ಬ್ಯಾಂಕ್ ಗಳಲ್ಲಿ ಮಾಹಿತಿ ತಿಳಿಸುವಂತಹ ರೊಬೋಟ್ ರೆಡಿಯಾಗಿದೆ
ಬ್ಯಾಂಕ್ ಗಳಲ್ಲಿ ಮಾಹಿತಿ ತಿಳಿಸುವಂತಹ ಹುಮ್ಯಾನೈಡ್ ರೊಬೊಟ್ ಒಂದನ್ನು ಕೊಯಂಬತ್ತೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ತಯಾರಿಸಿದ್ದಾರೆ.
ನವದೆಹಲಿ,ಡಿಸೆಂಬರ್, 3: ನೋಟು ನಿಷೇಧದ ಪರಿಣಾಮದಿಂದ ನಗದು ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಸಾಧ್ಯವಾದಷ್ಟು ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರ ನಡೆಸುವಂತೆ ಸರ್ಕಾರ ಮತ್ತು ಬ್ಯಾಂಕ್ ಗಳು ಜನರಲ್ಲಿ ಮನವಿ ಮಾಡಿಕೊಳ್ಳುತ್ತಿವೆ.
ಆದರೆ ಹಲವು ಮಂದಿ ಬ್ಯಾಂಕ್ ಖಾತೆಯನ್ನೇ ಹೊಂದಿರುವುದಿಲ್ಲ. ಅಷ್ಟೇ ಅಲ್ಲದೆ ಬ್ಯಾಂಕಿಂಗ್ ವ್ಯವಹಾರ ಕುರಿತು ಜ್ಞಾನವೂ ಇರುವುದಿಲ್ಲ. ಇಂತಹವರಿಗಾಗಿಯೇ ಒಂದು ಶುಭಸುದ್ದಿ ಇಲ್ಲಿದೆ.

ಬ್ಯಾಂಕ್ ಸಿಬ್ಬಂದಿ ಮೇಲಿನ ಹೊರೆ ಇಳಿಸಲು ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೊಯಮತ್ತೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರು ಹ್ಯೂಮನೈಡ್ ರೋಬೋಟ್ ಕಂಡುಹಿಡಿದಿದ್ದಾರೆ.
ನೋಟು ನಿಷೇಧದ ನಂತರ ಹಲವು ಮಂದಿ ನಿತ್ಯ ಬ್ಯಾಂಕ್ ಗಳಿಗೆ ಬರುತ್ತಿದ್ದಾರೆ. ಬಂದವರಿಗೆಲ್ಲಾ ಮಾಹಿತಿ ನೀಡಲು ಸಿಬ್ಬಂದಿ ಹೆಚ್ಚು ಶ್ರಮಪಡುತ್ತಿದ್ದಾರೆ. ಇವರ ಶ್ರಮದ ಹೊರೆ ಇಳಿಸಲು ಈ ರೋಬೋಟ್ ಸಹಾಯ ಮಾಡಲಿದೆ.
This robot helps bank customers by telling them how to open account and also gives info of existing accounts,understands 15 languages: Vijay pic.twitter.com/uEkZrlObtp
— ANI (@ANI_news) December 3, 2016
ಖಾತೆ ತೆರೆಯಲು ಅನುಸರಿಸಬೇಕಾದ ಕ್ರಮಗಳೇನು? ಈಗಾಗಲೇ ಖಾತೆ ಹೊಂದಿದ್ದರೆ, ಆ ಕುರಿತ ಮಾಹಿತಿ ಮತ್ತಿತರರ ಬ್ಯಾಂಕಿಗ್ ವ್ಯವಹರಾಗಳ ಕುರಿತು ಈ ರೋಬೊಟ್ ಮಾಹಿತಿ ನೀಡಲಿದೆ. ಇದು ದೇಶದ 15 ಭಾಷೆಗಳಲ್ಲಿ ಮಾಹಿತಿ ನೀಡುತ್ತದೆ ಎಂದು ರೊಬೋಟ್ ತಯಾರಿಸಿರುವ ವಿಜಯ್ ತಿಳಿಸಿದ್ದಾರೆ.
ಈ ರೋಬೋಟ್ ಗಳನ್ನು ಬ್ಯಾಂಕಿಂಗ್ ವ್ಯವಹಾರಕ್ಕೆ ಬಳಸಿಕೊಂಡಲ್ಲಿ ಸಿಬ್ಬಂದಿ ಮೇಲಿನ ಹೊರೆ ಸಾಕಷ್ಟು ಕಡಿಮೆಯಾಗುತ್ತದೆ. ಮುಂದಿನ ಕ್ರಿಸ್ ಮಸ್ ವೇಳೆಗೆ ಈ ರೋಬೋಟ್ ಬ್ಯಾಂಕ್ ಗಳಲ್ಲಿ ಕಾಣಿಸಿಕೊಳ್ಳಬಹುದು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications