ಸ್ಯಾನ್ ಹೋಸೆಯಲ್ಲಿ ಮೊಬೈಲ್ ಆಡಳಿತದ ಕನಸು ಬಿಚ್ಚಿಟ್ಟ ಮೋದಿ
ಸ್ಯಾನ್ ಹೋಸೆ, ಸೆಪ್ಟೆಂಬರ್ 28 : ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸ್ಯಾನ್ ಹೋಸೆಯಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಮ್ಯಾಡಿಸನ್ ಸ್ಕ್ವೇರ್ನಲ್ಲಿ ನಡೆದ ಮಾದರಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. [ಚಿತ್ರಗಳು : ಮೋದಿ ಅಮೆರಿಕ ಭೇಟಿ]
ಸ್ಯಾನ್ ಹೋಸೆಯ ಎಸ್ಎಪಿ ಸೆಂಟರ್ನಲ್ಲಿ ಮೋದಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಸುಮಾರು 18 ಸಾವಿರಕ್ಕೂ ಅಧಿಕ ಭಾರತೀಯರು ಮೋದಿ ಭಾಷಣ ಕೇಳಲು ಆಗಮಿಸಿದ್ದಾರೆ. ಪ್ರಧಾನಿ ಮೋದಿ ವೇದಿಕೆಗೆ ಆಗಮಿಸಿದ್ದು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. [ಸಿಲಿಕಾನ್ ವ್ಯಾಲಿಯಲ್ಲಿ ಮೋದಿ ಹೇಳಿದ್ದೇನು?]
'ನಿಮ್ಮನ್ನು ನೋಡಿ ನನ್ನ ಉತ್ಸಾಹ ಮತ್ತಷ್ಟು ಹೆಚ್ಚಾಗುತ್ತಿದೆ. ಇಂದು ಭಾರತದಲ್ಲಿ ವೀರ ಸೇನಾನಿ ಭಗತ್ ಸಿಂಗ್ ಜನ್ಮ ದಿನ' ಎಂದು ಹೇಳಿ ಮೋದಿ ಮಾತು ಆರಂಭಿಸಿದರು. ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ....
* 'ಇಲ್ಲಿನ ನಾಗರಿಕರಿಗೆ ಭಾರತೀಯರನ್ನು ಕಂಡರೆ ಗೌರವಿದೆ. ಆ ಗೌರವನ್ನು ನಾನು ನಮಿಸುತ್ತೇನೆ. ಭಾರತೀಯರು ಅಮೆರಿಕಕ್ಕೆ ಬಂದು ಸಾಧನೆ ಮಾಡುತ್ತಿದ್ದಾರೆ. ಪ್ರಪಂಚದಲ್ಲಿ ಭಾರತಕ್ಕೆ ವಿಶೇಷ ಸ್ಥಾನ ಸಿಕ್ಕಿದೆ. ನೀವು ಕಂಪ್ಯೂಟರ್ ಮೇಲೆ ಬೆರಳು ಆಡಿಸಿ ಜಗತ್ತನ್ನು ಬದಲಾವಣೆ ಮಾಡಿದ್ದೀರಿ' [ವಿಶ್ವಸಂಸ್ಥೆಯಲ್ಲಿ ಮೋದಿ ಮಾಡಿದ ಭಾಷಣದ 10 ಅತ್ಯುತ್ತಮ ಉಲ್ಲೇಖ]
* 'ಬೆರಳ ತುದಿಯಲ್ಲಿ ಹೊಸ ಆವಿಷ್ಕಾರ ನಡೆಯುತ್ತಿದೆ. ಆದ್ದರಿಂದ ಪ್ರಪಂಚದಲ್ಲಿ ಭಾರತ ಹೊಸ ಭಾಷ್ಯ ಬರೆಯುತ್ತಿದೆ. ಈಗ ಭಾರತದ ಶಕ್ತಿಯಯನ್ನು ಜಗತ್ತಿಗೆ ಪರಿಚಯಿಸುವ ಸಮಯ ಬಂದಿದೆ. ಭಾರತದಲ್ಲಿ ಬ್ರೇನ್ನ ಬೆಳೆ ಬೆಳೆಯುತ್ತಿದೆ'.
*
'ಬುದ್ಧಿವಂತಿಕೆಯೇ
ಭಾರತೀಯರ
ಬಂಡವಾಳ,
ಇದು
ತಂತ್ರಜ್ಞಾನ
ಕ್ಷೇತ್ರದಲ್ಲಿ
ಇಂದು
ಸಾಬೀತಾಗಿದೆ.
ಇಂದು
ಜಗತ್ತಿನ
ಯಾವ
ಮೂಲೆಗೆ
ಹೋದರೂ
ಭಾರತೀಯರ
ಮೇಲೆ
ವಿಶ್ವಾಸವಿಡುತ್ತಾರೆ.
ಇದಕ್ಕೆ
ಕಾರಣ
ಬುದ್ಧಿವಂತಿಕೆ'.
I
have
faith
in
the
nation
because
India
is
youthful.
65%
of
our
population
is
under
the
age
of
35:
PM
@narendramodi
—
PMO
India
(@PMOIndia)
September
28,
2015
* '125 ಕೋಟಿ ಭಾರತೀಯರು ನನಗೆ ಒಂದು ಜವಾಬ್ದಾರಿ ನೀಡಿದರು. ದೇಶದ ಅಭಿವೃದ್ಧಿಗಾಗಿ ನಾನು ಪ್ರತಿಕ್ಷಣವೂ ಕೆಲಸ ಮಾಡುತ್ತೇನೆ. ನನ್ನ ಜೀವವಿರುವ ತನಕ ದೇಶಕ್ಕಾಗಿ ಕೆಲಸ ಮಾಡುತ್ತೇನೆ'
*
'ಹಿಂದೆ
ಉಪನಿಷತ್ತಿನಿಂದ
ಭಾರತವನ್ನು
ಗುರುತಿಸಲಾಗುತ್ತಿತ್ತು.
ಇಂದು
ಉಪನಿಷತ್ತಿಗಿಂತ
ಮೇಲೆ
ಹೋಗಿ
ಉಪಗ್ರಹಗಳ
ಬಗ್ಗೆ
ಚರ್ಚೆಯಾಗುತ್ತಿದೆ.
ಮಂಗಳಯಾನ
ಮೊದಲ
ಪ್ರಯತ್ನದಲ್ಲೇ
ಯಶಸ್ಸುಕಂಡಿದೆ'
Your
fingers
created
magic
on
the
keyboard
and
the
computer
and
this
gave
India
a
new
identity.
Your
skill
&
commitment
is
wonderful:
PM
—
PMO
India
(@PMOIndia)
September
28,
2015
*
'ಭಾರತದ
ಬಡತನದ
ಬಗ್ಗೆ
ನಮಗೆ
ತಿಳಿದಿದೆ.
ಯಾವಾಗ
ಝಿರೋ
ಬ್ಯಾಲೆನ್ಸ್
ಖಾತೆ
ತೆರೆಯಲು
ಅವಕಾಶ
ಮಾಡಿಕೊಡಲಾಯಿತೋ
ಎಲ್ಲರೂ
ಬ್ಯಾಂಕ್
ಕಡೆ
ಹೆಜ್ಜೆ
ಹಾಕಿದರು.
ಬಡವರಿಗಾಗಿ
ಜನಧನ್
ಯೋಜನೆ
ಜಾರಿಗೆ
ತರಲಾಯಿತು.'
Terror
and
global
warming
are
two
pressing
issues
the
world
faces.
We
need
to
mitigate
these
two
menaces:
PM
@narendramodi
—
PMO
India
(@PMOIndia)
September
28,
2015
* 'ಗ್ಯಾಸ್ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಲಾಗುತ್ತಿದೆ. ಈ ಮೂಲಕ ನಡೆಯುತ್ತಿದ್ದ ಅವ್ಯವಹಾರವನ್ನು ನಿಲ್ಲಿಸಲಾಗಿದೆ. ಮೊಬೈಲ್ ಆಡಳಿತ ಮೇಲೆ ಭಾರತ ಹೆಚ್ಚಿನ ಗಮನ ಹರಿಸಿದೆ. ಇದರಿಂದ ಅಭಿವೃದ್ಧಿಯ ವೇಗ ಹೆಚ್ಚಳವಾಗುತ್ತದೆ'
Forgot
to
give
the
good
news....a
direct
flight
between
Delhi
and
San
Francisco
three
times
a
week:
PM
—
PMO
India
(@PMOIndia)
September
28,
2015
* ಭಾರತದಿಂದ ಸ್ಯಾನ್ ಫ್ರಾನ್ಸಿಸ್ಕೊ ನಗರಕ್ಕೆ ಡಿಸೆಂಬರ್ 2ರಿಂದ ನೇರ ಮತ್ತು ನಿಲುಗಡೆ ರಹಿತ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಮೋದಿ ತಮ್ಮ ಭಾಷಣದ ಕೊನೆಯಲ್ಲಿ ಘೋಷಣೆ ಮಾಡಿದರು.