ಮೈಸೂರಿನಲ್ಲಿ ಶ್ವಾನ ಪ್ರದರ್ಶನ: ಗಮನ ಸೆಳೆದ ಸ್ವದೇಶಿ ವಿದೇಶಿ ಶ್ವಾನಗಳು
ಮೈಸೂರು, ಜನವರಿ 23: ಶ್ವಾನಗಳೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ. ಶ್ವಾನ ಪ್ರಿಯರಿಗೆಂದೇ ಭಾನುವಾರ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ 'ಡಾಗ್ ಶೋ' ಎಲ್ಲರ ಮೆಚ್ಚುಗೆ ಗಳಿಸಿದೆ. ನೂರಾರು ಮಂದಿ ಈ ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದು, ವಿವಿಧ ತಳಿಯ ಶ್ವಾನಗಳ ಬಗ್ಗೆ ಮಾಹತಿ ಪಡೆದಿದ್ದಾರೆ.
ಮೈಸೂರು ನಗರದ ಸ್ಕೌಟ್ಸ್ ಮತ್ತು ಗೈಡ್ ಮೈದಾನದಲ್ಲಿ ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ರಾಷ್ಟ್ರಮಟ್ಟದ ಶ್ವಾನ ಪ್ರದರ್ಶನದಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ವಿಜಯಪುರ, ಬೆಳಗಾವಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಕೇರಳ, ಊಟಿ, ತಮಿಳುನಾಡುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾನಗಳು ಪಾಲ್ಗೊಂಡಿವೆ.
ಬೆಲ್ಜಿಯಂ ಶೆರ್ಡ್, ಜರ್ಮನ್ ಶೆರ್ಡ್, ಡಾಬರ್ಮನ್, ಗ್ರೇಟ್ ಡೇನ್, ಮಿನಿಯೇಚರ್, ರಾಟ್ ವಿಲ್ಲರ್, ಯಾರ್ಕ್ ಶೈರ್, ಪೊಮೊಮಿರಿಯನ್, ಸೈಬರಿಯನ್ ಹಸ್ಕಿಘಿ, ಜಾಕ್ ರಸ್ಸೆಲ್ ಟೆರಿರಿರ್, ಾಕ್ಸ್ ಟೆರಿರಿರ್, ಬುಲ್ ಟೆರಿರಿರ್, ಚೌಚೌ, ಊರೋಡಿಯಸಿನ್ ಸೇರಿದಂತೆ 33 ತಳಿಗಳ , 416 ನಾಯಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಚಿನ್ನಾಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕಿದ ಶ್ವಾನಗಳ ಬುದ್ಧಿವಂತಿಕೆ ಹಾಗೂ ಪ್ರೀತಿಯನ್ನು ನೋಡಿದ ಜನರು, ಶ್ವಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ವಿಭಾಗಗಳಿಂದ ಭಾಗವಹಿಸುವ ಒಟ್ಟು ಶ್ವಾನಗಳ ಪೈಕಿ ಬೆಸ್ಟ್ ಇನ್ ಶೋಗೆ 9 ಶ್ವಾನಗಳು ಆಯ್ಕೆಯಾದವು.
ಕೆನೈನ್ ಕ್ಲಬ್ ಆಫ್ ಇಂಡಿಯಾದ ಮೈಕ್ರೋ ಚಿಪ್ ಹಾಗೂ ಮೂರು ತಲೆಮಾರಿನ ವಂಶಾವಳಿ ದಾಖಲೆ ಹೊಂದಿರುವ ಶ್ವಾನಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ ಇತ್ತು. 4ರಿಂದ 6 ತಿಂಗಳ ವಿಭಾಗ, 6ರಿಂದ 12 ತಿಂಗಳು, 12ರಿಂದ 18 ತಿಂಗಳು, 18ರಿಂದ 36 ತಿಂಗಳು ಮತ್ತು 36 ತಿಂಗಳ ಮೇಲ್ಪಟ್ಟ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಎಲ್ಲ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ, ಬೆಸ್ಟ್ ಆ್ ಬ್ರೀಡ್, ಬೆಸ್ಟ್ ಇನ್ ಶೋ ಪ್ರಶಸ್ತಿ ನೀಡಲಾಯಿತು.

ಮೈಸೂರಿನಲ್ಲಿ ನಡೆದ ಈ ಶ್ವಾನ ಪ್ರದರ್ಶನದಲ್ಲಿ ಮೈಲಾಕ್ ಅಧ್ಯಕ್ಷ ರಘು ಕೌಟಿಲ್ಯ, ಉಪಮೇಯರ್ ಡಾ.ಜಿ.ರೂಪ, ಮಾಜಿ ಶಾಸಕ ವಾಸು, ವಕೀಲ ಹರೀಶ್ ಹೆಗಡೆ, ಕೆನೈನ್ ಕ್ಲಬ್ ಆ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್, ಕ್ಲಬ್ನ ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ, ಡಾ.ಜಯರಾಮಯ್ಯ ಮತ್ತಿತರರು ಹಾಜರಿದ್ದರು.
33 ತಳಿಗಳ ಸುಮಾರು 416 ನಾಯಿಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಮೈಸೂರಿನ ಶ್ವಾನ ಪ್ರಿಯರು ಕುಟುಂಬ ಸಮೇತರಾಗಿ ಆಗಮಿಸಿದ್ದು, ಮಕ್ಕಳು ವಿವಿಧ ಬಗೆಯ ಶ್ವಾನಗಳನ್ನು ಮುದ್ದಾಡಿದ್ದಾರೆ.
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications