ಟರ್ಕಿ ಪ್ರಜಾಪ್ರಭುತ್ವದ ಮೇಲೆ ಮಿಲಿಟರಿ ದಾಳಿ, ಸಂಸತ್ ವಶ
ಅಂಕಾರ, ಜುಲೈ 16 : ಟರ್ಕಿಯಲ್ಲಿ ಅರಾಜಕರತೆ ಭುಗಿಲೆದ್ದಿದೆ, ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ನಡೆದಿದೆ. ಅಲ್ಲಿನ ಮಿಲಿಟರಿ ಸಂಸತ್ತಿನ ಮೇಲೆ ದಾಳಿ ನಡೆಸಿದ್ದು, ಎರ್ಡೋಗನ್ ಸರಕಾರವನ್ನು ಕಿತ್ತೊಗಿದಿರುವುದಾಗಿ ಘೋಷಿಸಿದೆ.
ಇದೀಗ ಬಂದಿರುವ ವರ್ತಮಾನಗಳ ಪ್ರಕಾರ, ಸಂಸತ್ತಿನ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, ಓರ್ವ ಸಂಸದ ಸೇರಿದಂತೆ 12 ಜನರು ಸಾವಿಗೀಡಾಗಿದ್ದಾರೆ. ಜೆಟ್ ವಿಮಾನಗಳು ಹತ್ತಿರದಲ್ಲಿ ಹಾರಾಡುತ್ತಿವೆ, ಮಿಲಿಟರ್ ಟ್ಯಾಂಕ್ ಗಳು ಹೆದ್ದಾರಿಯಲ್ಲಿ ಅಡ್ಡಾಡುತ್ತಿವೆ. ಇಸ್ತಾನ್ಬುಲ್ ನಲ್ಲಿರುವ 15ಕ್ಕೂ ಹೆಚ್ಚು ಸೇತುವೆಗಳನ್ನು ಬಂದ್ ಮಾಡಲಾಗಿದೆ.

ಟರ್ಕಿ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್ ಅವರು ಇಸ್ತಾನ್ಬುಲ್ಗೆ ತುರ್ತಾಗಿ ಮರಳಿದ್ದು, ಸಂಸತ್ತಿನ ಮೇಲೆ ದಾಳಿ ನಡೆದಿರುವುದನ್ನು ಖಚಿತಪಡಿಸಿದ್ದಾರೆ. ಇದು, ದೇಶದ ಪ್ರಭುತ್ವ ಮತ್ತು ಐಕ್ಯತೆಯ ಮೇಲೆ ನಡೆಸಿರುವ ಹೀನಾಯ ದಾಳಿ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ. ಇದು ಜನರೇ ಆರಿಸಿರುವ ಸರಕಾರ. ನಾನು ಎಂದಿಗೂ ಜನರೊಂದಿಗೆ ಇದ್ದೇನೆ. ದೇಶವನ್ನು ಮಿಲಿಟರಿ ಕೈಯಲ್ಲಿ ಕೊಡಲು ಬಿಡುವುದಿಲ್ಲ. ಇಂಥ ಪ್ರಯತ್ನ ನಡೆಸಿದವರು ಭಾರೀ ದಂಡ ತೆರಬೇಕಾಗುತ್ತದೆ ಎಂದು ಅವರು ದೇಶವನ್ನುದ್ದೇಶಿಸಿ ಮಾತನಾಡಿದರು.
ಸಹಾಯವಾಣಿ : ಟರ್ಕಿಯಲ್ಲಿರುವ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸಹಾಯವಾಣಿಯನ್ನು ಬಳಸಬಹುದು. #ಅಂಕಾರ: +905303142203, #ಇಸ್ತಾನ್ಬುಲ್ : +905305671095
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications