ವಿಮಾನದಲ್ಲಿ ಸೋನು ಹಾಡಿನ ವಿವಾದ, ಸಿಬ್ಬಂದಿ ಸಸ್ಪೆಂಡ್
ಮುಂಬೈ, ಫೆಬ್ರವರಿ 05 : ವಿಮಾನದಲ್ಲಿ ಸುಶ್ರಾವ್ಯವಾದ ಹಾಡು ಕೇಳುವುದು ಅಪರಾಧವೆ? ಆದರೆ, ಹಾಡು ಹೇಳಿಸುವಂತೆ ಅವಕಾಶ ಮಾಡಿಕೊಟ್ಟು ನಿಯಮ ಉಲ್ಲಂಘಿಸಿದ್ದು ಮಹಾಪರಾಧವಾಗಿದೆ. ಇಂಥ ಆರೋಪ ಮಾಡಿದ್ದಕ್ಕಾಗಿ ವಿಮಾನದ ಸಿಬ್ಬಂದಿಗಳು ತೊಂದರೆಗೆ ಸಿಲುಕಿದ್ದಾರೆ.
ಎರಡು ಅತ್ಯದ್ಭುತ ಹಿಂದಿ ಹಾಡುಗಳನ್ನು ಹಾಡಿ ಪ್ರಯಾಣಿಕರನ್ನು ರಂಜಿಸಿದ್ದು ಮತ್ತಾರೂ ಅಲ್ಲ, ಕನ್ನಡದಲ್ಲಿ ಜನಜನಿತವಾಗಿರುವ ಹಿಂದಿ ಚಿತ್ರರಂಗದ ಸುಶ್ರಾವ್ಯ ಕಂಠದ ಗಾಯಕ ಸೋನು ನಿಗಮ್. ಹಾಡುಗಾರರಿಗೆ ಹಾಡು ಕೇಳಿಸುವುದಕ್ಕಿಂತ ಸಂತೋಷ ಇನ್ನೇನಿದೆ? ಪ್ರಯಾಣಿಕರು ಹಾಡಿ ಎಂದು ಹುರಿದುಂಬಿಸಿದ್ದಾರೆ, ಸೋನು ಹಾಡಿ ಗಂಧರ್ವಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. [ರಾಧೆ ಮಾಳನ್ನು ಕಾಳಿಗೆ ಹೋಲಿಸಿ ಕಷ್ಟಕ್ಕೆ ಸಿಲುಗಿದ ಸೋನು]

ಆದರೆ, ತೊಂದರೆಗೆ ಸಿಲುಕಿರುವುದು ಮಾತ್ರ ವಿಮಾನದ ಸಿಬ್ಬಂದಿಗಳು. ಜೆಟ್ ಏರ್ವೇಸ್ನ ಎಲ್ಲ ಐದು ಸಿಬ್ಬಂದಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯ ಜೇಟ್ ಏರ್ವೇಸ್ಗೆ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಿತ್ತು. ಇದೀಗ ಎಲ್ಲ ಸಿಬ್ಬಂದಿಗಳನ್ನು ಅಮಾನತಿನಲ್ಲಿಡಲಾಗಿದೆ.
ಜನವರಿ 4ರಂದು ಜೋಧಪುರದಿಂದ ಮುಂಬೈಗೆ ಹಾರುತ್ತಿದ್ದ ವಿಮಾನದಲ್ಲಿ ಮದುವೆ ದಿಬ್ಬಣದಿಂದ ಪ್ರಯಾಣಿಕರು ಮರಳುತ್ತಿದ್ದರು. ಅದರಲ್ಲಿ ಸೋನು ಕೂಡ ಇದ್ದರು. ಇನ್ನು ಕೇಳಬೇಕೆ? ಕೆಲ ಹಾಡು ಹಾಡಬೇಕೆಂದು ಹುರಿದುಂಬಿಸಿದ್ದಾರೆ. ವೀರ್ ಝರಾ ಮತ್ತು ರೆಫ್ಯೂಜಿ ಚಿತ್ರದ ಎರಡು ಹಾಡುಗಳನ್ನು ಸೋನು ನಿಗಮ್ ಹಾಡಿದ್ದಾರೆ. ಕೆಲವರು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. [ಸೋನು ನಿಗಂಗೆ ಲಕ್ಷ..ಲಕ್ಷ: ಯಾಕ್ ಸ್ವಾಮಿ ದುಂದುವೆಚ್ಚ]

ಹಾಗೆಯೇ ಕೆಲ ಹಾಡುಗಳನ್ನು ಗುನುಗಿದ್ದರೆ ಅಂತಹ ತೊಂದರೆಯಾಗುತ್ತಿರಲಿಲ್ಲವೇನೋ. ಆದರೆ, ಹಾಡಲು ಸೋನು ಬಳಸಿದ್ದು, ಪ್ರಯಾಣಿಕರನ್ನು ಉದ್ದೇಶಿಸಿ ಸಿಬ್ಬಂದಿ ಘೋಷಣೆ ಮಾಡುವ ಸಲಕರಣೆ. ಹಿಂದೆ 2014ರಲ್ಲಿ ಸ್ಪೈಸ್ ಜೆಟ್ ನಲ್ಲಿ ಕೂಡ ಇಂತಹುದೇ ಘಟನೆ ನಡೆದಿತ್ತು. ಬಲಮ ಪಿಚಕಾರಿ ಹಾಡಿಕೆ ಸಿಬ್ಬಂದಿಗಳು ನೃತ್ಯ ಮಾಡಿದ್ದರಿಂದ ಅವರನ್ನು ಅಮಾನತುಗೊಳಿಸಲಾಗಿತ್ತು.
ಡೋಂಟ್ ಪನಿಶ್ ಹ್ಯಾಪಿನೆಸ್ : ಜೆಟ್ ಏರ್ ವೇಸ್ನ ಸಿಬ್ಬಂದಿಗಳನ್ನು ಗಾಯಕ ಸೋನು ನಿಗಮ್ ಬೆಂಬಲಿಸಿದ್ದು, ಹಾಡು ಕೇಳಿ ನಾಲ್ಕು ಜನ ಖುಷಿಪಟ್ಟರೆ ಸಿಬ್ಬಂದಿಗಳ ಮೇಲೆ ಏಕೆ ಕ್ರಮ ಜರುಗಿಸುತ್ತೀರಿ. ಡೋಂಟ್ ಪನಿಶ್ ಹ್ಯಾಪಿನೆಸ್ ಎಂದು ವಿಮಾನಯಾನ ಸಂಸ್ಥೆಯನ್ನು ಕೋರಿದ್ದಾರೆ. ಕೆಲವರು ಸೋನು ನಿಗಮ್ ಅವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications