Hospital Bill: ಮಾಡದ ಸರ್ಜರಿಗೂ 1 ಲಕ್ಷ ರೂಪಾಯಿ ಬಿಲ್; ರೋಗಿಯ ಒಂದೇ ಒಂದು ಪ್ರಶ್ನೆಗೆ ಉಳಿಯಿತು ಬರೋಬ್ಬರಿ ರೂ.44,000
Hospital Bill: ವೈದ್ಯಕೀಯ ಚಿಕಿತ್ಸೆಯ ನಂತರ ಪ್ರತಿಯೊಂದು ವಸ್ತುವಿನ ವಿವರವಾದ ಪಟ್ಟಿ ಇರುವ ಬಿಲ್ ಕೇಳುವ ಮೂಲಕ ರೋಗಿಯೊಬ್ಬರು ಬರೋಬ್ಬರಿ 44,000 ರೂಪಾಯಿಗಳನ್ನು ಉಳಿಸಿದ್ದಾರೆ. ಆಶ್ಚರ್ಯಕರ ವಿಷಯವೆಂದರೆ, ತಮಗೆ ನಡೆಯದ ಶಸ್ತ್ರಚಿಕಿತ್ಸೆಗೂ ಆಸ್ಪತ್ರೆಯವರು ಬಿಲ್ ಹಾಕುತ್ತಿರುವುದು ವಿವರವಾದ ಪಟ್ಟಿಯನ್ನು ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿರುವ ರೋಗಿಯು, ಮೊದಲು ತಮಗೆ ನೀಡಲಾದ ಬಿಲ್ನಲ್ಲಿ 1,00,000 ರೂಪಾಯಿ ಹಾಕಲಾಗಿತ್ತು. ಬಳಿಕ ನಾವು ಯಾವಾಗ ಬಿಲ್ನಲ್ಲಿನ ತಪ್ಪುಗಳನ್ನು ಪ್ರಶ್ನಿಸಿದೆವೋ, ತಕ್ಷಣವೇ ಆ ಮೊತ್ತವು 57,000 ರೂಪಾಯಿಗಳಿಗೆ ಇಳಿಕೆಯಾಗಿದೆ. ಅಂದರೆ, ಕೇವಲ ಒಂದು ಪ್ರಶ್ನೆಯಿಂದ ಅವರಿಗೆ 44,000 ರೂಪಾಯಿ ಉಳಿತಾಯ ಆದಂತಾಗಿದೆ. ಈ ಮೂಲಕ ನಾವು ಎಲ್ಲಿವರೆಗೂ ತಪ್ಪುಗಳನ್ನ ಪ್ರಶ್ನಿಸುವುದಿಲ್ಲವೋ ಅಲ್ಲಿಯವರೆಗೂ ನಮ್ಮನ್ನ ಮೋಸ ಮಾಡುತ್ತಲಿರುತ್ತಾರೆ ಎಂದು ಈ ರೋಗಿ ತಿಳಿಸಿದ್ದಾರೆ.

ಇಲ್ಲದ ಚಿಕಿತ್ಸೆಗೆ 1 ಲಕ್ಷ ರೂಪಾಯಿ ಬಿಲ್
"ಕಳೆದ ಜನವರಿಯಲ್ಲಿ ಆಸ್ಪತ್ರೆಯೊಂದರಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದೆ. ಇನ್ಶೂರೆನ್ಸ್ನ ಮೊತ್ತ ಕಳೆದ ನಂತರವೂ ನನಗೆ ಸುಮಾರು 1 ಲಕ್ಷ ರೂಪಾಯಿ ಬಿಲ್ ಬಂದಿತ್ತು. ನಾನು ಸುಮ್ಮನೆ ಹಣ ಪಾವತಿಸಲು ಮುಂದಾಗಿದ್ದೆ. ಆದರೆ, ನನ್ನ ಕಚೇರಿಯ ಸಹೋದ್ಯೋಗಿಯೊಬ್ಬರು ಮೊದಲು ವಿವರವಾದ ಬಿಲ್ ಕೇಳುವಂತೆ ಸಲಹೆ ನೀಡಿದರು. ಅದರಂತೆಯೇ ನಾನು ಆಸ್ಪತ್ರೆಯವರ ಬಳಿ ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ವಿವರವಾದ ಬಿಲ್ ಕೇಳಿದೆ," ಎಂದು ಆ ವ್ಯಕ್ತಿ ತಮ್ಮ ಹೆಸರು, ಆಸ್ಪತ್ರೆ, ಸ್ಥಳದ ಹಸರು ಉಲ್ಲೇಖಿಸದೆ ರೆಡಿಟ್ನಲ್ಲಿ ಬರೆದುಕೊಂಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಎರಡು ಬಾರಿ ಬಿಲ್ ಮಾಡಿದ ಆರೋಪ
ಆಸ್ಪತ್ರೆಯ ಆರು ಪುಟಗಳ ವಿವರವಾದ ಬಿಲ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ರೋಗಿಗೆ ಶಾಕ್ ಕಾದಿತ್ತು. ತಮಗೆ ಗೊತ್ತಾಗದಂತೆ ಬರೋಬ್ಬರಿ 31,430 ರೂಪಾಯಿ ಚಾರ್ಜ್ ಮಾಡಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ, ಚಿಕಿತ್ಸೆಗೆ ಬಳಸುವ ಸಪ್ಲೈ ಕಿಟ್ ಒಂದೇ ವಸ್ತುವಿಗೆ ಎರಡು ಬಾರಿ ಬಿಲ್ ಹಾಕುವ ಮೂಲಕ ಡ್ಯೂಪ್ಲಿಕೇಟ್ ಚಾರ್ಜ್ ಮಾಡಿರುವುದು ಪತ್ತೆಯಾಗಿದೆ.
ಸಮಸ್ಯೆ ಬರೆಹರಿದಿದ್ದು ಹೇಗೆ?
"ನಾನು ಬಿಲ್ಲಿಂಗ್ ವಿಭಾಗಕ್ಕೆ ಕರೆ ಮಾಡಿದಾಗ ದೊಡ್ಡ ಜಗಳವೇ ಆಗಬಹುದು ಎಂದು ನಿರೀಕ್ಷಿಸಿದ್ದೆ. ಆದರೆ, ಅಲ್ಲಿನ ಮಹಿಳಾ ಸಿಬ್ಬಂದಿ ಬಹಳ ಶಾಂತವಾಗಿ ಪ್ರತಿಕ್ರಿಯಿಸಿದರು. ಈ ವಿಷಯವನ್ನು ಮರುಪರಿಶೀಲನೆಗೆ ಕಳುಹಿಸುವುದಾಗಿ ತಿಳಿಸಿದರು. ಸುಮಾರು ಎರಡು ವಾರಗಳ ನಂತರ, ಆ ಎರಡೂ ಹೆಚ್ಚಿನ ಚಾರ್ಜ್ಗಳನ್ನು ಬಿಲ್ನಿಂದ ತೆಗೆದುಹಾಕಿದರು. ಇದರಿಂದಾಗಿ ನನ್ನ ಬಿಲ್ 1,100 ಡಾಲರ್ನಿಂದ (ಸುಮಾರು 1 ಲಕ್ಷ ರೂ.) 618 ಡಾಲರ್ (ಸುಮಾರು 57,000 ರೂ.)ಗೆ ಇಳಿಕೆಯಾಯಿತು," ಎಂದು ಅವರು ರೆಡಿಟ್ನಲ್ಲಿ ಬರೆದುಕೊಂಡಿದ್ದಾರೆ.
ಬಿಲ್ ಪಾವತಿಗೂ ಮುನ್ನ ಮಾಡಬೇಕಾದ ಕೆಲಸಗಳು
ಆ ರೋಗಿಯು ತಾವು ಅನುಭವಿಸಿದ ಈ ಘಟನೆಯಿಂದ ಇತರರಿಗೂ ಒಂದು ಮಹತ್ವದ ಸಲಹೆ ನೀಡಿದ್ದಾರೆ. "ಯಾವಾಗಲೂ ಆಸ್ಪತ್ರೆಯ ಬಿಲ್ ಪಾವತಿಸುವ ಮುನ್ನ 'ಐಟಮೈಸ್ಡ್ ಬಿಲ್' ಕೇಳುವುದನ್ನು ಮರೆಯಬೇಡಿ. ಒಂದು ವೇಳೆ ನಾನು ವಿವರವಾದ ಪಟ್ಟಿಯನ್ನು ಕೇಳದಿದ್ದರೆ, ಈ ದೊಡ್ಡ ಮಟ್ಟದ ತಪ್ಪು ನನ್ನ ಗಮನಕ್ಕೆ ಬರುತ್ತಿರಲಿಲ್ಲ ಮತ್ತು ನಾನು ಸುಮ್ಮನೆ ಇಲ್ಲದ ಚಿಕಿತ್ಸೆಗೆ ಸಾಲ ಮಾಡಿ ಹಣ ಸುರಿಯಬೇಕಿತ್ತು," ಎಂದು ಅವರು ಎಚ್ಚರಿಕೆ ಸೂಚನೆ ನೀಡಿದ್ದಾರೆ.
ಮೋಸದ ಬಿಲ್ ವಿರುದ್ಧ ನೆಟ್ಟಿಗರ ಆಕ್ರೋಶ
"ಇದನ್ನು ನೋಡುತ್ತಿದ್ದರೆ ಆಸ್ಪತ್ರೆಯ ಬಿಲ್ಲಿಂಗ್ನಲ್ಲಿ ತಪ್ಪುಗಳು ನಡೆಯುವುದು ಬಹಳ ಸಾಮಾನ್ಯವಾದ ವಿಷಯದಂತಿದೆ. ಜನರು ಬಿಲ್ ಅನ್ನು ಸರಿಯಾಗಿ ಗಮನಿಸುವುದಿಲ್ಲ ಎಂಬ ಭರವಸೆಯ ಮೇಲೆಯೇ ಆಸ್ಪತ್ರೆಗಳು ಇಂತಹ ಲೆಕ್ಕಾಚಾರ ಹಾಕುತ್ತವೆ. ಆದ್ದರಿಂದ, ಕೇವಲ ಒಟ್ಟು ಮೊತ್ತದ ಬಿಲ್ ಬದಲಿಗೆ ಪ್ರತಿಯೊಂದು ವಸ್ತುವಿನ ವಿವರವಿರುವ 'ಐಟಮೈಸ್ಡ್ ಬಿಲ್' ಕೇಳಿ. ಇದಕ್ಕೆ ಕೇವಲ 5 ನಿಮಿಷ ಬೇಕಾಗಬಹುದು, ಆದರೆ ಅಲ್ಲಿ ನಿಮಗೆ ಯಾವುದಾದರೂ ತಪ್ಪುಗಳು ಕಂಡುಬರುವ ಸಾಧ್ಯತೆ ಇರುತ್ತದೆ," ಎಂದು ಅವರು ತಿಳಿಸಿದ್ದಾರೆ.
ಈ ರೋಗಿ ಬರೆದುಕೊಂಡಿರುವ ಈ ಬರಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಗಳು ವ್ಯಕ್ತವಾಗಿವೆ. ಅನೇಕ ಬಳಕೆದಾರರು, "ಆಸ್ಪತ್ರೆಗಳು ವ್ಯವಸ್ಥಿತವಾಗಿ ಇಂತಹ ಮೋಸದ ತಂತ್ರಗಳನ್ನು ಅನುಸರಿಸುತ್ತಿವೆ ಮತ್ತು ಸರ್ಕಾರದ ಕಠಿಣ ಮೇಲ್ವಿಚಾರಣೆ ಇಲ್ಲದ ಕಾರಣ ಇವುಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿವೆ," ಎಂದು ಕಿಡಿಕಾರಿದ್ದಾರೆ.
ಮತ್ತೊಬ್ಬರು "ನೀವು ಯಾವಾಗಲೂ ವಿವರವಾದ ಬಿಲ್ ಕೇಳಿ, ಆಗ ಬಿಲ್ ಮೊತ್ತ ಶೇಕಡ 20 ರಷ್ಟು ಇಳಿಕೆಯಾಗುವುದನ್ನು ನೀವೇ ಗಮನಿಸುತ್ತೀರಿ," ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಆಸ್ಪತ್ರೆಗಳ ಉದ್ದೇಶವನ್ನು ಪ್ರಶ್ನಿಸುತ್ತಾ, "ತಪ್ಪುಗಳು ಯಾವಾಗಲೂ ಆಸ್ಪತ್ರೆಯ ಪರವಾಗಿಯೇ ಇರುತ್ತಿದ್ದರೆ, ಅದನ್ನು ತಪ್ಪು ಎಂದು ಕರೆಯಲಾಗದು. ಅದು ಜಾಣತನದ ಸಂಚು ಅಥವಾ ಉದ್ದೇಶಪೂರ್ವಕವಾಗಿ ಮಾಡಿದ್ದು," ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications