ಕನ್ನಡ ಕಲಿಯಲು ಉತ್ಸಾಹದಿಂದ ಬಂದ ಮಕ್ಕಳು
ಸೆಪ್ಟೆಂಬರ್ ಮೊದಲನೆಯ ವಾರದಿಂದಲೇ "ಕನ್ನಡ ಕಲಿ" ಉತ್ಸವಕ್ಕೆ ಭರದ ಸಿದ್ಧತೆಗಳು ಅತ್ಯೋತ್ಸಾಹದಲ್ಲಿ ಪ್ರಾರಂಭಗೊಂಡವು. ಮೊದಲಿಗೆ ನಮ್ಮ ವೇಳಾಪಟ್ಟಿ ತಯಾರಾಯಿತು. ಇದರಲ್ಲಿ ಮುಖ್ಯವಾಗಿ ಈ 5 ಭಾನುವಾರಗಳನ್ನು ಯಾವ ರೀತಿಯಲ್ಲಿ ವಿಂಗಡಿಸಿ ಪಠ್ಯವನ್ನು ತಯಾರಿಸಬೇಕೆಂಬ ವಿಷಯಗಳು ಚರ್ಚಿಸಲ್ಪಟ್ಟವು. ಪ್ರತಿವಾರವೂ ಮೂರು ಗಂಟೆಗಳ ಕಾಲ ಅಕ್ಷರಗಳ ಅಭ್ಯಾಸ ಮಾತ್ರವಲ್ಲದೆ, ಮಕ್ಕಳಿಗೆ ಕನ್ನಡದ ಕಥೆಗಳು, ಶಿಶುಗೀತೆಗಳ ಪರಿಚಯ ಮತ್ತು ಅಕ್ಷರಗಳ ಜೋಡಣೆ, ಸರಳ ಪದಗಳ ಪರಿಚಯ, ಅಕ್ಷರ ಹಾಗು ಪದಗಳೊಂದಿಗಿನ ಆಟಗಳನ್ನು ಆಡಿಸಿ "ಕನ್ನಡ ಕಲಿ"ಯನ್ನು ಮಕ್ಕಳಿಗೆ ಅರ್ಥಪೂರ್ಣ ಕಲಿಕೆಯ ಜೊತೆಗೆ ವಿನೋದದಿಂದ ಕೂಡಿದ ಅನುಭವವಾಗಬೇಕೆಂಬುದು ಎಲ್ಲರ ಒಟ್ಟಾರೆ ಅಭಿಪ್ರಾಯವಾಗಿತ್ತು. ಕೊನೆಯ ದಿನ ಮಕ್ಕಳಿಗೆ ಸಣ್ಣ ಪರೀಕ್ಷೆಯನ್ನು ಸಹ ನಡೆಸಬೇಕೆಂಬುದು ನಮ್ಮ ಉದ್ದೇಶ.
ಮೊದಲನೆಯ ದಿನದಂದು ಉಪಾಧ್ಯಾಯರು ತಾಣ ಸೇರುವುದಕ್ಕಿಂತ ಮುಂಚಿತವಾಗಲೇ ತಂದೆ-ತಾಯಿಯಂದಿರು ಮಕ್ಕಳೊಂದಿಗೆ ಕಾಯುತ್ತಿದ್ದುದು ಅವರ ಆಸಕ್ತಿಗೆ ಹಿಡಿದ ಕನ್ನಡಿಯಾಗಿತ್ತು. ಮಕ್ಕಳು ಸಹ ಬಹಳ ಉತ್ಸುಕತೆಯಿಂದ ಬಂದು ಸೇರಿದ್ದರು. ಕೆಲವು ಚಿಕ್ಕ ಮಕ್ಕಳು ತರಗತಿಯ ಒಳಗಡೆ ಬರಲು ಅಳುತ್ತಿದ್ದರೆ, ತಂದೆ-ತಾಯಿಯಂದಿರು ಸಮಾಧಾನ ಮಾಡಿ ಚಾಕಲೇಟ್ ಕೊಟ್ಟು ಒಳಗಡೆ ಕಳುಹಿಸಿ ಸ್ವಲ್ಪ ಹೊತ್ತು ತಾವು ಸಹ ತರಗತಿಯಲ್ಲಿ ಕೂಡಲು ಅನುಮತಿಯನ್ನು ಪಡೆದು ಮಕ್ಕಳೊಂದಿಗೆ ತಾವು ಪುನಃ ಕನ್ನಡವನ್ನು ಕಲಿಯುವಲ್ಲಿ ಭಾಗವಹಿಸಿದ್ದು, ನಮಗೆ ಒಂದು ಅನೀರ್ವಚನೀಯವಾದಂತಹ ಅನುಭವಗಳನ್ನು ತಂದುಕೊಟ್ಟಿತು. ನಮಗೆಲ್ಲರಿಗೂ ನಾವು ಮಾಡುತ್ತಿರುವ ಕಾರ್ಯದ ಬಗ್ಗೆ ಹೆಮ್ಮೆ ಹಾಗು ನಮ್ಮ ನಾಡು-ನುಡಿಯ ಬೆಳವಣಿಗೆಗೆ ಎನೋ ನಮ್ಮ ಅಳಿಲು ಸೇವೆ ಮಾಡುತ್ತಿದ್ದೇವೆಂಬ ಧನ್ಯತಾ ಭಾವ.

ತರಗತಿಯಲ್ಲಿ ಬಂದಂತಹ ಮಕ್ಕಳಿಗೆ ಹಾಜರಾತಿಯನ್ನು ತೆಗೆದುಕೊಂಡು ಮೊದಲನೆಯದಾಗಿ ಎಲ್ಲರಿಗೂ ಕನ್ನಡದ ವರ್ಣಮಾಲೆಯಲ್ಲಿ ಸ್ವರಗಳನ್ನು ಕಲಿಸಲು ಶುರುಮಾಡಿದೆವು. ಎಲ್ಲಾ ಮಕ್ಕಳು ಅಂದು "ಅ,ಆ,ಇ,ಈ...... ಅಂ ಅಃ" ವರೆಗೂ ಕಲಿತು, ಸುಂದರವಾಗಿ ತಮ್ಮ ಪುಸ್ತಕಗಳಲ್ಲಿ ಬರೆದು ಆನಂದಿಸಿದರು. ಇಲ್ಲಿ ತಪ್ಪದೇ ಉಲ್ಲೇಖಿಸಬೇಕಾದ ವಿಷಯವೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರದಿಂದ ದೊರೆತಂತಹ ಪಠ್ಯಪುಸ್ತಕಗಳು ಬಹಳ ಸುಂದರವಾಗಿ ರೂಪಿಸಲಾಗಿದ್ದು, ಮಕ್ಕಳು ಕಲಿಯಲು ತುಂಬಾ ಅನುಕೂಲವಾದಂತಹ ವಿನ್ಯಾಸವನ್ನು ಹೊಂದಿದ್ದವು.
ವಿರಾಮದ ಸಮಯದಲ್ಲಿ ಮಕ್ಕಳಿಗೆ ತಿಂಡಿ-ತೀರ್ಥಗಳ ಸರಬರಾಜನ್ನು ಮಾಡಲಾಯಿತು, ಕನ್ನಡದ ಕಥೆಗಳನ್ನು ವ್ಯಂಗಚಿತ್ರದ ವಿಡಿಯೋ ಮೂಲಕ ತೋರಿಸಿದಾಗ ಅವರ ಆನಂದ ಮುಗಿಲಿಗೇರಿತ್ತು! 3 ಗಂಟೆಗಳ ಕಾಲ ಈ ಕಥೆಗಳನ್ನು ಹಾಕಿದ್ದರೂ ಅದನ್ನು ನೋಡುವಷ್ಟು ಶಕ್ತಿ, ತವಕ ಅವರಿಗಿತ್ತೆಂಬುದು ಬೇರೆ ವಿಷಯ! ಕೊನೆಯಲ್ಲಿ ಮಕ್ಕಳಿಗೆ ಮನೆಯಲ್ಲಿ ಅಭ್ಯಾಸ ಮಾಡಬೇಕೆಂದು ಒತ್ತಿ ಹೇಳಿ ಅವರವರ ಪೋಷಕರಿಗೂ ಮಿಂಚಂಚೆ ಮೂಲಕ ಮನೆಗೆಲಸದ ವಿವರಗಳನ್ನು ಕೊಟ್ಟು ಅಭ್ಯಾಸ ಮಾಡಿಸುವಂತೆ ಕೋರಲಾಯಿತು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications