ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್
ನವದೆಹಲಿ, ಜ.04: ಪಂಜಾಬಿನ ಪಠಾಣ್ ಕೋಟ್ ವಾಯುನೆಲೆಯಲ್ಲಿ ಅವಿತಿದ್ದ ಉಗ್ರರ ಮೇಲೆ ಗುಂಡಿನ ದಾಳಿ ಮುಂದುವರೆದಿದೆ. ನಾಲ್ವರು ಉಗ್ರರು ಹತರಾಗಿದ್ದರೆ, ಏಳು ಜನ ಭಾರತೀಯ ಯೋಧರು ವೀರ ಮರಣ ಹೊಂದಿದ್ದಾರೆ.
ಡಿಸೆಂಬರ್ 30, 2015: ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆರು ಜನ ಉಗ್ರರು ಭಾರತದ ಗಡಿಯೊಳಗೆ ನುಸುಳಿರುವ ಮಾಹಿತಿ ಲಭ್ಯವಾಗುತ್ತದೆ. ಪಂಜಾಬಿನ ಕಥುವಾ-ಗುರ್ ದಾಸನ್ಪುರ್ ಗಡಿ ಮೂಲಕ ಒಳ ಪ್ರವೇಶಿಸಿರುತ್ತಾರೆ.[ಪಠಾಣ್ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ]

ಜನವರಿ 01, 2016:
* ರಾತ್ರಿ ಸುಮಾರು 8 ಗಂಟ್ಎ ವೇಳೆಗೆ ಉಗ್ರರ ಗುಂಪು ಟ್ಯಾಕ್ಸಿ ಬಾಡಿಗೆಗೆ ಪಡೆಯುತ್ತಾರೆ. ಪಾಕಿಸ್ತಾನಿ ನಂಬರ್ ಪ್ಲೇಟ್ ಇದ್ದ ಟ್ಯಾಕ್ಸಿ ಚಲಾಯಿಸುತ್ತಿದ್ದ ಡ್ರೈವರ್ ನ ಕತ್ತು ಸೀಳಿ ಕೊಂದು ಹಾಕುತ್ತಾರೆ.
* 9.30 ರ ಸುಮಾತಿಗೆ ಗುರ್ ದಾಸನ್ ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ಅಪಹರಿಸುತ್ತಾರೆ. ಟ್ಯಾಕ್ಸಿ ಬಿಟ್ಟು ಎಸ್ಪಿ ಅವರ ಅಧಿಕೃತ ವಾಹನದಲ್ಲಿ ಅವರನ್ನು ಕರೆದುಕೊಂಡು ಅಲ್ಲಿಂದ ಸುಮಾರು 20 ಕಿ.ಮೀ ದೂರದ ಪ್ರದೇಶಕ್ಕೆ ಬಂದು ಅವರನ್ನು ಕೆಳಕ್ಕೆ ತಳ್ಳುತ್ತಾರೆ.[ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಟುಂಬಕ್ಕೆ 30 ಲಕ್ಷ ಪರಿಹಾರ]
* ಎಸ್ಪಿ ಸಲ್ವಿಂದರ್ ಸಿಂಗ್ ಅವರ ಮೊಬೈಲ್ ಫೋನ್ ಬಳಸಿಕೊಂಡು ಪಾಕಿಸ್ತಾನದ ಭವಲ್ಪುರ್ ನಲ್ಲಿರುವ ತಮ್ಮ ಏಜೆಂಟ್ ಗಳಿಗೆ ಕರೆ ಮಾಡುತ್ತಾರೆ.
ಜನವರಿ ೦2, 2016:
* ಪಠಾಣ್ ಕೋಟ್ ವಾಯುನೆಲೆ ತನಕ ಉಗ್ರರು ತಲುಪುತ್ತಾರೆ.
* 3 ಗಂಟೆ ಗೋಡೆ ಹಾರಿ ವಾಯುನೆಲೆ ಕೇಂದ್ರದೊಳಗೆ ನುಗ್ಗಲು ಯತ್ನಿಸುವಾಗ ಒಬ್ಬ ಉಗ್ರ ಗುಂಡಿಗೆ ಬಲಿಯಾಗುತ್ತಾನೆ.
* 3.30 ಸುಮಾರಿಗೆ ವಾಯುನೆಲೆ ಕೇಂದ್ರ ದೇಶಿ ವಿಮಾನ ಪ್ರದೇಶಕ್ಕೆ ಐವರು ಉಗ್ರರು ಕಾಲಿರಿಸುತ್ತಾರೆ. ಅಲ್ಲಿದ್ದ ಭದ್ರತಾ ಪಡೆ ಮೇಲೆ ಗುಂಡಿನ ದಾಳಿ ನಡೆಸುತ್ತಾರೆ.
* ಪಠಾಣ್ ಕೋಟ್ ಗೆ ರಾಷ್ಟ್ರೀಯ ಭದ್ರತಾ ಪಡೆ(ಎನ್ ಎಸ್ ಜಿ) ಕಮಾಂಡೋಗಳು ಧಾವಿಸುತ್ತಾರೆ.
* ಎನ್ಎಸ್ ಜಿ ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ರಾತ್ರಿ ತನಕ ನಡೆಯುತ್ತದೆ. ಮೂವರು ಉಗ್ರರು ಹತರಾದರೆ, ಒಬ್ಬ ಯೋಧರಿಗೆ ಗಾಯವಾಗುತ್ತದೆ.
* ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಸೇನಾ ಮುಖ್ಯಸ್ಥರು ಹಾಗೂ ಎನ್ಎಸ್ ಎ ಅಧಿಕಾರಿಗಳ ಜೊತೆ ಮಹತ್ವದ ಮಾತುಕತೆ ನಡೆಸುತ್ತಾರೆ.
* ಸಂಜೆ ವೇಳೆಗೆ ಗುಂಡಿನ ಚಕಮಕಿ ತಗ್ಗುತ್ತದೆ. ಉಗ್ರರಿಗಾಗಿ ಶೋಧಕಾರ್ಯ ಮುಂದುವರೆಯುತ್ತದೆ.
ಜನವರಿ 03, 2016:
* ಎನ್ ಎಸ್ ಜಿಯ ಲೆ. ಕರ್ನಲ್ ನಿರಂಜನ್ ಸೇರಿದಂತೆ ಏಳು ಜನ ಯೋಧರು ವೀರ ಮರಣ ಹೊಂದುತ್ತಾರೆ.
* 12.30 PM ವೇಳೆಗೆ ಮತ್ತೆ ಗುಂಡಿನ ಚಕಮಕಿ ಜೋರಾಗುತ್ತದೆ. ಇಬ್ಬರು ಉಗ್ರರ ಹತ್ಯೆಯ ಸುದ್ದಿ ಬರುತ್ತದೆ. ಗ್ರೇನೇಡ್ ದಾಳಿ, ಬೆಂಕಿ, ಸ್ಫೋಟದ ಸದ್ದು ಕೇಳಿಸುತ್ತದೆ. ಒಟ್ಟಾರೆ 5 ಜನ ಉಗ್ರರ ಹತ್ಯೆಯನ್ನು ಖಚಿತಪಡಿಸಲಾಗುತ್ತದೆ.
* ಕಾರ್ಯಾಚರಣೆ ಬಗ್ಗೆ ಭಾರತೀಯ ವಾಯು ಸೇನೆ, ಗೃಹ ಕಾರ್ಯದರ್ಶಿಗಳಿಂದ ಸುದ್ದಿಗೋಷ್ಠಿ.
* ಪಠಾಣ್ ಕೋಟ್ ದಾಳಿ ಬಗ್ಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ.
ಜನವರಿ 04, 2015
* ಉಳಿದಿರುವ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
* ಪ್ರತಿಯೊಬ್ಬ ಉಗ್ರನ ಬಳಿ 6 ಕೆಜಿ ಆರ್ ಡಿಎಕ್ಸ್, ಗ್ರೇನೇಡ್ಸ್ ಗಳಿರುವ ಬಗ್ಗೆ ಮಾಹಿತಿ.
* ಪಠಾಣ್ ಕೋಟ್ ನಿಂದ 4 ಕಿ.ಮೀ ದೂರದಲ್ಲಿರುವ ಮನ್ವಲ್ ಎಂಬ ಗ್ರಾಮದಲ್ಲಿ ಶಂಕಿತ ವ್ಯಕ್ತಿಗಳಿರುವ ಬಗ್ಗೆ ಮಾಹಿತಿ. ತೀವ್ರ ಹುಡುಕಾಟ, ನಂತರ ಇದು ಗಾಳಿಸುದ್ದಿ ಎಂದು ದೃಢಪಡಿಸಲಾಗಿದೆ. (ಒನ್ ಇಂಡಿಯಾ ಸುದ್ದಿ)
-
ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಬೆನ್ನಲ್ಲೇ ಬೆಂಗಳೂರಿನ ಹೋಟೆಲ್ಗಳಲ್ಲಿ ಆಹಾರ ದರ ಏರಿಸಲು ಚಿಂತನೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications