ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ: ಫೇಸ್ ಬುಕ್ ಸಿಇಒ
ನವದೆಹಲಿ, ಅ.28: ಭಾರತ ಪ್ರವಾಸದಲ್ಲಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸಂಸ್ಥಾಪಕ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಮಂಗಳವಾರ ದೆಹಲಿಯ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಫೇಸ್ ಬುಕ್ ನ ಮಹತ್ವದ ಯೋಜನೆಯಾದ ಇಂಟರ್ನೆಟ್. ಆರ್ಗ್ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಕೇಳಿ ಬಂದಿತ್ತು. ಈ ಮಹತ್ವದ ಯೋಜನೆ ಸಾಕಾರಗೊಳ್ಳಲು ಭಾರತದ ನೆರವು ಅಗತ್ಯ. ಭಾರತವನ್ನು ಬಿಟ್ಟು ವಿಶ್ವವನ್ನು ಸಂಪರ್ಕ ಜಾಲದಲ್ಲಿ ಬೆಸೆಯಲು ಸಾಧ್ಯವಿಲ್ಲ.ಪ್ರಪಂಚವನ್ನು ಸಂಪರ್ಕಿಸಲು ಭಾರತ ಬೀಗದ ಕೀ ಇದ್ದಂತೆ. ಭವಿಷ್ಯದಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರು ಹೇಳಿದರು.
ನಾನು ಭಾರತಕ್ಕೆ ಬಂದಿರುವುದು ತುಂಬಾ ಸಂತೋಷ ತಂದಿದೆ. ಇಲ್ಲಿ ವಿಶಿಷ್ಟ ಶಕ್ತಿ ಇದೆ. ಫೇಸ್ಬುಕ್ನಿಂದ ಇಡೀ ವಿಶ್ವವನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಎಲ್ಲಾ ಜನರನ್ನು ಒಂದುಗೂಡಿಸುವುದು ನಮ್ಮ ಉದ್ದೇಶ ಎಂದರು.
ಫೇಸ್ಬುಕ್ಗೆ ಭಾರತ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಇಂಟರ್ನೆಟ್ನಿಂದ ಬಡತನ ನಿರ್ಮೂಲನೆ ಸಾಧ್ಯ. ಅದರೆ, ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ. ಇಂಟರ್ನೆಟ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು internet.org ಸ್ಥಾಪಿಸಲಾಗಿದೆ ಎಂದರು.

ಭಾರತದ ಶಾಲೆಗಳಲ್ಲಿ ಹೂಡಿಕೆ
ಭಾರತ ಹಾಗೂ ಅಫ್ರಿಕಾ ಶಾಲೆಗಳ ಅಭಿವೃದ್ಧಿಗಾಗಿ ಫೇಸ್ ಬುಕ್ ಹೂಡಿಕೆ ಮಾಡುತ್ತಿದೆ. ಈ ಬಗ್ಗೆ ಫೇಸ್ ಬುಕ್ ಕೇಂದ್ರ ಕಚೇರಿ ಪಾಲೋ ಆಲ್ಟೋದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್
ದೆಹಲಿಯ ಐಐಟಿಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದಕ್ಕೂ ಮುನ್ನ ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ನೋಡಿ ಆನಂದದಿಂದ ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್

ನಾಪತ್ತೆಯಾದವರ ಪತ್ತೆಗಾಗಿ ಫೇಸ್ ಬುಕ್
ನಾಪತ್ತೆಯಾದವರ ಪತ್ತೆಗಾಗಿ ಗೂಗಲ್ ಸರ್ಚ್ ನೆರವಾಗುವಂತೆ ಫೇಸ್ ಬುಕ್ ಕೂಡಾ ಇಂಥದ್ದೊಂದು ಸಾಮಾಜಿಕ ಕಳಕಳಿ ಕಾರ್ಯಕ್ಕೆ ಮುಂದಾಗಿದೆ. ಅಮೆರಿಕದಲ್ಲಿ ಮಕ್ಕಳ ನಾಪತ್ತೆ ಬಗ್ಗೆ ಈಗಾಗಲೇ ಅಲರ್ಟ್ ಸೃಷ್ಟಿಸಲಾಗಿದೆ ಎಂದರು.

ನಾನು ಫೇಸ್ ಬುಕ್ ಸೃಷ್ಟಿಸಿಲ್ಲ
ನಾನೊಬ್ಬನೇ ಫೇಸ್ ಬುಕ್ ಸಂಸ್ಥಾಪಕನಲ್ಲ. ಇದರ ಹಿಂದೆ ಹಲವಾರು ಜನರ ಪರಿಶ್ರಮವಿದೆ. ನಾನು ವ್ಯವಸ್ಥೆಯ ನಿರ್ವಾಹಕ ಮಾತ್ರ ಎಂದ ಮಾರ್ಕ್.

ನೆಟ್ ನ್ಯೂಟ್ರಾಲಿಟಿಗೆ ಬೆಂಬಲ
ನೆಟ್ ನ್ಯೂಟ್ರಾಲಿಟಿಗೆ ಬೆಂಬಲ ವ್ಯಕ್ತಪಡಿಸುತ್ತಾ ಈ ಬಗ್ಗೆ ಎಲ್ಲೆಡೆ ಅರಿವು ಮೂಡಬೇಕು. ಇಂಟರ್ನೆಟ್ ಎಲ್ಲೆಡೆ ಸುಲಭಕ್ಕೆ ಸಿಗುವಂತಾಗಬೇಕು ಎಂದಿದ್ದಾರೆ.

ಸಂವಾದ ನಿರತ ಮಾರ್ಕ್
ಸಂವಾದ ನಿರತ ಮಾರ್ಕ್ ಅವರು ನೀಡಿದ ಹೇಳಿಕೆಯ ಚಿತ್ರ

ಸಂವಾದ ನಿರತ ಮಾರ್ಕ್
ಸಂವಾದ ನಿರತ ಮಾರ್ಕ್ ಅವರು ನೆಟ್ ನ್ಯೂಟ್ರಾಲಿಟಿ, ಡಿಜಿಟಲ್ ಇಂಡಿಯಾ, ಇಂಟರ್ನೆಟ್. ಆರ್ಗ್, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
-
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers












Click it and Unblock the Notifications