192073musicಸಂಗೀತಕ್ಕೂ ಕಾಲಿಟ್ಟ ಕಾಕತ್ಕರ್‌/literature/people/2002/2308kakatkar1.htmlಮೊದಲಿನಿಂದಲೂ ನನಗೆ ರೇಡಿಯೋ ಎಂದರೆ ಪ್ರಾಣ. ನಾನು ಆರನೇ ಕ್ಲಾಸ್‌ನಲ್ಲಿದ್ದಾಗ ನಮ್ಮ ಮನೆಗೆ ನಮ್ಮ ಹಿರಿಯಣ್ಣ ಒಂದು ಸೆಕೆಂಡ್‌ ಹ್ಯಾಂಡ್‌ ರೇಡಿಯೋ (National Ecko ಎಂಬ ಕಂಪೆನಿಯದು; 50 ವೋಲ್ಟ್‌ ಗಜಗಾತ್ರದ ಬ್ಯಾಟರಿಯಿಂದ ಚಾಲಿತ ರೇಡಿಯೋ) ತಂದಿದ್ದರು. ಸಂಗೀತದಲ್ಲಿ ನನ್ನ ಆಸಕ್ತಿಗೆ ಮೂಲಕಾರಣ ಆ ರೇಡಿಯೋ. ಶಾಲೆಗೆ ರಜೆ ಇದ್ದಾಗಲೆಲ್ಲ ನಾನು ಆ ರೇಡಿಯೋ ಹತ್ತಿರವೇ ಒಂದು 8819http://kannada.oneindia.com/img/2009/07/28-kakatkar3.jpg192073musicನೈಜ ಸಂಗೀತದ ಕಾರಂಜಿಗೆ ಸೆನ್ಸಾರ್ ಮುಕ್ತ ಪ್ರಶಂಸೆ/movies/studio/2009/03/20-karanji-clears-censor-gets-u-certificate.htmlಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ಬಂದಿದೆ. ಒಂದು ಚಿತ್ರ ಬಂದುಹೋದದ್ದು ನೆನಪಿನಲ್ಲುಳಿಯದಿದ್ದರೂ ಆ ಚಿತ್ರದ ಹಾಡುಗಳು ಮಾತ್ರ ಎಲ್ಲರ ಬಾಯಲ್ಲೂ ಗುನುಗುತ್ತಿರುತ್ತವೆ. ಅದರಲ್ಲೂ ಸಂಗೀತವೇ ಪ್ರಧಾನವಾಗಿರುವ ಚಿತ್ರಗಳೆಂದಮೇಲೆ ಆ ಚಿತ್ರದ ಮಹತ್ವವೇ ಬೇರೆ. ಅಂಥಾದ್ದೊಂದು ಚಿತ್ರ ಸದ್ಯದಲ್ಲೇ ತೆರೆಯಮೇಲೆ ಕಾಣಿಸಿಕೊಳ್ಳಲಿದೆ. ಸದಬಿರುಚಿಯ ಚಿತ್ರಗಳ ನಿರ್ಮಾಪಕ ಎಂದೇ ಹೆಸರಾದ ಎನ್.ಎಂ. ಸುರೇಶ್, ನಿರ್ಮಾಣದ ಉತ್ಸಾಹಿ ಯುವಕ 35386http://kannada.oneindia.com/img/2009/03/20-gauri-karnik1.jpg192073musicಸಂಗೀತಾ ಕಟ್ಟಿ ಅವರೊಡನೆ ಸಂಗೀತ ಸಮಾಲೋಚನೆ/nri/article/2009/0709-sangeetha-katti-kulkarni-in-sydney.htmlಬೇಂದ್ರೆಯವರ ಕವಿತೆಗಳನ್ನು ಸಮರ್ಥವಾಗಿ ಹಾಡುವಲ್ಲಿ ಖ್ಯಾತ ಸಂಗೀತಗಾರ್ತಿ ಸಂಗೀತಾ ಕಟ್ಟಿ ಕುಲಕರ್ಣಿ ಅವರದು ಎತ್ತಿದಕೈ. ಇತ್ತೀಚೆಗೆ ಅವರು ಸಿಡ್ನಿಯಲ್ಲಿ ಹಾಡಿ ಶ್ರೋತೃಗಳನ್ನು ಭಾವಪರವಶರನ್ನಾಗಿ ಮಾಡಿದರು. ಹಾಡಿನಷ್ಟೇ ಸರಳತೆಯನ್ನೂ ಮೈಗೂಡಿಸಿಕೊಂಡಿರುವ ಸಂಗೀತಾ ಕಟ್ಟಿ ತಾವು ಸಾಗಿ ಬಂದ ಹಾದಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಮಾತುಕತೆಯ ಸಾರಾಂಶ ಇಲ್ಲಿದೆ. * ಸಿಡ್ನಿ ಶ್ರೀನಿವಾಸ್, ಆಸ್ಟ್ರೇಲಿಯಾ "1993ರಲ್ಲಿ ರಿಕಾರ್ಡಿಂಗ್ ನಡೆಯುತ್ತಿತ್ತು, 37887http://kannada.oneindia.com/img/2009/07/09-sangeetha-katti1.jpg192073musicಶಾರ್ಜಾದಲ್ಲಿ 'ಗಾನಗಂಗೆ' ಗೂಂಗೂಬಾಯಿಗೆ ಶ್ರದ್ಧಾಂಜಲಿ/nri/article/2009/0810-dhwani-pratishthana-sharjah-gangubai-hanagal.htmlಶಾರ್ಜಾ : ಧ್ವನಿ ಪ್ರತಿಷ್ಠಾನದವತಿಯಿಂದ ಗಾನಗಂಗೆ ಗಂಗೂಬಾಯಿ ಹಾನಗಲ್ ಅವರಿಗೆ ಶಾರ್ಜಾದಲ್ಲಿ ಸಂಗೀತ ಪ್ರೇಮಿಗಳು, ಕನ್ನಡ ಲೇಖಕರು ಹಾಗೂ ಕಲಾವಿದರು ಸೇರಿ ಶ್ರದ್ಧಾಂಜಲಿ ಅರ್ಪಿಸಿದರು. ಇಲ್ಲಿನ ಅರಬ್ ಉಡುಪಿ ಹೋಟೆಲಿನ ಸಭಾಗೃಹದಲ್ಲಿ ನೆರವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದೂಷಿ ಸುಮಾ ನಾರಾಯಣ ಅವರು ವಹಿಸಿದ್ದರು. ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಘಟಕ ಪ್ರಕಾಶ್ ರಾವ್ ಪಯ್ಯಾರ್, 38529http://kannada.oneindia.com/img/2009/08/10-sharjah-dhwani1.jpg192073musicಶ್ರೀಪಾದ ಸಂಗೀತ ಕಲಾ ಕೆಂದ್ರದ ಆರಂಭ/cj/archana-hebbar/2009/0813-shreepada-sangeeta-kala-kendra-bengaluru.htmlಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪಾಂಡುರಂಗ ನಗರದಲ್ಲಿ ಶ್ರೀಪಾದ ಸಂಗೀತ ಕಲಾ ಕೇಂದ್ರವು ದಿನಾಂಕ ಆಗಸ್ಟ್ 8ರ ಶನಿವಾರದಂದು ಕಾರ್ಯಾರಂಭಗೊಂಡಿದೆ.ಇಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ : ಗಾಯನ ಮತ್ತು ವಾದ್ಯಗಳು (ತಬಲಾ, ಕೊಳಲು, ಹಾರ್ಮೋನಿಯಂ, ಕೀ ಬೋರ್ಡ್, ಪಿಟೀಲು), ನೃತ್ಯ, ಚಿತ್ರಕಲೆ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಆಯಾಯ ವಿಷಯಗಳಲ್ಲಿ ಪಾಂಡಿತ್ಯ 38612http://kannada.oneindia.com/img/2009/08/13-instruments2.jpg151545udupiಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151545udupiಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151545udupiದೂರದಿರಲಿ ಹೇಗೆ? : ದಿನೇಶ್ ಕವನ/nri/poem/2009/0202-cannot-blame-poem-dinesh-udupi.html*ದಿನೇಶ್ ಉಡುಪಿ, ಮೆಂಫಿಸ್ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?ಬೀಸಿದರೆ ನಗುವಿನ ತಂಗಾಳಿ,ಹೊತ್ತು ತಂದರೆ ಸಿಂಗಾರದ ಕಂಪು,ತೊಡಿಸಿದರೆ ಒಡಲಿಗೆ ನವಿರ ತೋರಣ,ಜಿನುಗಿ ಬಿಟ್ಟರೆ ಉಲ್ಲಾಸದ ತುಂತುರು,ದೂರದಿರಲಿ ಹೇಗೆ?ಸುಗಂಧದ ಮನೆಗೆಉಸಿರ ಕದವಿಟ್ಟರೆ,ಶೃಂಗಾರದ ಸೆಲೆಗೆಒಲವ ಒಸರನಿಟ್ಟರೆ,ಆಲಿಂಗನದ ಬಿಸುಪಿಗೆಹೂವ ಮೆತ್ತೆಯಿಟ್ಟರೆ,ದೂರದಿರಲಿ ಹೇಗೆ?ಮಾಸದಿರೆ ನೆನಪ ಚಿತ್ರ,ಆರದಿರೆ ಸ್ಪರ್ಶದ ತುಡಿತ,ಕರಗದಿರೆ ಕನಸ ಮೆರವಣಿಗೆ,ಮುಗಿಯದಿರೆ ನಗುವ ನಿರೀಕ್ಷೆ,ದೂರದಿರಲಿ ಹೇಗೆಜಾರಿ ಬಿಟ್ಟರೆ ನಗುವು,ದಾಟಿ ಹೋದರೆ ಕಂಪು?34413http://kannada.oneindia.com/img/2009/02/02-dinesh1.jpg151545udupiಎಸ್ಸಾರ್ವಿಗೆ ವಿಎಂ ಇನಾಂದಾರ್ ಪ್ರಶಸ್ತಿ/literature/book/2009/0206-sr-vijayshankar-bags-vm-inamdar-award.htmlಬೆಂಗಳೂರು, ಫೆ. 6 : ಕನ್ನಡ ಸಂದರ್ಭದ ಗಮನೀಯ ವಿಮರ್ಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಎಸ್. ಆರ್. ವಿಜಯಶಂಕರ. ಬೆಳಗಿನ ಹೊತ್ತು ಕಾರ್ಪೋರೇಟ್ ಕಚೇರಿಯಲ್ಲಿ ನೌಕರಿ, ಸಂಜೆಯಾದರೆ ಕನ್ನಡ ಸಾಹಿತ್ಯದ ಧ್ಯಾನ! ರಜೆಯ ದಿನಗಳಂದು ಓದು ಬರವಣಿಗೆಯ ಅಭ್ಯಂಜನ. ಈ ಪ್ರವೃತ್ತಿಯನ್ನು ಸರಿಸುಮಾರು ಮೂರು ದಶಕಗಳಿಂದ ಚಾಚೂ ತಪ್ಪದೆ ಮಾಡಿಕೊಂಡು ಬಂದಿರುವ ಒಬ್ಬ ಅಪರೂಪದ ಬರಹಗಾರ 34520http://kannada.oneindia.com/img/2009/02/06-vijayshankar1.jpg151545udupiಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!/movies/studio/2009/02/20-charlie-chaplin-in-hemanth-hegde-film.html*ಜಯಂತಿಸಿನಿಮಾ ಮಂದಿಯ ಹುಚ್ಚುತನ ಒಂದೆರಡಲ್ಲ. ಈ ಸಲ ನಿರ್ದೇಶಕ ಹೇಮಂತ ಹೆಗಡೆ ಇನ್ನೊಂದು ಹುಚ್ಚು ಹತ್ತಿಸಿಕೊಂಡಿದ್ದಾರೆ. ಉಡುಪಿ ಹತ್ತಿರದ ಒತ್ತಿನೆಣೆ ಎಂಬಲ್ಲಿ ಚಾರ್ಲಿ ಚಾಪ್ಲಿನ್ ಅರುವತ್ತೆರಡು ಅಡಿ ಮೂರ್ತಿಯನ್ನು ನಿರ್ಮಿಸಲು ಅವರು ನಿರ್ಧರಿಸಿದ್ದಾರೆ. ಅವರೇ ನಿರ್ದೇಶಿಸುತ್ತಿರುವ 'ಹೌಸ್‌ಫುಲ್' ಚಿತ್ರಕ್ಕೂ, ಈ ಮೂರ್ತಿಗೂ ಸಂಬಂಧವಿದೆ. ಚಿತ್ರದ ಟಾಕಿ ಭಾಗದ ಚಿತ್ರೀಕರಣ ಮುಗಿದಿದೆ. ಬಾಕಿ ಇರುವುದು ಹಾಡುಗಳು. ಆ ಪೈಕಿ 34771http://kannada.oneindia.com/img/2009/02/20-hemanth-hegde1.jpg151542ಉಡುಪಿವಾರಾಹಿ ಎರಡನೇ ಘಟಕ ನಾಡಿಗೆ ಅರ್ಪಣೆ/news/2009/01/11/yeddyurappa-dedicates-varahi-project-stage2.htmlಹೊಸಂಗಡಿ, ಜ. 11 : ವಾರಾಹಿ ಜಲವಿದ್ಯುತ್ ಯೋಜನೆಯ 230 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಘಟಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶನಿವಾರ ನಾಡಿಗೆ ಅರ್ಪಿಸಿದರು. ದೇಶದ ಮೊದಲ ಗುಹಾಂತರ ಜಲವಿದ್ಯುತ್ ಘಟಕ ಇದಾಗಿದ್ದು, 230 ಮೆಗಾವ್ಯಾಟ್ ಸಾಮರ್ಥ್ಯದ ಎರಡನೇ ಹಂತದ ಅಧಿಕೃತ ಉದ್ಘಾಟನೆ ನೆರವೇರಿತು. ಇದರಿಂದ 115 ಮೆಗಾವ್ಯಾಟ್ ಸಾಮರ್ಥ್ಯದ ಒಟ್ಟು ನಾಲ್ಕು ಘಟಕಗಳು ಮಾತ್ರ 34007http://kannada.oneindia.com/img/2009/01/11-cm-varahi-unit.jpg151542ಉಡುಪಿಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg151542ಉಡುಪಿಬ್ಯಾಂಕಿಂಗ್ ಲೋಕದ ದಿಗ್ಗಜ ಕೆಕೆ ಪೈ ನಿಧನ/literature/people/2009/0115-syndicate-bank-ex-chairman-kk-pai-demise.htmlಉಡುಪಿ, ಜ. 15 : ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ ಪ್ರಥಮ ಅಧ್ಯಕ್ಷ, ಮಣಿಪಾಲ್ ಆಕಾಡಮಿ ಆಫ್ ಜನರಲ್ ಎಜುಕೇಶನ್ ನ ಕುಲಸಚಿವ, ಮಣಿಪಾಲ್ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಅಧ್ಯಕ್ಷ, ಡಾ ಟಿ ಎಂ ಎ ಪೈ ಪ್ರತಿಷ್ಠಾನದ ಅಧ್ಯಕ್ಷ ಮಣಿಪಾಲ್ ಸಂಸ್ಥೆ ಸಮೂಹದ ನೇತಾರ ಕೆ ಕೆ ಪೈ ಎಂದೇ ಚಿರಪರಿತರಾಗಿದ್ದ ಕಲ್ಸಂಕ ಕಮಾಲಾಕ್ಷ ಪೈ 34074http://kannada.oneindia.com/img/2009/01/15-kk-pai1.jpg151542ಉಡುಪಿಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ/news/2009/01/24/balakrishna-pai-passes-away.htmlಕುಂದಾಪುರ, ಜ.24: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ಮತ್ತು ರಾಜ್ಯದಾದ್ಯಂತ ಅವರು 'ಕುಳ್ಳಪ್ಪು' ಎಂದೇ ಜನಪ್ರಿಯರಾಗಿದ್ದರು.ರಾಜ್ಯ ನಾಟಕ ಅಕಾಡೆಮಿ, ಕೊಂಕಣಿ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಕೃಷ್ಣ ಪೈ ತಮ್ಮ ಕುಬ್ಜ ದೇಹಾಕೃತಿಯಿಂದ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿದ್ದರು. ಹಲವು ನಾಟಕಗಳನ್ನು 34265http://kannada.oneindia.com/img/2009/01/24-balakrishna-pai.jpg151542ಉಡುಪಿಉಡುಪಿಯಲ್ಲಿ ನಾಗತಿಹಳ್ಳಿ ಚಲನಚಿತ್ರೋತ್ಸವ /movies/headlines/2009/01/28-nagathihalli-film-festival-in-udupi.htmlಉಡುಪಿಯಲ್ಲಿ ಎರಡು ದಿನಗಳ ಕಾಲ 'ನಾಗತಿಹಳ್ಳಿ ಚಲನಚಿತ್ರೋತ್ಸವ' ಜನವರಿ 31ರಿಂದ ಫೆಬ್ರವರಿ 1ರವರೆಗೆ ನಡೆಯಲಿದೆ. ಉಡುಪಿಯ ಮಹಾತ್ಮಾಗಾಂಧಿ ಸ್ಮಾರಕ ಕಾಲೇಜಿಗೆ 60 ವರ್ಷ ತುಂಬಿದ ಸವಿನೆನಪಿಗಾಗಿ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ ಎಂದು ಪ್ರೊ.ಜಯಪ್ರಕಾಶ್ ಮಾವಿನಕುಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎರಡು ದಿನಗಳ ಕಾಲದ ಚಿತ್ರೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೆರಿಕ ಅಮೆರಿಕ, ಕೊಟ್ರೇಶಿ ಕನಸು, ಹೂಮಳೆ ಮತ್ತು ಮಾತಾಡ್ 34324http://kannada.oneindia.com/img/2009/01/28-nagathihalli-chandru.jpgnews"> ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾಗೆ ಒಲಿದ ಓಡಿಸ್ಸಿ | Odissi | Annette Pooja | Indian choreography | Sweden | Guru babbigadde - ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾಗೆ ಒಲಿದ ಓಡಿಸ್ಸಿ - Kannada Oneindia

ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾಗೆ ಒಲಿದ ಓಡಿಸ್ಸಿ

Odissi dancer Annette Pooja
ಸಂಗೀತ ಸುಧೆಯೊಳಗೆ ಮೀಯದವರಾರು
ಕಾಲ್ಗೆಜ್ಜೆ ಸಪ್ಪಳಕೆ ಒಲಿಯದವರಾರು
ನೃತ್ಯದಲಿ ನಟರಾಜ ಸೂರೆಗೊಂಡನು ಮನವ
ದೀಪಕ ರಾಗವು ಬೆಳಗಿಸಿತು ಜಗವ

ಸಂಗೀತ ಮತ್ತು ನೃತ್ಯ ಎಂಥಹ ಅರಸಿಕರನ್ನು ರಸಿಕತೆಗೆ ಒಯ್ಯುತ್ತವೆ. ಅದೊಂದು ಅಮಲು, ಮನಸ್ಸಿನ ನೋವಿಗೆ ಸಂಜೀವಿನಿ ಇದ್ದಂತೆ, ಆನಂದದ ಸಾಗರದಂತೆ. ಅದು ಶಾಸ್ತ್ರಬದ್ದ ಭಾರತೀಯ ಸಂಗೀತ-ನೃತ್ಯವೇ ಆಗಿರಬಹುದು ಇಲ್ಲವೆ ಪಾಶ್ಚಾತ್ಯರ ಪಾಪ್-ನೃತ್ಯ ವೇ ಆಗಿರಬಹುದು. ಅದರಲ್ಲೂ ಭಾರತೀಯ ನೃತ್ಯ ಪ್ರಕಾರಗಳಿಗೆ ಸಿಕ್ಕಷ್ಟು ಪ್ರಸಿದ್ದಿ ಜಗತ್ತಿನ ಯಾವ ನೃತ್ಯ ಪ್ರಕಾರಗಳಿಗೂ ಸಿಕ್ಕಿಲ್ಲ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಭಾರತೀಯರಾದ ನಾವು ಅರೆ ಬೆತ್ತಲೆಯ ವಿದೇಶಿ ನೃತ್ಯವನ್ನೇ ಸವಿಯುತ್ತಾ ನಮ್ಮ ತನವನ್ನು ಮರೆಯುತ್ತಿದ್ದೇವೆ. ವಿದೇಶಿಯರು ಎಂದಕೂಡಲೇ ಕೇವಲ ಬೆತ್ತಲೆ ಕುಣಿಯುವವರು ಎನ್ನುವುದನ್ನು ನಮಗೆ ಗೊತ್ತಿಲ್ಲದೇ ಅಂದುಕೊಂಡುಬಿಟ್ಟಿದ್ದೇವೆ. ನಾವು ನಮ್ಮದನ್ನೇ ಬಿಟ್ಟು ಪರಕೀಯತೆಯನ್ನು ಮೈಗೂಡಿಸಿಕೊಂಡು ಸಂಸ್ಕ್ರತಿಯ ಅಃಪತನಕ್ಕೆ ಕಾರಣೀಭೂತರಾಗುತ್ತಿದ್ದರೆ ಸದ್ದಿಲ್ಲದೆ ಸ್ವೀಡನ್ನಿನ ಮಹಿಳೆಯೊಬ್ಬರು ಭಾರತೀಯ ನೃತ್ಯದಲ್ಲಿ ಕಳೆದ 15 ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆಂದರೆ ನಿಮಗೇನನ್ನಿಸುತ್ತದೆ?

ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿರುವ ಅನಿಟ್ಟೆ ಪೂಜಾ (ಪೂಜಾ ಎನ್ನುವುದು ಓಡಿಸ್ಸಿ ಗುರು ಇಟ್ಟ ಹೆಸರು) ಕಳೆದ ನೃತ್ಯ ವರ್ಷಗಳಿಂದ ಓಡಿಸ್ಸಿ ನೃತ್ಯ ಕಲಿಯುತ್ತಿದ್ದಾರೆ ಅಷ್ಟೇ ಅಲ್ಲ ಕಲಿಸುತ್ತಿದ್ದಾರೆ. ಭಾರತದ ಎಲ್ಲ ನೃತ್ಯ ಪ್ರಕಾರಗಳಲ್ಲೂ ಕೈಯ್ಯಾಡಿಸಿರುವ ಇವರು ಕೊನೆಯದಾಗಿ ಆರಿಸಿಕೊಂಡಿದ್ದು ಓಡಿಸ್ಸಿ ವನ್ನು. ಹೃದಯಸ್ಪರ್ಶಿ ಅಭಿನಯ, ತಾಳಕ್ಕೆ ತಕ್ಕ ಹೆಜ್ಜೆ, ಹೆಜ್ಜೆಗೆ ತಕ್ಕ ಭಾವದ ಮೂಲಕ ಇಲ್ಲಿಯ ಜನರ ಕಣ್ಮಣಿಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ಪೂಜಾ ಎನ್ನುವುದನ್ನು ಸೇರಿಸಿಕೊಂಡಿರುವ ಇವರದು ಸುಖೀ ಕುಟುಂಬ. ಇವರ ಗಂಡ ಲಿಯನಾರ್ಡೋ ಒಬ್ಬ ನಟ ಹಾಗೂ ಶಿಕ್ಷಕ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು, ಒಬ್ಬಳು ಗಾಯತ್ರಿ, ಇನ್ನೊಬ್ಬಳು ಕರೀಷ್ಮಾ. ಇಬ್ಬರಿಗೂ ಇಟ್ಟ ಭಾರತೀಯ ಮೂಲದ ಹೆಸರು ಅವರ ಭಾರತ ಪ್ರೇಮಕ್ಕೆ ಹಿಡಿದ ಕನ್ನಡಿ.

ಮೂಲತಃ ಸ್ವೀಡನ್ನಿನಲ್ಲಿಯೇ ಹುಟ್ಟಿ ಬೆಳೆದ ಅನಿಟ್ಟೆ ಪೂಜಾ, ತಮ್ಮ ತಂದೆಯವರಿಂದ ಸಂಗೀತ ಹಾಗೂ ನೃತ್ಯಗಳಲ್ಲಿ ಆಸಕ್ತಿ ತಳೆದರು. ನೃತ್ಯ ಇವರ ರಕ್ತದಲ್ಲಿಯೇ ಬೆಳೆದಿತ್ತು. ಆದರೆ ಅದು ಭಾರತದೊಂದಿಗೆ ವಿಸ್ತರಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಕ್ಕಿಲ್ಲ. ಥಿಯೇಟರ್ ಗಳಲ್ಲಿ ವೇಷ-ಭೂಷಣ ಮಾಡುವವರಾಗಿದ್ದ ಇವರು ಕ್ರಮೇಣ ನೃತ್ಯದ ಕಡೆಗೆ ಒಲಿದಿದ್ದೇ ಸೋಜಿಗದ ಕಥೆ. "ಸ್ಟಾಕ್ ಹೋಮ್ ನಲ್ಲಿ ನಾಟಕ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾಗ ಅನೇಕ ಏಷ್ಯಾದ ನಿರ್ದೇಶಕರ ಜೊತೆ ಕೆಲಸ ಮಾಡಿದೆ. ಆಗಲೇ ಭಾರತ ನೃತ್ಯದ ಬಗೆಗೆ ಜಗತ್ತಿನಾದ್ಯಂತ ಇರುವ ಕೌತುಕತೆ, ಗೌರವ ನನ್ನಲ್ಲಿ ಹೊಸ ಸಂಚಲನ ಉಂಟು ಮಾಡಿತು. ಒಮ್ಮೆ ಕೂಚಿಪುಡಿ ನೃತ್ಯವನ್ನು ವೀಕ್ಷಿಸಿದೆ, ಆ ನೃತ್ಯಕ್ಕೆ ಸಿಕ್ಕಿದ ಅದ್ಭುತ ಗೌರವಕ್ಕೆ ಬೆರಗಾದೆ, ಆಗಲೇ ಅನ್ನಿಸಿತು, ಭಾರತೀಯ ನೃತ್ಯದಲ್ಲಿ ಏನೋ ಇದೆ,ಅದನ್ನು ಕಲಿಯಬೇಕು, ಅಸ್ವಾದಿಸಬೇಕು" ಎನ್ನುವ ಪೂಜಾ ಭಾರತೀಯ ನೃತ್ಯ ಪ್ರಕಾರಗಳಲ್ಲಿ ಬಹಳಷ್ಟು ಸಂಶೋಧನೆ ಮಾಡಿದ್ದಾರೆ.

ಉಡುಪಿಯಲ್ಲಿ ಯಕ್ಷಗಾನ ವೇಷ-ಭೂಷಣ ಮಾಡುವುದನ್ನು ಕಲಿತ ಇವರು ನಂತರ ಹತ್ತು ಹಲವು ಭಾರತೀಯ ನೃತ್ಯಗಳಿಗೆ ವೇಷ-ಭೂಷಣ ಹಾಕುವುದನ್ನು ಕಲಿತರು. ಇದೇ ಸಂದರ್ಭದಲ್ಲಿ ಓರಿಸ್ಸಾದ ಪುರಿ ಜಗನ್ನಾಥ ರಥೋತ್ಸವವನ್ನು ವೀಕ್ಷಿಸುವ ಅವಕಾಶ ಲಭಿಸಿತು. ಅಲ್ಲಿಯ ಆ ಮನಮೋಹಕ ಓಡಿಸ್ಸಿ ನೃತ್ಯ, ಅವರ ಶ್ರದ್ಧೆ, ಜಗನ್ನಾಥನಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಪರಿ, ಅವನನ್ನು ಒಲಿಸಿಕೊಳ್ಳುವ ನಾಟ್ಯ ಶೈಲಿ ಇವರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿತು. ಅಂದೇ ನಿರ್ಧರಿಸಿದರಂತೆ " ಇದೇ ನೃತ್ಯವನ್ನು ತಾನು ಕಲಿಯಬೇಕು, ಅದರ ಸತ್ವವನ್ನು ಅರಿಯಬೇಕು, ಆ ಜಗನ್ನಾಥನಲ್ಲಿ ತಲ್ಲೀನವಾಗುವ ಯಾವ ಮಹಾಶಕ್ತಿ ಈ ಓಡಿಸ್ಸಿ ನೃತ್ಯಕ್ಕಿದೆ ಎನ್ನುವುದನ್ನು ತಾವು ಮನಗಾಣಬೇಕು" ಎಂಬುದಾಗಿ.

ಇದೇ ಸಂದರ್ಭದಲ್ಲಿ ಭಾರತೀಯ ನೃತ್ಯ ಅಕಾಡೆಮಿಯ ಫೆಲೋಶಿಪ್ ಲಭಿಸಿತು. ಅಲ್ಲಿಂದ ಅನಿಟ್ಟೆ ಪೂಜಾ ತಿರುಗಿ ನೋಡಲಿಲ್ಲ. ಮೂರು ವರುಷ ಕುಚಿಪುಡಿ ಕಲಿತರು. ಇದರ ನಡುವೆಯೇ ಕೇರಳದ ಸಾಂಪ್ರದಾಯಿಕ ನೃತ್ಯ "ಥೆಯ್ಯಾಮ್" ನೋಡುವ ಸೌಭಾಗ್ಯ ಒದಗಿತು. ಆದರೆ ಅದು ಪುರುಷರಿಗೆ ಮಾತ್ರ ಎಂದು ತಿಳಿದು ಬೇಸರಗೊಂಡರು. ತದ ನಂತರ ರಾಜಸ್ಥಾನದ ಪ್ರಸಿದ್ಧ ನೃತ್ಯ"ಕಲಬೆಲಿಯಾ", ಹಠಯೋಗ ಶಿಕ್ಷಣ, ಕಥಕ್ಕಳಿ, ಭರತನಾಟ್ಯ ಹೀಗೆ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡರು. "ಕಲೆ ಸಾಧಕನ ಸೊತ್ತು" ಎಂಬುದನ್ನು ಅಕ್ಷರಷಃ ನಿಜ ಮಾಡಿದ ಅನಿಟ್ಟೆ ಪ್ರಸಿದ್ಧ ಓಡಿಸ್ಸಿ ನೃತ್ಯ ಗುರು ಶ್ರೀ ಗುರು ಹರಿಕ್ರಷ್ಣ ಬೆಹ್ರಾ ರಲ್ಲಿ 6 ವರ್ಷಗಳ ಕಾಲ ಅಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗಳನ್ನು ಬಿಟ್ಟಿರಲಾಗದ, ನೃತ್ಯವನ್ನು ಬಿಡಲೊಲ್ಲದ ದ್ವಂದ್ವ ಇವರನ್ನು ಕಾಡಿತು. ಕೊನೆಗೂ ಗೆದ್ದದ್ದು ಓಡಿಸ್ಸಿ. ತಮ್ಮ ಮಗಳನ್ನು ತಮ್ಮೊಂದಿಗೆ ಕೂರಿಸಿಕೊಂಡೇ ನೃತ್ಯ ಕಲಿತು ಶಹಬ್ಬಾಸ್ ಎನಿಸಿಕೊಂಡರು.

ಸುಂದರ ಅಭಿನಯ, ಭಾವನೆಗಳ ಮೇಲಿನ ಹಿಡಿತ, ಭಾರತೀಯ ಸಂಸ್ಕ್ರತಿಯ ಬಗೆಗಿನ ಆಳವಾದ ಜ್ಞಾನ, ಕಥಾ-ಪುರಾಣಗಳ ವಿಶ್ಲೇಷಣೆ, ಎಂದೂ ತಪ್ಪದ ಗೆಜ್ಜೆಯೊಂದಿಗಿನ ಹೆಜ್ಜೆ ಅನಿಟ್ಟೆ ಪೂಜಾ ಅವರನ್ನು ಓಡಿಸ್ಸಿ ನೃತ್ಯ ರಂಗದ ಪ್ರತಿಭಾನ್ವಿತ ಕಲಾವಿದೆಯನ್ನಾಗಿ ಮಾಡಿವೆ. "ವಿದ್ಯಾ ವಿನಯೇನ ಶೋಭಿತೇ" ಎನ್ನುವಂತಿರುವ ಇವರು ಸ್ವೀಡನ್ನಿನ ಅದೆಷ್ಟೋ ಮಕ್ಕಳಿಗೆ ಓಡಿಸ್ಸಿ ನೃತ್ಯವನ್ನು ಕಲಿಸುತ್ತಿದ್ದಾರೆ. ತಮ್ಮ ಗಂಡನೊಂದಿಗೆ ಸೇರಿಕೊಂಡು "ವಿಶ್ವ ನೃತ್ಯ ಸಂಘ " ಸ್ಥಾಪಿಸಿ ಮಕ್ಕಳಲ್ಲಿ ಭಾರತೀಯ ಸಂಸ್ಕ್ರತಿಯನ್ನು ಬಿಂಬಿಸುತ್ತಿದ್ದಾರೆ.

ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ನೀಡುವ ಪೂಜಾ ಪ್ರಸ್ತುತ ಅರುಣಾ ಮೊಹಾಂಟಿಯವರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಸ್ವೀಡಿಷ್ ಸರಕಾರದಿಂದ ಇವರಿಗೆ ಫೆಲೋಶಿಪ್ ಲಭಿಸಿದ್ದು ಅದು ನೃತ್ಯ ಕಲಿಯಲು ಹಾಗೂ ಭಾರತೀಯ ಸಂಸ್ಕ್ರತಿ ಅರಿಯಲು ಸಹಕಾರವಾಯಿತು ಎನ್ನುತ್ತಾರೆ ಅನಿಟ್ಟೆ ಪೂಜಾ. "ಥೆಯ್ಯಾಮ ಮತ್ತು ಕಥಕ್ಕಳಿ ಕಲಿತಿದ್ದರಿಂದ ರಾಮಾಯಣ ಮತ್ತು ಮಹಾಭಾರತ ಕಥೆ ತಿಳಿಯಲು ಅನುಕೂಲವಾಯಿತು. ಭಾರತೀಯ ಸಂಸ್ಕ್ರತಿ ಮತ್ತು ಪರಂಪರೆ ನಿಜಕ್ಕೂ ಶ್ರೀಮಂತವಾದದ್ದು. ಬಹುಶಃ ಇದಕ್ಕಾಗಿಯೇ ಭಾರತೀಯ ನೃತ್ಯ ಇಂದಿಗೂ ಚಿರನೂತನ, ದಿವ್ಯ ಚೇತನ" ಎನ್ನುವ ಪೂಜಾ ಅವರು ಭಾರತದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಭಾರತವನ್ನು ಬಹುವಾಗಿ ಪ್ರೀತಿಸುವ ಇವರಿಗೆ ತಮ್ಮ ಮಕ್ಕಳಿಗೂ ಆ ಸಂಸ್ಕ್ರತಿಯನ್ನು ತಿಳಿಸುವ ಹಂಬಲವಿದೆ. ಭಾರತದಾದ್ಯಂತ ಹಲವಾರು ಕಡೆ ನೃತ್ಯ ಕಾರ್ಯಕ್ರಮ ನೀಡಿರುವ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೀಗ ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿ ತಮ್ಮ ನೃತ್ಯ ಶಾಲೆ ನಡೆಸುತ್ತ ಇಲ್ಲಿಯೂ ನೃತ್ಯ ಕಾರ್ಯಕ್ರಮ ನೀಡುತ್ತಾ ಇಲ್ಲಿಯ ಜನರ ಮನ ಗೆದ್ದಿದ್ದಾರೆ.

ದೇಶಾಭಿಮಾನ ಎನ್ನುವುದು ಎಲ್ಲಿ? ಹೇಗೆ? ಟಿಸಿಲೊಡೆಯುತ್ತದೆ ಎಂದು ಹೇಳುವುದು ಕಷ್ಟ. ಅದು ಯಾವ ರೂಪದಲ್ಲಿ ಇರುತ್ತದೆಯೋ ಬಲ್ಲವರಾರು. ದೇಶದಲ್ಲಿದ್ದೇ ಪರಕೀಯರಾಗುವುದು, ಪರಕೀಯರಾಗಿದ್ದುಕೊಂಡೇ ಒಂದು ದೇಶವನ್ನು ಪ್ರೀತಿಸುವುದು ಸೋಜಿಗ. ನಮ್ಮ ಸಂಸ್ಕ್ರತಿ, ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಅನಿಟ್ಟೆ ಪೂಜಾ ಅವರಿಗೆ ಅಭಿನಂದನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+