ಸಿಂಗಪುರದಲ್ಲಿ ಬಾರಿಸಿದ 'ಕನ್ನಡ ಕಲಿ' ಡಿಂಡಿಮ
ಸುಮಾರು ಸಲ ಸಿಂಗಪುರ ಮಕ್ಕಳಿಗೆ ಕನಿಷ್ಠ ಪಕ್ಷ ಸ್ವಲ್ಪಮಟ್ಟಿಗಿನ ಕನ್ನಡ ಅಕ್ಷರಗಳ ಜ್ಞಾನವನ್ನು ಕಲಿಸಿಕೊಡುವ ವಿಷಯದ ಚರ್ಚೆ ನಡೆಯುತ್ತಲೇ ಬಂದಿದೆ. ಇದಕ್ಕೆ ಪೂರಕವೆಂಬಂತೆ 2012ರ ಜನವರಿಯಲ್ಲಿ ಕನ್ನಡ ಸಂಘ ಸಿಂಗಪುರ "ಕನ್ನಡ ಕಲಿಕಾ ಕೇಂದ್ರ"ದ ಸಮಿತಿಯನ್ನು ರಚಿಸಿ ಅದರಡಿಯಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡು ಅದರೆಡೆಗೆ ರೂಪು-ರೇಷೆಗಳನ್ನು ನಿರೂಪಿಸಿ, ಮಾಡಬೇಕಾದಂತಹ ಕಾರ್ಯಗಳ ಪಟ್ಟಿಯನ್ನು ತಯಾರಿಸಿ, ಯೋಜನೆಯ ಕಾರ್ಯತಂತ್ರಗಳ ಪರಿಧಿಯನ್ನು ನಿರ್ವಹಿಸಲಾಯಿತು.
ಮೊದಲನೆಯ ಹೆಜ್ಜೆಯಾಗಿ 28 ಜನವರಿ 2012ರ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಕಥೆ ಹೇಳುವ ಸ್ಪರ್ಧೆ ಹಾಗು ಪೋಷಕರಿಗೆ "ಕನ್ನಡದ ಆಳಿವು-ಉಳಿವು"ವೆಂಬ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು. ವಿಚಾರ ಸಂಕಿರಣದಲ್ಲಿ ಬಹುಪಾಲು ತಂದೆ-ತಾಯಿಯಂದಿರು ತಮ್ಮ ಮಕ್ಕಳು ಕನ್ನಡ ಕಲಿಯಬೇಕೆಂಬ ಉತ್ಸುಕತೆಯಲ್ಲಿದ್ದರೂ ಹೇಗೆ, ಎಲ್ಲಿ ಹಾಗು ಯಾವುದು ಸೂಕ್ತ/ಸುಲಭ ಮತ್ತು ಕನ್ನಡದ ಬಗೆಗಿನ ಸಾಮಾನ್ಯ ಅಕ್ಷರಜ್ಞಾನದ ಅವಶ್ಯಕತೆಯ ವಿಷಯಗಳ ಅರ್ಥಪೂರ್ಣ ಚರ್ಚೆಗಳು ನಡೆದವು.
ಇದರ ಫಲವಾಗಿ ಕನ್ನಡ ಸಂಘದ ಪದಾಧಿಕಾರಿಗಳು "ಕನ್ನಡ ಕಲಿಕಾ ಕೇಂದ್ರ"ದಡಿಯಲ್ಲಿ ಮಕ್ಕಳಿಗೆ ಕನ್ನಡದ ಅಕ್ಷರಮಾಲೆಯನ್ನು ಪರಿಚಯಿಸಿ ಕಲಿಸಿಕೊಡಬೇಕೆಂಬ ನಿರ್ಧಾರವನ್ನು ಕೈಗೊಂಡರು. ಆಗಸ್ಟ್ನಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ "ಕನ್ನಡ ಕಲಿ" ತರಗತಿಗಳನ್ನು ಪ್ರಾರಂಭಮಾಡುವ ನಿರ್ಧಾರವನ್ನು ತೆಗೆದುಕೊಂಡು, ಸಂಘದ ಸಹ ಕಾರ್ಯದರ್ಶಿಯಾದ ರಾಮನಾಥ್ ಅವರ ಮುಂದಾಳತ್ವದಲ್ಲಿ ವೆಂಕಟ್, ಶ್ರೀನಿವಾಸ್ ಹಾಗು ರಾಜೇಶ್ ಹೆಗಡೆ ಅವರೊಡಗೂಡಿ ನಿರ್ವಹಿಸಲು ನಿರ್ಧರಿಸಲಾಯಿತು.

ಕನ್ನಡ ಸಂಘ (ಸಿಂಗಪುರ)ದ ಈ ಎಲ್ಲಾ ಪ್ರಯತ್ನಗಳಿಗೆ ಸದಾ ನಮ್ಮ ಬೆನ್ನು ತಟ್ಟಿ ಈ ಕಾರ್ಯಕ್ರಮದ ಬೆನ್ನೆಲುಬಾಗಿ ನಮ್ಮನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದ ಸಲಹೆ, ಸೂಚನೆ ಹಾಗು ಸೂಕ್ತ ಸಮಯದಲ್ಲಿ ಕನ್ನಡ ಕಲಿಯಲು ಅನುಕೂಲವಾದಂತಹ ಪಠ್ಯಪುಸ್ತಕ ಹಾಗು ಸಲಕರಣೆಗಳು ನಮ್ಮ ವೇಳಾಪಟ್ಟಿ ಹಾಗು ತರಗತಿಯ ವಿಷಯಗಳನ್ನು ನಿರ್ಧರಿಸುವಲ್ಲಿ ಬಹಳ ಸಹಕಾರಿಯಾದವು.
ಮೊದಲನೆಯ ಹೆಜ್ಜೆಯಾಗಿ ತರಗತಿಗಳನ್ನು ಎಲ್ಲರಿಗೂ ಅನುಕೂಲವಾದಂತಹ ಸ್ಥಳವನ್ನು ನೋಡಬೇಕು ಎನ್ನುವ ವಿಷಯಗಳ ಚರ್ಚೆ ನಡೆಯುತ್ತಿರುವಾಗ ರಾಮನಾಥ್ ಅವರು SINDA (Singapore Indian Association)ನಲ್ಲಿ ತರಗತಿಯ ಕೊಠಡಿಗಳನ್ನು 28 ಸೆಪ್ಟೆಂಬರ್ ರಿಂದ-30 ಅಕ್ಟೋಬರ್ ರ ಪ್ರತಿ ಭಾನುವಾರ ಬೆಳಿಗ್ಗೆ 9.30-12.30ರವರಗೆ ಕಾಯ್ದಿರಿಸಲಾಗಿದೆ ಎಂಬ ವಿಷಯವನ್ನು ತಿಳಿಸಿದಾಗ ಎಲ್ಲರಿಗೂ ಇದು ತುಂಬ ಸೂಕ್ತವಾದ ಸ್ಥಳವೆನಿಸಿತು. ಕನ್ನಡ ಸಂಘದ ವತಿಯಿಂದ ಮಕ್ಕಳ ನೋಂದಣಿಗಾಗಿ ಮಿಂಚಂಚೆ ಕಳುಹಿಸಿದ ಕೆಲವೇ ದಿನಗಳಲ್ಲಿ ಸದಸ್ಯರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತು, 35 ಮಕ್ಕಳು ತಮ್ಮ ಹೆಸರುಗಳನ್ನು ನೋಂದಾಯಿಸಿದ್ದು ನಮ್ಮ ಹುಮ್ಮಸ್ಸನ್ನು ಹೆಚ್ಚಿಸಿ ನಮಗೆ ಹೆಚ್ಚು ಕಾರ್ಯೋನ್ಮುಖರಾಗಲು ಹುರಿದುಂಬಿಸಿತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications