ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ: ಫೇಸ್ ಬುಕ್ ಸಿಇಒ
ನವದೆಹಲಿ, ಅ.28: ಭಾರತ ಪ್ರವಾಸದಲ್ಲಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಸಂಸ್ಥಾಪಕ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಮಂಗಳವಾರ ದೆಹಲಿಯ ಐಐಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಫೇಸ್ ಬುಕ್ ನ ಮಹತ್ವದ ಯೋಜನೆಯಾದ ಇಂಟರ್ನೆಟ್. ಆರ್ಗ್ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಕೇಳಿ ಬಂದಿತ್ತು. ಈ ಮಹತ್ವದ ಯೋಜನೆ ಸಾಕಾರಗೊಳ್ಳಲು ಭಾರತದ ನೆರವು ಅಗತ್ಯ. ಭಾರತವನ್ನು ಬಿಟ್ಟು ವಿಶ್ವವನ್ನು ಸಂಪರ್ಕ ಜಾಲದಲ್ಲಿ ಬೆಸೆಯಲು ಸಾಧ್ಯವಿಲ್ಲ.ಪ್ರಪಂಚವನ್ನು ಸಂಪರ್ಕಿಸಲು ಭಾರತ ಬೀಗದ ಕೀ ಇದ್ದಂತೆ. ಭವಿಷ್ಯದಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರು ಹೇಳಿದರು.
ನಾನು ಭಾರತಕ್ಕೆ ಬಂದಿರುವುದು ತುಂಬಾ ಸಂತೋಷ ತಂದಿದೆ. ಇಲ್ಲಿ ವಿಶಿಷ್ಟ ಶಕ್ತಿ ಇದೆ. ಫೇಸ್ಬುಕ್ನಿಂದ ಇಡೀ ವಿಶ್ವವನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ಎಲ್ಲಾ ಜನರನ್ನು ಒಂದುಗೂಡಿಸುವುದು ನಮ್ಮ ಉದ್ದೇಶ ಎಂದರು.
ಫೇಸ್ಬುಕ್ಗೆ ಭಾರತ ಒಂದು ಪ್ರಮುಖವಾದ ಮಾರುಕಟ್ಟೆಯಾಗಿದೆ. ಇಂಟರ್ನೆಟ್ನಿಂದ ಬಡತನ ನಿರ್ಮೂಲನೆ ಸಾಧ್ಯ. ಅದರೆ, ಉಚಿತವಾಗಿ ಇಂಟರ್ನೆಟ್ ನೀಡಲು ಸಾಧ್ಯವಿಲ್ಲ. ಇಂಟರ್ನೆಟ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು internet.org ಸ್ಥಾಪಿಸಲಾಗಿದೆ ಎಂದರು.

ಭಾರತದ ಶಾಲೆಗಳಲ್ಲಿ ಹೂಡಿಕೆ
ಭಾರತ ಹಾಗೂ ಅಫ್ರಿಕಾ ಶಾಲೆಗಳ ಅಭಿವೃದ್ಧಿಗಾಗಿ ಫೇಸ್ ಬುಕ್ ಹೂಡಿಕೆ ಮಾಡುತ್ತಿದೆ. ಈ ಬಗ್ಗೆ ಫೇಸ್ ಬುಕ್ ಕೇಂದ್ರ ಕಚೇರಿ ಪಾಲೋ ಆಲ್ಟೋದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್
ದೆಹಲಿಯ ಐಐಟಿಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದಕ್ಕೂ ಮುನ್ನ ಆಗ್ರಾದ ಪ್ರೇಮ ಸೌಧ ತಾಜ್ ಮಹಲ್ ನೋಡಿ ಆನಂದದಿಂದ ವಾಹ್ ! ತಾಜ್ ಎಂದ ಮಾರ್ಕ್ ಝುಕರ್ ಬರ್ಗ್

ನಾಪತ್ತೆಯಾದವರ ಪತ್ತೆಗಾಗಿ ಫೇಸ್ ಬುಕ್
ನಾಪತ್ತೆಯಾದವರ ಪತ್ತೆಗಾಗಿ ಗೂಗಲ್ ಸರ್ಚ್ ನೆರವಾಗುವಂತೆ ಫೇಸ್ ಬುಕ್ ಕೂಡಾ ಇಂಥದ್ದೊಂದು ಸಾಮಾಜಿಕ ಕಳಕಳಿ ಕಾರ್ಯಕ್ಕೆ ಮುಂದಾಗಿದೆ. ಅಮೆರಿಕದಲ್ಲಿ ಮಕ್ಕಳ ನಾಪತ್ತೆ ಬಗ್ಗೆ ಈಗಾಗಲೇ ಅಲರ್ಟ್ ಸೃಷ್ಟಿಸಲಾಗಿದೆ ಎಂದರು.

ನಾನು ಫೇಸ್ ಬುಕ್ ಸೃಷ್ಟಿಸಿಲ್ಲ
ನಾನೊಬ್ಬನೇ ಫೇಸ್ ಬುಕ್ ಸಂಸ್ಥಾಪಕನಲ್ಲ. ಇದರ ಹಿಂದೆ ಹಲವಾರು ಜನರ ಪರಿಶ್ರಮವಿದೆ. ನಾನು ವ್ಯವಸ್ಥೆಯ ನಿರ್ವಾಹಕ ಮಾತ್ರ ಎಂದ ಮಾರ್ಕ್.

ನೆಟ್ ನ್ಯೂಟ್ರಾಲಿಟಿಗೆ ಬೆಂಬಲ
ನೆಟ್ ನ್ಯೂಟ್ರಾಲಿಟಿಗೆ ಬೆಂಬಲ ವ್ಯಕ್ತಪಡಿಸುತ್ತಾ ಈ ಬಗ್ಗೆ ಎಲ್ಲೆಡೆ ಅರಿವು ಮೂಡಬೇಕು. ಇಂಟರ್ನೆಟ್ ಎಲ್ಲೆಡೆ ಸುಲಭಕ್ಕೆ ಸಿಗುವಂತಾಗಬೇಕು ಎಂದಿದ್ದಾರೆ.

ಸಂವಾದ ನಿರತ ಮಾರ್ಕ್
ಸಂವಾದ ನಿರತ ಮಾರ್ಕ್ ಅವರು ನೀಡಿದ ಹೇಳಿಕೆಯ ಚಿತ್ರ

ಸಂವಾದ ನಿರತ ಮಾರ್ಕ್
ಸಂವಾದ ನಿರತ ಮಾರ್ಕ್ ಅವರು ನೆಟ್ ನ್ಯೂಟ್ರಾಲಿಟಿ, ಡಿಜಿಟಲ್ ಇಂಡಿಯಾ, ಇಂಟರ್ನೆಟ್. ಆರ್ಗ್, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications