ಕರ್ನಾಟಕ ಲೋಕಾಯುಕ್ತದಲ್ಲಿ ಹಲವು ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜನವರಿ 02 : ಪೊಲೀಸ್ ಇಲಾಖೆಯಲ್ಲಿ ಹಲವಾರು ಬದಲಾವಣೆ ಮಾಡಿರುವ ಕರ್ನಾಟಕ ಸರ್ಕಾರ ಲೋಕಾಯುಕ್ತದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದೆ. ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಕಮಲ್ ಪಂತ್ ಅವರನ್ನು ಕೆಎಸ್ಆರ್ಪಿ ಎಡಿಜಿಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ಕರ್ನಾಟಕ
ಲೋಕಾಯುಕ್ತದಲ್ಲಿ
ಹಲವು
ಅಧಿಕಾರಿಗಳಿಗೆ
ಬಡ್ತಿ
ನೀಡಿ
ವರ್ಗಾವಣೆ
ಮಾಡಲಾಗಿದೆ.
ಶುಕ್ರವಾರ
ಈ
ಕುರಿತು
ಸರ್ಕಾರ
ಅಧಿಕೃತ
ಆದೇಶ
ಹೊರಡಿಸಿದೆ.
ಲೋಕಾಯುಕ್ತದಲ್ಲಿನ
ಭ್ರಷ್ಟಾಚಾರ
ಪ್ರಕರಣ
ಬೆಳಕಿಗೆ
ಬರಲು
ಕಾರಣರಾದ
ಬೆಂಗಳೂರು
ಲೋಕಾಯುಕ್ತ
ಎಸ್ಪಿ
ಸೋನಿಯಾ
ನಾರಂಗ್
ಅವರಿಗೆ
ಬಡ್ತಿ
ಸಿಕ್ಕಿದ್ದು,
ಸಿಐಡಿಯ
ಡಿಐಜಿ
ಹುದ್ದೆಗೆ
ನೇಮಕ
ಮಾಡಲಾಗಿದೆ.
[ಪೊಲೀಸ್
ಇಲಾಖೆಯಲ್ಲಿ
ಬಡ್ತಿ,
ವರ್ಗಾವಣೆ
:
ಇಲ್ಲಿದೆ
ಪಟ್ಟಿ]
50 ಸಾವಿರ ಟನ್ಗಿಂತ ಕಡಿಮೆ ಪ್ರಮಾಣದ ಅಕ್ರಮ ಅದಿರು ಸಾಗಾಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಕೆ.ಎಸ್.ಆರ್. ಚರಣ್ ರೆಡ್ಡಿ ಅವರನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಚರಣ್ ರೆಡ್ಡಿ ಅವರ ಸ್ಥಾನಕ್ಕೆ ಮಾಲಿನಿ ಕೃಷ್ಣಮೂರ್ತಿ ಅವರನ್ನು ನೇಮಿಸಲಾಗಿದೆ. [ಐಎಎಸ್ ಅಧಿಕಾರಿಗಳ ಬಡ್ತಿ, ವರ್ಗಾವಣೆ ಪಟ್ಟಿ]
ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರಿಗೆ ಬಡ್ತಿ ನೀಡಿದ್ದು, ಸಿಐಡಿಯ ಡಿಐಜಿ ಹುದ್ದೆಗೆ ನೇಮಕ ಮಾಡಲಾಗಿದೆ. ಸೋನಿಯಾ ನಾರಂಗ್ ಅವರ ಸ್ಥಾನಕ್ಕೆ, ಆರ್. ರಮೇಶ್ ಅವರನ್ನು ನೇಮಿಸಲಾಗಿದೆ. ಲೋಕಾಯುಕ್ತ ಎಡಿಜಿಪಿಯಾಗಿದ್ದ ಪ್ರೇಮಶಂಕರ ಮೀನಾ ಅವರು ಡಿಜಿಪಿ (ತರಬೇತಿ)ಯಾಗಿ ಬಡ್ತಿ ಪಡೆದಿದ್ದಾರೆ. ಎಡಿಜಿಪಿ ಸ್ಥಾನಕ್ಕೆ ಡಾ.ಎಸ್. ಪರಶಿವಮೂರ್ತಿ ಅವರನ್ನು ನೇಮಿಸಲಾಗಿದೆ.