ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಧನ್ಯವಾದಗಳು
ಎರಡನೆಯ ವಾರ ನಾವೆಲ್ಲಾ ಬೇಗ ಬಂದು ಸೇರಿ, ಬಹುಶಃ ಈ ವಾರ ಸುಮಾರು ಮಕ್ಕಳು ತರಗತಿಗೆ ಚಕ್ಕರ್ ಹಾಕ್ತಾರೆ ಎಂಬ ನಮ್ಮ ಕಲ್ಪನೆಯನ್ನು ಸುಳ್ಳುಮಾಡಲು ಸುಮಾರು ಮಕ್ಕಳು ನಮಗಿಂತ ಮುಂಚಿತವಾಗಿಯೇ... ಬಂದು ಕೂತಿದಿದ್ದು, ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವಂತೆ ಮಾಡಿತ್ತು.
ಎರಡನೆಯ ದಿನದ ಪಾಠ ಸ್ವಲ್ಪ ತೀವ್ರಗತಿಯಲ್ಲಿ ಸಾಗಿ ಮಕ್ಕಳಿಗೆ ಎಲ್ಲಾ ವ್ಯಂಜನಗಳ ಪರಿಚಯವಾಯಿತು. ಮಕ್ಕಳು ಬೇಗ ಕಲಿಯುತ್ತಾರೆಂಬುದು ಸದೃಶ ಸತ್ಯವಾಗಿ ಕಣ್ಮುಂದೆ ದರ್ಶನವನ್ನು ತೋರಿತ್ತೆಂದರೂ ಅತಿಶಯೋಕ್ತಿಯಾಗಲಾರದು. ಯಥಾ ಪ್ರಕಾರದ ವಿರಾಮ, ತಿಂಡಿ-ತೀರ್ಥ ಹಾಗು ವ್ಯಂಗಚಿತ್ರದ ವಿಡಿಯೋಗಳ ಸರದಿ ಮುಗಿದ ಮೇಲೆ ಈ ಬಾರಿ ಮಕ್ಕಳಿಗೆ "ಒಂದು ಎರಡು ಬಾಳೆಲೆ ಹರಡು", "ಕರಡಿ ಬೆಟ್ಟಕ್ಕೆ ಹೋಯಿತು" ಎಂಬ ಶಿಶುಗೀತೆಗಳನ್ನು ಹೇಳಿಕೊಡಲಾಯಿತು. ಕೇವಲ ಬರಹ, ಅಭ್ಯಾಸಗಳಲ್ಲದೆ ಹಾಡು, ಆಟಗಳ ಮೂಲಕ ಮಕ್ಕಳನ್ನು ಮನರಂಜಿಸುವ ಮೂಲಕ ಕನ್ನಡವನ್ನು ಕಲಿಸುವ ನಮ್ಮ ಮೂಲ ಉದ್ದೇಶ ಸಫಲವಾಯಿತು.

ಮೂರನೆಯ ವಾರದಲ್ಲಿ "ಯ ರ ಲ ವ ಹಾಗು ಎಲ್ಲಾ ವರ್ಣಮಾಲೆಗಳನ್ನೊಳಗೊಂಡ ಸರಳ ಪದಗಳನ್ನು ಓದುವುದು, ಬರೆಯುವ ಪ್ರಯತ್ನವನ್ನು ಎಲ್ಲಾ ಮಕ್ಕಳಿಂದ ಮಾಡಲಾಯಿತು. ನಾಲ್ಕನೆಯ ವಾರದಲ್ಲಿ "ಕಾಗುಣಿತಗಳ ಪರಿಚಯ ಹಾಗು ಮತ್ತೊಮ್ಮೆ ಪುನರ್ಅಭ್ಯಾಸಗಳ ಜೊತೆಗೆ ಎಲ್ಲ ಮಕ್ಕಳು ಬಂದು ತಾವೇ ನಾವುಗಳು ಹೇಳಿದ ಪದಗಳನ್ನು ಪಲಕದ ಮೇಲೆ ಬರೆಯುವಂತೆ ಮಾಡುವ ಅಭ್ಯಾಸವನ್ನು ಮಾಡಲಾಯಿತು. ತಮ್ಮ ಹೆಸರನ್ನು ಕನ್ನಡದಲ್ಲಿ ಹೇಗೆ ಬರೆಯಬೇಕೆಂದು ಬಹುತೇಕ ಎಲ್ಲರೂ ಬಹು ಉತ್ಸುಕತೆಯಿಂದ ತಿಳಿದು ಬರೆಯುವ ಪ್ರಯತ್ನ ಮಾಡುತ್ತಿದ್ದುದು ಗಮನೀಯವಾದಂತಹ ಸಂಗತಿ. ಕೊನೆಯ ತರಗತಿಯಲ್ಲಿ ಒಂದು ಸಣ್ಣ ಪರೀಕ್ಷೆಯಲ್ಲಿ ಮಕ್ಕಳಿಗೆಲ್ಲರಿಗೂ ವರ್ಣಮಾಲೆ ಹಾಗು ಸರಳಪದಗಳನ್ನು ಬರೆಯಲು ಸೂಚಿಸಿಲಾಯಿತು.
ಕೆಲವು ಮಕ್ಕಳು ಅಕ್ಷರಗಳನ್ನು ಬೇಗ ಗುರುತಿಸಿ ಓದುವಲ್ಲಿ ನಿಪುಣರಾದರೂ, ಅಕ್ಷರಗಳನ್ನು ತಾವೇ ಸ್ವತಃ ಬರೆಯುವಲ್ಲಿ ಸ್ವಲ್ಪ ಹಿಂಜರಿದರು ಎನ್ನುವುದು ನಿಜಾಂಶ. ಇದಕ್ಕಾಗಿಯೇ ನಾವು ಮಕ್ಕಳಿಗೆ ಬರೆಯುವದನ್ನು ಅಭ್ಯಾಸ ಮಾಡಬೇಕೆಂದು ಕೋರಿದ್ದೇವೆ. ಮಕ್ಕಳಲ್ಲಿ ಕನ್ನಡ ಭಾಷೆ ಹಾಗೂ ನುಡಿಯ ಪರಿಚಯದ ಜೊತೆಗೆ ಇದು ನಮ್ಮ ಮಾತೃಭಾಷೆ ಎಂಬ ಹೆಮ್ಮೆಯನ್ನು ತುಂಬಿ, ಕನ್ನಡದ ಬಗ್ಗೆ ಅಭಿರುಚಿಯನ್ನು ಹುಟ್ಟಿಸಿ ಸರಳ ಪದಗಳನ್ನು ಗುರುತಿಸಿ ಓದುವಂತಾದರೆ ನಮ್ಮ ಈ ಶ್ರಮ ಸಾರ್ಥಕ. ನಮ್ಮ ಈ ಪ್ರಯತ್ನಕ್ಕೆ ಸದಾ ಬೆನ್ನೆಲುಬಾಗಿ ನಿಂತು ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರಕ್ಕೆ ನಮ್ಮ ಧನ್ಯವಾದಗಳು.
-ವೆಂಕಟ್, ಕಾರ್ಯದರ್ಶಿ, ಕನ್ನಡ ಸಂಘ (ಸಿಂಗಪುರ)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications