ಬರದ ಬೀಡಾಗಿದ್ದ ಚಿತ್ರದುರ್ಗದಲ್ಲಿ ಉಕ್ಕಿ ಹರಿಯುತ್ತಿದೆ ಕೊಳವೆ ಬಾವಿ
ಚಿತ್ರದುರ್ಗ, ಡಿಸೆಂಬರ್ 7: ಸತತ ಬರಗಾಲದಿಂದ ಬೇಸತ್ತಿದ್ದ ಕೋಟೆನಾಡು ಚಿತ್ರದುರ್ಗದಲ್ಲಿ ಈಗ ನೀರ ಪಸೆ ಕಾಣುತ್ತಿದೆ. ಇಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದ್ದು, ನಿನ್ನೆ ಕರ್ನಾಟಕ ಕೊಳಚೆ ನಿರ್ಮೂಲ ಮಂಡಳಿ ವತಿಯಿಂದ ಕೊರಸಿದ ಕೊಳವೆ ಬಾವಿಯಲ್ಲೂ ನೀರು ಉಕ್ಕಿ ಹರಿಯುತ್ತಿದೆ.

120 ಅಡಿಗೆ ಕಾಣಿಸಿಕೊಂಡ ನೀರು ಕಾಣಿಸಿಕೊಂಡು ರಭಸವಾಗಿ ಉಕ್ಕಲು ಆರಂಭಿಸಿದೆ. ಈ ಹಿಂದೆ 800-1000 ಅಡಿಯವರೆಗೂ ಕೊರೆಸಿದರೂ ಕೊಳವೆಬಾವಿಯಲ್ಲಿ ನೀರು ಕಾಣಿಸಿಕೊಳ್ಳುತ್ತಿರಲಿಲ್ಲ. ಇದೀಗ ನೀರು ಉಕ್ಕಿ ಬರುವುದರಿಂದ ಜನರಲ್ಲಿ ಸಂತಸ ತಂದಿದ್ದು ಆಶಾಭಾವನೆ ಮೂಡಿಸಿದೆ.











Click it and Unblock the Notifications