ಕನ್ನಡ : ಕಲಿಯುವ ಆಸೆ, ಕಲಿಸಿದ ಧನ್ಯತೆ

ಸೆಪ್ಟಂಬರ್ 24, 2000ದಂದು ಮೊದಲ ಕನ್ನಡ ಕಲಿ ತರಗತಿ ಕರ್ನಾಟಕ ಸಾಂಸ್ಕೃತಿಕ ಸಂಘದ ಮುಂದಾಲೋಚನೆಯಿಂದ ಅರ್ವೈನ್ ನಗರದಲ್ಲಿ ಪ್ರಾರಂಭವಾಯ್ತು. ಕನ್ನಡಿಗರ ಮನದಲ್ಲಿದ್ದ ಅದಮ್ಯ ಆಸೆಗೆ ಅಭಿವ್ಯಕ್ತಿ ನೀಡಿತು. ಕೂಡಲೆ ಡೈಮಂಡ್ ಬಾರ್, ಸರಿಟೊಸ್, ಅನಹೈಮ್ ಹಿಲ್ಸ್, ಸಾನ್ ಫರ್ನಾಂಡೊ ವ್ಯಾಲಿ, ಮತ್ತು ಪಾಮ್ಡೇಲ್ ಗಳಲ್ಲಿ ಕನ್ನಡ ಕಲಿ ಶಾಖೆಗಳು ಚಿಗುರೊಡೆದವು. ಕನ್ನಡ ಕಲಿಸುತ್ತ ಕನ್ನಡದ ಕಂಪನ್ನು ತೆಂಕಣ ನಾಡಿನ ಉದ್ದಗಲಕ್ಕೂ ಹರಡತೊಡಗಿದವು. ಸದ್ಯ, ಅರ್ವೈನ್, ಸರಿಟೊಸ್, ಮತ್ತು ವ್ಯಾಲಿ ಶಾಖೆಗಳು ಮಾತ್ರ ಕ್ರಿಯಾಶೀಲವಾಗಿದ್ದರೂ ಎಂದಿಗಿಂತ ಹೆಚ್ಚು ವಿದ್ಯಾರ್ಥಿಗಳು ಇಂದು ಕನ್ನಡ ಕಲಿಯುತ್ತಿದ್ದಾರೆ; ಹೆಚ್ಚು ಶಿಕ್ಷಕರು ಪಾಠ ಹೇಳುತ್ತಿದ್ದಾರೆ; ಹೆಚ್ಚು ಸಹಾಯಕರು ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದಾರೆ.
ಮಾತು ಓದು ಬರಹಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಕಲಿಯುತ್ತಿದ್ದಾರೆ. ವೇದಿಕೆಯ ಮೇಲೆ ಕನ್ನಡ ಮಾತನಾಡಿ ಕಾರ್ಯಕ್ರಮಗಳನ್ನು ನಡೆಸಿಕೊಡುವಷ್ಟು ಮುಂದುವರೆದಿದ್ದಾರೆ. ಕೆಲ ವಿದ್ಯಾರ್ಥಿಗಳು ಮೊದಲ ದಿನದಿಂದ ಹತ್ತು ವರ್ಷಗಳೂ ಕನ್ನಡ ಕಲಿಯ ಕಟ್ಟೆ ಹತ್ತಿದ್ದಾರೆ. ಓದು ಬರಹಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಜೊತೆಗೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕಾಲೇಜಿಗೆ ತೆರಳುತ್ತಿದ್ದಾರೆ. ಇದು ಕನ್ನಡ ಕಲಿಯ ಉದ್ದೇಶ ಮತ್ತು ಮಹತ್ವದ ಸಾಧನೆ.
ಇವರಿಗೆ ಕನ್ನಡ ಕಲಿ ಪದವಿ ಪ್ರದಾನ ಸಮಾರಂಭವೂ ಹತ್ತನೆಯ ವರ್ಷದ ಹಬ್ಬದ ಒಂದು ವಿಶೇಷವಾಗಿತ್ತು. ಆಕಾಶ ದೀಕ್ಷಿತ, ಶಿಲ್ಪಾ ಜಗನ್ನಾಥ, ಶೃತಿ ಶಾಂತಾರಾಮ್ ಮತ್ತು ಅರಿಂಜಯ ಮಾಧವ ತಮ್ಮ ಪದವಿ ಸ್ವೀಕಾರ ಭಾಷಣವನ್ನು ಕನ್ನಡದಲ್ಲಿ ನೀಡಿದರು. ಕನ್ನಡ ಸಂಸ್ಕೃತಿ ಕನ್ನಡ ಐಡೆಂಟಿಟಿಗಳೊಂದಿಗೆ ತಮ್ಮ ವ್ಯಕ್ತಿತ್ವಗಳನ್ನು ಕನ್ನಡ ಕಲಿ ಹೇಗೆ ರೂಪಿಸಿದೆ ಎಂದು ವಿವರಿಸಿದರು. ತಾವು ಸೇರುತ್ತಿರುವ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಕ್ಯಾಂಪಸ್ ಕ್ಲಬ್ ಗಳನ್ನು ಇವರು ಆರಂಭಿಸಲಿ ಎನ್ನುವುದು ನಮ್ಮ ಎಂದಿನ ಆಸೆ; ಆರಂಭಿಸುತ್ತಾರೆ ಎಂಬ ಭರವಸೆ ಇದೆ.
ಕನ್ನಡ ಕಲಿ ವಿದ್ಯಾರ್ಥಿಗಳು ಕರ್ನಾಟಕ ಸಾಂಸ್ಕೃತಿಕ ಸಂಘದ ಕಾರ್ಯಕ್ರಮಗಳಲ್ಲಿ ಸದಾ ಮಿಂಚುತ್ತಿದ್ದಾರೆ. ನಾಟಕ, ನೃತ್ಯ, ಹಾಡುಗಳಲ್ಲಿ ನಿಸ್ಸೀಮರಾಗಿದ್ದಾರೆ. 2006ರಲ್ಲಿ ಓದು ಬರಹಗಳೊಂದಿಗೆ “ಕನ್ನಡ ಹಾಡು" ತರಗತಿಯನ್ನು ಪ್ರಾರಂಭಿಸಲಾಯಿತು. ಕವಿತೆ, ಹಾಡುಗಳ ಮೂಲಕ ಕನ್ನಡ ಕಲಿಸುವ ಈ ಪ್ರಯತ್ನ ಇಂದು ಎಲ್ಲರಿಗೂ ಪ್ರಿಯವಾಗಿದೆ. ಇಲ್ಲಿ ಕಲಿತ ಹಾಡುಗಳು ಮಕ್ಕಳಿಗೆ ಬಾಯಿಪಾಠವಾಗಿದ್ದು ಅವರು ಹಾಡಲು ಸದಾ ಸಿದ್ಧರು.
ಶೀಲಾ ಭಟ್, ಶಿಲ್ಪಾ ಜಗನ್ನಾಥ, ನೀಲ ಕೊಟ್ರಪ್ಪ, ಆಕಾಶ ದೀಕ್ಷಿತ, ಮತ್ತು ವಿವಹ್ನಿ ಶಾಸ್ತ್ರಿ (ಕರ್ನಾಟಕ ಸಂಸ್ಕೃತಿಕ ಸಂಘದ ) ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಶಿಲ್ಪಾ ಬರೆದ “ನನ್ನ ಮೇಲೆ ಕನ್ನಡ ಸಂಸ್ಕೃತಿಯ ಪ್ರಭಾವ" ಎಂಬ ಲೇಖನಕ್ಕೆ 2008ರಲ್ಲಿ ಅಕ್ಕ (ಅಮೆರಿಕದ ಕನ್ನಡ ಕೂಟಗಳ ಆಗರ)ದ ಸ್ಕಾಲರ್ಶಿಪ್ ಬಂದಿದೆ.
ಮೂರು ತಿಂಗಳಿಗೊಮ್ಮೆ ಲೇಖನ, ಸುದ್ದಿ, ಶಿಕ್ಷಕರಿಗೆ ಕುಡಿನುಡಿ, ಕನ್ನಡ ಪಾಠಗಳನ್ನುಳ್ಳ ನಿಯತಕಾಲಿಕೆಯೊಂದನ್ನು ಹೊರತರುತ್ತಿದ್ದೇವೆ. ಇನ್ನೂ ಹೆಚ್ಚಿನ ಸಂತಸದ ಸಂಗತಿ ಎಂದರೆ, ಈ ಮೂಲಕ, ಅಮೆರಿಕದ ಉದ್ದಗಲಕ್ಕೂ ಕನ್ನಡ ಕಲಿಯ ಅರಿವು ಮೂಡಿದ್ದು, ಅನೇಕ ಕನ್ನಡ ಕೂಟಗಳು ಮತ್ತು ಅಭಿಮಾನಿ ವ್ಯಕ್ತಿಗಳು ಕನ್ನಡ ಕಲಿ ತರಗತಿಗಳನ್ನು ಪ್ರಾರಂಭಿಸಿದ್ದಾರೆ. ಇಂಥ ಪ್ರಯತ್ನಗಳಿಗೆ ಕನ್ನಡ ಕಲಿಯ ಸಹಕಾರ ಸದಾ ಇದೆ.
ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications