ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾಗವಹಿಸದಿರಲು ಕಾರಣವೇನು?
ನವದೆಹಲಿ, ನವೆಂಬರ್ 14: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರಿಮಿಯಾವನ್ನು ವಶಪಡಿಸಿಕೊಂಡ ನಂತರ 2014ರಲ್ಲಿ ನಡೆಯುತ್ತಿದ್ದ ಜಿ 20 ಶೃಂಗಸಭೆಯಿಂದ ಬೇಗನೆ ಹೊರಟು ಹೋದರು. ಈಗ ಉಕ್ರೇನ್ ಮೇಲೆ ದೀರ್ಘಕಾಲಿನ ಕದನಕ್ಕಿಳಿದಿರುವ ಅವರು ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ತೀರ ಸರಳವಾಗಿದೆ.
ಎಂಟು ವರ್ಷಗಳ ನಂತರ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪುಟಿನ್ ಪ್ರಾರಂಭಿಸಿದರು. ನಂತರ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಪಶ್ಚಿಮಕ್ಕೆ ಬೆದರಿಕೆ ಹಾಕಿದರು. ಇದರಿಂದ ಎದುರಾಗುವ ಅಂತಾರಾಷ್ಟ್ರೀಯ ವಿರೋಧದಿಂದ 70 ವರ್ಷ ವಯಸ್ಸಿನ ರಷ್ಯಾದ ನಾಯಕ ವಾಡ್ಲಿಮಿರ್ ಪುಟಿನ್ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಈ ವಾರ ನಡೆಯುವ ಜಿ 20 ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
ಇಂಡೋನೇಷ್ಯಾದಲ್ಲಿನ ಎದುರಾಗುವ ಟೀಕೆಗಳಿಂದ ರಷ್ಯಾದ ನಾಯಕನನ್ನು ರಕ್ಷಿಸಲು ಅವರ ವಿದೇಶಾಂಗ ಇಲಾಖೆ ಪ್ರಯತ್ನಿಸುತ್ತಿದೆ ಎಂದು ವೀಕ್ಷಕರು ಹೇಳುತ್ತಾರೆ. ಆದರೆ ಪುಟಿನ್ ಅವರ ನಿರ್ಧಾರವು ಪಾಶ್ಚಿಮಾತ್ಯ ನಿರ್ಬಂಧಗಳಿಂದ ಈಗಾಗಲೇ ಜರ್ಜರಿತವಾಗಿರುವ ರಷ್ಯಾ ದೇಶವನ್ನು ಮತ್ತಷ್ಟು ಪ್ರತ್ಯೇಕಿಸುವ ಅಪಾಯವಿದೆ.

ಸಿವಿಲೈಜೆಶನ್ ಇನ್ಸ್ಟಿಟ್ಯೂಟ್ನ ಮುಖ್ಯ ಸಂಶೋಧಕ ಅಲೆಕ್ಸಿ ಮಲಾಶೆಂಕೊ, ಪುಟಿನ್ ಮತ್ತೊಮ್ಮೆ ಸಾರ್ವಜನಿಕವಾಗಿ ಅವಮಾನಗೊಳ್ಳಲು ಬಯಸುವುದಿಲ್ಲ. 2014ರಲ್ಲಿ ಬ್ರಿಸ್ಬೇನ್ ಶೃಂಗಸಭೆಯಲ್ಲಿ ಪುಟಿನ್ ಅವರನ್ನು ನಾಯಕರು ಸಾಮೂಹಿಕವಾಗಿ ತೆಗೆಸಿಕೊಳ್ಳುವ ಫೋಟೋದ ಕೊನೆಯಲ್ಲಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ. ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಮಾತನಾಡಬೇಕಾಗುತ್ತದೆ. ಅಲ್ಲದೆ ಫೋಟೋ ತೆಗೆಸಿಕೊಳ್ಳಬೇಕಾಗುತ್ತದೆ. ಅಲ್ಲಿ ಅವರಿಗೆ ಇರಿಸು ಮುರಿಸು ಆಗುವ ಸಾಧ್ಯತೆ ಇದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ಇದು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಆಘಾತಗೊಳಿಸಿದ್ದು, ಆಹಾರದ ಕೊರತೆಯನ್ನು ಉಲ್ಬಣಗೊಳಿಸಿದೆ. ಹಾಗಾಗಿ ಜಿ 20 ಕೂಟವು ಅನಿವಾರ್ಯವಾಗಿ ಚರ್ಚೆ ಆಗಲೇಬೇಕಾಗುತ್ತದೆ. ಕ್ರೆಮ್ಲಿನ್ಗೆ ನಿಕಟವಾಗಿರುವ ವಿದೇಶಾಂಗ ನೀತಿ ತಜ್ಞ ಫ್ಯೋಡರ್ ಲುಕ್ಯಾನೋವ್, ಪುಟಿನ್ ಉಕ್ರೇನ್ ಮೇಲೆ ಬಗ್ಗಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

ಅವರಿಗೆ ಅವರ ನಿಲುವು ಚೆನ್ನಾಗಿ ತಿಳಿದಿದೆ. ಅದು ಬದಲಾಗುವುದಿಲ್ಲ. ಇನ್ನೊಂದು ಬದಿಯ ಅಂದರೆ ಉಕ್ರೇನ್ ನಿಲುವು ಕೂಡ ಚೆನ್ನಾಗಿ ತಿಳಿದಿದೆ. ಹಾಗಾಗಿ ಅವರು ಹೋಗಿ ಏನು ಪ್ರಯೋಜನ? ಎಂದು ರಷ್ಯಾದ ಮಾಧ್ಯಮ ಗ್ಲೋಬಲ್ ಅಫೇರ್ಸ್ ಜನರಲ್ ಸಂಪಾದಕ ಲುಕ್ಯಾನೋವ್ ಹೇಳಿದ್ದಾರೆ. ಯುದ್ಧದ ಪರಿಸ್ಥಿತಿಯಲ್ಲಿ ಪುಟಿನ್ ಅತ್ಯುನ್ನತ ಜಾಗತಿಕ ಶೃಂಗಸಭೆಯಿಂದ ಹೊರಗಿರಲು ಪ್ರೇರೇಪಿಸಿತು ಎಂಬುದನ್ನು ತೋರಿಸಿದೆ.
ವಿಡಿಯೋ ಲಿಂಕ್ ಮೂಲಕ ಪುಟಿನ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರೆಮ್ಲಿನ್ ತಿಳಿಸಿದ್ದಾರೆ. ಏಕೆಂದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭೌತಿಕವಾಗಿ ಕೂಟಕ್ಕೆ ಹಾಜರಾಗುತ್ತಾರೆ. ರಷ್ಯಾದ ಆಕ್ರಮಣವನ್ನು ಖಂಡಿಸಿ ಅವರು ಬಲವಾದ ಪ್ರತಿಕ್ರಿಯೆಗಾಗಿ ಜಾಗತಿಕ ನಾಯಕರನ್ನು ಲಾಬಿ ಮಾಡುವ ನಿರೀಕ್ಷೆಯಿದೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications