ಬಜೆಟ್ ಮುನ್ನ ರೈಲ್ವೆ ಕೂಲಿಗಳ ಭೇಟಿ ಮಾಡಿದ ರಾಹುಲ್
ನವದೆಹಲಿ, ಫೆ.12- ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಬಜೆಟ್ ಮಂಡಿಸುವುದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಯುವರಾಜ ಅವರು ನಿನ್ನೆ ಸೋಮವಾರ ನವದೆಹಲಿ ರೈಲ್ವೆ ನಿಲ್ದಾಣಕ್ಕೆ ತೆರಳಿ, ಅಲ್ಲಿರುವ ಪೋರ್ಟರುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.
ಲೋಕಸಭಾ
ಚುನಾವಣೆಯನ್ನು
ಗಮನದಲ್ಲಿಟ್ಟುಕೊಂಡು
ಯುವ
ಪೋರ್ಟರುಗಳನ್ನು
ಭೇಟಿ
ಮಾಡಿದ್ದ
ರಾಹುಲ್
ಗಾಂಧಿ
ಅವರ
ಸಮಸ್ಯೆಗಳು
ಏನೇ
ಇದ್ದರೂ
ಅದನ್ನು
ಪರಿಹರಿಸುವುದಾಗಿ
ಭರವಸೆ
ನೀಡಿದರು.
ಆದರೆ
ಇಂದು
ಬಜೆಟ್
ನಲ್ಲಿ
ಅಂತಹ
ಯಾವುದೇ
ಯೋಜನೆ
ಪ್ರಸಾಪವಾಗಿಲ್ಲ.
ಪೋರ್ಟರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇನೆ
'ನಾನು ನಿಮ್ಮ ಜತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇನೆ. ನಾನು ನಿಮ್ಮ ಸಮಸ್ಯೆಗಳನ್ನು ಆಳವಾಗಿ ಚರ್ಚಿಸಲು ಇಚ್ಛಿಸುತ್ತೇನೆ' ಎಂದು portersಗೆ ( ರೈಲ್ವೆ ಕೂಲಿಗಳು) ಹೇಳಿದರು.
ನಿಮ್ಮ ಸಮಸ್ಯೆಗಳನ್ನು ರೈಲ್ವೆ ಸಚಿವರ ಬಳಿಗೆ port ಮಾಡುತ್ತೇನೆ
'ನಾನು ನಿಮಗೆ ಒಂದು ಭರವಸೆಯನ್ನು ನೀಡಲು ಇಚ್ಛಿಸುತ್ತೇನೆ. ಏನು ಮಾಡಲು ಸಾಧ್ಯವೋ ಅದನ್ನೆಲ್ಲಾ ನಿಮಗಾಗಿ ಹೃದಯಾಂತರಾಳದಿಂದ ಮಾಡಲು ಬಯಸುತ್ತೇನೆ. ನಿಮ್ಮ ಸಮಸ್ಯೆಗಳನ್ನು ರೈಲ್ವೆ ಸಚಿವರ ಬಳಿಗೆ port ಮಾಡುತ್ತೇನೆ. ನಿಮ್ಮ ಸಮಸ್ಯೆಗಳನ್ನು ನೀಗಿಸುವಂತೆ ಸಚಿವರಿಗೆ ಸೂಚಿಸುತ್ತೇನೆ' ಎಂದು ರಾಹುಲ್ ಗಾಂಧಿ porters ಗೆ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪೋರ್ಟರುಗಳ ಸಮಸ್ಯೆ
'ನಿಮ್ಮಂತಹ 70 ಕೋಟಿ ಜನ ದೇಶದಲ್ಲಿದ್ದಾರೆ. ಅವರ ಬದುಕುಗಳನ್ನು ಉತ್ತಮಗೊಳಿಸಿ, ಬದಲಾಯಿಸಲು ಪ್ರಯತ್ನಿಸುತ್ತೇನೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನಿಮ್ಮ ಅನಿಸಿಕೆ/ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವೆ' ಎಂದು ರಾಗಾ ಹೇಳಿದ್ದಾರೆ.
porter ನಾಯಕರನ್ನು ಭೇಟಿ ಮಾಡಿದ ರಾಹುಲ್
ರಾಹುಲ್ ಗಾಂಧಿ ಎದುರು ರೈಲ್ವೆ porterಗಳು ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಂಡರು ಎಂದು ಮೂಲಗಳು ತಿಳಿಸಿವೆ. porterಗಳನ್ನು ಭೇಟಿ ಮಾಡುವ ಮುನ್ನ ರಾಹುಲ್ ಗಾಂಧಿ ಅವರು porterಗಳ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದರು.