ದಾವೂದ್ ನ ಆಸ್ತಿ ಯುಕೆ ಸರಕಾರದ ವಶ, ಭಾರತಕ್ಕೆ ರಾಜತಾಂತ್ರಿಕ ಗೆಲುವು
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಸ್ತಿಯನ್ನು ಯುನೈಟೆಡ್ ಕಿಂಗ್ ಡಂ ಸರಕಾರ ವಶಕ್ಕೆ ಪಡೆದಿದೆ. ಈ ಬಗ್ಗೆ ಟೈಮ್ಸ್ ನೌ ವರದಿ ಮಾಡಿದ್ದು, ಈ ನಡೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಿಕ್ಕಂಥ ರಾಜತಾಂತ್ರಿಕ ಗೆಲುವು ಎಂದು ವಿಶ್ಲೇಷಿಸಲಾಗುತ್ತಿದೆ.
ದಾವೂದ್ ವಿರುದ್ಧ ಮಹತ್ವದ ಮಾಹಿತಿ ಬಿಡುಗಡೆ ಮಾಡಿದ ಯುಕೆ
ಎರಡು ವರ್ಷದ ಹಿಂದೆಯೇ ಭಾರತ ಸರಕಾರವು ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಮಾಹಿತಿಗಳನ್ನು ಹಸ್ತಾಂತರ ಮಾಡಿತ್ತು. ಇನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲೂ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿ ಜಪ್ತಿಗೆ ಮುಂದಾಗಲಾಗಿದೆ ಎಂದು ಈ ವರ್ಷದ ಜನವರಿಯಲ್ಲಿ ಕೆಲವು ವರದಿಗಳು ತಿಳಿಸಿದ್ದವು.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದು ಸದ್ಯಕ್ಕೆ ಇರುವ ಮಾಹಿತಿ. ಆತನ ಚಲನ ವಲನದ ಮೇಲೆ ಭಾರತ ಸರಕಾರವು ಕಣ್ಣಿರಿಸಿದೆ. ಮುಂಬೈ ಸರಣಿ ಸ್ಫೋಟ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ಆತನ ಕುಮ್ಮಕ್ಕು ಇತ್ತು ಮತ್ತು ದಾವೂದ್ ನ ಬೆನ್ನಿಗೆ ನಿಂತು ಪಾಕ್ ನ ಬೇಹುಗಾರಿಕಾ ಸಂಸ್ಥೆ ಐಎಸ್ ಐ ಇಂಥ ಕೆಲಸಗಳನ್ನು ಮಾಡಿಸುತ್ತಿದೆ.