ದಲಿತ ಶಿಬಿರಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಜೆಡಿಎಸ್ ವರಿಷ್ಠ ದೇವೇಗೌಡ್ರು
ಸಮಾಜದ ಸಮಾನತೆಗೆ ಮತ್ತು ಹಿಂದುಳಿದವರ ಏಳಿಗೆಗೆ ಬೆವರು ಹರಿಸಿ ಜೀವನ ಮುಡಿಪಾಗಿಟ್ಟವರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು. ಹಿಂದುಳಿದವರಿಗೆ ನಿಜವಾದ ಸ್ಪಷ್ಟತೆ ಮತ್ತು ಪ್ರಾಮುಖ್ಯತೆ ಸಿಗಲಾರಂಭಿಸಿದ್ದು ಸ್ವತಂತ್ರ ಭಾರತದಲ್ಲಿನ ಕೃಪೆ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ ಡಾ. ಅಂಬೇಡ್ಕರವರಿಂದ.
ಅವರ ಭಾವಚಿತ್ರವನ್ನ ಸಮಾಜದಲ್ಲಿ ಅನೇಕರು ದೇವರಂತೆ ಪೂಜಿಸುತ್ತಾರೆ ಬಹುವಾಗಿ ಹಿಂದುಳಿದ ಸಮುದಾಯಗಳು ತಮಗಾಗಿ ಹೋರಾಡುವವರನ್ನು ಪ್ರೀತಿಯಿಂದ ನೋಡುವ ಬಗೆ ಅದು. ಸಂವಿಧಾನ ಶಾಸನ ಮಟ್ಟದಲ್ಲಿ ಹಿಂದುಳಿದವರಿಗೆ ದೊರೆತ ಪ್ರಾತಿನಿಧ್ಯ, ಇಷ್ಟಾದರೆ ಸಾಕೆ ದೀನ ದಲಿತರ ಕ್ಷೇಯೋಭಿವೃದ್ದಿಗೆ?
ಈ ಶಾಸನದೊಳಗಿನ ನಿಯಮಾವಳಿಗಳು ಎಷ್ಟರ ಮಟ್ಟಿಗೆ ಪಾಲನೆಗೊಳಪಡುತ್ತವೆ ಎಂಬುದು ಮುಖ್ಯ, ಇದರ ಸಂಪೂರ್ಣ ಜವಾಬ್ದಾರಿ ಇರುವುದು ಕಾರ್ಯಾಂಗದಲ್ಲಿ. ಅಲ್ಲೇನಾದರೂ ಲೋಪಗಳಾದರೆ? ಕಾರ್ಯಂಗದ ಮೇಲೆ ನಿಗಾ ಇಡಲು ಸಮಾಜಮುಖಿ ರಾಜಕಾರಣಿ ಬೇಕಲ್ಲವೇ ? ಅದಕ್ಕುತ್ತರವಾಗಿ ಬೆಳೆದದ್ದು ಅಹಿಂದ ರಾಜಕಾರಣ, ಅದು ಕೆಲವು ದಶಕಗಳಲ್ಲಿ ದೇಶಾದ್ಯಂತ ಸಾಕಷ್ಟು ನಾಯಕರನ್ನ ಮತ್ತು ಪಕ್ಷಗಳನ್ನ ಹುಟ್ಟುಹಾಕಿತು. ಆದರೆ ಇಂದಿಗೆ ಪ್ರಸ್ತುತವಾಗಿರುವದು ಬೆರಳಣಿಕೆಯಷ್ಟು ಮಾತ್ರ.
ಹಾಗೆ ಪ್ರಸ್ತುತದಲ್ಲಿರುವ ಪಕ್ಷವೆಂದರೆ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಾರ್ಟಿ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಹಿಂದುಳಿದವರ ವಿಶ್ವಾಸಗಳಿಸಿದ ಪಕ್ಷವೆಂದರೆ ತಪ್ಪಾಗದು. ಮಾಯಾವತಿ ಎಷ್ಟೇ ತಪ್ಪು ಮಾಡಲಿ ಸಾಮಾಜಿಕ ನ್ಯಾಯದ ಹೆಸರಲ್ಲಿ ತನ್ನದೇ ಆದ ಮತಗಳನ್ನು ಹಿಡಿದಿಟ್ಟಿದ್ದಾರೆ.
ಕರ್ನಾಟಕದ ವಿಷಯಕ್ಕೆ ಬನ್ನಿ, ಇಲ್ಲಿ ಎಲ್ಲ ಪಕ್ಷಗಳು ದಲಿತ ಓಲೈಕೆಯಲ್ಲಿ ತೊಡಗಿಸಿಕೊಂಡಿವೆ, ಆದರೆ ಅವರನ್ನು ಪ್ರತಿನಿಧಿಸುವ ರಾಜಕಾರಣಿಗಳು ಬೆರಳಣಿಕೆಯಷ್ಟು, ಅವರಿಗಿಂತ ನಿಯತ್ತಿನಿಂದ ಹಿಂದುಳಿದವರ ಹಿತ ಕಾಯುವಲ್ಲಿ ತಕ್ಕ ಮಟ್ಟಿಗೆ ಯಶಸ್ಸಾಗಿರುವುದು ಕೆಲವು ದಲಿತ ಸಂಘಟನೆಗಳು.

ಕೊಳ್ಳೆಗಾಲದಿಂದ ಆಯ್ಕೆಯಾದ ಎನ್ ಮಹೇಶ್
ಆ ಹಾದಿಯಲ್ಲೇ ಬಂದ ಎನ್ ಮಹೇಶ್ ಈ ಬಾರಿ ವಿಧಾನಸಭೆ ಪ್ರವೇಶಿಸಲಿದ್ದಾರೆ, ಅದೂ ಬಹುಜನ ಸಮಾಜವಾದಿ ಪಾರ್ಟಿಯಿಂದ (BSP). ಇದರ ಸಂಪೂರ್ಣ credit ರಾಜ್ಯ ರಾಜಕಾರಣದ ಚಾಣಕ್ಯ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲಬೇಕು, ಕಾರಣ ಸಮಯೋಚಿತವಾಗಿ ಅವರು ಮಾಡಿಕೊಂಡ BSPಯೊಂದಿಗಿನ ಚುನಾವಣಾ ಪೂರ್ವ ಮೈತ್ರಿ.

ಮೈತ್ರಿಯಿಂದ ದೇವೇಗೌಡರಿಗೆ ಸಹಾಯವಾಗಿರೋದು ಅಷ್ಟಕ್ಕಷ್ಟೆ
ಅಂಕಿ-ಸಂಖ್ಯೆ ಕೆದಕಿದರೆ ಈ ಮೈತ್ರಿಯಿಂದ ದೇವೇಗೌಡರಿಗೆ ಸಹಾಯವಾಗಿರೋದು ಅಷ್ಟಕ್ಕಷ್ಟೆ, ಆದರೆ ಅವರು "ಹಿಂದುಳಿದವರಿಗೆ ಪ್ರಾಮುಖ್ಯತೆ ಕೊಡುವ" ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ನೋಡಿಕೊಂಡದ್ದು ರಾಜ್ಯದ ಜನತೆಯಲ್ಲಿ ದೇವೇಗೌಡರ ಬಗ್ಗೆ ಹೊಸ ಭಾವನೆಯನ್ನು ಹುಟ್ಟು ಹಾಕಿದೆ, ಪ್ರಮುಖವಾಗಿ ಹಿಂದುಳಿದ ವರ್ಗದವರಲ್ಲಿ.

ಎಚ್. ಆಂಜನೇಯ
ಚುನಾವಣೆ ಮುಂಚೆ ದಲಿತರ ಬಗ್ಗೆ ಕಾಳಜಿ ತೋರಿಸಿ ಆಮೇಲೆ ನಿರ್ಲಕ್ಷ ತೋರುವ ಹಲವು ರಾಜಕಾರಣಿಗಳ ಮೇಲೆ ದಲಿತರಿಗೆ ಸಹಜ ಕೋಪವಿದೆ, ಇಲ್ಲದಿದ್ರೆ ಕಳೆದ ಬಾರಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಂತ ಎಚ್. ಆಂಜನೇಯವರು ಹೊಳಲ್ಕೆರೆ ಕ್ಷೇತ್ರದಲ್ಲಿ ಆ ಪರಿ ಸೋಲ ಅನುಭವಿಸುತ್ತಿರಲಿಲ್ಲ.

ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಸಮುದಾಯವನ್ನು ಕಾಯುವ ನಾಯಕ ಬೇಕು
ಹಿಂದುಳಿದವರಿಗೆ ಕಣ್ಣಲ್ಲಿ ಕಣ್ಣಿಟ್ಟು ತಮ್ಮ ಸಮುದಾಯವನ್ನು ಕಾಯುವ ನಾಯಕ ಬೇಕು, ಅದರಂತೆ ಅವರಿಗೆ ಹಿಡಿಸಿದ್ದು ಅವರದ್ದೇ ಅಧಿಕೃತ ಮುದ್ರೆ ಇರುವ BSP, ಹಾಗಾಗಿ ಅದರ ನೂತನ ಶಾಸಕ ಮಹೇಶ್ ಅವರ ಕಣ್ಮಣಿಯಾಗಲೂಬಹುದು, ಆದರೆ ಅವರನ್ನು ಮುಖ್ಯವಾಹಿನಿಗೆ ತರುವ ಮೂಲಕ ದೇವೇಗೌಡರು ಮತ್ತೊಂದು ಸಂದೇಶ ರವಾನಿಸಿದ್ದಾರೆ, ಹಿಂದುಳಿದ ಸಮಾಜದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು ಹಿಂದುಳಿದ ವರ್ಗ ಮತ್ತು ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಧ್ವನಿಸಿದರೆ ಅಚ್ಚರಿಪಡಬೇಕಿಲ್ಲ.

ಮುಂದಿನ ಚುನಾವಣೆಗಳಲ್ಲಿ ವೃದ್ಧಿಯಾಗಬಹುದು
ಇನ್ನು ಸಮ್ಮಿಶ್ರ ಸರ್ಕಾರದಲ್ಲಿ BSP ಶಾಸಕರಿಗೆ ಸ್ಥಾನ ದೊರೆತರೆ ಆ ಪಕ್ಷಕ್ಕೆ ಅದು ಆಸರೆಯಾಗಿ ಅದರ ಸಂಖ್ಯೆ ಮುಂದಿನ ಚುನಾವಣೆಗಳಲ್ಲಿ ವೃದ್ಧಿಯಾಗಬಹುದು, ಎಡ ಬಲ ಎಂದು ಲೆಕ್ಕಿಸದೆ ದಲಿತ ಮತಗಳು BSP ಜೊತೆ ಹೋದರೆ ಅದರ ಮೊದಲ ಪೆಟ್ಟು ಬೀಳುವುದು ಇಲ್ಲಿಯವರೆಗೆ ದಲಿತ ಮತಗಳನ್ನು ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ. ಇನ್ನು ಕಾದು ನೋಡಬೇಕಾಗಿರುವುದು ಹೇಗೆ ಕೊಳ್ಳೇಗಾಲದ ಶಾಸಕರು ಈ ಮೈತ್ರಿಯನ್ನು ಮುಂದೆ ಕೊಂಡೊಯ್ಯುತ್ತಾರೆಂದು, BSP ಯ ಬಲ ವೃದ್ಧಿಯಾಗುತ್ತಾ ? ರಾಜ್ಯದಲ್ಲಿ ಪಕ್ಷ ಸಮಾಜದ ಒಳಿತಿಗೆ ಪಾರದರ್ಶಕವಾಗಿ ಕೆಲಸ ಮಾಡುತ್ತಾ ಎಂಬುದು.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
Nora Fatehi: ಕನ್ನಡ ಹಾಡಿನಿಂದ ವಿವಾದಕ್ಕೆ ಸಿಲುಕಿರುವ ಬಾಲಿವುಡ್ನ ಡ್ಯಾನ್ಸ್ ಕ್ವೀನ್ ನೋರಾ ಫತೇಹಿ ಅಸಲಿ ಕಥೆ ಇದು -
March 18 Horoscope: ಧನ, ಆರೋಗ್ಯ, ಉದ್ಯೋಗದ ಭವಿಷ್ಯ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Bengaluru Rent: ಬೆಂಗಳೂರಲ್ಲಿ ನಾನ್ವೆಜ್ ಪ್ರಿಯರಿಗೆ ಶಾಕ್: ಮಾಂಸಾಹಾರಿಗಳಿಗೆ ಸಿಗ್ತಿಲ್ಲ ನಗರದಲ್ಲಿ ಬಾಡಿಗೆ ಮನೆ -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications