ಹದಿಮೂರನೇ ವಯಸ್ಸಲ್ಲಿ ಉಪೇಂದ್ರ ಕಂಡ ಕನಸು
ವೈಶಾಲಿ : ನಮಸ್ಕಾರ ಉಪೇಂದ್ರ ಅವ್ರೆ. ಮೊದಲಿಗೆ ಬಾಸ್ಟನ್ನಿನ ಸಮಸ್ತ ಕನ್ನಡಿಗರ ಪರವಾಗಿ ಮತ್ತೊಮ್ಮೆ ಸ್ವಾಗತ. ನಿಮ್ಮ ಅಮೆರಿಕೆಯ ಸುತ್ತಾಟದ ದಾರಿಯಲ್ಲಿ ನಮ್ಮನ್ನೂ ನೋಡಲು ಬಂದಿದ್ದಕ್ಕೆ ತುಂಬಾ ಖುಷಿ. ನೀವು ಕಾಶೀನಾಥ್ ಅವರನ್ನು ನಿಮ್ಮ ಗಾಡ್ಫಾದರ್ ಅಂತ ಹೇಳಿಕೊಂಡಿದ್ದೀರ. ಹಾಗೆ ನೋಡಿದ್ರೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಹೆಸರಾಗಲೀ, ಕೃಪಾಕಟಾಕ್ಷವಿಲ್ಲದೆ ಮೇಲೆಬಂದವರು ನೀವು. ತರ್ಲೆ ನನ್ಮಗನ ಕ್ರಿಯಾಶೀಲ ಯುವನಿರ್ದೇಶಕನಿಂದ ಆರಂಭಿಸಿ ಉಪ್ಪಿ2ವಿನ ಸೂಪರ್ ಸ್ಟಾರ್ ಉಪೇಂದ್ರ ಅವ್ರ ಈ ಬೆಳವಣಿಗೆ, ಪ್ರಯಾಣ ಹೇಗಿತ್ತು ಅಂತ ಸಂಕ್ಷಿಪ್ತವಾಗಿ ನಮ್ಮ ಜೊತೆ ಹಂಚ್ಕೊತೀರ?
ಉಪ್ಪಿ : ಅಯ್ಯೋ ನಾನು ನಿಮಗೆಲ್ಲ ಥ್ಯಾಂಕ್ಸ್ ಹೇಳಬೇಕು. ಬರೀ ಒಂದು ವಾರದ ಮುಂಚೆ ಹೇಳಿದ್ರೂ ನೀವೆಲ್ಲ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದೀರ. ನನ್ನಂಥ ಒಬ್ಬ ಶಿಳ್ಳೆ ಚಪ್ಪಾಳೆ ಕಲಾವಿದ ಕೂಡ ಹೇಗೆ ಸೂಪರ್ಸ್ಟಾರ್ ಆಗ್ಬೋದು ಅನ್ನೋದಕ್ಕೆ ನಾನೆ ಉದಾಹರಣೆ ಅಂತ ಹೇಳ್ಬೇಕು. ಇನ್ನು ನನ್ನ ಸಿನಿಮಾ ಪ್ರಯಾಣದ ಬಗ್ಗೆ ಹೇಳ್ಬೇಕು ಅಂದ್ರೆ ತುಂಬಾ ಉದ್ದ ಕತೆ ಅದು. ಚಿಕ್ಕವ್ನಿರೋವಾಗ ಸಿಕ್ಕಾಪಟ್ಟೆ ಸ್ಟೇಜ್ ಫಿಯರ್, ಭಯ ನಂಗೆ. ಒಂದು ಡ್ರಾಮಕ್ಕೆ ಡೈಲಾಗ್ ಹೇಳೋದಕ್ಕೆ ಕರದ್ರು. ನಂಗೆ ಸರಿಯಾಗಿ ಹೇಳಕ್ಕೆ ಆಗ್ಲಿಲ್ಲ. ರಿಜೆಕ್ಟ್ ಮಾಡ್ಬಿಟ್ರು.

ಅದಾದ್ ಮೇಲೆ ಸುಮಾರು ನನಗಾಗ 12-13 ವರ್ಷ ಇರಬಹುದು. ಚಾಮರಾಜಪೇಟೆಲ್ಲಿ ಒಂದು ಮಕ್ಕಳ ಕೂಟ ಅಂತ ಇದೆ. ಅಲ್ಲಿ ಕಂಪೌಂಡರ್ ಗುಂಡ ಅನ್ನೋ ಡ್ರಾಮ. ಅಲ್ಲೇ ಆಟ ಆಡ್ತಿರೋ ಮಕ್ಳನ್ನೆಲ್ಲ ಕರದ್ರು ಒಂದು ಡೈಲಾಗ್ ಹೇಳೋಕೆ. ಹಿಂದೆ ಸ್ಕೂಲ್ನಲ್ಲಿ ತೆತೆತೆ ಪೆಪೆಪೆ ಅಂದು ರಿಜೆಕ್ಟ್ ಆಗಿದ್ದು ನೆನಪಿತ್ತಲ್ವಾ. ಅದ್ಕೆ ಡೈಲಾಗ್ನ ಜೋರಾಗಿ ಕೂಗಿದೆ. ಅವ್ರು ಇಂಪ್ರೆಸ್ ಆಗಿ ನಂಗೆ ಹೀರೋ ಪಾತ್ರ ಕೊಟ್ಬಿಟ್ರು. ನಾನೇ ಹೀರೋ ಆ ಡ್ರಾಮಕ್ಕೆ. ಗುಂಡ ಆಗಿ ಅಭಿನಯಿಸ್ದೆ. ಚಿಕ್ಕಮಕ್ಳು ಏನೇ ಮಾಡಿದರೂ ಖುಷಿ ಆಗತ್ತಲ್ಲ. ಜನ ಎಲ್ಲ ಜೋರಾಗಿ ಚಪ್ಪಾಳೆ ತಟ್ಟಿ. ಏನ್ ಅನಿಸಿಬಿಟ್ಟಿತು ನಂಗೆ ಅಂದ್ರೆ ಇವರೆಲ್ಲ ನನ್ ಸಲುವಾಗಿ ಇಷ್ಟೊಂದು ಚಪ್ಪಾಳೆ ತಟ್ಟುತಿದಾರೆ ಅಂದ್ರೆ ನಾನು ಏನೋ ಒಂದು ಆಗಬಹುದು.
ಅವತ್ತೇ ಸಿನಿಮಾದಲ್ಲಿ ದೊಡ್ಡ ಹೀರೋ ಆಗ್ಬೇಕು ಆಮೇಲೆ ಪಾಲಿಟಿಕ್ಸ್ ಹೋಗ್ಬೇಕು, ದೇಶನೆಲ್ಲ ಉದ್ಧಾರ ಮಾಡಬೇಕು ಅಂತ, ನೀವು ನಂಬ್ತೀರೋ ಇಲ್ವೋ 13ನೇ ವರ್ಷದಲ್ಲಿ ಆಲೋಚಿಸಿದ್ದೆ. ಹೀಗೆ ವಿಚಿತ್ರವಾದೊಂದು ಐಡಿಯಾ ಬಂತು. ಆದ್ರೆ ಹೆಂಗ್ ಮಾಡೋದು ಇದ್ನೆಲ್ಲ, ಯಾರ್ ಕರೀತಾರೆ ನನ್ನ, ಅಂತ ವಿಚಾರ ಮಾಡಿ, ಏನಾದರೂ ಕಲ್ತ್ಕೋಬೇಕು ಅಂತ, ಹಾಗಾಗಿ ಆವಾಗ್ಲಿಂದಾನೇ ಕತೆ ಬರಿಯೋದು, ಹಾಡುಗಳನ್ನ ಬರಿಯೋದು ಎಲ್ಲ ಶುರು ಮಾಡಿದೆ. ಆಮೇಲೆ ಕಾಶಿ ಸರ್ನ ಅಪ್ರೋಚ್ ಮಾಡಿದೆ. ಅವ್ರು ನಂಗೆ ಕೆಲಸ ಕೊಟ್ರು. ಒಂದು ಹಾಡು ಬರಿಯೋ ಚಾನ್ಸ್ ಕೊಟ್ರು. ಅದಾದ್ಮೇಲೆ ತರ್ಲೆ ನನ್ಮಗ ಮಾಡಿದೆ, ಶ್ ಮಾಡಿದೆ. ಅದಾದ್ ಮೇಲೆ ಓಂ, ಆಪರೇಶನ್ ಅಂತ. ಹೀಗೆ ಇಲ್ಲಿವರ್ಗೂ ಬಂದಿದೀನಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications