ಅಮೆರಿಕದ ಬಾಸ್ಟನ್ನಿನಲ್ಲಿ ಕನ್ನಡಿಗರೊಡನೆ ಉಪ್ಪಿ ಹರಟೆ
ಬಾಸ್ಟನ್ನಿನ ಮಂದಾರ-ನ್ಯೂ ಇಂಗ್ಲಂಡ್ ಕನ್ನಡ ಕೂಟದೊಡನೆ ನಾವಿಕ ಮತ್ತು VSNE ಸಹಯೋಗದಲ್ಲಿ ನಡೆದ "ಉಪ್ಪಿ ನೈಟ್" ರಸಮಂಜರಿ ಕಾರ್ಯಕ್ರಮ ವಿಶೇಷವಾದ ಸಂಭ್ರಮಾಚರಣೆಯಾಗಿತ್ತು.
ಇದುವರೆಗೂ ಕನ್ನಡ ಸಿನಿಮಾದ "ಸೂಪರ್ಸ್ಟಾರ್" ಹೀರೋವೊಬ್ಬ ಜನಸಾಮಾನ್ಯರೊಡನೆ ಹೀಗೆ ಬೆರೆತು ಕುಣಿದದ್ದು ಬಹು ವಿರಳ ಎಂದೇ ಹೇಳಬೇಕು. ಅಮೆರಿಕೆಗೆ ಹಲವು ಬಗೆಯ ಸಮ್ಮೇಳನಗಳಿಗೆ ಆಗಮಿಸುವ ತಾರೆಯರು ತಾವು ಬಹುತೇಕ ಆಕಾಶದಿಂದ ಉದುರಿದ ನಕ್ಷತ್ರವೆನ್ನುವಂತೆ ವರ್ತಿಸಿದ್ದನ್ನು ನೋಡಿದ್ದ ನಮಗೆಲ್ಲ ಉಪೇಂದ್ರರವರ ಸರಳ ಸಜ್ಜನಿಕೆ ಬಹುವೇ ಆಹ್ಲಾದಕರವಾಗಿತ್ತು.
ನೆರೆದೆವರೆಲ್ಲರೊಡನೆ ನಗುಮೊಗದಲ್ಲೇ ಛಾಯಾಚಿತ್ರ ತೆಗೆಸಿಕೊಂಡು, ಬಾಸ್ಟನ್ ಕನ್ನಡಿಗರ ನೆನಪಿನ ಕಾಣಿಕೆ, ಸನ್ಮಾನವನ್ನು ಸ್ವೀಕರಿಸಿದ ಉಪ್ಪಿ ಚಿತ್ರನಟನೊಬ್ಬ ಎಲ್ಲರೊಳಗೊಂದಾಗಬಲ್ಲ ಎಂದು ತೋರಿಸ್ಕೊಟ್ಟರು. ಬಾಸ್ಟನ್ ಕನ್ನಡಿಗರಿಗೆ ಆ ದಿನ ಬಹುಕಾಲ ನೆನೆಪಿನಲ್ಲುಳಿಯುವುದಂತೂ ಖಂಡಿತ. "ಉಪ್ಪಿಟ್ಟು" ಅಜೀರ್ಣವಾದ ಪ್ರೇಕ್ಷಕರೂ ಕೂಡ "ಉಪ್ಪಿ"ಗಿಂತ ರುಚಿ ಬೇರೆಯಿಲ್ಲ ಎಂದು ತಲೆದೂಗಿದ್ದರು.

ಅಂದು "ಎಕ್ಸ್ಕ್ಯೂಸ್ ಮಿ ಪ್ಲೀಸ್" ಹಾಡಿನೊಂದಿಗೆ ಸ್ಥಳೀಯ ಯುವಕರೊಂದಿಗೆ ಭರ್ಜರಿ ಎಂಟ್ರಿ ಕೊಟ್ಟ ಉಪ್ಪಿ ಸುಶ್ರಾವ್ಯ ಗಾಯಕಿ ಸೌಮ್ಯ ಸಂದೀಪ್ ರವರೊಡನೆ "ನಾನು ಜೀತೇಂದ್ರ ಮತ್ತು ಚಿತ್ರಾನ್ನ ಚಿತ್ರಾನ್ನ" ಹಾಡಿ ನರ್ತಿಸಿದರು. ಎಲ್ಲ ಹಾಡು ಕುಣಿತದ ನಡುವೆ ಉಪ್ಪಿಯನ್ನು ಕೊನೆಗೂ ತಮ್ಮ ವಿಶಿಷ್ಟ ಶೈಲಿಯ ಮಾತಿನ ಸರಣಿ ಆರಂಭಿಸುವಂತೆ ಚಾಲನೆ ನೀಡುವ ಸರದಿ ನನ್ನದಾಗಿತ್ತು.
ಕಾಲೇಜಿನ ದಿನಗಳ ಓಂ, A ಸಿನಿಮಾಗಳ ಉಪ್ಪಿ ಕ್ರೇಜ್ ದಿನಗಳೆಲ್ಲ ನೆನಪಾಗುತ್ತಿದ್ದವು. A ಸಿನಿಮಾಕೆಂದು ಒಂದಿಷ್ಟು ಗೆಳತಿಯರನ್ನು ಎಳೆದುಕೊಂಡು ಹೋಗಿ ನನಗಂತೂ ಸಿಕ್ಕಾಪಟ್ಟೆ ಇಷ್ಟವಾಗಿ, ಆದರೆ ಅವರಿಂದ ಬಾಯಿಗೆ ಬಂದಂತೆ ಬೈಸಿಕೊಂಡಿದ್ದೆಲ್ಲ ಕಣ್ಮುಂದೆ ಬಂತು.
ಕಳೆದ ಸಾರಿ ಭಾರತಕ್ಕೆ ಹೋದಾಗ, ಹಿಂತಿರುಗಿ ವಿಮಾನ ಹತ್ತುವ ಕೆಲವೇ ಗಂಟೆಗಳ ಮುಂಚೆ ಸೂಪರ್ ಸಿನಿಮಾ ನೋಡಿ ಬಂದಿದ್ದು ನೆನಪಾಗಿ ಮನದಲ್ಲೇ ನಗು ಬಂತು. ಅವರ ಸಿನಿಮಾಗಳ ಚಟಪಟ ಮಾತಿನ ಮತಾಪು ಇಲ್ಲಿಯೂ ಸಿಡಿಯುವುದೇ ಎಂಬ ನನ್ನ ಸಂದೇಹದಲ್ಲೇ ಪ್ರಶ್ನೆ ಆರಂಭಿಸಿದೆ. ಅಲ್ಲಿಂದ ಆರಂಭವಾದ ಅವರ ನಿರರ್ಗಳ ವಾಕ್ಝರಿ ಸುಮಾರು ಒಂದೂವರೆ ಎರಡು ಗಂಟೆಗಳ ಕಾಲ ಹರಿದು ಸಮಯ ಸರಿದದ್ದೇ ತಿಳಿಯಲಿಲ್ಲ. ಉಪ್ಪಿ 2 ಚಿತ್ರದ ಪ್ರಚಾರಕ್ಕೆಂದು ಅಮೆರಿಕಕ್ಕೆ ಬಂದಿರುವ ಉಪೇಂದ್ರ ಅವರೊಂದಿಗಿನ ಸಂವಾದದ ಝಲಕು ಮುಂದಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications