ಮಾಂಸ ಪ್ರಿಯರ ಚೀನಾಕ್ಕೆ ಎಮ್ಮೆ ಮಾಂಸ ಬೇಡ್ವಂತೆ, ಭಾರತಕ್ಕೆ ಎಷ್ಟು ನಷ್ಟ?
ಬೆಂಗಳೂರು, ಡಿಸೆಂಬರ್ 9: ಇತ್ತೀಚಿನ ವರ್ಷಗಳಲ್ಲಿ ಚೀನಾ ತನ್ನ ಅಕ್ಕಪಕ್ಕದ ದೇಶಗಳ ಗಡಿಯಲ್ಲಿ ಭಾರೀ ಭದ್ರತೆಯನ್ನು ಹೆಚ್ಚಳ ಮಾಡಿರುವುದರಿಂದ ಭಾರತದ ಎಮ್ಮೆ ಮಾಂಸ ರಪ್ತು ಉದ್ಯಮ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.
ಹೌದು, ಮೂಲತಃ ಚೀನಿಯರು ಹಂದಿ ಮಾಂಸ ಪ್ರಿಯರು. ಆದರೆ, ಹಂದಿ ಜ್ವರ ಹೆಚ್ಚಳವಾದ ನಂತರ ಚೀನಾ ಸರ್ಕಾರ ಹಂದಿಗಳ ಸಾಕಾಣಿಕೆ ಬಗ್ಗೆ ಬಿಗಿ ಕ್ರಮಗಳನ್ನ ಕೈಗೊಂಡಿತು. ಹೀಗಾಗಿ ಪರ್ಯಾಯವಾಗಿ ಚೀನಿಯರು ಎಮ್ಮೆ ಮಾಂಸಕ್ಕೆ ಅಂಟಿಕೊಂಡಿದ್ದರು. ವಿಯೆಟ್ನಾಂ ಸೇರಿದಂತೆ ಅನೇಕ ಚೀನಾದ ನೆರೆಹೊರೆಯ ರಾಷ್ಟ್ರಗಳಿಗೆ ಭಾರದತದಿಂದ ಎಮ್ಮೆ ಮಾಂಸ ರಪ್ತಾಗುತ್ತದೆ. ಆದರೆ, ಚೀನಾ ತನ್ನ ಗಡಿಯಲ್ಲಿ ಮಾಂಸ ರಪ್ತಿನ ಮೇಕೆ ಬಿಗಿ ಕ್ರಮಗಳನ್ನು ಕೈಗೊಂಡಿರುವುದರಿಂದ ಚೀನಾದ ಒಳಗೆ ಎಮ್ಮೆ ಮಾಂಸ ಹೋಗುವುದು ಕಷ್ಟವಾಗಿದೆ.

ಚೀನಾದಿಂದ ಏಕೆ ಈ ನಿರ್ಧಾರ?
ವಿಯೆಟ್ನಾಂ, ಇಂಡೋನೇಶಿಯಾ, ಮಲೇಷಿಯಾ, ಮಯನ್ಮಾರ್, ಥಾಯಲ್ಯಾಂಡ್ ಸೇರಿದಂತೆ ಅನೇಕ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಭಾರತ ಭಾರೀ ಪ್ರಮಾಣದಲ್ಲಿ ಎಮ್ಮೆ ಮಾಂಸ ರಪ್ತು ಮಾಡುತ್ತದೆ. ಅಲ್ಲಿಂದ ವಿಯೆಟ್ನಾಂ, ಇಂಡೋನೇಶಿಯಾಗಳು ಚೀನಾಕ್ಕೆ ಎಮ್ಮೆ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಮಾಡುತ್ತವೆ. ಇತ್ತೀಚೆಗೆ ಚೀನಾದಲ್ಲಿ ಮಾರಕವಾದಂತಹ ಆಪ್ರೀನಕ್ ಸ್ವಿನ್ ಪ್ಲೂ ಕಾಣಿಸಿಕೊಂಡಿದೆ. ಹೀಗಾಗಿ ಚೀನಾ ಆಮದು ಮಾಡಿಕೊಳ್ಳುವ ಎಮ್ಮೆ ಮಾಂಸದ ಮೇಲೆ ನಿಯಂತ್ರಣ ಹೇರಿದೆ.

ಚೀನಾಕ್ಕೆ ನೇರ ರಪ್ತು ಇಲ್ಲ!
ಇತ್ತೀಚಿನ ವರ್ಷಗಳಲ್ಲಿ ಗಡಿಯ ಮುಖಾಂತರ ಭದ್ರತಾ ವ್ಯವಸ್ಥೆ ಕಣ್ಣು ತಪ್ಪಿಸಿ, ವಿಯೆಟ್ನಾಂ ಹಾಗೂ ಇಂಡೋನೇಶಿಯಾದ ಸ್ಮಗ್ಲರ್ ಗಳು ಎಮ್ಮೆ ಮಾಂಸವನ್ನು ಅಕ್ರಮವಾಗಿ ರಪ್ತು ಮಾಡುತ್ತಿದ್ದವು. ಭಾರತ 2001 ರ ಬಿಜಿಂಗ್ ಒಪ್ಪಂದದ ಪ್ರಕಾರ ಎಮ್ಮೆ ಅಥವಾ ಯಾವುದೇ ದನದ ಮಾಂಸವನ್ನು ಚೀನಾಕ್ಕೆ ನೇರವಾಗಿ ರಪ್ತು ಮಾಡುವಂತಿಲ್ಲ. ಇದರಿಂದ ಈಗ ಎಮ್ಮೆ ಮಾಂಸ ರಪ್ತು ಉದ್ಯಮಕ್ಕೆ ಸಂಕಷ್ಟ ಬಂದೊದಗಿದೆ.

2 ಬಿಲಿಯನ್ ಡಾಲರ್ ವಹಿವಾಟು ಕುಸಿತ!
ಚೀನಾದ ಕಠಿಣ ನಿರ್ಧಾರಗಳ ನಂತರ ಭಾರತದ ಎಮ್ಮೆ ಮಾಂಸದ ವಾರ್ಷಿಕ 2 ಬಿಲಿಯನ್ ಡಾಲರ್ ವಹಿವಾಟು ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ಬಿಜಿನಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. 2014 ರಲ್ಲಿ 2 ಮಿಲಿಯನ್ ಟನ್ ಎಮ್ಮೆ ಮಾಂಸ ಭಾರತದಿಂದ ರಪ್ತಾಗಿತ್ತು. ಆದರೆ, 2019 ರಲ್ಲಿ 1.40 ಮಿಲಿಯನ್ ಟನ್ ಗೆ ಇಳದಿದೆ. ಈಗ ಚೀನಾ ಮತ್ತೆ ಕಠಿಣ ನಿರ್ಧಾರ ಕೈಗೊಂಡಿರುವುದರಿಂದ ರಪ್ತು ಪ್ರಮಾಣದಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಂಭವವಿದೆ ಎಂದು ಅಂದಾಜಿಸಲಾಗಿದೆ.

ಇಂಡೋನೇಶಿಯಾ ಮೇಲೆ ಅವಲಂಬಿತ
ಕುಸಿಯುತ್ತಿರುವ ಎಮ್ಮೆ ಮಾಂಸ ರಪ್ತು ವಹಿವಾಟನ್ನು ಸರಿದೂಗಿಸುವಲ್ಲಿ ಭಾರತ ಇಂಡೋನೇಶಿಯಾದ ಮೇಲೆ ಅವಲಂಬಿತವಾಗಬೇಕಿದೆ ಎಂದು ಭಾರತೀಯ ಮಾಂಸ ರಪ್ತು ಸಂಘಟನೆಯ ಉಪಾಧ್ಯಕ್ಷ ಪಾವಜಾನ್ ಅಲ್ವಿ ಹೇಳಿದ್ದಾರೆ. 80 ಸಾವಿರ ಟನ್ ನಿಂದ 3 ಲಕ್ಷ ಟನ್ ಗೆ ಅದನ್ನು ಹೆಚ್ಚಿಸಬೇಕಿದೆ. ಇದಕ್ಕೆ ಭಾರತ ಹಾಗೂ ಇಂಡೋನೇಶಿಯಾ ಸರ್ಕಾರಗಳು ಮಾತುಕತೆ ನಡೆಸಬೇಕಿದೆ. ಅದಕ್ಕೆ ಇರುವ ಹೆಚ್ಚು ರಪ್ತು ಸುಂಕವನ್ನು ಕಡಿಮೆಗೊಳಿಸಬೇಕಿದೆ ಎಂದು ಅಲ್ವಿ ಹೇಳಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications