ಕೇರಳಕ್ಕೆ 10 ವೈದ್ಯರ ತಂಡ ಕಳಿಸಲಿದೆ ಕರ್ನಾಟಕ
ಬೆಂಗಳೂರು, ಏಪ್ರಿಲ್ 11 : ಕೇರಳದ ಕೊಲ್ಲಂ ಜಿಲ್ಲೆಯ ಪುತ್ತಿಂಗಲ್ ಮೂಕಾಂಬಿಕ ದೇವಸ್ಥಾನದಲ್ಲಿ ನಡೆದ ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಕರ್ನಾಟಕ ಸರ್ಕಾರ 10 ಮಂದಿ ತಜ್ಞ ವೈದ್ಯರನ್ನು ಕಳುಹಿಸಿಕೊಡಲಿದೆ. [ಪಟಾಕಿ ಬೇಡವೆಂದ ಅಜ್ಜಿ ಮಾತು ಯಾರೂ ಕೇಳಲಿಲ್ಲ]
ಕೇರಳ
ಸರ್ಕಾರಕ್ಕೆ
ಅಗತ್ಯವಿರುವ
ಎಲ್ಲಾ
ನೆರವು
ಮತ್ತು
ಸಹಕಾರ
ನೀಡುವುದಾಗಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ತಿಳಿಸಿದ್ದಾರೆ.
ಅಗ್ನಿ
ದುರಂತಕ್ಕೆ
ಸಂಬಂಧಿಸಿದಂತೆ
ಕರ್ನಾಟಕ
ಸರ್ಕಾರದ
ನೋಡಲ್
ಅಧಿಕಾರಿಯಾಗಿ
ಐಎಎಸ್
ಅಧಿಕಾರಿ
ಎಂ.
ಲಕ್ಷ್ಮೀನಾರಾಯಣ
ಅವರನ್ನು
ನೇಮಕ
ಮಾಡಲಾಗಿದೆ.
[ಕೇರಳ
ಪಟಾಕಿ
ದುರಂತ,
5
ಜನರ
ಬಂಧನ]
10 ಮಂದಿ ವೈದ್ಯರ ತಂಡ ರವಾನೆ : ಅಗ್ನಿ ದುರಂತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 10 ಮಂದಿ ವೈದ್ಯರ ತಂಡವನ್ನು ಕಳುಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ವೈದ್ಯರ ತಂಡ ಔಷಧಿ ಹಾಗೂ ರಕ್ತದ ಬ್ಯಾಗ್ ಜೊತೆಗೆ ಕೇರಳಕ್ಕೆ ತೆರಳಲಿದೆ. [ಕೇರಳ ದುರಂತದ ಚಿತ್ರಗಳು]
ಕರ್ನಾಟಕದ
ಅಧಿಕಾರಿಗಳು
ಕೇರಳದ
ಸರ್ಕಾರ
ಅಧಿಕಾರಿಗಳ
ಜೊತೆ
ಸಂಪರ್ಕದಲ್ಲಿದ್ದು
ಅಗತ್ಯಕ್ಕನುಗುಣವಾಗಿ
ಸಕಲ
ನೆರವನ್ನೂ
ಕೊಡುವ
ವ್ಯವಸ್ಥೆ
ಮಾಡಿಕೊಳ್ಳಲಾಗಿದೆ.
ತಜ್ಞ
ವೈದ್ಯರನ್ನೂ
ಕಳುಹಿಸಲು
ನಾವು
ಸಿದ್ಧರಿದ್ದು
ಕೇರಳದ
ಆರೋಗ್ಯ
ಸಚಿವರಿಂದಲೂ
ಮಾಹಿತಿ
ಪಡೆಯಲಾಗಿದೆ
ಎಂದು
ಖಾದರ್
ಹೇಳಿದ್ದಾರೆ.
ಭಾನುವಾರ ಮುಂಜಾನೆ 3.30ರ ಸುಮಾರಿಗೆ ಮೂಕಾಂಬಿಕ ದೇವಸ್ಥಾನದಲ್ಲಿ ನಡೆದ ಅಗ್ನಿ ದುರಂತದಲ್ಲಿ 106 ಭಕ್ತರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ದುರಂತದ ಬಗ್ಗೆ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರು, ಪಟಾಕಿ ತಂದಿದ್ದ ಐವರನ್ನು ಬಂಧಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯ ಇತರ ಕೆಲವು ಸದಸ್ಯರಿಗಾಗಿ ಹುಡುಕಾಟ ಮುಂದುವರೆದಿದೆ.