ಹದಿಮೂರನೇ ವಯಸ್ಸಲ್ಲಿ ಉಪೇಂದ್ರ ಕಂಡ ಕನಸು
ವೈಶಾಲಿ : ನಮಸ್ಕಾರ ಉಪೇಂದ್ರ ಅವ್ರೆ. ಮೊದಲಿಗೆ ಬಾಸ್ಟನ್ನಿನ ಸಮಸ್ತ ಕನ್ನಡಿಗರ ಪರವಾಗಿ ಮತ್ತೊಮ್ಮೆ ಸ್ವಾಗತ. ನಿಮ್ಮ ಅಮೆರಿಕೆಯ ಸುತ್ತಾಟದ ದಾರಿಯಲ್ಲಿ ನಮ್ಮನ್ನೂ ನೋಡಲು ಬಂದಿದ್ದಕ್ಕೆ ತುಂಬಾ ಖುಷಿ. ನೀವು ಕಾಶೀನಾಥ್ ಅವರನ್ನು ನಿಮ್ಮ ಗಾಡ್ಫಾದರ್ ಅಂತ ಹೇಳಿಕೊಂಡಿದ್ದೀರ. ಹಾಗೆ ನೋಡಿದ್ರೆ ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಹೆಸರಾಗಲೀ, ಕೃಪಾಕಟಾಕ್ಷವಿಲ್ಲದೆ ಮೇಲೆಬಂದವರು ನೀವು. ತರ್ಲೆ ನನ್ಮಗನ ಕ್ರಿಯಾಶೀಲ ಯುವನಿರ್ದೇಶಕನಿಂದ ಆರಂಭಿಸಿ ಉಪ್ಪಿ2ವಿನ ಸೂಪರ್ ಸ್ಟಾರ್ ಉಪೇಂದ್ರ ಅವ್ರ ಈ ಬೆಳವಣಿಗೆ, ಪ್ರಯಾಣ ಹೇಗಿತ್ತು ಅಂತ ಸಂಕ್ಷಿಪ್ತವಾಗಿ ನಮ್ಮ ಜೊತೆ ಹಂಚ್ಕೊತೀರ?
ಉಪ್ಪಿ : ಅಯ್ಯೋ ನಾನು ನಿಮಗೆಲ್ಲ ಥ್ಯಾಂಕ್ಸ್ ಹೇಳಬೇಕು. ಬರೀ ಒಂದು ವಾರದ ಮುಂಚೆ ಹೇಳಿದ್ರೂ ನೀವೆಲ್ಲ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದೀರ. ನನ್ನಂಥ ಒಬ್ಬ ಶಿಳ್ಳೆ ಚಪ್ಪಾಳೆ ಕಲಾವಿದ ಕೂಡ ಹೇಗೆ ಸೂಪರ್ಸ್ಟಾರ್ ಆಗ್ಬೋದು ಅನ್ನೋದಕ್ಕೆ ನಾನೆ ಉದಾಹರಣೆ ಅಂತ ಹೇಳ್ಬೇಕು. ಇನ್ನು ನನ್ನ ಸಿನಿಮಾ ಪ್ರಯಾಣದ ಬಗ್ಗೆ ಹೇಳ್ಬೇಕು ಅಂದ್ರೆ ತುಂಬಾ ಉದ್ದ ಕತೆ ಅದು. ಚಿಕ್ಕವ್ನಿರೋವಾಗ ಸಿಕ್ಕಾಪಟ್ಟೆ ಸ್ಟೇಜ್ ಫಿಯರ್, ಭಯ ನಂಗೆ. ಒಂದು ಡ್ರಾಮಕ್ಕೆ ಡೈಲಾಗ್ ಹೇಳೋದಕ್ಕೆ ಕರದ್ರು. ನಂಗೆ ಸರಿಯಾಗಿ ಹೇಳಕ್ಕೆ ಆಗ್ಲಿಲ್ಲ. ರಿಜೆಕ್ಟ್ ಮಾಡ್ಬಿಟ್ರು.

ಅದಾದ್ ಮೇಲೆ ಸುಮಾರು ನನಗಾಗ 12-13 ವರ್ಷ ಇರಬಹುದು. ಚಾಮರಾಜಪೇಟೆಲ್ಲಿ ಒಂದು ಮಕ್ಕಳ ಕೂಟ ಅಂತ ಇದೆ. ಅಲ್ಲಿ ಕಂಪೌಂಡರ್ ಗುಂಡ ಅನ್ನೋ ಡ್ರಾಮ. ಅಲ್ಲೇ ಆಟ ಆಡ್ತಿರೋ ಮಕ್ಳನ್ನೆಲ್ಲ ಕರದ್ರು ಒಂದು ಡೈಲಾಗ್ ಹೇಳೋಕೆ. ಹಿಂದೆ ಸ್ಕೂಲ್ನಲ್ಲಿ ತೆತೆತೆ ಪೆಪೆಪೆ ಅಂದು ರಿಜೆಕ್ಟ್ ಆಗಿದ್ದು ನೆನಪಿತ್ತಲ್ವಾ. ಅದ್ಕೆ ಡೈಲಾಗ್ನ ಜೋರಾಗಿ ಕೂಗಿದೆ. ಅವ್ರು ಇಂಪ್ರೆಸ್ ಆಗಿ ನಂಗೆ ಹೀರೋ ಪಾತ್ರ ಕೊಟ್ಬಿಟ್ರು. ನಾನೇ ಹೀರೋ ಆ ಡ್ರಾಮಕ್ಕೆ. ಗುಂಡ ಆಗಿ ಅಭಿನಯಿಸ್ದೆ. ಚಿಕ್ಕಮಕ್ಳು ಏನೇ ಮಾಡಿದರೂ ಖುಷಿ ಆಗತ್ತಲ್ಲ. ಜನ ಎಲ್ಲ ಜೋರಾಗಿ ಚಪ್ಪಾಳೆ ತಟ್ಟಿ. ಏನ್ ಅನಿಸಿಬಿಟ್ಟಿತು ನಂಗೆ ಅಂದ್ರೆ ಇವರೆಲ್ಲ ನನ್ ಸಲುವಾಗಿ ಇಷ್ಟೊಂದು ಚಪ್ಪಾಳೆ ತಟ್ಟುತಿದಾರೆ ಅಂದ್ರೆ ನಾನು ಏನೋ ಒಂದು ಆಗಬಹುದು.
ಅವತ್ತೇ ಸಿನಿಮಾದಲ್ಲಿ ದೊಡ್ಡ ಹೀರೋ ಆಗ್ಬೇಕು ಆಮೇಲೆ ಪಾಲಿಟಿಕ್ಸ್ ಹೋಗ್ಬೇಕು, ದೇಶನೆಲ್ಲ ಉದ್ಧಾರ ಮಾಡಬೇಕು ಅಂತ, ನೀವು ನಂಬ್ತೀರೋ ಇಲ್ವೋ 13ನೇ ವರ್ಷದಲ್ಲಿ ಆಲೋಚಿಸಿದ್ದೆ. ಹೀಗೆ ವಿಚಿತ್ರವಾದೊಂದು ಐಡಿಯಾ ಬಂತು. ಆದ್ರೆ ಹೆಂಗ್ ಮಾಡೋದು ಇದ್ನೆಲ್ಲ, ಯಾರ್ ಕರೀತಾರೆ ನನ್ನ, ಅಂತ ವಿಚಾರ ಮಾಡಿ, ಏನಾದರೂ ಕಲ್ತ್ಕೋಬೇಕು ಅಂತ, ಹಾಗಾಗಿ ಆವಾಗ್ಲಿಂದಾನೇ ಕತೆ ಬರಿಯೋದು, ಹಾಡುಗಳನ್ನ ಬರಿಯೋದು ಎಲ್ಲ ಶುರು ಮಾಡಿದೆ. ಆಮೇಲೆ ಕಾಶಿ ಸರ್ನ ಅಪ್ರೋಚ್ ಮಾಡಿದೆ. ಅವ್ರು ನಂಗೆ ಕೆಲಸ ಕೊಟ್ರು. ಒಂದು ಹಾಡು ಬರಿಯೋ ಚಾನ್ಸ್ ಕೊಟ್ರು. ಅದಾದ್ಮೇಲೆ ತರ್ಲೆ ನನ್ಮಗ ಮಾಡಿದೆ, ಶ್ ಮಾಡಿದೆ. ಅದಾದ್ ಮೇಲೆ ಓಂ, ಆಪರೇಶನ್ ಅಂತ. ಹೀಗೆ ಇಲ್ಲಿವರ್ಗೂ ಬಂದಿದೀನಿ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications