ಕನ್ನಡ : ಕಲಿಯುವ ಆಸೆ, ಕಲಿಸಿದ ಧನ್ಯತೆ

ಸೆಪ್ಟಂಬರ್ 24, 2000ದಂದು ಮೊದಲ ಕನ್ನಡ ಕಲಿ ತರಗತಿ ಕರ್ನಾಟಕ ಸಾಂಸ್ಕೃತಿಕ ಸಂಘದ ಮುಂದಾಲೋಚನೆಯಿಂದ ಅರ್ವೈನ್ ನಗರದಲ್ಲಿ ಪ್ರಾರಂಭವಾಯ್ತು. ಕನ್ನಡಿಗರ ಮನದಲ್ಲಿದ್ದ ಅದಮ್ಯ ಆಸೆಗೆ ಅಭಿವ್ಯಕ್ತಿ ನೀಡಿತು. ಕೂಡಲೆ ಡೈಮಂಡ್ ಬಾರ್, ಸರಿಟೊಸ್, ಅನಹೈಮ್ ಹಿಲ್ಸ್, ಸಾನ್ ಫರ್ನಾಂಡೊ ವ್ಯಾಲಿ, ಮತ್ತು ಪಾಮ್ಡೇಲ್ ಗಳಲ್ಲಿ ಕನ್ನಡ ಕಲಿ ಶಾಖೆಗಳು ಚಿಗುರೊಡೆದವು. ಕನ್ನಡ ಕಲಿಸುತ್ತ ಕನ್ನಡದ ಕಂಪನ್ನು ತೆಂಕಣ ನಾಡಿನ ಉದ್ದಗಲಕ್ಕೂ ಹರಡತೊಡಗಿದವು. ಸದ್ಯ, ಅರ್ವೈನ್, ಸರಿಟೊಸ್, ಮತ್ತು ವ್ಯಾಲಿ ಶಾಖೆಗಳು ಮಾತ್ರ ಕ್ರಿಯಾಶೀಲವಾಗಿದ್ದರೂ ಎಂದಿಗಿಂತ ಹೆಚ್ಚು ವಿದ್ಯಾರ್ಥಿಗಳು ಇಂದು ಕನ್ನಡ ಕಲಿಯುತ್ತಿದ್ದಾರೆ; ಹೆಚ್ಚು ಶಿಕ್ಷಕರು ಪಾಠ ಹೇಳುತ್ತಿದ್ದಾರೆ; ಹೆಚ್ಚು ಸಹಾಯಕರು ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ.
ಮಾತು ಓದು ಬರಹಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಕಲಿಯುತ್ತಿದ್ದಾರೆ. ವೇದಿಕೆಯ ಮೇಲೆ ಕನ್ನಡ ಮಾತನಾಡಿ ಕಾರ್ಯಕ್ರಮಗಳನ್ನು ನಡೆಸಿಕೊಡುವಷ್ಟು ಮುಂದುವರೆದಿದ್ದಾರೆ. ಕೆಲ ವಿದ್ಯಾರ್ಥಿಗಳು ಮೊದಲ ದಿನದಿಂದ ಹತ್ತು ವರ್ಷಗಳೂ ಕನ್ನಡ ಕಲಿಯ ಕಟ್ಟೆ ಹತ್ತಿದ್ದಾರೆ. ಓದು ಬರಹಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಜೊತೆಗೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕಾಲೇಜಿಗೆ ತೆರಳುತ್ತಿದ್ದಾರೆ. ಇದು ಕನ್ನಡ ಕಲಿಯ ಉದ್ದೇಶ ಮತ್ತು ಮಹತ್ವದ ಸಾಧನೆ.
ಇವರಿಗೆ ಕನ್ನಡ ಕಲಿ ಪದವಿ ಪ್ರದಾನ ಸಮಾರಂಭವೂ ಹತ್ತನೆಯ ವರ್ಷದ ಹಬ್ಬದ ಒಂದು ವಿಶೇಷವಾಗಿತ್ತು. ಆಕಾಶ ದೀಕ್ಷಿತ, ಶಿಲ್ಪಾ ಜಗನ್ನಾಥ, ಶೃತಿ ಶಾಂತಾರಾಮ್ ಮತ್ತು ಅರಿಂಜಯ ಮಾಧವ ತಮ್ಮ ಪದವಿ ಸ್ವೀಕಾರ ಭಾಷಣವನ್ನು ಕನ್ನಡದಲ್ಲಿ ನೀಡಿದರು. ಕನ್ನಡ ಸಂಸ್ಕೃತಿ ಕನ್ನಡ ಐಡೆಂಟಿಟಿಗಳೊಂದಿಗೆ ತಮ್ಮ ವ್ಯಕ್ತಿತ್ವಗಳನ್ನು ಕನ್ನಡ ಕಲಿ ಹೇಗೆ ರೂಪಿಸಿದೆ ಎಂದು ವಿವರಿಸಿದರು. ತಾವು ಸೇರುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕ್ಯಾಂಪಸ್ ಕ್ಲಬ್ ಗಳನ್ನು ಇವರು ಆರಂಭಿಸಲಿ ಎನ್ನುವುದು ನಮ್ಮ ಎಂದಿನ ಆಸೆ; ಆರಂಭಿಸುತ್ತಾರೆ ಎಂಬ ಭರವಸೆ ಇದೆ.
ಕನ್ನಡ ಕಲಿ ವಿದ್ಯಾರ್ಥಿಗಳು ಕರ್ನಾಟಕ ಸಾಂಸ್ಕೃತಿಕ ಸಂಘದ ಕಾರ್ಯಕ್ರಮಗಳಲ್ಲಿ ಸದಾ ಮಿಂಚುತ್ತಿದ್ದಾರೆ. ನಾಟಕ, ನೃತ್ಯ, ಹಾಡುಗಳಲ್ಲಿ ನಿಸ್ಸೀಮರಾಗಿದ್ದಾರೆ. 2006ರಲ್ಲಿ ಓದು ಬರಹಗಳೊಂದಿಗೆ “ಕನ್ನಡ ಹಾಡು" ತರಗತಿಯನ್ನು ಪ್ರಾರಂಭಿಸಲಾಯಿತು. ಕವಿತೆ, ಹಾಡುಗಳ ಮೂಲಕ ಕನ್ನಡ ಕಲಿಸುವ ಈ ಪ್ರಯತ್ನ ಇಂದು ಎಲ್ಲರಿಗೂ ಪ್ರಿಯವಾಗಿದೆ. ಇಲ್ಲಿ ಕಲಿತ ಹಾಡುಗಳು ಮಕ್ಕಳಿಗೆ ಬಾಯಿಪಾಠವಾಗಿದ್ದು ಅವರು ಹಾಡಲು ಸದಾ ಸಿದ್ಧರು.
ಶೀಲಾ ಭಟ್, ಶಿಲ್ಪಾ ಜಗನ್ನಾಥ, ನೀಲ ಕೊಟ್ರಪ್ಪ, ಆಕಾಶ ದೀಕ್ಷಿತ, ಮತ್ತು ವಿವಹ್ನಿ ಶಾಸ್ತ್ರಿ (ಕರ್ನಾಟಕ ಸಂಸ್ಕೃತಿಕ ಸಂಘದ ) ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಲ್ಪಾ ಬರೆದ “ನನ್ನ ಮೇಲೆ ಕನ್ನಡ ಸಂಸ್ಕೃತಿಯ ಪ್ರಭಾವ" ಎಂಬ ಲೇಖನಕ್ಕೆ 2008ರಲ್ಲಿ ಅಕ್ಕ (ಅಮೆರಿಕದ ಕನ್ನಡ ಕೂಟಗಳ ಆಗರ)ದ ಸ್ಕಾಲರ್ಶಿಪ್ ಬಂದಿದೆ.
ಮೂರು ತಿಂಗಳಿಗೊಮ್ಮೆ ಲೇಖನ, ಸುದ್ದಿ, ಶಿಕ್ಷಕರಿಗೆ ಕುಡಿನುಡಿ, ಕನ್ನಡ ಪಾಠಗಳನ್ನುಳ್ಳ ನಿಯತಕಾಲಿಕೆಯೊಂದನ್ನು ಹೊರತರುತ್ತಿದ್ದೇವೆ. ಇನ್ನೂ ಹೆಚ್ಚಿನ ಸಂತಸದ ಸಂಗತಿ ಎಂದರೆ, ಈ ಮೂಲಕ, ಅಮೆರಿಕದ ಉದ್ದಗಲಕ್ಕೂ ಕನ್ನಡ ಕಲಿಯ ಅರಿವು ಮೂಡಿದ್ದು, ಅನೇಕ ಕನ್ನಡ ಕೂಟಗಳು ಮತ್ತು ಅಭಿಮಾನಿ ವ್ಯಕ್ತಿಗಳು ಕನ್ನಡ ಕಲಿ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಇಂಥ ಪ್ರಯತ್ನಗಳಿಗೆ ಕನ್ನಡ ಕಲಿಯ ಸಹಕಾರ ಸದಾ ಇದೆ.
ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications