ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾಗವಹಿಸದಿರಲು ಕಾರಣವೇನು?
ನವದೆಹಲಿ, ನವೆಂಬರ್ 14: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರಿಮಿಯಾವನ್ನು ವಶಪಡಿಸಿಕೊಂಡ ನಂತರ 2014ರಲ್ಲಿ ನಡೆಯುತ್ತಿದ್ದ ಜಿ 20 ಶೃಂಗಸಭೆಯಿಂದ ಬೇಗನೆ ಹೊರಟು ಹೋದರು. ಈಗ ಉಕ್ರೇನ್ ಮೇಲೆ ದೀರ್ಘಕಾಲಿನ ಕದನಕ್ಕಿಳಿದಿರುವ ಅವರು ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ತೀರ ಸರಳವಾಗಿದೆ.
ಎಂಟು ವರ್ಷಗಳ ನಂತರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪುಟಿನ್ ಪ್ರಾರಂಭಿಸಿದರು. ನಂತರ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಪಶ್ಚಿಮಕ್ಕೆ ಬೆದರಿಕೆ ಹಾಕಿದರು. ಇದರಿಂದ ಎದುರಾಗುವ ಅಂತಾರಾಷ್ಟ್ರೀಯ ವಿರೋಧದಿಂದ 70 ವರ್ಷ ವಯಸ್ಸಿನ ರಷ್ಯಾದ ನಾಯಕ ವಾಡ್ಲಿಮಿರ್ ಪುಟಿನ್ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಈ ವಾರ ನಡೆಯುವ ಜಿ 20 ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
ಇಂಡೋನೇಷ್ಯಾದಲ್ಲಿನ ಎದುರಾಗುವ ಟೀಕೆಗಳಿಂದ ರಷ್ಯಾದ ನಾಯಕನನ್ನು ರಕ್ಷಿಸಲು ಅವರ ವಿದೇಶಾಂಗ ಇಲಾಖೆ ಪ್ರಯತ್ನಿಸುತ್ತಿದೆ ಎಂದು ವೀಕ್ಷಕರು ಹೇಳುತ್ತಾರೆ. ಆದರೆ ಪುಟಿನ್ ಅವರ ನಿರ್ಧಾರವು ಪಾಶ್ಚಿಮಾತ್ಯ ನಿರ್ಬಂಧಗಳಿಂದ ಈಗಾಗಲೇ ಜರ್ಜರಿತವಾಗಿರುವ ರಷ್ಯಾ ದೇಶವನ್ನು ಮತ್ತಷ್ಟು ಪ್ರತ್ಯೇಕಿಸುವ ಅಪಾಯವಿದೆ.

ಸಿವಿಲೈಜೆಶನ್ ಇನ್ಸ್ಟಿಟ್ಯೂಟ್ನ ಮುಖ್ಯ ಸಂಶೋಧಕ ಅಲೆಕ್ಸಿ ಮಲಾಶೆಂಕೊ, ಪುಟಿನ್ ಮತ್ತೊಮ್ಮೆ ಸಾರ್ವಜನಿಕವಾಗಿ ಅವಮಾನಗೊಳ್ಳಲು ಬಯಸುವುದಿಲ್ಲ. 2014ರಲ್ಲಿ ಬ್ರಿಸ್ಬೇನ್ ಶೃಂಗಸಭೆಯಲ್ಲಿ ಪುಟಿನ್ ಅವರನ್ನು ನಾಯಕರು ಸಾಮೂಹಿಕವಾಗಿ ತೆಗೆಸಿಕೊಳ್ಳುವ ಫೋಟೋದ ಕೊನೆಯಲ್ಲಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ. ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಮಾತನಾಡಬೇಕಾಗುತ್ತದೆ. ಅಲ್ಲದೆ ಫೋಟೋ ತೆಗೆಸಿಕೊಳ್ಳಬೇಕಾಗುತ್ತದೆ. ಅಲ್ಲಿ ಅವರಿಗೆ ಇರಿಸು ಮುರಿಸು ಆಗುವ ಸಾಧ್ಯತೆ ಇದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಇದು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಆಘಾತಗೊಳಿಸಿದ್ದು, ಆಹಾರದ ಕೊರತೆಯನ್ನು ಉಲ್ಬಣಗೊಳಿಸಿದೆ. ಹಾಗಾಗಿ ಜಿ 20 ಕೂಟವು ಅನಿವಾರ್ಯವಾಗಿ ಚರ್ಚೆ ಆಗಲೇಬೇಕಾಗುತ್ತದೆ. ಕ್ರೆಮ್ಲಿನ್ಗೆ ನಿಕಟವಾಗಿರುವ ವಿದೇಶಾಂಗ ನೀತಿ ತಜ್ಞ ಫ್ಯೋಡರ್ ಲುಕ್ಯಾನೋವ್, ಪುಟಿನ್ ಉಕ್ರೇನ್ ಮೇಲೆ ಬಗ್ಗಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

ಅವರಿಗೆ ಅವರ ನಿಲುವು ಚೆನ್ನಾಗಿ ತಿಳಿದಿದೆ. ಅದು ಬದಲಾಗುವುದಿಲ್ಲ. ಇನ್ನೊಂದು ಬದಿಯ ಅಂದರೆ ಉಕ್ರೇನ್ ನಿಲುವು ಕೂಡ ಚೆನ್ನಾಗಿ ತಿಳಿದಿದೆ. ಹಾಗಾಗಿ ಅವರು ಹೋಗಿ ಏನು ಪ್ರಯೋಜನ? ಎಂದು ರಷ್ಯಾದ ಮಾಧ್ಯಮ ಗ್ಲೋಬಲ್ ಅಫೇರ್ಸ್ ಜನರಲ್ ಸಂಪಾದಕ ಲುಕ್ಯಾನೋವ್ ಹೇಳಿದ್ದಾರೆ. ಯುದ್ಧದ ಪರಿಸ್ಥಿತಿಯಲ್ಲಿ ಪುಟಿನ್ ಅತ್ಯುನ್ನತ ಜಾಗತಿಕ ಶೃಂಗಸಭೆಯಿಂದ ಹೊರಗಿರಲು ಪ್ರೇರೇಪಿಸಿತು ಎಂಬುದನ್ನು ತೋರಿಸಿದೆ.
ವಿಡಿಯೋ ಲಿಂಕ್ ಮೂಲಕ ಪುಟಿನ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರೆಮ್ಲಿನ್ ತಿಳಿಸಿದ್ದಾರೆ. ಏಕೆಂದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭೌತಿಕವಾಗಿ ಕೂಟಕ್ಕೆ ಹಾಜರಾಗುತ್ತಾರೆ. ರಷ್ಯಾದ ಆಕ್ರಮಣವನ್ನು ಖಂಡಿಸಿ ಅವರು ಬಲವಾದ ಪ್ರತಿಕ್ರಿಯೆಗಾಗಿ ಜಾಗತಿಕ ನಾಯಕರನ್ನು ಲಾಬಿ ಮಾಡುವ ನಿರೀಕ್ಷೆಯಿದೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications