ಬೋರ್ವೆಲ್ ನೀರು ಬಳಕೆಗೆ ಅನುಮತಿ: ಜೂನ್ 30 ಕೊನೆಯ ದಿನ
ನವದೆಹಲಿ, ಜೂನ್ 29: ಬೋರ್ವೆಲ್ ಇತ್ಯಾದಿ ಅಂತರ್ಜಲ (Ground Water) ಬಳಸುವುದಕ್ಕೆ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಅನುಮತಿ ಪಡೆಯಲು ಜೂನ್ 30, ಗುರುವಾರ ಕೊನೆಯ ದಿನವಾಗಿದೆ. ನಾಳೆಯೊಳಗೆ ನೀವು ನೊಂದಾಯಿಸಬೇಕಾಗುತ್ತದೆ.
ಈಗಾಗಲೇ ಅಂತರ್ಜಲ ಬಳಸುತ್ತಿರುವವರು ಹಾಗು ಹೊಸದಾಗಿ ಬೋರ್ವೆಲ್ (Borewell) ಕೊರೆಸಬೇಕೆನ್ನುವವರು ಎಲ್ಲರೂ ನೊಂದಾಯಿಸುವುದು ಕಡ್ಡಾಯವಾಗಿದೆ. ಕೇಂದ್ರ ಜಲ ಶಕ್ತಿ ಸಚಿವಾಲಯ ಈ ಅಧಿಸೂಚನೆ ಹೊರಡಿಸಿದೆ. ಅಂತರ್ಜಲದ ಸಣ್ಣ ಬಳಕೆದಾರರಿಗೆ ನೊಂದಾವಣಿಯಿಂದ ವಿನಾಯಿತಿ ನೀಡಲಾಗಿದೆ.
ಕೊಳವೆಬಾವಿಯ ನೀರು ಬಳಕೆ ಮಾಡುವ ವಸತಿ ಸಮುಚ್ಚಯಗಳು, ಹೌಸಿಂಗ್ ಸೊಸೈಟಿಗಳು, ಸರಕಾರದ ನೀರು ಸರಬರಾಜು ಸಂಸ್ಥೆಗಳು, ದೊಡ್ಡ ಪ್ರಮಾಣದ ನೀರಿನ ಸರಬರಾಜುದಾರರು, ಔದ್ಯಮಿಕ ಗಣಿ ಇತ್ಯಾದಿ ನೀರು ಬಳಕೆಯ ಯೋಜನೆಗಳನ್ನು ಮಾಡುವವರು, ಸ್ವಿಮ್ಮಿಂಗ್ ಪೂಲ್ಗಳು ಅನುಮತಿ ಪಡೆಯಬೇಕಾಗುತ್ತದೆ.
ಪ್ರಾಧಿಕಾರಗಳ ಅನುಮತಿ ಇಲ್ಲದೆ ಯಾರೂ ಕೂಡ ಹೊಸದಾಗಿ ಕೊಳವೆ ಬಾವಿ ಅಥವಾ ಬೋರ್ವೆಲ್ಗಳನ್ನು ಕೊರೆಸುವಂತಿಲ್ಲ. ಹಾಗೊಂದು ವೇಳೆ ಕೊರೆಸಿದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳುವ ಅಧಿಕಾರ ಪ್ರಾಧಿಕಾರಕ್ಕಿರುತ್ತದೆ.

ನೊಂದಣಿ ಶುಲ್ಕ 10 ಸಾವಿರ ರೂ
ಅಂತರ್ಜಲ ಬಳಕೆಗೆ ಅನುಮತಿ ಪಡೆಯಲು 10 ಸಾವಿರ ರೂ ನೊಂದಣಿ ಶುಲ್ಕವನ್ನು ಪಾವತಿಸಬೇಕೆಂದು ಸೂಚಿಸಲಾಗಿದೆ. ಅಂತರ್ಜಲವನ್ನು ಬಳಸುತ್ತಿರುವವರು ಅನುಮತಿಗಾಗಿ ಜೂನ್ 30ರೊಳಗೆ ನೊಂದಾಯಿಸಬೇಕು. ಪೂರ್ಣ ಅರ್ಜಿ ಸಲ್ಲಿಸಿ 10 ಸಾವಿರ ರೂ ಶುಲ್ಕ ಪಾವತಿಸಲು ಕೊನೆಯ ದಿನವಾಗಿ ಸೆಪ್ಟೆಂಬರ್ 30 ನಿಗದಿ ಮಾಡಲಾಗಿದೆ.

ಇವರಿಗಿದೆ ವಿನಾಯಿತಿ
ಆದರೆ, ಕಡಿಮೆ ಅಂತರ್ಜಲ ನೀರು ಬಳಸುವ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ. ಅಂದರೆ, 2 ಹೆಚ್ಪಿ ಹಾಗೂ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಮೋಟಾರ್ ಪಂಪ್ಗಳನ್ನು ಉಪಯೋಗಿಸಿ ನೀರು ತೆಗೆಯುವವರು ನೊಂದಾಯಿಸಬೇಕಿಲ್ಲ. ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪ್ರತೀ ಮನೆಯಲ್ಲೂ ಬೋರ್ವೆಲ್ ಹೊಂದಿರುವವರ ಸಮೀಕ್ಷೆಯನ್ನು ಜಲಮಂಡಳಿ ನಡೆಸಿ ಎನ್ಒಸಿ ಒದಗಿಸಲಾಗಿತ್ತು.

ಇದು ಎನ್ಒಸಿ
ಅಂತರ್ಜಲ ಬಳಕೆದಾರರು ಅನುಮತಿಗಾಗಿ ನೊಂದಾಯಿಸಬೇಕಿರುವುದು ಕೇಂದ್ರೀಯ ಅಂತರ್ಜಲ ಪ್ರಾಧಿಕಾರದೊಂದಿಗೆ. ನೊಂದಾಯಿಸಿದ ಬಳಿಕ ಪ್ರಾಧಿಕಾರದಿಂದ ಎನ್ಒಸಿ ನೀಡಲಾಗುತ್ತದೆ. ಈ ಎನ್ಒಸಿ ಇಲ್ಲದೆಯೇ ಯಾರೂ ಕೂಡ ಅಂತರ್ಜಲ ಬಳಕೆ ಮಾಡುವಂತಿಲ್ಲ. ಮಾಡಿದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ಕೊಳವೆಬಾವಿ ಕೊರೆಯಲು ಅನುಮತಿ ಕಡ್ಡಾಯ
ಕರ್ನಾಟಕದಲ್ಲಿ ಕೊಳವೆ ಬಾವಿ ಅಥವಾ ಬೋರ್ವೆಲ್ ಕೊರೆಸಬೇಕೆಂದರೆ ಸ್ಥಳೀಯ ಸಂಸ್ಥೆಗಳ ಅನುಮತಿ ಕಡ್ಡಾಯ ಮಾಡಲಾಗಿರುವ ನಿಯಮ ಈಗಾಗಲೇ ಚಾಲ್ತಿಯಲ್ಲಿದೆ. ಇದು ನಿವೇಶನ ಅಥವಾ ಜಮೀನು ಒಳಗೊಂಡಂತೆ ಎಲ್ಲೇ ಕೊಳವೆಬಾವಿ ಕೊರೆಸಬೇಕೆಂದಿದ್ದರೂ ೧೫ ದಿನ ಮುಂಚಿತವಾಗಿ ಪಂಚಾಯಿತಿ ಅಥವಾ ಪಾಲಿಕೆ ಸಂಸ್ಥೆಗಳಿಂದ ನಿರಾಕ್ಷೇಪಣ ಪತ್ರ ಅಥವಾ ಎನ್ಒಸಿಯನ್ನು ಪಡೆಯಬೇಕು ಎಂಬ ನಿಯಮ ಇದೆ.
ಕೊಳವೆಬಾವಿ ಕೊರೆಸುವುದರಲ್ಲೂ ಕೆಲ ನಿಯಮಗಳಿವೆ. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ಮೆಷೀನ್ಗಳಿಂದ ಮಾತ್ರ ಬೋರ್ವೆಲ್ ಕೊರೆಸಬೇಕು ಎಂದಿದೆ.
(ಒನ್ಇಂಡಿಯಾ ಸುದ್ದಿ)
Recommended Video
-
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್ -
Karnataka Rain Alert: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಮಿನಿ ಕಾಶ್ಮೀರದಂತಾದ ರಸ್ತೆಗಳು; ಇನ್ನೆಷ್ಟು ದಿನ ವರುಣನ ಆರ್ಭಣ?












Click it and Unblock the Notifications