ಸಾಧಿಸಿದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳಾದ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ನಡುವಿನ ಹಾಸ್ಯಮಯ ಕ್ಷಣಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ.
ಈ ನಿರ್ಣಾಯಕ ಕದನದಲ್ಲಿ ಇವರಿಬ್ಬರೂ ಭಾರತದ ಗೆಲುವಿನ ರೂವಾರಿಗಳಾಗಿದ್ದರು. ಅಭಿಷೇಕ್ ಶರ್ಮಾ ಕೇವಲ 21 ಎಸೆತಗಳಲ್ಲಿ 52 ರನ್ ಸಿಡಿಸಿದರೆ, ಇಶಾನ್ ಕಿಶನ್ 25 ಎಸೆತಗಳಲ್ಲಿ 54 ರನ್ ಬಾರಿಸಿ ತಂಡದ ಮೊತ್ತವನ್ನು ಏರಿಸಿದರು. ಫೈನಲ್ ಪಂದ್ಯಕ್ಕೆ ಮುನ್ನ ಅಭಿಷೇಕ್ ಕಠಿಣ ಸವಾಲನ್ನು ಎದುರಿಸುತ್ತಿದ್ದರು. ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದ ಕಾರಣದಿಂದಾಗಿ ಅವರ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಇನ್ನು ಇಶಾನ್ ಕಿಶನ್ ಅವರ ಪಯಣ ಅದಕ್ಕಿಂತ ಭಿನ್ನವಾಗಿತ್ತು. ಆಯ್ಕೆಗಾರರು ಕಳೆದ ಎರಡು ವರ್ಷಗಳಿಂದ ಅವರನ್ನು ಕಡೆಗಣಿಸಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೂಲಕ ತಂಡಕ್ಕೆ ಮರಳಿದ ಅವರು, ವಿಶ್ವಕಪ್ ಫೈನಲ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಅಭಿಷೇಕ್ ಶರ್ಮಾ ಕಾಲೆಳೆದ ಇಶಾನ್
ಪತ್ರಿಕಾಗೋಷ್ಠಿಯ ವೇಳೆ, ತಮ್ಮ ವೈಯಕ್ತಿಕ ವೈಫಲ್ಯಗಳು ಮತ್ತು ಕಠಿಣ ಹಂತಗಳನ್ನು ಹೇಗೆ ಎದುರಿಸಿದರು ಎಂಬ ಪ್ರಶ್ನೆ ಇಬ್ಬರಿಗೂ ಎದುರಾಯಿತು. ಮೊದಲಿಗೆ ಅಭಿಷೇಕ್ ಶರ್ಮಾ ಉತ್ತರ ನೀಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಇಶಾನ್ ಕಿಶನ್, ತಮಾಷೆಯ ಧಾಟಿಯಲ್ಲಿ, "ನನ್ನ ಹೋರಾಟದ ಅವಧಿ ನಿನ್ನದಕ್ಕಿಂತ ಬಹಳ ದೀರ್ಘವಾಗಿದೆ," ಎಂದು ನೆನಪಿಸುವ ಮೂಲಕ ಅಭಿಷೇಕ್ ಶರ್ಮಾ ಅವರನ್ನು ಕಾಲೆಳೆದರು.
ಇಶಾನ್ ಕಿಶನ್ Vs ಆಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ ಕೇವಲ ಮೂರು ಪಂದ್ಯಗಳ ಕಠಿಣ ಹಂತವನ್ನು ಎದುರಿಸಿದ್ದರೆ, ಇಶಾನ್ ಕಿಶನ್ ಎರಡು ವರ್ಷಗಳ ದೀರ್ಘ ಕಾಲ ತಂಡದಿಂದ ಹೊರಗುಳಿದಿದ್ದರು. ಈ ಹಿನ್ನೆಲೆಯಲ್ಲಿ, "ನನ್ನ ಕಷ್ಟದ ಕಾಲ ನಿನ್ನದಕ್ಕಿಂತ ಬಹಳ ದೊಡ್ಡದಿದೆ," ಎಂಬ ಅರ್ಥದಲ್ಲಿ ಇಶಾನ್ ಕಿಶನ್ ತಮಾಷೆ ಮಾಡಿದರು. ಬಳಿಕ ಅಭಿಷೇಕ್ ಶರ್ಮಾ ಕೂಡ ನಗುತ್ತಲೇ ಅದಕ್ಕೆ ಪ್ರತ್ಯುತ್ತರ ನೀಡಿದರು. "ನನಗೆ ಆ ಒಂದು ತಿಂಗಳ ಫಾರ್ಮ್ ಕೊರತೆಯೇ ಒಂದೂವರೆ ವರ್ಷದಷ್ಟು ದೀರ್ಘವಾಗಿ ಕಾಡಿತು," ಎಂದು ಹೇಳಿದರು.
ಇಶಾನ್ ಕಿಶನ್ ಮಾತನಾಡಿ, "ತವರು ನೆಲದಲ್ಲಿ ಆತಿಥೇಯ ದೇಶ ವಿಶ್ವಕಪ್ ಗೆದ್ದ ಉದಾಹರಣೆಯೇ ಇರಲಿಲ್ಲ. ಇಂದು ನಾವು ಅದನ್ನು ಮಾಡಿದ್ದೇವೆ. 2023ರ ವಿಶ್ವಕಪ್ ಸೋಲಿನ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ನಾವೆಲ್ಲರೂ ಅತ್ತಿದ್ದೆವು. ಆದರೆ ಇಂದು ನಾವು ಟ್ರೋಫಿ ಎತ್ತಿ ಹಿಡಿದಿದ್ದೇವೆ. ಇದು ತಂಡದ ಒಗ್ಗಟ್ಟು ಮತ್ತು ನಾವು ಒಬ್ಬರಿಗೊಬ್ಬರು ನೀಡಿದ ಬೆಂಬಲದ ಫಲ," ಎಂದು ಹೇಳುವ ಮೂಲಕ ಭಾವುಕರಾದರು.
ಭಾವುಕರಾದ ಗೌತಮ್ ಗಂಭೀರ್
ತಂಡದ ಯಶಸ್ಸಿನ ಕುರಿತು ಮಾತನಾಡಿದ ಮುಖ್ಯ ಕೋಚ್ ಗೌತಮ್ ಗಂಭೀರ್, ತಮ್ಮ ಕಠಿಣ ಹಂತದಲ್ಲಿ ಬೆಂಬಲ ನೀಡಿದವರನ್ನು ಸ್ಮರಿಸಿ ಭಾವುಕರಾದರು. "ನನ್ನ ಅಧಿಕಾರಾವಧಿಯ ಅತ್ಯಂತ ಕೆಟ್ಟ ಸಮಯದಲ್ಲಿ, ಅಂದರೆ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸರಣಿಯ ಸೋಲಿನ ನಂತರ, ನನಗೆ ಕರೆ ಮಾಡಿ ಧೈರ್ಯ ಹೇಳಿದ ಏಕೈಕ ವ್ಯಕ್ತಿ ಜಯ್ ಭಾಯ್ (ಜಯ್ ಶಾ). ಅವರು ನನ್ನ ಮೇಲೆ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ನೀಡಿದರು," ಎಂದು ಗಂಭೀರ್ ಮುಕ್ತಕಂಠದಿಂದ ಹೊಗಳಿದರು.
ಅಭಿಷೇಕ್ ಶರ್ಮಾ ಅವರು ಫೈನಲ್ ಪಂದ್ಯಕ್ಕೆ ಮುನ್ನ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ಕಠಿಣ ಪರಿಸ್ಥಿತಿಯಲ್ಲಿದ್ದರು. ಆದರೆ, ಇಶಾನ್ ಕಿಶನ್ ಅವರು ಕಳೆದ ಎರಡು ವರ್ಷಗಳಿಂದ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದರು. ಇಬ್ಬರೂ ತಮ್ಮ ದಿನಗಳನ್ನು ಮರೆತು, ವಿಶ್ವಕಪ್ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಮನಗೆದ್ದಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications