Get Updates
Get notified of breaking news, exclusive insights, and must-see stories!

ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿ: ಭಾರತದ ವಿದ್ಯಾರ್ಥಿಗೆ 11 ಬಾರಿ ಚೂರಿ ಇರಿತ

ಸಿಡ್ನಿ/ನವದೆಹಲಿ, ಅಕ್ಟೋಬರ್‌ 14: ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಅಕ್ಟೋಬರ್‌ 6ರಂದು ನಡೆದ ಹಲ್ಲೆಯು 'ಜನಾಂಗೀಯ ದಾಳಿ' ಎಂದು ಹೇಳಲಾಗುತ್ತಿದೆ. ಆಗ್ರಾದ 28 ವರ್ಷದ ವಿದ್ಯಾರ್ಥಿಯ ಮುಖ, ಎದೆ ಹಾಗೂ ಹೊಟ್ಟೆಗೆ 11 ಬಾರಿ ಇರಿಯಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಶುಭಂ ಗರ್ಗ್‌ ಎಂಬಾತನ ಮೇಲೆ ದಾಳಿ ನಡೆದಿದೆ. ಈತ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದನೆಂದು ವರದಿಯಾಗಿದೆ.

ರಾತ್ರಿ 10:30ರ ಸೂಮಾರಿಗೆ ತನ್ನ ವಾಸಸ್ಥಳಕ್ಕೆ ಶುಭಂ ಹಿಂತಿರುಗುತ್ತಿದ್ದ. ಆ ವೇಳೆ, ಪೆಸಿಫಿಕ್ ಹೆದ್ದಾರಿಯಲ್ಲಿ ದುಷ್ಕರ್ಮಿಯೊಬ್ಬ ಶುಭಂ ಮೇಲೆ ಹಲ್ಲೆ ನಡೆಸಿದ್ದಾನೆ.

Indian student from Agra stabbed 11 times in Sydney family seeks help

ಹಲ್ಲೆ ನಡೆಸಿದ ಆರೋಪಿಯನ್ನು 27 ವರ್ಷದ ಡೇನಿಯಲ್ ಎಂದು ಗುರುತಿಸಲಾಗಿದೆ. ಆತನನ್ನು ಘಟನಾ ಸ್ಥಳದಲ್ಲಿಯೇ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಾಟ್ಸ್‌ವುಡ್ ಪೊಲೀಸ್ ಠಾಣೆಯಲ್ಲಿರುವ ಆರೋಪಿ ಮೇಲೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ.

ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ನಡೆಸಲಾಗಿದೆ. ಆತನಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ, ಡಿಸೆಂಬರ್ 14 ರಂದು ಮತ್ತೆ ವಿಚಾರಣೆಗೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.

ಆಸ್ಟ್ರೇಲಿಯಾ ಟುಡೇ ವರದಿ ಪ್ರಕಾರ, ಆರೋಪಿಯು ಶುಭಂಗೆ ದುಡ್ಡು ಹಾಗೂ ಫೋನ್‌ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ಬೇಡಿಕೆಯನ್ನು ನಿರಾಕರಿಸಿದ ಶುಭಂಗೆ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಆ ನಂತರ ಓಡಿಹೋಗಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆಗ್ರಾದಲ್ಲಿ ನೆಲೆಸಿರುವ ಶುಭಂ ಪೋಷಕರು ತಮ್ಮ ಮಗನ ಮೇಲಿನ ಹಲ್ಲೆಯನ್ನು 'ಜನಾಂಗೀಯ ದಾಳಿ' ಎಂದು ಕರೆದಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಶುಭಂ ಪೋಷಕರು ಆಸ್ಟ್ರೇಲಿಯಾದ ವೀಸಾ ಪಡೆಯಲು ಒಂದು ವಾರದಿಂದ ಯತ್ನಿಸುತ್ತಿದ್ದಾರೆ. ಆದರೆ, ಅವರಿಗೆ ವೀಸಾ ಪಡೆಯಲು ಸಾಧ್ಯವಾಗಿಲ್ಲ.

ಈ ವಿಚಾರವಾಗಿ ಅಕ್ಟೋಬರ್ 12 ರಂದು ಟ್ವೀಟ್‌ ಮಾಡಿರುವ ಶುಭಂ ಸಹೋದರಿ ಕಾವ್ಯ ಗರ್ಗ್, 'ನನ್ನ ಸಹೋದರ ಶುಭಂ ಗರ್ಗ್ ಮೇಲೆ ಆಸ್ಟ್ರೇಲಿಯಾದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. 28 ವರ್ಷದ ಆತನ ಮೇಲೆ ಸಿಡ್ನಿಯಲ್ಲಿ 11 ಬಾರಿ ಚಾಕುವಿನಿಂದ ಇರಿಯಲಾಗಿದೆ. ಇದು ಅಮಾನುಷ ದಾಳಿ. ಆತನ ಸ್ಥಿತಿ ಚಿಂತಾಜನಕವಾಗಿದೆ' ಎಂದು ತಿಳಿಸಿದ್ದಾರೆ.

'ನಮಗೆ ತಕ್ಷಣವೇ ಸಹಾಯ ಬೇಕಿದೆ. ನಮ್ಮ ಕುಟುಂಬ ಸದಸ್ಯರಿಗೆ ತುರ್ತು ವೀಸಾವನ್ನು ನೀಡಲು ನಾವು ಕೋರುತ್ತೇವೆ' ಎಂದು ಭಾರತ ಸರ್ಕಾರಕ್ಕೆ ಕಾವ್ಯ ಮನವಿ ಮಾಡಿದ್ದಾರೆ.

ಇದಕ್ಕೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿರುವ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ , 'ಶುಭಂ ಸಹೋದರಿಯ ವೀಸಾ ಅರ್ಜಿ ಪ್ರಕ್ರಿಯೆಯಲ್ಲಿದೆ. ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಮಾತನಾಡಿದ್ದೇವೆ. ವೀಸಾಗಾಗಿ ಸಿಡ್ನಿಯಲ್ಲಿರುವ ರಾಯಭಾರ ಕಚೇರಿ ಅಧಿಕಾರಿಗಳನ್ನೂ ಸಂಪರ್ಕಿಸಿದ್ದೇನೆ. ಆದಷ್ಟು ಬೇಗನೇ ವೀಸಾ ವ್ಯವಸ್ಥೆ ಮಾಡುತ್ತೇವೆ' ಎಂದು ಹೇಳಿದ್ದಾರೆ.

ಆಸ್ಟೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜನಾಂಗೀಯ ದಾಳಿ ನಡೆದಿದ್ದು, ಹಲವು ಭಾರತೀಯರು ಕೊಲೆಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+